Monday, March 12, 2012

ಸ್ವೀಕೃತಿ....

ಮನಸಿನ ಮನೆತುಂಬ
ಒಣ ಒಣ ಮೌನವ ಸುರಿಸಿ
ನೀ ನೆಮ್ಮದಿಯಾಗಿರಬಲ್ಲೆಯಾದರೆ
ಹಾಂ... ಅದೂ ಸ್ವೀಕಾರವೇ....
ನಿನ್ನೊಲವಿನ ಹೊಳೆಯಲ್ಲಿ
ಕಲ್ಲುಗಳೇ ಅಲೆಗಳಾದರೆ
ಅದಕ್ಕೂ
ಕೆನ್ನೆಯೊಡ್ಡುತ್ತೇನೆ..

ಚುಂಬಿಸುವ ಹನಿಮುತ್ತು
ಸಿಗದೇ ಉಳಿದೀತು!
ನಿನ್ನದಾದರೆ ಅದು
ಗೀರಿದ ಗಾಯವಿಳಿಸಿದ
ಬಿಂದುರಕ್ತವಾದರೇನು?
ಸಾಕೆನಗೆ ಕೃಷ್ಣ ನಿನ್ನ ನೆನಹು..
ಉಳಿದೀತು ಜೀವ ಉರಿದುಉರಿದು!!