tag:blogger.com,1999:blog-71918148115699414922024-02-19T00:58:27.783-08:00ಮಾನಸ ಸರೋವರ
ಕಾಡು ಹಕ್ಕಿಯ ಭಾವದ ಗೂಡು.
ಹೊಸತನದ ಹರಿವಿಗೆ.. ಎಳೆಎಳೆಯ ಸಂಭ್ರಮದೊಂದಿಗೆ..
maanasa saarovrahttp://www.blogger.com/profile/14088976224552347105noreply@blogger.comBlogger51125tag:blogger.com,1999:blog-7191814811569941492.post-47397157912507355042020-07-31T09:15:00.001-07:002020-07-31T09:18:22.069-07:00ಕೊರೊನಾ ಕಾಲದ ಕತೆ<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjdgMWbm6Ohgzl4pPZdd5LXoibQs0kq3bPMdHY-YDkkKQXEh8JUU05qqMgbLziX8z-QPMLEoFyMkNhCqEHY_gOtXcHUsXGaMVEU4_GuJAkpyPLxkjGDM3vRvedd2p31gG61qKzxVBIdAI4/s1600/1596212294684349-0.png" imageanchor="1" style="margin-left: 1em; margin-right: 1em;">
<img border="0" src="https://blogger.googleusercontent.com/img/b/R29vZ2xl/AVvXsEjdgMWbm6Ohgzl4pPZdd5LXoibQs0kq3bPMdHY-YDkkKQXEh8JUU05qqMgbLziX8z-QPMLEoFyMkNhCqEHY_gOtXcHUsXGaMVEU4_GuJAkpyPLxkjGDM3vRvedd2p31gG61qKzxVBIdAI4/s1600/1596212294684349-0.png" width="400">
</a>
</div><div>ಭಯಪಡುವಂತದ್ದೇನಿದೆ ಅಂತ ನೂರು ಭಾರಿ ಅಂದುಕೊಳ್ಳುತ್ತೇನೆ. ಸಾವಿನ ಬಾಗಿಲು ಮನೆಯೆದುರೆ ನಿಂತಿದೆ. ಅಲ್ಲೆಲ್ಲೋ ಯಾವುದೋ ದೇಶದಲ್ಲಿ ಅಂದುಕೊಂಡದ್ದು ರಾಜಧಾನಿಯಲ್ಲಿ ಅಂದುಕೊಂಡಿದ್ದು ಯಾವುದೋ ಊರಲ್ಲಿ ಅಲ್ಲಿ ಇಲ್ಲಿ ಅಂದುಕೊಂಡದ್ದೆಲ್ಲ ಹೋಗಿ ಇದೀಗ ಮನೆಯಲ್ಲೇ ಂದು ನಿಂತಿದೆ ಅನ್ನುವಾಗ ಗಾಭರಿ ಅಂತಲ್ಲದಿದ್ದರೂ ಒಂದಿಷ್ಟು ಭಂಡ ಧೈರ್ಯ ಬಂದಿರುವುದಂತೂ ಸುಳ್ಳಲ್ಲ. ಮೊದಲಿನ ಕೊರೋನಾ ಭಯ ಈಗ ಕಾಡ್ತಿಲ್ಲ. ಎಷ್ಟು ಜನ ಆರಾಮಾಗಿ ಬಂದಿಲ್ಲ ಎಷ್ಟು ಜನ ಕ್ವಾರಂಟೈನ್ ಲಿದ್ರೂ ಕೊರೋನಾ ಬರದೇ ಹಾಗೇ ಸುರಳೀತ ಇದ್ದಾರಲ್ಲ ಅಂತೆಲ್ಲ ಒಂದಷ್ಟು ಒಳ್ಳೆಯ ವಿಚಾರಗಳನ್ನೇ ತಲೆಯಲ್ಲಿ ತುಂಬಿಕೊಂಡರೂ 100 ರಲ್ಲಿ ಹತ್ತು ಪರ್ಸೆಂಟ್ ಆದರೂ ಬಂದುಬಿಡಬಹುದಾದ ಎಲ್ಲ ಭಯ ಒಳಗೊಳಗೆ ಕಾಡುತ್ತಿರುವುದು ಸುಳ್ಳಲ್ಲ. ಹೌದು ಬಹಳಷ್ಟು ಓದಾಯಿತು, ಕೊರೋನ ಕಾಲದ ಸತ್ಯಗಳು ಅಂತೆಲ್ಲ ಪೇಜುಗಟ್ಟಲೆ ಓದಿದ್ದು ಕೇಳಿದ್ದು ಆಯಿತು. ಬದುಕಿನ ಈದಡಲ್ಲಿ ಸಾವಿನ ಕುರಿತಾದ ಅಂತಹ ಭಯವೇನೂ ಇಲ್ಲ ಅಂದುಕೊಳ್ಳಬಹುದು. ಇತ್ತೀಚೆಗೆ ಸಾವು ಮೊದಲಿನಷ್ಟು ನನ್ನನ್ನು ಅಧೀರಳನ್ನಗಿಸುವುದಿಲ್ಲ. ಬಹುಶಃ ಬದುಕಿಗೆ ಬೀಳುವ ಪೆಟ್ಟುಗಳೇ ಮನುಷ್ಯನ ಇಷ್ಟು ನಿರುದ್ವಗ್ನವಾಗಿ ನಿಲ್ಲಿಸಿರಬಹುದು. ಯಾವ ಪಾಠಗಳೂ ಕಲಿಸದ ಜೀವನ ಸತ್ಯಗಳನ್ನ ಬದುಕು ಕಲಿಸುತ್ತದೆ. ಇದು ವೇದಾಂತವೋ ಇನ್ನೇನೋ ಅಲ್ಲ. ಒಂದು ನಿರ್ವಾತದಂತ ಶೂನ್ಯದಲ್ಲಿ ಕರ್ತವ್ಯಪ್ರಜ್ಞೆಯೊಂದಿಗೆ ನಿಲ್ಲಬಹುದಾದ ಗಟ್ಟಿತನ ಅಂತಲೇ ನಾನು ಅಂದುಕೊಳ್ಳುತ್ತೇನೆ.</div><div><br></div><div> </div><div> ಹೀಗೇ ನಾಳೆಯೇ ನನ್ನ ಸಾವಿನ ಬಾಗಿಲಿನಲ್ಲಿ ನಿಲ್ಲಿಸಿದರೆ ನನ್ನ ಅಪೇಕ್ಷೆಗಳೇನು ಅಂತ ಒಮ್ಮೆ ಕೇಳಿಕೊಂಡೆ. ತಕ್ಷಣ ಮುಗಿಸಬಹುದಾದ ಅಥವಾ ಮುಗಿಸಲೇಬೇಕಾದ ಯಾವ</div><div>ಅನಿವಾರ್ಯತೆ ಈ ಬದುಕಿನೆಡೆಗೆ ನನಗಿದೆ ಅಂದರೆ ಇದ್ದರೆ ಮಾಡಬೇಕಾದ ಸಾವಿರ ಕೆಲಸಗಳಿವೆ. ಹಾಗಂತ ಇಲ್ಲದಿದರೆ ಅವ್ಯಾವುದೂ ನಡೆಯುವುದಿಲ್ಲ ಅಂತೇನಿಲ್ಲ. ಈ ವಿಶಾಲ ಜಗತ್ತಿಗೆ ನಾನೆಂಬುದು ಏನೇನು ಅನಿವಾರ್ಯವಲ್ಲ.ಹಾಗಂತ ನಾನಿರುವುದಾದರೆ ಈ ವಿಶಾಲ ವಿಶ್ವದ ಎಲ್ಲ ಅನಿವಾರ್ಯತೆಗಳೂ ನನಗಿವೆ. ಪ್ರತಿಯೊಬ್ಬರಿಗೂ ಇನ್ನೊಬ್ಬರಿಂದ ನಿರೀಕ್ಷೆಗಳಿವೆ. ಸುತ್ತಲಿನವರ ಯಾರ ನಿರೀಕ್ಷೆಯನ್ನು ನಾನು ಎಷ್ಟು ಪೂರೈಸಬಲ್ಲೆ ಎಂದು ಯೋಚಿಸಿದರೆ ಬಹುಶಃ ಅದರ ಲೆಕ್ಕ ಪ್ರತಿಶತಃ ಹತ್ತಕ್ಕೂ ಕಡಿಮೆ ಇರಬಹುದು. ಹಾಗೇ ನನ್ನ ನಿರೀಕ್ಷೆಗಳಿಗೆ ಇನ್ನೊಬ್ಬರು ಸಿಗಬಹುದಾದ ಪ್ರಮಾಣ ಕೂಡ ಅಷ್ಟೇ. ಆದರೆ ನಾವು ಇದನ್ನು ಅರ್ಥಮಾಡಿಕೊಳ್ಳದೇ ಸದಾ ನಮ್ಮ ನಿರೀಕ್ಷೆಯನ್ನು ಪ್ರತಿಶತಃ ತೊಂಬತ್ತರ ಪ್ರಮಾಣದಲ್ಲಿ ನಿರೀಕ್ಷಿಸುತ್ತೇವೆ. ಮತ್ತು ನಾವು ಸದಾ ಪ್ರತಿಶತಃ 10 ಕ್ಕೂ ಕಡಿಮೆ ಪ್ರಮಾಣದಲ್ಲಿ ಬೇರೆಯವರಿಗೆ ಒದಗುತ್ತೇವೆ.</div><div><br></div><div> ಸಾವಿನೆದುರಿನ ಸತ್ಯಗಳು ಬಹಳ. ನಮ್ಮ ಸಾವಿನ ಭಯಕ್ಕಿಂತ ನಮ್ಮವರ ಕಷ್ಟದ ಭಯ ನಮ್ಮನ್ನು ಕಾಡುತ್ತದೆ. ಬಹುಶಃ ಬೇರೆಲ್ಲ ರೋಗಕ್ಕಿಂತ ಜಾಸ್ತಿ ಕೊರೋನಾ ಇದನ್ನು ಹೇಳುತ್ತಿದೆ. ನಮ್ಮವರ ಖಾಳಜಿಯೇ ಮುಖ್ಯ ಅನ್ನುವ ಮನಸ್ಥಿತಿ ಸಾಮಾನ್ಯರನ್ನು ಎಚ್ಚರಿಸುತ್ತಿದೆ. ಆದರೆ ಬಹುಶಃ ನಮ್ಮೊಳಗಿನ ಭಯ, ನೋವು, ಕಾಳಜಿ ಇದೆಲ್ಲ ಬಹುಶಃ ನಮ್ಮವರಿಗೂ ಅರ್ಥ ಮಾಡಿಸಲು ಸೋಲುತ್ತೇವೆ. ನಮ್ಮಿಂದ ನಿಮ್ಮ ಜೀವ ರಿಸ್ಕಿನಲ್ಲಿಡುತ್ತಿದ್ದೇವೆ ಅನ್ನುವ ಗಿಲ್ಟ್ ಎಷ್ಟೊಂದು ಗಾಢವಾಗಿ ಕೊರೆಯುತ್ತಿದ್ದರೂ ಅದನ್ನು ತೋರಿಸಲಾಗುವುದಿಲ್ಲ. ಕೊರೊನಾ ಕಾಲದಲ್ಲಿ ಇದರೊಂದಿಗೆ ಕೆಲಸ ಮಾಡುತ್ತಿರುವವರ ಮನಸ್ಥಿತಿ ಹೇಗಿಬಹುದು ಅಂತ ಸಾವಿರ ಸಲ ಯೋಚನೆ ಮಾಡುತ್ತೇನೆ. ಸುರಕ್ಷತೆಯ ಸಾವಿರ ಕ್ರಮಗಳಿರಬಹುದು. ಆದರೂ ರಿಸ್ಕ್ ಇದ್ದೇ ಇದೆ. ಅಂಕಿ ಅಂಶಗಳ ನೋಡುತ್ತಿದ್ದರೆ ಈ ರಿಸ್ಕ್ ಎಷ್ಟು ದೊಡ್ಡದು ಅಂತ ಅನ್ನಿಸುತ್ತಲೇ ಇರುತ್ತದೆ.</div><div><br></div><div> ಶ್ರೀಮಂತರಿಗೆ ಒಳ್ಳೆಯ ಟ್ರೀಟ್ಮೆಂಟ್ ಬಡವನಿಗೆ ಅದಿಲ್ಲ ಭಯ, ಮಧ್ಯಮ ವರ್ಗದವರಿಗೆ ಬಿಲ್ಲುಗಳ ಯೋಚನೆ ಆದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಸಾವಿನ ಕರಿ ನೆರಳು ಕಾಣದಿರದು. ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಯಾವುದೋ ಒಂದು ಕ್ಷಣದಲ್ಲಿ ಎದುರಾಗಿ ನಿಂತೇಬಿಡುತ್ತೇವೆ. ನನಗಲ್ಲ ಅನ್ನುವ ರೋಗದ ಎದುರೇ ಅಚಾನಕ್ಕ ನಿಂತಾಗ ದೇವರಿದ್ದಾನೆ ಅನ್ನುವ ಧೈರ್ಯವೊಂದೇ. ಎಲ್ಲವನ್ನೂ ಮೀರಿದ ಕೈಯೊಂದಿದೆ. ಯಾವತ್ತು ಅದು ನಮ್ಮ ಬದುಕಿನ ಕೊನೆಗೆ ನೆಪ ಬರೆದಿರತ್ತೆ ಯಾರಿಗೆ ಗೊತ್ತು?</div><div><br></div><div><br></div><div> ಈ ಕ್ಷಣ ಹೇಳಬೇಕಾದ ಮಾತುಗಳಿವೆ ಅಂತ ಬಂದು ಕೂತರೂ ಏನೂ ಇಲ್ಲದ ಮೌನವೊಂದೇ ನನ್ನಲ್ಲಿದೆ ಅಂದರೆ ಅದು ಸುಳ್ಳಲ್ಲ. ನಿನ್ನ ಒತ್ತಾಯದ ಮೇರೆಗೆ ಬರೆಯಲು ಕುಳಿತರೂ ಮನಸಿನ ಮಾತುಗಳನ್ನಷ್ಟೇ ಇಲ್ಲಿ ನೇರವಾಗಿ ಅಕ್ಷರಕ್ಕಿಳಿಸಬೇಕಾಗಿದೆ. ಹೌದು ಇಷ್ಟೊಂದು ಅಗಾಧವಾದ ಸ್ಥಿರತೆ ಗೆ ಕಾರಣವಾದರೂ ಏನು ಅಂತ ನೀನು ಕೇಳುತ್ತಿ. ನನಗೆ ಗೊತ್ತು. ಹೇಳಬೇಕಾದ ಜವಾಬ್ಧಾರಿ ನನ್ನದು ಹೇಳುತ್ತೇನೆ ಕೇಳು.</div><div><br></div><div> ಬದುಕು ಯಾವತ್ತೂ ನನಗೆ ಅನ್ನಿಸೋದು ನನ್ನನ್ನ ನಿರಪೇಕ್ಷದೆಡೆಗೆ ನಡೆಸುವ ಗುರು ಅನ್ನೋದು. ನಾನು ಮೊದಲೂ ಬಹುಶಃ ಹಾಗೇ ಇದ್ದೆ. ನನಗೆ ನನ್ನದೆಂಬ ಅಸ್ತಿತ್ವಕ್ಕೆ ಏನೂ ಇರಲಿಲ್ಲ. ಎಲ್ಲ ಅವರಿವರ ಖುಶಿ ಅವರ ಅಗತ್ಯ ಅವರ ಸಂಭ್ರಮ ಅವರ ನೋವುಗಳೇ ನನ್ನ ಬದುಕಾಗಿತ್ತು ಅಥವಾ ನನ್ನ ಒಳಗೊಂಡಿತ್ತು. ಬದುಕು ನೀನು ಹೀಗಿದ್ದರೆ ಆಗದು ಅಂತ ನನ್ನ ಮಗ್ಗಲು ಹೊರಳಿಸಿ ನನ್ನದೇ ಕನಸುಗಳ ಕಟ್ಟಿಕೊಟ್ಟಿತು. ನನ್ನದೇ ದಾರಿಯ ಹುಟ್ಟು ಹಾಕಿತು. ನನ್ನದೇ ಅಡಿಪಾಯ ನನ್ನದೇ ಅರಮನೆ ಎಲ್ಲ ಆಯಿತು. ಅದರಲ್ಲೇ ನಡೆದು ನಡೆದು ಇದು ನನ್ನದು ಎಂಬ ಮೋಹ ಶುರುವಾಯಿತು. ನನ್ನವರು ನನ್ನದು ನಾನು ಎಂಬುದನ್ನು ಹೇಳೀಕೊಟ್ಟ ಬದುಕೇ ಇಲ್ಯಾವುದೂ ನಿನ್ನದಲ್ಲ ನೀನು ಎಂದಿಗೂ</div><div>ಶೂನ್ಯವೇ ಎನ್ನುವುದ ಮತ್ತೆ ಹೇಳತೊಡಗಿತು. ಬಹುಶಃ ಈಗ ನನಗೆ ಅರ್ಥವಾಗುವ ಮಟ್ಟಿಗೆ ಎಲ್ಲವೂ ಬದಲಾಗಿದ್ದರೂ ನನಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ನಾನೆಷ್ಟು ಮುಳುಗಿ ಹೋಗಿದ್ದೆ ಈ ನನ್ನದೆಂಬ ಅಹಂಕಾರದ ನಶೆಯಲ್ಲಿ ಮೋಹದಲ್ಲಿ! ನನ್ನ ನಶೆಯ ಇಳಿಸಲು ಬದುಕು ಬಲವಾದ ಪೆಟ್ಟು ಕೊಡಲೇಬೇಕಿತ್ತು. ಬದುಕು ಕೂಡ ಅಮ್ಮನಂತೆ. ಅವಳ ಛಡಿಯೇಟಿಗೆ ಹತ್ತಿದ್ದ ನಶೆಯೆಲ್ಲ ಇಳಿಯಿತು ನೋಡು. ಈ ಪ್ರಪಂಚದಲ್ಲಿ ಕಾಯಕವೊಂದೇ ನನ್ನ ಕರ್ಮ. ಉಳಿದದ್ದೆಲ್ಲ ಅವನದೇ ಮರ್ಮ. ಅರ್ಥವಾಗುವ ಹೊತ್ತಲ್ಲಿ ಬಹಳ ತಡವಾಗಿತ್ತು. ಹೌದು ಬದುಕಿನ ಪೆಟ್ಟುಗಳು ಹೇಗಿರುತ್ತವೆ ಅಂದರೆ ಯಾರು ಕಲಿಯದಿದ್ದರೂ ಯಾವುದನ್ನು ಕಲಿಯದಿದ್ದರೂ ಕಲಿಸುತ್ತದೆ ಅದು. ಸುಪ್ಪತ್ತಿಗೆಯಲ್ಲಿ ಹುಟ್ಟಿದವನಿಗೂ ಟಾಯ್ಲೆಟ್ ತೊಳೆಯುವುದು ಕಲಿಸುತ್ತದೆ! ಭಿಕಾರಿ ಬದುಕಲ್ಲೂ ಆತ್ಮಾಭಿಮಾನ ಕಲಿಸುತ್ತದೆ, ಸೋತವನಿಗೆ ಗೆಲ್ಲುವುದ ಕಲಿಸುತ್ತದೆ, ಗೆದ್ದವನಿಗೆ ಸೋಲುವುದ ಕಲಿಸುತ್ತದೆ.</div><div><br></div><div> ನಾನೆಂಬ ಅಹಂಕಾರ ಇಳಿಸುತ್ತದೆ, ನಾವೆಂಬ ಮಮಕಾರ ಬೆಳೆಸುತ್ತದೆ. ಬದುಕನ್ನು ಕಟ್ಟುವುದೂ ಗೊತ್ತು, ಬದುಕನ್ನು ಕೆಡುವುದೂ ಗೊತ್ತು, ಮಕ್ಕಳಲ್ಲಿ ಮುಗ್ಧತೆ ಹಾಳಾಗದಿಲಿ ಅಂತ ನಾವು ಮುಚ್ಚಟೆ ಮಾಡಿದರೆ ನಾಳೆ ಸೂರ್ಯನ ಬೆಳಕೂ ನೋಡಲು ಕಷ್ಟವಾಗಬಹುದು. ಹಾಗೇ ಬದುಕು ಕಲಿಸುವ ಪಾಠಗಳಿಗೆ ತೆರೆದುಕೊಳ್ಳದಿದ್ರೆ ಅದರ ಫಲ ಘೋರವಾಗಬಹುದು. ಸಂತೋಷವನ್ನು ಹುಡುಕಿ ಹೊರಡುವವದಕ್ಕಿಂತ ಸಿಕ್ಕ ಎಲ್ಲದರಲ್ಲೂ ಸಂತೋಷ ಕಾಣುವವನ ಮನಸು ಹೆಚ್ಚು ಆರೋಗ್ಯವಾಗಿರಬಲ್ಲುದು. ಕನಸುಗಳ ಸಾವಿರ ಕಾಣುವುದಕ್ಕಿಂತ ಒಂದೆರಡು ವಾಸ್ತವದ ಕೆಲಸ ಜಾಸ್ತಿ ಖುಶಿ ಕೊಡಬಹುದು. ಹಾಗಂತ ಕನಸು ಗುರಿ ಇರಬಾರದೆಂದೇನೂ ಅಲ್ಲ. ಕ್ರಿಯೆಗೆ ಇಳಿಯದ ಕನಸುಗಳಿಗೂ ರಾತ್ರಿ ಬೀಳೋ ಕನಸುಗಳಿಗೂ ಅಂತ ವ್ಯತ್ಯಾಸಗಳೇನೂ ಇಲ್ಲ. ದೊಡ್ಡ ದೊಡ್ಡದರ ಬೆನ್ನು ಹತ್ತಿದವರೆಲ್ಲ ಖುಶೀಯಾಗಿಯೇ ಇದ್ದಾರೆಂದಲ್ಲ. ಒಳಗಿನ ಅಗತ್ಯಗಳ ಅರಿತುಕೊಂಡವರು ಹೆಚ್ಚು ಖೂಶಿಯಾಗಿಯೂ ಹೆಚ್ಚು ಸ್ಥಿತಪ್ರಜ್ಞರೂ ಆಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಕನಸು ಮತ್ತು ವಾಸ್ತವದ ನಡುವಿನ ಬಹುದೊಡ್ಡ ಅಂತರವನ್ನು ಕಲಿಸುವುದೇ ಬದುಕು. ಕರ್ಮ ಸಿದ್ಧಾಂತದ ಸುಖ ಕಲಿಸುವುದೂ ಬದುಕು.</div><div><br></div><div><br></div><div> ನಮ್ಮವರೆಂದುಕೊಳ್ಳುವವರ ಸಂತೋಷದಲ್ಲಿ ನಮ್ಮ ಎಲ್ಲ ಸಂತೋಷಗಳು ತನ್ನಂತಾನೇ ಅಡಕವಾಗಿಬಿಡುತ್ತವೆ. ಹಾಗಂತ ಸಂತೋಷದ ಬೆನ್ನು ಬಿದ್ದು ಪ್ರಜ್ಞೆಯ ಹಾಗೂ ಮೌಲ್ಯದ ಮಾರ್ಗ ತೋರದಿದ್ದರೆ ತಪ್ಪಾಗುತ್ತದೆ ಯಲ್ಲವೆ? ನಮ್ಮ ನಮ್ಮ ಕೆಲಸ ನಾವು ಮಾಡಲೇಬೇಕು. ಅರಿತುಕೊಳ್ಳುವ ಸಾಮಥ್ರ್ಯ ಇದ್ದವರು ಅರಿತುಕೊಳ್ಳುತ್ತಾರೆ. ಅರಿಯದಿದ್ದವರು ನಮ್ಮನ್ನೂ ದೂರಮಾಡುತ್ತಾರೆ. ಇದು ಕೂಡ ಪ್ರಕೃತಿಯದೇ ನಿಯಮ. ಈ ಬದುಕಿಗೆ ಯಾರು ಏನು ಮಾಡಬಹುದು ಮಾಡಬೇಕು ಎಂಬುದನ್ನು ಅವನೇ ನಿರ್ಣಯಿಸುತ್ತಾನೆ ಅಂದಮೇಲೆ</div><div>ನಮ್ಮದಲ್ಲದ ಕಡೆ ಮೂಗು ತೂರಬಾರದು ಎಂಬುದು ಕೂಡ ಅರ್ಥಮಾಡಿಕೊಂಡು ಸುಮ್ಮನಿರಬೇಕು. ವಿವೇಕ ಮತ್ತು ಪ್ರಜ್ಞೆಯ ಮೂಲದಲ್ಲಿ ಹುಟ್ಟಿಕೊಳ್ಳುವ ಸಂತೋಷ ನಮ್ಮದಿರಬೇಕೆ ವಿನಃ ಮೋಹದ ಮಮಕಾರದ ಸಂಭ್ರಮಗಳು ಬಹಳ ಕಾಲ ಬಾಳಲಾರದು.</div><div><br></div><div>ಈ ಸಾವೆಂಬುದು ಎಷ್ಟೆಲ್ಲ ಎಚ್ಚರಿಕೆ ನೀಡುತ್ತದೆ. ನನ್ನ ಸಾವಿನ ಎದುರು ನಾನಿಂತರೆ ನನಗದು ಗಿಲ್ಟ್ ಅಲ್ಲ, ಭಯ ಅಲ್ಲ, ಪಾಪವಲ್ಲ. ಅದೇ ನಿನ್ನನೋ ಇನ್ಯಾರನ್ನೋ ನನ್ನ ಜೊತೆ ನಿಲ್ಲಿಸಿಕೊಂಡರೆ ಅದು ಘೋರ ಪಾಪ, ಅದು ನನ್ನ ಪಾಲಿನ ಶಾಪ ಕೂಡ. ಎಂತದೇ ಸಂದರ್ಭದಲ್ಲೂ ಈ ಗಿಲ್ಟ್ ನನ್ನೊಳಗೆ ಕಾಡದಂತೆ ನಾನು ನಡೆದುಕೊಳ್ಳುವುದೇ ನನಗೆ ವಿಹಿತ. ಇದನ್ನು ಅರಿವಾಗಿಸುವುದೇ ಈ ಕ್ಷಣ. ಬಹುಶಃ ಬಹಳ ಜನರಿಗೆ ಇದು ಕೂಡ ಅರ್ಥವಾಗವುದೇ ಇಲ್ಲವೇನೋ. ಅಥವಾ ಅಂತಹ ಆತ್ಮಗಳ ಅಹಂಕಾರ ಇದನ್ನೂ ಮೀರಿದ್ದಾಗಿರಬಹುದು. ಬೆಳಕು ಅವರ ಒಳಗೆ ಸುಳಿಯದು.ಕತ್ತಲೆಗೆ ಇನ್ಯಾರನ್ನೋ ಹೊಣೆಯಾಗಿಸಿಕೊಂಡೇ ತಳ್ಳಿಬಿಡುತ್ತಾರೆ ಅನ್ನೋದು ಕೂಡ ಸತ್ಯ.</div><div><br></div><div><br></div><div>ಬಹಳ ಸಲ ಯೋಚಿಸುತ್ತೇನೆ ಯಾರನ್ನೂ ಬಿಡದ ಸಾವು ಅದರೆದುರು ನಿಂತು ಇಷ್ಟೆಲ್ಲ ಅರ್ಥವಾಗುವ ಹೊತ್ತಿಗೆ ಬದುಕೇ ಮುಗಿದಿರುತ್ತದೆಯಲ್ಲ!!?ಏನು ಪ್ರಯೋಜನ ಅರ್ಥವಾಗಿ ಅಂತ.ಗೊತ್ತಿಲ್ಲ. ನನಗಂತೂ ವಿಷಯಾಸಕ್ತಿಗಿಂತ ವಿಷಯ ವಿಚಾರಗಳೇ ಆಸಕ್ತಿಯುತ ಅನ್ನಿಸುತ್ತಿವೆ ಇತ್ತೀಚೆಗೆ. ಯಾರನ್ನಾದರೂ ದ್ವೇಷಿಸುವುದೆಂದರೆ ನನ್ನನ್ನೇ ದ್ವೇಷಿಸಿಕೊಂಡ ಭಾವ ಒಳಗೆ ಅಹಿತ ಅನ್ನಿಸಬಿಡುತ್ತದೆ. ಪರಮಾತ್ಮ ಎಲ್ಲರಿಗೂ ಒಳ್ಳೆಯದನ್ನೇ ಮಾಡಹೊರಟರರೆ ಈ ಕರ್ಮಗಳಿಗೂ ಬೆಲೆಯಿರುತ್ತಿರಲಿಲ್ಲವೇನೋ. ಹಾಗಾಗಿ ಒಂದು ನಿಶಾಂತ ಮನಸ್ತಿತಿಯ</div><div>ಕಪ್ಪಿನೊಂದಿಗೆ ಕೂಡ ಬೆಳಕಿನಷ್ಟೇ ಸ್ಥಿರವಾಗಿ ನಿಲ್ಲಬೇಕೆಂಬುದು ಒಳಗಿನಿಂದ ದೃಡವಾಗಿಸುತ್ತಿದೆ. ಸಾವು ನೋವುಗಳಿಗೆ ಸಮಾಧಾನವೇ ಇಲ್ಲ ಅಂದುಕೊಳ್ಳುತ್ತಿದ್ದ ನಾನು ಸಾವಿನೊಂದಿಗೂ ಅನಿವಾರ್ಯವಲ್ಲ, ನೋವಿನೊಂದಿಗೂ ಅನಿವಾರ್ಯವಲ್ಲ ಎಂಬ ಸತ್ಯ ನಿಧಾವಾಗಿ ಒಳಗಿಳಿಸಿಕೊಳ್ಳುತ್ತಿದ್ದೇನೆ. ಬಹುಶಃ ಪ್ರಪಂಚದ ಮೋಹ ಮತ್ತು ಮಾಯೆಗಳಿಂದ ಸಂಪೂರ್ಣ ತೊರೆದುಕೊಳ್ಳಲು ಸಾಧ್ಯವಾಗದಿದ್ದರೂ ಇದು ನನಗೆ ನನ್ನ ಜಾಗದಲ್ಲಿ ನೆಮ್ಮದಿ ಕೊಡಬಹುದು. ಬಹಳಷ್ಟು ಸಲ ನಾವು ನಮ್ಮ ಸುತ್ತಮುತ್ತಲಿರುವವರನ್ನೂ ನಮ್ಮವರನ್ನೂ ಅಂಡರ್ ಎಸ್ಟಿಮೇಟ್ ಮಾಡಿಬಿಡುತ್ತೇವೆ. ಅವರಿಗೆ ನಮ್ಮ ಸತ್ಯಗಳು ತಿಳಿಯುವುದೇ ಇಲ್ಲ ಅನ್ನುವುದು ಅದರ ಭಾಗದಲ್ಲೊಂದು. ಬಹುಶಃ ನಮ್ಮ ಬಗ್ಗೆಯೂ ಬಹಳ ಜನ ಇದನ್ನೇ ಮಾಡುತ್ತಿರುತ್ತಾರೆ. ಇದರಿಂದಾಗಿ ಮೌನ ಅಥವಾ ಸಹನೆಯಿಂದುರುವವರು ದಡ್ಡರೂ ಉಪೇಕ್ಷಿತರು ಅಥವಾ ಸಾಮಥ್ರ್ಯವಿಲ್ಲದವರೂ ಅನ್ನಿಸಿಕೊಳ್ಳುತ್ತಾರೆ. ಪ್ರಪಂಚ ದೊಡ್ಡ</div><div>ದನಿಯಿಂದಾಗಿ ಹೆಚ್ಚು ಗುರುತಿಸಿಕೊಳ್ಳುತ್ತದೆ. ಆದರೆ ದೊಡ್ಡವರಾಗುವುದು ದನಿಯಿಂದ ಸಾಧ್ಯವಿಲ್ಲ, ದೊಡ್ಡವರಾಗಲು ಬೆಟ್ಟದಷ್ಟು ಶ್ರಮ ಬೇಕು, ಸಾಗರದಷ್ಟು ಸಹನೆ ಬೇಕು, ಆಕಾಶದಷ್ಟು ವೈಶಾಲ್ಯತೆ ಬೇಕು. ತಪ್ಪುಗಳ ಕ್ಷಮಿಸಬೇಕು, ನಮ್ಮ ನಾವೇ ತಿದ್ದಿಕೊಳ್ಳಬೇಕು ಎಲ್ಲಕ್ಕಿಂತ ಜಾಸ್ತಿ ಸಮಯ ಅನ್ನುವ ಈ ಚಿಕ್ಕ ಅಂತರದಲ್ಲಿ ನಾವು ಕಳೆದೇಹೋಗುತ್ತೇವೆ ಎನ್ನುವ ಪ್ರಜ್ಞೆ ಬೇಕು. ಇವೆಲ್ಲದರ ಜೊತೆ ಮಾತ್ರ ದೊಡ್ಡವರಾಗಬಹುದು. ವಯಸ್ಸು ಕೊಡುವುದಿಲ್ಲ ಇದನ್ನು ಪುಸ್ತಕಗಳು ಕೊಡುವುದಿಲ್ಲ ಇದಕ್ಕೆ ಮನಸ್ಸು</div><div>ನಮಗೆ ನಾವೇ ಸಿದ್ದಿಸಿಕೊಳ್ಳಬೇಕು. ತನ್ನಿಂದ ತಾನೇ ನಡೆಯುವ ಪ್ರಕ್ರಿಯೆಗಳೆಲ್ಲ ಇವೆಲ್ಲ. ಪ್ರತಿಯೊಂದನ್ನೂ ಶ್ರಮದಿಂದಲೇ ಸಿದ್ಧಿಸಿಕೊಳ್ಳಬೇಕು. ಬಾಯಲ್ಲಿ ಹೇಳುವ ಆಚಾರಕ್ಕಿಂತ ಬದುಕುವ ವಿಚಾರ ಬಹಳ ದೊಡ್ಡದು. ಇದನ್ನು ಅರ್ಥಮಾಡಿಕೊಂಡರೆ ಪ್ರಪಂಚ ಹೇಗಿದ್ದರೂ ಕಹಿ ಅನ್ನಿಸುವುದಿಲ್ಲ. ಅದಕ್ಕೇ ಸಾವು ಭಯಭೀತರಾಗಿಸುವುದಿಲ್ಲ. ಬದುಕು ಹೊರೆಯೆನ್ನಿಸುವುದಿಲ್ಲ. </div><div><br></div><div>ಬದುಕಿನ ಎಂತದ್ದೇ ಸ್ವಾರ್ಥ ಗಳಿರಲಿ. ಪ್ರತಿಯೊಬ್ಬರಿಗೂ ಇರುವಂತದ್ದೇ. ಅವರವರ ಬದುಕಿನ ಹೋರಾಟದ ಜೊತೆ ಅವರವರೆ ಹೀಗೆ ಬಂದು ನಿಲ್ಲಲೇಬೇಕು ಒಂದಲ್ಲ ಒಂದು ದಿನ.ಒಳಗಿನ ಆತ್ಮದ ಪಶ್ಚಾತ್ತಾಪದ ಬೆಂಕಿ ಬೇಯಿಸದಷ್ಟು ನಮ್ಮ ಬದುಕಿನ ದಾರಿ ಶುದ್ಧವಾಗಿದ್ದರೆ ಈ ಯಾತ್ರೆಗೆ ಅಂತಿಮ ಹೇಳಲು ಹಿಂಜರಿಕೆಯಿಲ್ಲ. ಹೀಗೆ ಇವತ್ತು ನಮ್ಮನ್ನು ನಿಲ್ಲಿಸಿ ಬದುಕಿನ ಸಮಯದ ಅಮೂಲ್ಯತೆ ಸಾರಿದ ಕೊರೊನಾಕ್ಕೆ ಧನ್ಯವಾದ ಹೇಳಲೇಬೇಕಲ್ಲವಾ?</div><div><br></div><div>😊😊</div><div><br></div><div> </div><div>--ಪ್ರಿಯಾ</div>maanasa saarovrahttp://www.blogger.com/profile/14088976224552347105noreply@blogger.com5tag:blogger.com,1999:blog-7191814811569941492.post-5862357585004907152019-11-19T21:04:00.001-08:002019-11-19T23:01:59.083-08:00ಬೆಳಗಿನ ಕತೆ<div>ಆತ್ಮಸಖನೇ, </div><div><br></div><div>ಅನಾಮಿಕ ಸ್ಥಳದಲ್ಲಿ ಕುಳಿತು ಬೆಳಗು ನನ್ನ ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಸುಮ್ಮನೇ ಇರುವುದ ಬಿಟ್ಟು ಮನಸು ಅತ್ತ ಇತ್ತ ಹರಿದಾಡುತ್ತಿದೆ. ಹಿಂದೆ ಮುಂದೆ ಜೋಕಾಲಿಯಾಡುತ್ತಿದೆ. ಭೂತದ ನೆರಳು ಭವಿಷ್ಯತ್ತಿಗೆ ಬೆರಳ ತೋರಿಸುತ್ತಿದೆ. ನಾನೇನು ನಿನ್ನಷ್ಟು ವೇದಾಂತಿಯಲ್ವಲ್ಲ.ಆದರೂ ಎಲ್ಲಿ ಹೋದರೂ ಬೆನ್ನು ಬಿಡದ ಭೂತ ನೀನು. ಕತ್ತಲಿರಲಿ ಬೆಳಕಿರಲಿ. ಕಣ್ಣು ಮುಚ್ಚಿದರೂ ಕಣ್ಣು ಬಿಟ್ಟರೂ ನಿನ್ನ ಕಣ್ಣು ತಪ್ಪಿಸಲಾಗದು.</div><div><br></div><div>ಏನು ಯೋಚನೆ ಅಷ್ಟೆಲ್ಲ ಅಂತ ಕೇಳ್ತಿದೆ ನಿನ್ನ ಕಂಗಳು. ಹೇಳಿದರೆ ನೀನು ಬಿದ್ದು ಬಿದ್ದು ನಗೋದು ಗ್ಯಾರಂಟಿ ಅಂತ ನನಗೆ ಗೊತ್ತು. ಆದರೂ ಹೇಳ್ತೀನಿ ಕೇಳು. ಇಷ್ಟು ವರ್ಷದಲ್ಲಿ ಏನು ಗಳಿಸಿದೆ ಅಂತ ನನಗೆ ನಾನೇ ಕೇಳ್ಕೊಳ್ತಿದ್ದೆ. ಗಳಿಕೆಯೆಂದರೆ ಹಣದ್ದಲ್ಲ.ಎಷ್ಟೆಲ್ಲ ಪ್ರೀತಿ ವಿಶ್ವಾಸ, ಸ್ನೇಹ ಲೆಕ್ಕ ಹಾಕ್ತಿದ್ದೆ. ಎಟ್ ಪ್ರೆಸೆಂಟ್ ಕಣ್ಮುಚ್ಕೊಂಡ್ರೆ ಒಳಗಿರೋದು ನಾನು ಮತ್ತೆ ನೀನು ಇಬ್ಬರೇ.. ನಂಗೆ ಬುದ್ದಿ ಬಂದಾಗ ಹೀಗೇ ಕಣ್ಮುಚ್ಕೊಳ್ತಿದ್ದೆ. ಆವಾಗ್ಲೂ ಇದ್ದಿದ್ದು ನಾವಿಬ್ರೇ. ಮತ್ತೆ ಮಧ್ಯೆ ಅದೆಷ್ಟು ಜನ ಬಂದಿದ್ದಾರೆ! ನಾನಿದ್ದೀನಿ ನಾನಿದ್ದೀನಿ ಅನ್ನೋದಕ್ಕೆ. ಮೊನ್ನೆ ಯಾರೋ ಹೇಳ್ತಿದ್ರು. ನಾನಿದ್ದೀನಿ ನಿನ್ ಜೊತೆ. ಯಾವತ್ತೂ ಇರ್ತೀನಿ. ಇಲ್ಲೇ. ಹೀಗೆ. ಇಪ್ಪತ್ತು ವರ್ಷಾದ ನಂತರವೂ ಇರ್ತೀನಿ ಅಂತೇನೋ. ನಗಲಿಲ್ಲ ಮಾರಾಯಾ ನಾನು. ಅದರೆ ಒಳಗೊಳಗೆ ನಗು ಬರ್ತಿತ್ತು ಸುಳ್ಳಲ್ಲ. ಇವತ್ತಿನ ಇಡೀ ದಿನಕ್ಕೆ ನನಗೆ ಕೊಡೋಕೆ ಐದು ನಿಮಿಷ ಸಮಯ ಇಲ್ದಿರೋರೆಲ್ಲ ಜೀವನ ಪೂರ್ತಿ ನಿನ್ ಜೊತೆ ನಾನಿದ್ದೇನೆ ಅನ್ನೋದಿದೆಯಲ್ಲ ಅದರಂತ ದೊಡ್ಡ ಜೋಕು ಇನ್ನೊಂದಿಲ್ಲ ಅನ್ನಿಸ್ತಾ ಇತ್ತು! ನಾಳೆ ಬೆಳಿಗ್ಗೆ ನಾನೇ ಇರ್ತೇನೆ ಇಲ್ವೋ ಗೊತ್ತಿಲ್ಲ ಮಾರಾಯಾ ಇವತ್ತಿನದಷ್ಟೇ ನಿಜ. ಹೌದಾ ಅಲ್ವಾ ನೀನೇ ಹೇಳು.</div><div><br></div><div><br></div><div>ನೋಡು ಈ ಸಂಬಂಧಗಳೇ ವಿಚಿತ್ರ. ನಿಭಾವಣೆಯ ಹೊರೆ ಬೇಡ ಅಂದ್ಕೊಳ್ತೇವೆ. ನಿಭಾಯಿಸದೇ ಇದ್ರೆ ನಾವೇ ನೊಂದ್ಕೊಳ್ತೇವೆ. ಸಮಯ, ಮಾತು, ಕಷ್ಟ ಸುಖ ಎಲ್ಲಕ್ಕೂ ಸಣ್ಣ ಒಂದೊಂದು ಸ್ಪಂದನದ ನಿರೀಕ್ಷೆಯಲ್ಲೇ ಇರ್ತೇವೆ. ಮತ್ತೆ ಅದನ್ನ ನಿಭಾಯಿಸಕ್ಕಾಗದೇ ಇದ್ದಾಗ ದೊಡ್ಡ ದೊಡ್ಡ ಡೈಲಾಗ್ ಎತ್ಗೊಳ್ತೇವೆ. ಇದಕ್ಕಿಂತ ನಾವ್ಯಾರಿಗೂ ಯಾವುದೇ ನಿರೀಕ್ಷೆ ಹುಟ್ಟಿಸುವಂತ ಮಾತುಗಳ ಆಡದೇ ಇರೋದು ಒಳ್ಳೆಯದಲ್ವ? ಇವತ್ತಿಗೆಷ್ಟು ಸಾಧ್ಯವೋ ಅಷ್ಟೇ ಬದುಕಿಗಿರಲಿ. ನಾಳೆಗಳು ನಮ್ಮವೆಂಬ ಖಾತರಿ ಏನಿಲ್ಲ. ನೊಂದುಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ನನ್ನೊಳಗೆ ಇರೋದು ಈ ಕಾರಣಕ್ಕೆ. ಇತ್ತೀಚೆಗೆ ಯಾರಾದ್ರೂ ನನಗೋಸ್ಕರ ಏನಾದ್ರು ಮಾಡ್ತೀನಂದ್ರೆ ಬೇಡ. ನಿಮಗೆ ಬೇಕಿದ್ರೆ ಮಾತ್ರ ಮಾಡಿ ಅಂತ ನಿರ್ದಾಕ್ಷಿಣ್ಯ ಹೇಳಿ ಬಿಡೋಣ ಅನ್ನಿಸತ್ತೆ. ಸುಮ್ನೆ ಅವರ ಕಂಗಳಲ್ಲಿ ನನ್ನ ಒರಟು ನಡವಳಿಕೆಯ ಬಗೆಗೆ ಅಸಹನೆ ನೋಡಕ್ಕೆ ಇಷ್ಟವಾಗದೇ ಸುಮ್ನಿದ್ದುಬಿಡ್ತೇನೆ. ಮೌನ ಅನ್ನೋದು ಎಷ್ಟೆಲ್ಲ ಅರ್ಥಗರ್ಭಿತ! ಅದಕೇ ನೀ ನನಗೆ ಇಷ್ಟವಾಗೋದು. ಮಾತಾಡದೇ ಮಾತಾಡುವ ನಿನ್ನ ನಗು ನನ್ನ ಖುಶಿಯಾಗಿಡೋದು. ನಾನು ಒಂಟಿ ಅನ್ನಿಸದಷ್ಟು ನನ್ನೊಳಗೆ ನೀನು ಇರೋದ್ರಿಂದಲೇ ಬಾಹ್ಯ ಸಂಬಂಧಗಳು ನನ್ನ ಎಷ್ಟು ನಲುಗಿಸಿದರೂ ನಾನು ಸ್ಥಿರವಾಗಿ ನಿಲ್ಲೋಕೆ ಸಾಧ್ಯವಾದದ್ದು. ನನ್ನ ಗಳಿಕೆ ಏನೂ ಇಲ್ಲ ಇಲ್ಲಿ ಅಂತ ಅರ್ಥವಾಗಿಸಿದ್ದು ಕೂಡ ನೀನೇ. ಇವತ್ತಿಗೆ ಸಾಕು ಮಾರಾಯಾ. ಈ ಬೆಳಗು ಮತ್ತೆ ಒಳಗಿಳಿಯಲಿ. ಇಲ್ಲಿ ಚೆಲ್ಲಿದ ಮಂಜಿನ ಹನಿಗಳಂತೆ...</div><div><div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhiCoI0UxQp9DfPIZJIQgmxFUUThFDEp1B2xrJ3L-65QvP35fXmentudqc0FuYZEjBb6G8smBHYJVKZ9xfj_KbFc9FATQeZgwyZqrN7ie_v4Oanv1x8FeivGprcLb354FMhx6i6Pd6t7l8/s1600/1574233311278417-0.png" imageanchor="1" style="margin-left: 1em; margin-right: 1em;">
<img border="0" src="https://blogger.googleusercontent.com/img/b/R29vZ2xl/AVvXsEhiCoI0UxQp9DfPIZJIQgmxFUUThFDEp1B2xrJ3L-65QvP35fXmentudqc0FuYZEjBb6G8smBHYJVKZ9xfj_KbFc9FATQeZgwyZqrN7ie_v4Oanv1x8FeivGprcLb354FMhx6i6Pd6t7l8/s1600/1574233311278417-0.png" width="400">
</a>
</div><br></div><div><br></div><div><br></div><div><br></div><div><br></div>maanasa saarovrahttp://www.blogger.com/profile/14088976224552347105noreply@blogger.com0tag:blogger.com,1999:blog-7191814811569941492.post-51231166327745203052019-10-04T11:15:00.001-07:002019-10-04T11:26:57.283-07:00ಇಳಿಯಬೇಕಿದೆ ಮತ್ತೊಂದು ಸುತ್ತು..<p dir="ltr">ಆತ್ಮಸಖನೇ,</p>
<p dir="ltr">ಒಂದ್ಕಾಲ ಇತ್ತು.  ಬದ್ಕಿನ ಬಗ್ಗೆ ವಿಪರೀತ ಕಾನ್ಪಿಡೆನ್ಸ್ ಇತ್ತು. ಹೋಪ್ ಇತ್ತು‌. ಫರ್ಪೆಕ್ಷನ್ ನ ಹುಚ್ಚಿತ್ತು. ಪ್ರಪಂಚದ ಅಂಚಿನವರೆಗೂ ಒಂದ್ಸಲ ಹೋಗಿ ಬಂದು ಬಿಡುವ ಅನ್ನುವ ಕನಸು ಉಮೇದಿ ಇತ್ತು. ಕಾಲ ಬದಲಾದಂತೆ ಎಷ್ಟೆಲ್ಲ ಬದಲಾದವು! ನಾವೇನಾ ಇದು ಅಂದುಕೊಳ್ಳುವಷ್ಟು!<br>
ತರತರದ ಅಡುಗೆ ತಿನ್ನುವ ಮಾಡುವ ಉಮೇದಿಯ ಹೊತ್ತಲ್ಲಿ ಯಾರದೋ ನಿರ್ಭಂದಗಳಿಗೆ ನಮ್ಮ ಬಯಕೆಗಳ ಬಲಿ ಕೊಟ್ಟೆವು. ಈಗ ಮಾಡುವ ಉಮೇದಿ ಇದ್ದರೂ ತಿನ್ನುವ ಹಪಹಪಿಯೇ ಇಲ್ಲ‌. ದೇಹಕ್ಕೆ ತಿಂದರೆ ದಕ್ಕುವುದೇ ಇಲ್ಲ. ಬದುಕು ಹಾಗೆ. ಬೇಡದ್ದೆಲ್ಲ ಕಲಿಸಿದೆ. ಬೇಕಾಗಿರೋದನ್ನೇ ಕಿತ್ಗೊಂಡಿದೆ. ನನಗಂತೂ ಪರ್ಫೆಕ್ಷನ್ ನ ಭೂತ ತೊಲಗಿದೆ. ಎಲ್ಲಾನೂ ನಾನೇ ಸರಿ ಮಾಡ್ಕೊಳ್ತೀನಿ ಅನ್ನೋ ಅತಿಯಾದ ಅನಿಸಿಕೆಗಳೆಲ್ಲ ಮಣ್ಣುಕಚ್ಚಿದೆ. ಎಲ್ಲರಿಗೂ ಸರಿ ಮಾಡಬೇಕು. ಎಲ್ಲರ ನಿರೀಕ್ಷೆಗಳಿಗೂ ಒದಗಬೇಕು ಎಂಬುದೇ ಹುಚ್ಚು ಅಂತ ಗೊತ್ತಾಗಿದೆ. ಕಾಲ ಮತ್ತು ಪರಿಸ್ಥಿತಿ ನಮ್ಮನ್ನ ಆಡಿಸುವ ಆಟದ ಗೊಂಬೆಗಳು. ಅದು ಬೇರೆಯವರನ್ನೂ ಆಡಿಸುತ್ತಿದೆ ಅಷ್ಟೇ. ಹಿಂತಿರುಗಿ ನೋಡಿದರೆ ನಮ್ಮದೇ ನೂರು ತಪ್ಪುಗಳು ಗೋಚರಿಸುತ್ತವೆ. ಅವು ಅವತ್ತಿನ ಕ್ಷಣಕ್ಕೆ ತಪ್ಪೆನಿಸಿದವಲ್ಲ. ಇವತ್ತಿಗೆ ಅನ್ನಿಸುತ್ತಿವೆ. ನಾಳೆಗೆ ಗೊತ್ತಿಲ್ಲ. ಹಾಗೇ ಬುದ್ದೀಪೂರ್ವಕ ಬದುಕಿನ ಅಸಡ್ಡೆ ಇರಲಿಲ್ಲ ನನಗೆಂದೂ. ನಾನು ಕೇಳಿರದ ನೂರಾರು ತಿರುವುಗಳಲ್ಲಿ ನನ್ನ ನಡೆಸಿರುವ ಅವಳಿಗೇ ಗೊತ್ತು. ನನ್ನೊಳಗಿನ ಸರಿ ತಪ್ಪುಗಳ‌ಲೆಕ್ಕ. ಇನ್ಯಾರಿಗೆ ಕೊಡಲಿ ಹೇಳು. </p>
<p dir="ltr">ಬಹುಶಃ ಹಿಂತಿರುಗಿ ನೋಡೋದು ಒಂದು ವ್ಯವಸ್ಥೆ ಅಷ್ಟೇ. ಯಾವುದೂ ಮತ್ತೆ ನಮ್ಮ ಕೈಗೆ ಸಿಗದು. ನಾಳೆಗಳಿಗೆ ಇವತ್ತೇ ಋಜು ಹಾಕಲಾಗದು.‌ಇವತ್ತಿನ ಅನಿವಾರ್ಯತೆ ಗಳಿಗೆ ರಾಜಿ ಮಾಡಿಕೊಳ್ಳದ ಹೊರತು ಬೇರೆ ಆಪ್ಷನ್ ಇಲ್ಲ. ಸಧ್ಯಕ್ಕೆ ನನ್ನ ನಡೆಸುವ ದಾರಿ ಅವಳದ್ದೇ. ಸಮಾಧಾನ ಕೊಡುವಾಗ ಕೊಡುತ್ತಾಳೆ. ನೀನೇ ಹೇಳಿದ ಹಾಗೆ ಇದು ನನ್ನ ಬದುಕು ಅನ್ನೋ ಕಾರಣಕ್ಕೆ ಖುಶಿಯಾಗಿರುವ ನೋಯುವ ಅಳುವ ಎಲ್ಲ ಹಕ್ಕು ನನಗಿದೆ. ಎಲ್ಲದನ್ನೂ ಬದಿಗೆ ಸರಿಸಿ ಮುಂದೆ ನಡೆಯಲೇಬೇಕಾದ ಅನಿವಾರ್ಯತೆ ಬದುಕಿನದು<br>
ಸಮಯದ ಜೊತೆ ಒಳಮನೆಯಲ್ಲಿ ಸದೃಡ ಏಕಾಂತವೊಂದನ್ನು ಸೃಷ್ಟಿಸಲು ಬದುಕೇ ಅನುವು ಮಾಡಿ ಕೊಟ್ಟಿದೆ. ಈ ಜಗತ್ತಿನ ಮೋಹ ಮಿಥ್ಯಗಳ ರೂಪದಲ್ಲಿ. ಅದು ಅರ್ಥಮಾಡಿಸುವ ಪರಿಗೂ ನಮಗೆ ಅರ್ಥವಾಗಿಲ್ಲ ಅಂದರೆ ಅದಕ್ಕೆ ಹೊಣೆ ಅವಳಲ್ಲ. ನಾವೇ. ಒಳಗಿಳಿದು ನೋಡು. ನಮ್ಮಿಂದ ಎಲ್ಲವನ್ನೂ ಕಿತ್ಗೊಂಡು ನೋವು ಕೊಡ್ತಿದ್ದಾಳೆ ಅಂದ್ಕೊಳ್ತಿದ್ದೀವಿ ನಾವು. ಆದರೆ ಅವಳು ಇದ್ಯಾವುದು ನಿಂದಲ್ಲ. ಮೋಹ ಕಳಚು ಅಂತಿದ್ದಾಳೆ‌.<br>
ವಾಸ್ತವದ ಕರ್ತವ್ಯದ ಹೊರತಾಗಿ ಯಾವುದೂ ನೋವು ನಲಿವಿಗೆ ಅಂಟಿಕೊಂಡಿರಬಾರದು. ಆ ಕ್ಷಣಕ್ಕೆ ಅನುಭವಿಸು. ಒಪ್ಪಿಕೋ. ಹಾಗೇ ಮುಗಿಯಿತು. ಮುಂದೆಜ್ಜೆ ಇಡು.‌ಅಲ್ಲೇ ನಿಲ್ಲಕ್ಕಾಗಲ್ಲ.</p>
<p dir="ltr">ಕತೆ ಇಲ್ಲಿಗೆ ಎಂದಿಗೂ ಮುಗಿಯೋದಿಲ್ಲ.ಮಾತು ನಿನಗೆ ಕೇಳದುಳಿದೀತು. ನನಗೆ ಹೇಳಿ ದಣಿವಾಗೋದಿಲ್ಲ. ಸಣ್ಣ ಅಲೆಗಳ ತುಂಬ ತಂಗಾಳಿಯ ತುಂಬಿಕೊಂಡು ನಿನ್ನ ಪಾದ ನೇವರಿಸುವಾಗಲಾದರೂ‌ ನೆನಪು ದಟ್ಟವಾಗದಿರದು. ಎಷ್ಟೆಂದರೂ ಆತ್ಮಸಖನಲ್ಲವೇ! </p>
<p dir="ltr">ಈ ಬಾರಿಯ ನೆರೆಗೂ ನಿನ್ನ ಸರೋವರದಲ್ಲಿ ನೀರಾಗಿಲ್ಲವೇ ಅಂತ ನೀನೊಮ್ಮೆ‌ ಬೈದು ಕೇಳಿದ್ದರೆ  ಎಷ್ಟು ಚೆನ್ನಾಗಿತ್ತು ಅಂದುಕೊಳ್ಳುತ್ತಲೇ ಮತ್ತೆ‌ ಮತ್ತದೆ ಮಾತಿಗಿಳಿಯುತ್ತೇನೆ.ನೀನು ಓದುವುದಿಲ್ಲ.‌ಏನೂ ಹೇಳುವುದೂ ಇಲ್ಲ.‌ಕಾಯುತ್ತಲೇ‌ ಉಳಿದ‌ ನಾನು ನಾನಾಗಿರದ ಹೊತ್ತಲ್ಲಿ ಮನುಷ್ಯನ ಅಗತ್ಯ ಮನುಷ್ಯನೇ ಎಂಬ ಅರಿವಿನೊಂದಿಗೆ ಮತ್ತೆ ಜೋತುಬೀಳುತ್ತೇನೆ ಜೋಗಿತಿಯಂತೆ..<br></p>
<p dir="ltr">#ಜೋಗಿತಿಯ_ಜೋಳಿಗೆಯಿಂದ<br>
#ಸಿರಿ<br><br></p>
maanasa saarovrahttp://www.blogger.com/profile/14088976224552347105noreply@blogger.com0tag:blogger.com,1999:blog-7191814811569941492.post-54072598409357883622019-04-11T04:51:00.001-07:002019-04-11T04:51:20.649-07:00ಆತ್ಮಸಖನೆ<p dir="ltr">ಆತ್ಮಸಖನೆ,</p>
<p dir="ltr">ಹೊರಗೆ ಬಿರು ಬಿರು ಬಿಸಿಲುರಿ. ಒಳಗೊಂದು ತಣ್ಣನೆಯ ಎಲೆ ಗಾಳಿ!ಇದೇನು ಹೊಸ ಪರಿ ಅಂತ ಆಲೋಚಿಸುತ್ತಿದ್ದೆಯೇನೋ. ನಿನ್ನ ನೆನಪಿಗಿರುವ ಖುಶಿಯದು. ಎಷ್ಟು ಕಾಲವಾಯಿತು ಮತ್ತೆ ನಾವು ಹೀಗೆ ತಣ್ಣಗೆ ಕುಳಿತು ಮಾತನಾಡಿ. ಬೃಂದಾವನ ತುಳಸಿಯೆಲ್ಲ ಒಣಗಿ ಬೀಜ ಉದುರುವಷ್ಟು ದಿನವಾಯಿತು. ನೀ ಬರದೇ. ಹೋಗಲಿ ಒಮ್ಮೆ ನೆನಪಾಗಿಸಿಕೊಂಡು ನನ್ನ ಹೆಸರ ಕರೆಯದೇ..</p>
<p dir="ltr">ಆದರೂ ನಿನ್ನ ನೆನಪಲ್ಲೆಷ್ಟು ತಂಪಿದೆ ನನಗೆ ನೋಡು. ಬರದವನ ಬಗೆಗೂ ಎಂಥಾ ಮೋಹವೇ ನಿನಗೆ ಅಂತ ನಗೆಯಾಡಬೇಡ. ಬಂದಾಗೊಮ್ಮೆ ಅಂಗೈ ನೇವರಿಸಿ ಹೋಗಿದ್ದೆಯಲ್ಲ! ಅಷ್ಟೇ ಸಾಕು ನೋಡು. ನಿನ್ನ ನೇವರಿಕೆಯಲ್ಲೇ ಅಷ್ಟು ಪ್ರೀತಿಯ ಕಂಡವಳು ನಾ. ಕರೆದಾಗೊಮ್ಮೆ ಖುಷಿಪಡುವ ಭಾಗ್ಯವನ್ನು ಕೊಡಲಿಲ್ಲ ಯಾಕೋ. ಒಮ್ಮೊಮ್ಮೆ ಬೈದುಕೊಳ್ಳುವ ಅನ್ನಿಸಿಬಿಡ್ತೀಯ. ಕೆಟ್ಟ ಹಠಮಾರಿಯಂತೆ ಒಮ್ಮೆ ರಚ್ಚೆ ಹಿಡಿದು ನನ್ನ ಒಲಿಸಬಾರದೇ. ನಿನ್ನ ಒಲವು ಅರಿವ ಮುನ್ನವೇ ಮೌನಕ್ಕೆ ಹೋದವಳು ನಾನು. ನಿನ್ನ ಕಂಗಳ ಒಲವು ಬತ್ತಿಸಿ ಬಿಟ್ಟೆಯೆನೋ. ಸಣ್ಣ ಹಠದವಳು ನಾನೆಂದು ತಿಳಿದು ಒಲಿಸದೇ ಹೋದೆ. ಬಣ್ಣ ಹಚ್ಚಿಕೊಂಡಿಲ್ಲವೋ ಸುಮ್ಮನೆ ನಿನ್ನೊಲವ ಬಣ್ಣಕ್ಕೆ ಕಾಯ್ದಿದ್ದೇನೆ ನೋಡು.</p>
<p dir="ltr">ರಾತ್ರಿಯ ನಿಶೆಗೂ ಅಂದ ಬರುತ್ತದೆಯಲ್ಲ ನಿನ್ನ ನೆನಪಾದರೆ! ನಿರೀಕ್ಷೆಗಳ ಬತ್ತಿಸಿಕೊಂಡ ಎದೆಯಲ್ಲಿ ನಿನ್ನ ಕನಸುಗಳ ಮೂಟೆ ಕಟ್ಟಿ ಬೆಳಕಿನಂತ ದೀಪ ಹೊತ್ತಿಸಿ ಮತ್ತೆ ಕಾಣದಾದೆಯಲ್ಲ!! ಹೇಳು ನಿನಗೆಂದೂ ನಮ್ಮ ನಡುವಿನ ಖುಷಿಯ ಕ್ಷಣಗಳು ಕಾಡುವುದೇ ಇಲ್ಲವಾ? ಒಮ್ಮೆಯಾದರೂ ಕೆನ್ನೆ ಹಿಂಡಿದ ಕೈಗಳು ಕರೆಯುವುದಿಲ್ಲವಾ! </p>
<p dir="ltr">ಎಷ್ಟೇ ಬರೆದರೂ ಬರದವ ನೀನು. ಗೊತ್ತು ನನಗೆ. ರಾಜಕಾರ್ಯ ಕಾರಣಗಳು ನೂರು ನಿನ್ನವಿದೆ. ಕರೆದಕೂಡಲೇ ಓಡಿ ಬರದ ಬಿನ್ನಾಣವು ನಿನ್ನದಿದೆ. ಹಾಗಿದ್ದು ನಿರೀಕ್ಷೆಯಲ್ಲೇ ನನ್ನ ದಿನಗಳಿವೆ. ತೋಳಿಗೊಮ್ಮೆ ಆತು ನಿನ್ನ ಎಲ್ಲ ಕಣ್ಣೀರು ಮರೆಯಬೇಕಿದೆ ನಾನು. ಎದೆಗೊಮ್ಮೆ ತಲೆಯಿಟ್ಟು ಉಸಿರಾಡಬೇಕಿದೆ. ಎಲ್ಲ ಬಿಂಕ ಬಿಟ್ಟು ನಿನ್ನ ಕಾಡಬೇಕಿದೆ.</p>
<p dir="ltr">ಈ ಓಲೆಗೂ ಉತ್ತರವಿಲ್ಲದಿರೆ ನಿನ್ನೊಲವಿಗೆ ನನ್ನ ಹೆಸರಿಲ್ಲ! ನವಿಲುಗರಿಯ ಮರಿಯೊಂದು ಸಾಯಬಹುದು ನೋಡು! ಕೊಳಲಾಗುವ ಬಿದಿರೊಂದು ಒಡೆಯಬಹುದು ನೋಡು! <br>
ಬೇಗ ಒಮ್ಮೆ ಕೂಗಿ ಬಿಡು. ಇಲ್ಲ ನೀನೇ ಬಂದುಬಿಡು.<br>
ಮಳೆಯ ಹೆಸರಿಗೆ.. ನನ್ನ ಕನಸಿಗೆ..</p>
<p dir="ltr">#ಜೋಗಿತಿಯ_ಜೋಳಿಗೆಯಿಂದ<br>
#ಸಿರಿ</p>
maanasa saarovrahttp://www.blogger.com/profile/14088976224552347105noreply@blogger.com0tag:blogger.com,1999:blog-7191814811569941492.post-35149365894581162362016-12-04T23:36:00.004-08:002017-04-27T00:03:30.415-07:00ಭಾಷೆ -ಬಳಕೆ.<div dir="ltr" style="text-align: left;" trbidi="on">
<div style="text-align: justify;">
ಮತ್ತೊಮ್ಮೆ ನಿಮ್ಮೆದುರಿನಲ್ಲಿ....</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಈಗಷ್ಟು ಬರೆಯೋದಕ್ಕೆ ನೂರು ಕನಸುಗಳಿವೆ. ಹೇಳೋದಕ್ಕೆ ಸಾವಿರ ಮಾತುಗಳಿವೆ. ಆದರೆ ಕೇಳೋರೊಬ್ಬರು ಬೇಕಲ್ಲ!! ಯಾರಿಲ್ಲದಿದ್ದರೂ ಏನಂತೆ. ಊದೋ ಶಂಖ ಊದೋದೆ. ಬಾರ್ಸೊ ಜಾವಟೆ ಬಾರ್ಸೋದೆ. ಹಂಗನ್ಕೊಂಡ್ಮೇಲೆ ಬರವಣಿಗೆ ಹಗುರ ಅನ್ನಿಸಿದೆ. ಓದು ಆಪ್ತ ಅನ್ನಿಸಿದೆ. ಸುತ್ತ ಮುತ್ತ ಸಿಕ್ಕಾಪಟ್ಟೆ ಬುದ್ದಿವಂತರು ಬುದ್ದಿಜೀವಿಗಳು ಪಂಡಿತರು</div>
<div style="text-align: justify;">
ಎಲ್ಲ ತುಂಬ್ಕೊಂಡು ನಾನೇ ನನ್ನಷ್ಟೊತ್ತಿಗೆ ಗಿಲ್ಟ್ ಫೀಲ್ ಮಾಡ್ತಾ ಬರೀಲೋ ಬೇಡ್ವೋ ಯಾರನ್ಕೊತಾರೋ ಅನ್ಕೊಳ್ತಾ ಒಳಗೊಳಗೆ ಸಣ್ಣಗೆ ಬೆವರ್ತಾ ಬದ್ಕು ಒಂಥರಾ ಕಟ್ಟಿ ಹಾಕ್ಕೊಂಡಿರೋ ಹೊತ್ತಿಗೆ ಹೀಗೆಲ್ಲ ಜ್ಞಾನೋದಯ ಆಗಿ ನಿಮಗೆಲ್ಲಾ ಕಷ್ಟ ಕೊಡ್ತಿದ್ದೀನಿ ಅನ್ನಿಸ್ತಿದ್ರೂ ಸ್ವಸ್ವಲ್ಪ ಸಹಿಸ್ಕೋಳ್ತ ಸ್ವಸ್ವಲ್ಪ ಬೈಕೊಳ್ತ ಓದ್ತಾ ಇರುವಾಗ ಇವತ್ತಿನ ವಿಷಯಕ್ಕೆ ಬಂದ್ಬಿಡೋಣ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಇತ್ತೀಚೆಗೆ ಭಾಷಾ ಸಂಸ್ಕೃತಿ ನೆ ಮರ್ತು ಹೋಗಿರೋ ಹಾಗೆ ಅನ್ನಿಸ್ತಾ ಇರತ್ತೆ ನನಗೆ ಆಗಾಗ. ನನಗೊಬ್ಬಳಿಗೆ ಹೀಗಾ ಅಥವಾ ನಿಮಗೆಲ್ಲರಿಗೂ ಹೀಗಾ ಗೊತ್ತಿಲ್ಲ. ಬಯಲ ಸೀಮೆ ಅಜ್ಜಪ್ಪ ಬಸ್ಯಾ ಕರ್ಯಾ ಮತ್ತೆ ಅದೆಂತೆಂತದೋ ಆ ಮಗನೆ ಈ ಮಗ್ನೆ ಅಂದ್ರೆ ಏನೂ ಅನ್ಸಲ್ಲ. ಕೆಲಸಕ್ಕೋಸ್ಕರ ಎಲ್ಲೆಂದಿದ್ಲೋ ಬಂದಿರೋ ಜನ ಕುಡ್ಕೊಂಡು ರಸ್ತೆ ಬದಿಯಲ್ಲಿ ಬಾಯಿಗೆ ಬಂದಂತೆ ಮಾತಾಡೋ ಜನ, ಬೀದಿ ಅಂಚಲ್ಲಿ ಬೋರಿಂಗ್ ಬಾವಿ ನೀರಿಗೆ ನಿಂತ ಹೆಂಗಸರು ಕಿತ್ತಾಡೋ ಭಾಷೆ ಎಲ್ಲ ಸಹನೀಯ. ಭಾಷೆ ಕೂಡ ಮನುಷ್ಯನ ಹುಟ್ಟು ಪರಿಸರದೊಂದಿಗೆ ಅವಿನಾಭಾವದ ಸಂಬಂಧ. ಕನ್ನಡವನ್ನ ಕೆಟ್ಟಕೆಟ್ಟದಾಗಿ ಆಡೋ ಬೇರೆ ಬೇರೆ ಜನರನ್ನೂ ನಾವು ಸಹಿಸ್ಕೊಳ್ತೇವೆ. ಉತ್ತರಕರ್ನಾಟಕ, ಮೈಸೂರ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಹವ್ಯಕ ಕನ್ನಡ ಅಂತೆಲ್ಲ ಸಾವಿರ ವಿಂಗಡಣೆಯ ಮಾಡಿಯೂ ನಾವೆಲ್ಲ ಭಾಷೆಯ ವಿಷಯದಲ್ಲಿ ಭಾವ ನೋಡಿ ಸಮಾಧಾನ ಪಟ್ಟುಕೊಳ್ತೇವೆ. ಅನಕ್ಷರಸ್ತರು ಕಾಡು ಜನರು ಹೇಗೆ ಮಾತನಾಡಿದರೂ ಅವರ ಅಭ್ಯಾಸ ಅದು ಅಂತ ಬಿಟ್ಟುಬಿಡ್ತೇವೆ. ಆದರೆ ಈ ನಾಗರಿಕರು, ವಿದ್ಯಾವಂತರು, ಸುಸಂಸ್ಕೃತರು ಅನ್ನೋರು ಬಳಸುವ ಭಾಷೆಗಳನ್ನ, ಉಪಯೋಗಿಸುವ ಶಬ್ಧಗಳು ಮಾತ್ರ ತುಂಬಾ ಕಸಿವಿಸಿಯುಂಟುಮಾಡುತ್ತದೆ! ಯಾಕೆ? ಅಂತ ನಾನೇ ನೂರಾರುಬಾರಿ ಅನ್ಕೊಳ್ತೇನೆ!</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಶಬ್ಧಗಳ ವಿಷಯದಲ್ಲಿ ಮಡಿವಂತಿಕೆ ಸಲ್ಲದು ಎಂಬುದು ನಿಜವಾದರೂ ಸಾಮಾಜಿಕ ಸ್ಥಳಗಳಲ್ಲಿ ವಿದ್ಯಾವಂತರು ಉಪಯೋಗಿಸುವ ಭಾಷೆಗೆ ಸೌಜನ್ಯವಿರಬೇಕು ಎಂಬುದು ಅಲಿಖಿತ ಮನಸ್ತಿತಿಯೇನೋ. ಅಥವಾ ವಿದ್ಯೆ ಅಷ್ಟಾದರೂ ಸೌಜನ್ಯ, ಸಂಸ್ಕಾರ ಕಲಿಸಿರಬೇಕೆಂಬುದು ಕೂಡ ನಮ್ಮಂತವರ ರಿಸ್ಟ್ರಿಕೆಡ್ ಮನಸ್ತಿಯೇ ಇರಬಹುದು. ಮನೆಯಲ್ಲಿ ಕೂತು ಓದುವ ಪುಸ್ತಕಗಳಲ್ಲಿ ಶಬ್ಧಗಳು ಹೇಗಿದೆ ಎಂಬುದಕ್ಕಿಂತ ವಿಷಯವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಿದ್ದೂ ಸಾರ್ವಜನಿಕ ಮಾತು, ಸಭೆ, ಎಪ್ ಬಿ ಅಂತ ಜಾಗಗಳಲ್ಲಿ ಭಾಷಾ ಸಭ್ಯತೆಯನ್ನು ಗಮನಿಸಲಾಗುತ್ತದೆ. ಅದು ಅವರ ನಾಗರಿಕ ಮನಸ್ತಿತಿಯ ಮುಖವಾಣಿಯೆಂದೇ ನಂಬಲಾಗುತ್ತದೆ. ಇವೆಲ್ಲ ಎಷ್ಟು ಸರಿ ಎಷ್ಟು ತಪ್ಪು ಎಂದು ಇನ್ನೊಬ್ಬರು ಲೆಕ್ಕ </div>
<div style="text-align: justify;">
ಹಾಕಲು ಸಾಧ್ಯವಾಗದು. ಅವರವರದ್ದೇ ಗುಣಾಕಾರಗಳು ಅಲ್ಲಿರೋದು. </div>
<div style="text-align: justify;">
<br /></div>
<div style="text-align: justify;">
ಇಷ್ಟೆಲ್ಲ ಹೇಳೋಕ್ ಮುಂಚೆ ನನಗೂ ಗೊತ್ತಿಲ್ಲ. ಯಾವುದು ಸರಿ ಯಾವ್ದು ತಪ್ಪು ಅಂತೆಲ್ಲ. ಮಾತಿನಾಚೆಗೆ ಮನಸೇ ಮುಖ್ಯ ಅನ್ನೋ ನನ್ನನ್ನು ಮಾತು ಹರ್ಟ್ ಮಾಡತ್ತೆ . ಭಾಷೆಯ ಬಳಕೆ ತಪ್ ತಪ್ಪಾಗಿ ಮಾತಾಡಿದ್ರೆ ಮೈ ಉರಿಯತ್ತೆ</div>
<div style="text-align: justify;">
ಅನ್ನೋದು ನೂರಕ್ಕೆ ನೂರು ಸತ್ಯ. ಮಾತು ಕೃತಿ ಎರಡೂ ಒಂದಷ್ಟು ಸಾಮ್ಯತೆ ಕಾಣದಿದ್ದರೆ ಅದೊಂದು ನಾಟಕೀಯ ಅನ್ನಿಸೋಕೆ ಎಷ್ಟೊತ್ತು ಬೇಡ. ಆಮೇಲಿಂದು ಅವರವರಿಗೆ ಬಿಟ್ಟ ವಿಷಯ. </div>
<div style="text-align: justify;">
<br /></div>
<div style="text-align: justify;">
ಇವತ್ತಿಗೆ ಇದಿಷ್ಟೇ, ನಿಮಗೂ ನನ್ನಂಗೆ ಹೀಗೆಲ್ಲಾ ಅನ್ನಿಸ್ತಾ ಇದ್ರೆ ಹೇಳದೆ ಇರ್ಬೇಡಿ. ಮುಕ್ತಾಯಕ್ಕೊಂದು ಶರಾ ಬರೆಯೋ ವಿಷಯ ಅಂತೂ ಇದಲ್ಲ.</div>
<div style="text-align: justify;">
<br /></div>
<div style="text-align: justify;">
ಸಿಗುವಾ ಮತ್ತೊಮ್ಮೆ ನಾಳೆಗಳಿದ್ದರೆ.. </div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
maanasa saarovrahttp://www.blogger.com/profile/14088976224552347105noreply@blogger.com4tag:blogger.com,1999:blog-7191814811569941492.post-24121456854282741232016-11-05T04:45:00.001-07:002016-11-05T06:48:45.903-07:00ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ...<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhhm1JmGurF7Nzz9xWgR-oFy3FGTpEDZBC9avMWghCq6B4c2h9RjpLKklV2Cvdm2AoW5RO-0zg6708sGS7HW4IX_AtS3_bWvdnlgAmy4lcV3mJ8-bWSfzt-3OtWBTZ1xlja9_aPHfJ8S4w/s1600/IMG-20150505-WA0005.jpg" imageanchor="1" style="clear: left; float: left; margin-bottom: 1em; margin-right: 1em; text-align: justify;"><img border="0" height="200" src="https://blogger.googleusercontent.com/img/b/R29vZ2xl/AVvXsEhhm1JmGurF7Nzz9xWgR-oFy3FGTpEDZBC9avMWghCq6B4c2h9RjpLKklV2Cvdm2AoW5RO-0zg6708sGS7HW4IX_AtS3_bWvdnlgAmy4lcV3mJ8-bWSfzt-3OtWBTZ1xlja9_aPHfJ8S4w/s200/IMG-20150505-WA0005.jpg" width="199" /></a></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span style="background-color: yellow; color: blue;">ತುಂಬಾ ದಿನಗಳ ನಂತರ ಬರೆಯಬೇಕೆಂಬ ಒತ್ತಡಕ್ಕೆ ಬಿದ್ದಿದ್ದೇನೆ. ಹೌದು. ನನ್ನ ಮೌನಗೊಳಿಸುವ ನಿಟ್ಟಿನಲ್ಲಿ ನಿನ್ನದು ಪ್ರಯತ್ನವಾ ಅಥವಾ ನನ್ನ ಸುಮ್ಮನುಳಿಸುವ ತಂತ್ರವಾ ಗೊತ್ತಿಲ್ಲ ನನಗೆ. ಆದರೆ ಒಮ್ಮೆ ಮೌನವಾಗುವ ಹಂಬಲಕ್ಕೆ ಬಿದ್ದರೆ ಮತ್ತೆ ನಿನಗೂ ನನ್ನ ಹತ್ತಿರ ಬರೋಕಾಗಲ್ಲ ಎಂಬುದು ನಿನಗೆ ಗೊತ್ತಿದೆಯಲ್ಲ. ಅತಿಯಾದ ಆತ್ಮವಿಶ್ವಾಸ ಅತಿಯಾದ ಹಟ ಅತಿಯಾದ ಎಲ್ಲವನ್ನೂ ಮಾಡಿ ನನ್ನ ಒತ್ತಡಕ್ಕೂ ನನ್ನ ಮನಸ್ಸಿನ ಒತ್ತಡಕ್ಕೂ ಕಾರಣವಾದ ಎಲ್ಲವನ್ನೂ ನಾನು ಇನ್ನಿಲ್ಲ ಎನ್ನುವಂತೆ ತೊರೆದಿದ್ದೇನೆ. ಸ್ವಲ್ಪ ಕಷ್ಟ ನನಗೆ ನಿಜ. ಆದರೆ ಹಠಕ್ಕೆ ಬಿದ್ದರೆ ಎಲ್ಲವನ್ನೂ ಬಿಡುತ್ತೇನೆ. ಯಾಕೆಂದರೆ ನಾನು ಒಪ್ಪಿಕೊಳ್ಳುತ್ತೇನೆ. ಇದು ನನಗೆ ಆಗೋದಿಲ್ಲ ಅಂತ. ಮೊದಲಾದರೆ ತುಂಬಾ ಕಾಲ ನೋಯ್ತಾ ಇರ್ತಿದ್ದೆ. ಆದರೆ ಈಗ ಹಾಗಿಲ್ಲ. ಅತಿಯಾದ ನೋವಾಗತ್ತೆ. ಆದ್ರೆ ದೇವರು ಇದನ್ನೇ ಬರ್ದಿದ್ದಾನೆ ಅಂತ ಅನ್ಕೊಂಡು ಆರಾಮಾಗ್ತೆನೆ. ಹೌದು. ಮಾತು ನನ್ನ ಅಗತ್ಯ. ಬದುಕಿಗೆ ಅನಿವಾರ್ಯ ಕೂಡ. ಎಲ್ಲೊ ನನಗೆ ಪ್ರೀತಿ ಹರಿಸೋಕೆ ಒಂದು ಜೀವ ಬೇಕು. ಅದು ನನ್ನಷ್ಟೇ ಆಪ್ತವಾಗಿ ತಬ್ಬಿಕೊಳ್ಳುವ ಜೀವ ಆಗಿರಬೇಕು ಎಂಬುದು ನನ್ನೊಳಗೆ ನನಗೇ ಅರಿವಿಲ್ಲದಷ್ಟು ಅಂಟಿಕೊಂಡಿರುವ ಸತ್ಯ. ಹಾಗಂತ ಅಗತ್ಯವಿಲ್ಲ ಅಂದವರಿಗೆ ಅದನ್ನೂ ಹರಿಸಲಾರೆ. ಹೆಜ್ಜೆ ಹೆಜ್ಜೆಗೆ ನನ್ನ ನೋಯುಸುವುದನ್ನು ಚಟವಾಗಿಸಿಕೊಂಡವರ ಜೀವಕ್ಕಿಂತ ಪ್ರೀತಿಸುತ್ತಿದ್ದರೂ ತೊರೆದಿದ್ದೇನೆ. ಎಲ್ಲಿ ನನ್ನ ಖುಶಿಗೆ ಜಾಗವಿಲ್ಲವೋ ಎಲ್ಲಿ ನನಗೆ ಅಸ್ತಿತ್ವವಿಲ್ಲವೋ ಅಲ್ಲಿ ನಾ ಹೇಗಿರಲಿ? ನನಗೆ ಅವ್ಯಕ್ತವೆನ್ನುವುದು ಅಭಿವ್ಯಕ್ತವಲ್ಲದಿದ್ದರೆ ಅದೂ ಬೇಡ. ನೀನು ಆಧ್ಯಾತ್ಮದ ಮಾತಾಡುತ್ತಿ! ಒಂದ್ವೇಳೆ ನನ್ನ ಕೂಡ ಸಹಿಸಲಾಗದಷ್ಟು ಅಸಹನೆ ನಿನ್ನೊಳಗಿದೆ ಅಂತಾದರೆ ನಿನ್ನೊಳಗೆ ಇನ್ನೆಷ್ಟು ಬೆಂಕಿ ಇರಬಹುದು!! ಅವನ್ನೆಲ್ಲ ಇಟ್ಟುಕೊಂಡು ಹೇಗೆ ನೀನು ಜೋಗಿಯಾಗಲು ಸಾಧ್ಯ? ಮನಸು ಶಿವ ಆಗಬೇಕೆಂದರೆ ಅದರೊಳಗೆ ಶಾಂತಿ ನೆಲಸಿರಬೇಕು. ಅಥವಾ ನಿರ್ಲಿಪ್ತವಾಗಬೇಕು. ನಿನ್ನನ್ನು ಕದಲಿಸದಷ್ಟು ಸಹನೆ ತುಂಬಿಕೊಳ್ಳಬೇಕು. ಆದರೆ ನೀನೋ ಪಕ್ಕದಲ್ಲಿ ಶಿಲೆಯಂತೆ ನಿಲ್ಲಬಲ್ಲ ನನ್ನನ್ನೂ ದೂರ ಇರು ಅಂತ ದೂರ ಮಾಡಿಕೊಳ್ಳುತ್ತಿ. ಸರಿ ಬಿಡು ನನಗಾದರೂ ಏನಗತ್ಯ? ಒಂದ್ವೇಳೆ ಅಗತ್ಯವೇ ಆಗಿದ್ದರೆ ಅದು ನನ್ನ ಮನಸ್ಸಿನದು. ಅದಕ್ಕೆ ದಕ್ಕದ ನೀನು ಇದ್ದರೆಷ್ಟು ಇಲ್ಲಗಿದ್ದರೆಷ್ಟು!!?? ಇದು ವಾಸ್ತವವಾದರೆ ನಾನು ಪ್ರೀತಿಸುವ ಎಲ್ಲ ಜೀವಗಳು ನನ್ನವೇ. ಅವು ಹೇಗಿರಲಿ ಎಲ್ಲಿರಲಿ. ನನ್ನದೇ ಎಂಬಂತೆ ಬದುಕುತ್ತೇನೆ ನಾ. ಅದನ್ನೆಲ್ಲ ಸಹಿಸುವಷ್ಟು ಸಹನೆಯೂ ಇದೆ. ಶಾಂತಿಯೂ ಇದೆ. ದಕ್ಕಿಸಿಕೊಳ್ಳುತ್ತೇನೆ ಎಲ್ಲವನ್ನು. ಅರಗಿಸಿಕೊಳ್ಳುತ್ತೇನೆ ಅಖಂಡ ಮೌನದಲ್ಲಿ.</span></div>
<div style="text-align: justify;">
<br /></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="background-color: yellow; color: blue;"> ಒಮ್ಮೊಮ್ಮೆ ಸುಮ್ಮನಿರು ಸುಮ್ಮನಿರು ಅನ್ನುತ್ತ ನನ್ನ ಬಾಯಿ ಸುಮ್ಮನಾಗಿಸುವ ಪರಿಯಲ್ಲಿ ನನಗೆ ನಿನ್ನ ಮುದ್ದೇ ಕಾಣುತ್ತದೆ! ಇದು ನನ್ನ ಭ್ರಮೆ ಯೆಂಬುದು ನಿನ್ನ ಮಾತಾಗಿರುತ್ತದೆ ಅಂತಾನು ಗೊತ್ತು ನಂಗೆ. ಮಾತಿನಲ್ಲಿ ನಿನ್ನ ಸೋಲಿಸಲಾಗದು! ಹಾಗಂತ ನಿನ್ನ ಬಾಯ್ಮುಚ್ಚಿಸುವಿಕೆಯಲ್ಲಿ ತೆರೆದ ತುಟಿಯ ಅಂದವೆಲ್ಲಿ ಖಾಲಿಯಾಗುವುದೇನೋ ಎಂಬ ಅವಸರದಲ್ಲಿ ಮುಚ್ಚಿಟ್ಟುಕೊಳ್ಳುವ ಮಳ್ಳನಂತೆ ಅಪ್ಪಟ ಮುದ್ದಿನ ಹುಡುಗ ಅನ್ನಿಸಿಬಿಡುತ್ತದೆ! ಹೀಗೆಲ್ಲ ಅನ್ನುವುದು ನಿಶಿದ್ಧವೇನಲ್ಲವಲ್ಲ. ಆದರೆ ನಿನ್ನ ವಿಷಯಕ್ಕೆ ಅಂದುಕೊಳ್ಳುವುದು ನಿಷಿದ್ಧ. ನಾನಾದರೂ ಯಾಕೆ ಅಂದುಕೊಳ್ಳಬೇಕು ಹೇಳು! ಅದು ನಿಜವೆಂದು ನೀನೇನು ಒಪ್ಪಿಕೊಳ್ಳಬೇಕಾಗಿಲ್ಲ. ಹಲವು ಒಪ್ಪಿತವಾದ ಭಾವಗಳು ಖುಶಿಕೊಡುವುದಾದರೆ ನನಗಿರಲಿ ಅಂತ ಮುಗ್ಧ ಮುದ್ದು ಭಾವಗಳು..</span></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="background-color: yellow; color: blue;"> ಸುಖಾಸುಮ್ಮನೆ ಕಾಡುವುದು ಪ್ರೀತಿಸುವುದು ಸುಮ್ಮನೆ ಖುಶಿಕೊಡುವ ಮಾತಾಡುವುದು ಇವೆಲ್ಲ ನನಗಿಷ್ಟ. ಯಾರನ್ನಾದರೂ ಹರ್ಟ್ ಮಾಡೋದಕ್ಕೆ ಶ್ರಮ ಬೇಡ. ಆದರೆ ಖುಶಿಯಾಗಿಟ್ಟುಕೊಳ್ಳೋದಕ್ಕೆ ಶ್ರಮ ಬೇಕು. ನನ್ನ ಮಟ್ಟಿಗೆ ಅಂತ ಪ್ರಯತ್ನ ಸುತ್ತ ಮುತ್ತ ಇದ್ದರೆ ಸಾಕು. ಎನೋ ಅಮಲಿನ ಘಂ ಇರಬೇಕು ಅನ್ನೋ ಹಂಗೆ ಬದುಕಬೇಕು.</span></div>
<div style="text-align: justify;">
<br /></div>
<div style="text-align: justify;">
<span style="background-color: yellow; color: blue;">ಎಷ್ಟು ಜನ ಇಳಿವಯಸ್ಸಲ್ಲು ತಮ್ಮ ಸುತ್ತ ಅಂತದ್ದೊಂದು ಪರಿಮಳ ತುಂಬ್ಕೊಂಡಿದ್ದಾರೆ ಅಂದ್ಕೊಳ್ತಾ ಉತ್ಸಾಹ ನನ್ನೊಳಗೆ ಜೀವಂತ ಆಗತ್ತೆ. ಆದರೆ ದುದರ್ೈವವಶಾತ್ ನನ್ನ ಪ್ರೀತಿಸುವ ಅಥವಾ ನಾನು ಪ್ರೀತಿಸುವ ಜನರಿಗೆ ನನ್ನ ನಗು ಮುಖ ಬೇಕು ಅಷ್ಟೆ, ನನ್ನೊಳಗೆ ನಿಜಕ್ಕೂ ಸಂಭ್ರಮದ ದೀಪ ಉರಿವುದು ಬೇಡ. ಹಾಗೆ ನಾನು ಖುಶಿಪಡಲು ಆರಂಭಿಸಿದಾಗೆಲ್ಲ ನನ್ನಮ್ಮ ನನ್ನ ಇನ್ನಿಲ್ಲದಂತೆ ಬಡಿದುಹಾಕಿದ್ದಾಳೆ. ಎಲ್ಲ ಪ್ರೀತಿ ಪಾತ್ರಗಳ ರೂಪದಲ್ಲಿ. ಅಂದ್ಮೇಲೆ ಅನುಭವ ನಲ್ವತ್ತು ವರ್ಷ ಆಗಿದೆ. ಈಗ ಹೊಸದೇನಿಲ್ಲ. ಇನ್ನೂ ಯಾರನ್ನಾದರೂ ದೂಷಿಸಬೇಕೆಂದೆಲ್ಲ ಅನ್ನಿಸ್ತಾ ಇಲ್ಲ. ನಮ್ಮ ಹಣೆಬರಹ ನಮ್ಮ ದೇವರು. ವೇದಾಂತ ಹೇಳುವುದ ವೇದಾಂತ ಬದುಕುವುದು ಎರಡೂ ವಿರುದ್ದ ಪದಗಳು. ನೀನು ಹೇಳ್ತಾ ಇರೋ ಜಂಗಮ ಬದುಕನ್ನ ನಾನು ಆಗಲೇ ಬದುಕಲಾರಂಭಿಸಿದ್ದೇನೆ. ಅಪ್ಪಟ ಮನುಷ್ಯನ ಅಸ್ತಿತ್ವದಲ್ಲಿ. ಎಲ್ಲ ಬಲಹೀನತೆಗಳ ಜೊತೆ. ಕಣ್ಣಲ್ಲಿ ಒಂದಿಷ್ಟು ಗಂಗೆ, ಎದೆಯಲ್ಲಿ ಒಂದಿಷ್ಟು ನಿಟ್ಟುಸುರು, ಒಲವು ಮತ್ತೆ ಸಮಯದ ಜೊತೆ ಗುದ್ದಾಟ ಎಲ್ಲವನ್ನೂ ಇಟ್ಟುಕೊಂಡು</span></div>
<div style="text-align: justify;">
<br /></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="background-color: yellow; color: blue;">ಅದೆಷ್ಟೋ ಡೈರಿಯ ಪದರಗಳು ಹಳೆತಾದವು. ಓದಿದರೆ ಮತ್ತೆ ಮನಸ್ಸು ಹಸಿಯಾಗಿ ಭೋರ್ಗರೆದೀತು!!ಏನೆ ಆಗಲಿ ಬದುಕಿಗೆ ಪ್ರತಿಯೊಂದು ಪಾಠವೇ.. ಅನುಭವಗಳೇ ನನ್ನ ಇದುವರೆಗೆ ಬೆಳೆಸಿದ್ದು. ಬಿದ್ದು ಬಿದ್ದೇ ಕಲಿತದ್ದು ನಾ. ಮೈ ಮನಸಿನ ತುಂಬ ಬೇಕಾದಷ್ಟು ಮಣ್ಣಿನ ಅಚ್ಚಿವೆ. ತೊಳೆದುಕೊಂಡರು ಮಾಸದ ಗಾಯದ ಕಲೆಗಳೂ ಇವೆ. ನೀ ಕೂಡ ಒಂದು ಅನುಭವ.</span></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="background-color: yellow; color: blue;"> ನಲ್ವತ್ತರ ಅಂಚಿನಲ್ಲಿ ನಾನು ಕಲಿಯಬೇಕೆಂದಿತ್ತು ಇದನ್ನೆಲ್ಲ ಅನ್ನಿಸತ್ತೆ. ಅಲ್ಲಿಗೆ ನನ್ನ ಮುಗ್ಧತೆ ಹುಡುಗಾಟ, ಮನಸಿನ ಆದ್ರ್ರತೆ ಇನ್ನೂ ಮಾಯವಾಗಿಲ್ಲ ಅನ್ನಬಹುದು. ಅಷ್ಟರ ಮಟ್ಟಿಗೆ ನಾನಿನ್ನು ಜೀವಂತ ಎಲ್ಲರ ಎದುರಿಗೆ ಎನ್ನುವುದು ನನಗೆ ಒಂದಿಷ್ಟು ಕೋಡು ಮೂಡಿಸಬಹುದು. ನಿಜ ಅಂದರೆ ಪೆದ್ದಿ. ನೀ ಮನಸ್ಸಲ್ಲೆ ಅಂದುಕೊಳ್ತಿದ್ದೆ ಈ ಪೆದ್ದಿಗೆ</span></div>
<span style="background-color: yellow; color: blue; text-align: justify;">ಏನೂ ಗೊತ್ತಾಗಲ್ಲ ಅಂತ. ಹೌದಲ್ಲ. ಒಂದಷ್ಟು ಪೆದ್ದುತನ ಮುದ್ದು ಮುಗ್ಧತೆ ಇವನ್ನೆಲ್ಲ ಇಟ್ಟುಕೊಳ್ಳದಿದ್ದರೆ ಬದುಕು ಘನಘೋರ ಗಂಭೀರ ಆಗ್ಬಿಡತ್ತೆ. ನಿನ್ನಂತವರ ಎಲ್ಲ ಮಾತುಗಳು ಸೀದಾ ಅಹಂಗೆ ನಾಟತ್ತೆ. ಅದಕ್ಕೆಲ್ಲ ಅರ್ಥ ಹುಡುಕುತ್ತಾ ಅನಿಸಿಕೆ ಬರೆಯುತ್ತಾ ಕುಳಿತರೆ ಬದುಕಲೆಲ್ಲಿ ಸಮಯ!! ಬದುಕೇ ಮುಗಿದುಹೋಗಿರುತ್ತಲ್ಲ!ಅದಕ್ಕೆಂದೇ</span><br />
<div style="text-align: justify;">
<span style="background-color: yellow; color: blue;">ಬದುಕುವ ಬದುಕಿನ ಹುಚ್ಚಿಗೆ ಬಿದ್ದಿದ್ದೆ ಜೀವ. ಅದಕ್ಕೆ ಯಾರೂ ಅನಿವಾರ್ಯವಲ್ಲ. ಆದರೂ ಎಲ್ಲರೂ ಅನಿವಾರ್ಯ.</span></div>
<div style="text-align: justify;">
<br /></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="background-color: yellow; color: blue;">ಮತ್ತೆ ಮಾನಸ ಸರೋವರದಲ್ಲಿ ಅಲೆಗಳಿವೆ. . ನನ್ನೆದೆಯ ಹಾಡು.. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ ಎಳೆಎಳೆಯ ಸಂಭ್ರಮದೊಂದಿಗೆ..</span></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="color: blue;"><br /></span></div>
<div style="text-align: justify;">
<span style="color: blue;"><br /></span></div>
</div>
maanasa saarovrahttp://www.blogger.com/profile/14088976224552347105noreply@blogger.com2tag:blogger.com,1999:blog-7191814811569941492.post-71816003046491179692015-10-03T03:56:00.000-07:002015-10-03T04:54:49.638-07:00ಕ್ಷಮೆಯಿರಲಿ ಸ್ನೇಹದಲಿ...<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgw3PvwF7aAdslDldq1oei2NxHTtFnsE5ySPcoykBulieQzonouDFoUyyDEN-PWSRt8TszGW6ZQnFwcam-V3I5yWmcmsFQ7si_vV-pzFgsXI1ULPrcP8VoFrd5ctea9tQjElv0tl5cbJdw/s1600/IMG-20141016-WA0000.jpg" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEgw3PvwF7aAdslDldq1oei2NxHTtFnsE5ySPcoykBulieQzonouDFoUyyDEN-PWSRt8TszGW6ZQnFwcam-V3I5yWmcmsFQ7si_vV-pzFgsXI1ULPrcP8VoFrd5ctea9tQjElv0tl5cbJdw/s1600/IMG-20141016-WA0000.jpg" /></a></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಭಾವನೆಗಳ ಮಹಾಪೂರದಲ್ಲಿ ಮಿಂದೆದ್ದು ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳುವಾಗ ಗೆಳೆಯಾ ನಿನಗೆ ಈ ಮಾತುಗಳ ಹೇಳಬೇಕೆಂದುಕೊಳ್ಳುತ್ತೇನೆ. ಇವತ್ತು ಅಲ್ಲೆಲ್ಲೋ ಮತ್ತೊಂದು ಸ್ನೇಹದ ಸಾವಾಗಿದೆ. ಇನ್ನೊಂದು ಪ್ರೀತಿ ಮಣ್ಣುಕಚ್ಚಿದೆ. ನೋವು ಜಲಪಾತವಾಗಿ ಕಂಬನಿ ಜಿನುಗುತ್ತಿದೆ.. ಎಲ್ಲದರ ನಡುವೆ ನಾನಿಂತು ಮೌನವಾಗಿ ನೋಡುತ್ತಿದ್ದೇನೆ. ಮನುಷ್ಯ ಸಾವುಗಳು ಸಂಕಟದ್ದು. ಅದನ್ನು ಭಗವಂತನೂ ತಡೆಯಲಾರ.. ಆದರೆ ಪ್ರೀತಿ ಹೀಗೆ ಸೋಲುವುದು ಆತ್ಮಹತ್ಯೆಯಂತೆ ನೋವಾಗುತ್ತದೆ. ಅದೆಷ್ಟು ಒಳ್ಳೆಯ ಸ್ನೇಹ ಪ್ರೀತಿಗಳು ತನ್ನ ಅಹಂನ ಬೆಂಕಿಯಲ್ಲಿ ಬೆಂದುಹೋಗುತ್ತಿವೆ! ಮನುಷ್ಯ ಮನುಷ್ಯನ ನಂಬುವ ಕಾಲವಲ್ಲ ಅಂತಾರೆ. ನಾವೇ ಪ್ರೀತಿಸಿದ ಸ್ನೇಹವನ್ನ ಪ್ರೀತಿಯನ್ನ ನಂಬದಿರುವಷ್ಟು ಕಾಲ ಕೆಟ್ಟಿತೇ?</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಒಂದಿನ ನನ್ನಲ್ಲೂ ಭಾವನೆಗಳಿರಲಿಲ್ಲ.ನಂಬಿಕೆಗಳಿರಲಿಲ್ಲ. ಪ್ರೀತಿಯಿರಲಿಲ್ಲ. ನೋವಿನ ಎಳೆಯೊಂದ ತಂತಿಯೊಂದು ಬಿಗಿದು ಬಂಧಿಸಿದಂತೆ ಭಾವಗಳ ಗಂಟುಮೂಟೆ ಕಟ್ಟಿ ಬದಿಗೆ ಬಿಸಾಕಿದ್ದೆ. ನೀ ಬಂದು ನನ್ನ ಅದೇ ಮೂಟೆಯಿಂದ ಬಿಚ್ಚಿ ಎಷ್ಟೊಂದು ಮುತ್ತು ಹೆಕ್ಕಿ ಕೊಟ್ಟೆ! ಬದುಕು ಬರೀ ಮುತ್ತಿನ ಹಾರದ ಶೃಂಗಾರವೇನಲ್ಲ. ಅಲ್ಲಲ್ಲಿ ಪೋಣಿಸಿದ ಒಂದೊಂದೇ ಮುತ್ತುಗಳಿವೆ. ಆಯ್ದಿಟ್ಟುಕೋ ಅಂದೆ. ಹುಂ. ಪ್ರೀತಿಗೆ ಇದೆಲ್ಲ ಕರಗಿಸುವ ಶಕ್ತಿ ಇದೆ ನೋಡು. ಎಷ್ಟೆಲ್ಲ ಜಗಳ ಕದನ ಕೋಪ ತಾಪದ ನಡುವೆ ಇಂದಿಗೂ ಅದೇ ಪ್ರೀತಿ ನನ್ನ ಮೊದಲ ಆಯ್ಕೆ. ಸ್ನೇಹ ನನ್ನ ಕೊಂಡುಕೊಳ್ಳಬಲ್ಲಂತದ್ದು.ಹಾಗಾಗೇ ಒಳ್ಳೆಯ ಸ್ನೇಹ ಪ್ರೀತಿಗಳು ಕಡಿದುಕೊಂಡಾಗೆಲ್ಲ ನನಗೂ ನೋವಾಗುತ್ತದೆ. ಪ್ರೀತಿಯಲ್ಲಿ ಯಾರನ್ನೂ ನಂಬೋಕಾಗಲ್ಲ ಅನ್ನುವ ಜನ ಕೂಡ ನಮ್ಮವರನ್ನು ನಂಬಲೇಬೇಕಲ್ಲ. ಮನುಷ್ಯ ಎಂದಿಗೂ ಪರಿಪೂರ್ಣ ಅಲ್ಲ ಅನ್ನುವ ಮಾತು ಇವರಿಗ್ಯಾಕೆ ಗೊತ್ತಾಗೋದಿಲ್ಲ! ಒಂದು ಸಾರೀ, ಒಂದು ಥ್ಯಾಂಕ್ಯೂ ಪದಗಳು ಎಂಥೆಂಥ ದೊಡ್ಡ ತಪ್ಪುಗಳನ್ನು ಕ್ಷಮಿಸುವಂತೆ ಮಾಡುತ್ತವೆ! ಹೃದಯಗಳನ್ನ ಜೋಡಿಸಿಡುತ್ತವೆ! ಸ್ನೇಹದಲ್ಲಂತೂ ಈ ಸಾರೀ ಮತ್ತು ಥ್ಯಾಂಕ್ಯೂ ಪದಗಳಿಗೆ ಅರ್ಥವಿಲ್ಲ ಎಂದವನಿಗೆ ನನ್ನ ಆಕ್ಷೇಪವಿದೆ. ಪ್ರೀತಿ ಪಾತ್ರರ ತಪ್ಪು ಒಪ್ಪುಗಳನ್ನ ಒಪ್ಪಿಕೊಂಡು ಕ್ಷಮಿಸುವುದರಲ್ಲಿ, ಸಹಕಾರಗಳನ್ನು ಅಭಿನಂದಿಸುವದರಲ್ಲಿ ಬಾಂಧವ್ಯದ ಗಟ್ಟಿತನವಿದೆ. ಯಾಕೋ ಅರ್ಥವಾಗಲ್ಲ ಬಹಳ ಜನರಿಗೆ..</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಹುಡುಗರ ಗೆಳೆತನ ಹಾಳಾಗುವುದು ಹುಡುಗಿಯರ ವಿಷಯದಿಂದ ಎಂಬ ಮಾತೊಂದಿದೆ. ಸ್ವಲ್ಪ ನಿಜವೇನೋ. ಆದರೆ ಒಂದಿಷ್ಟು ಜಗಳವಾಡಿಯಾದರೂ ಸರಿ ಮನಸು ಬಿಚ್ಚಿ ಮಾತಾಡ್ಕೊಂಡು ಹಗುರಾಗಿ ಅಮೇಲೊಂದು ಸಾರೀ ಹೇಳ್ಕೊಂಡು ಹೆಗಲಮೇಲೆ ಕೈಯಿಟ್ಕೊಂಡು ಹೋಗಬಲ್ಲವರು ಹುಡುಗರು ಮಾತ್ರ. ನಿಜವಾದ ಸ್ನೇಹಿತರ ಭಿನ್ನಾಭಿಪ್ರಾಯಗಳು ಕೂಡ ಸ್ನೇಹವನ್ನು ಮುರಿಯೋದಿಲ್ಲ. ಹಾಗಿದ್ದಾಗ ವಷರ್ಾನುಗಳ ಬಂಧ ಕಡಿದುಕೊಳ್ಳುವ ಮೊದಲೊಂದು ಅವಕಾಶ ಅಥವಾ ಒಂದು ಬಿಚ್ಚು ಮನಸ್ಸಿನ ಮಾತು ಮತ್ತೆ ಕಾರಣಗಳ ಹೇಳಿ ತಪ್ಪಾಗಿದ್ದರೆ ತಿದ್ದಿಕೊಳ್ಳುವ ಮನಸ್ಸು ಯಾವತ್ತೂ ಉಳಿಸ್ಕೊಬೇಕಲ್ವಾ? ಸ್ನೇಹ ಮತ್ತು ಪ್ರೀತಿಯನ್ನು ಅಹಂ ಗಿಂತ ಸ್ವಲ್ಪ ಮೇಲಿಟ್ಟು ನೋಡಬೇಕಲ್ವಾ? ಒಳ್ಳೆಯ ಸ್ನೇಹಿತ ಯಾವತ್ತೂ ಇಂತಹ ಅವಕಾಶಗಳನ್ನು ಮುಚ್ಚಿಹಾಕಬಾರದು. ಬದುಕಿನ ಪ್ರತೀ ಹಂತದಲ್ಲೂ ಮನುಷ್ಯ ಬೇರೆ ಬೇರೆಯೇ ಇರಬಹುದು. ಎಲ್ಲಿಯೋ ತಪ್ಪುಗಳು ನಡೆದಿರಬಹುದು. ಅಥವಾ ಏನೋ ಒಂದು ಮಾತು ಬಂದು ಹೋಗಿರಬಹುದು. ಅವನ್ನೆಲ್ಲ ಗಂಟುಕಟ್ಟಿ ಎಷ್ಟುಕಾಲ ಇಟ್ಟುಕೊಳ್ಳಲು ಸಾಧ್ಯ? ಅವನ ಕಡೆಗೂ ನಮ್ಮ ಬಗ್ಗೆ ನೂರೆಂಟು ಪೂರ್ವಾಗ್ರಹಗಳು ತುಂಬಿಕೊಂಡಿರಬಹುದು. ಅಂತದ್ದೆಲ್ಲ ಮರೆಯುವಷ್ಟು ದೊಡ್ಡವರಾಗಬೇಕು. ಬದುಕು ನಮ್ಮನ್ನ ಬೆಳೆಸಲು ಇಂತವೆಲ್ಲ ಪೂರಕ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಇನ್ನು ಪ್ರೀತಿ ಪ್ರೇಮದಲ್ಲಂತೂ ಇಂತದ್ದು ನೂರು. ವಾಸ್ತವದ ವಿಶ್ಲೇಷಣೆ ಮಾಡುವುದೇ ಇಲ್ಲ. ಹುಡುಗ ಕೈಕೊಟ್ಟ ಹುಡುಗಿ ಕೈಕೊಟ್ಲು ಅನ್ನುವುದಕ್ಕಿಂತ ಹೆಚ್ಚಿನ ವಾಸ್ತವ ಏನಿರಬಹುದು ಪರಿಸ್ತಿತಿ ಇಲ್ಲಿಯವರೆಗೆ ಯಾಕೆ ಹೋಗಿರಬಹುದು ಹಿನ್ನಲೆ ಕಾರಣಗಳ ಕುರಿತು ಯಾವ ಚಿಂತನೆಯೂ ಇಲ್ಲ. ಆಮೇಲೆ ಸ್ವಲ್ಪದಿನ ಸ್ಮಶಾನ ವೈರಾಗ್ಯ, ಮತ್ತೆ ಇದ್ದ ಬದ್ದವರ ಮೇಲೆಲ್ಲ ಆರೋಪ ತಾನೊಬ್ಬನೇ ಪ್ರಪಂಚದಲ್ಲಿ ಬೇರೆ ಅನ್ನುವಂತ ನಡವಳಿಕೆ ಮನಸ್ಸಿನ ಮೂಲೆಯಲ್ಲಿ ಕಹಿಯೊಂದಿಷ್ಟು ಗಂಟುಕಟ್ಟಿಕೊಂಡು ತನ್ನ ಮೂಗಿನ ನೇರಕ್ಕೆ ಕಂಡದ್ದಷ್ಟೇ ನಿಜವೆಂದು ಭ್ರಮಿಸಿಕೊಂಡು ಎಲ್ಲ ಬಾಗಿಲು ಮುಚ್ಚಿಕೊಂಡು ಬದುಕನ್ನು ಮತ್ತೇನೋ ದಾರಿಹಿಡಿಸುವಿಕೆಯಿದೆಯಲ್ಲ ಇದು ಕೂಡ ನೋವಲ್ಲದೇ ಇನ್ನೇನನ್ನೂ ಉಳಿಸದು. ಬದಲು ಸಕಾರಣ ವಿವರಗಳ ಅರಿತುಕೊಂಡು ಸಾಧ್ಯವಾದರೆ ಜೊತೆಯಲ್ಲಿ ಆಗಿದಿದ್ದರೆ ಬಲವಂತದ ಪ್ರೀತಿ ಬದುಕು ಸಾಧ್ಯವಿಲ್ಲವೆಂಬುದ ಅರ್ಥೈಸಿಕೊಂಡು ತಮ್ಮ ತಮ್ಮ ಬದುಕನ್ನು ಚಂದಕ್ಕೆ ಕಟ್ಟಿಕೊಳ್ಳುವುದು ಯಾಕೆ ಸಾಧ್ಯವಾಗದು? ಒಂದಷ್ಟು ದಿನ ಪೊಸೆಸಿವ್ ನ ಉಸಿರುಗಟ್ಟಿಸುವಿಕೆ, ಇನ್ನಷ್ಟು ದಿನ ಸತ್ತರೆ ಸಾಯಿ ಇದ್ದರೆ ಇರು ಅನ್ನುವ ನಿರ್ಲಕ್ಷ್ಯ ಇವೆಲ್ಲ ಪ್ರೀತಿಯಲ್ಲಿ ವಿಶ್ವಾಸದ ಕೊರತೆಯಲ್ಲದೇ ಇನ್ನೇನಲ್ಲ. ಬದುಕು ಇವತ್ತಿಗೆ ಹೆಣ್ಣಿಗಾಗಲೀ ಗಂಡಿಗಾಗಲೀ ಸ್ವತಂತ್ರ್ಯ. ಪ್ರೀತಿ ವಿಶ್ವಾಸಗಳೇ ಇಲ್ಲಿ ಬಂಧನ. ಬಾಂಧವ್ಯದ ಉಸಿರು. </div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಯಾಕೋ ಯಾವಬಂಧವೇ ಆಗಲಿ ಶಾಶ್ವತ ಎಂಬ ನಂಬಿಕೆಗಳು ನನಗಿಲ್ಲ. ಒಂದೊಂದು ಹಂತದಲ್ಲಿ ಒಂದೊಂದು ತನ್ನಂತಾನೇ ಕಳಚಿಕೊಳ್ಳುವುದುರಬಹುದು. ಎಲ್ಲವೂ ಒಳ್ಳೆಯ ಸ್ನೇಹಗಳಾಗಿ ಉಳಿಯುವುದೂ ಇಲ್ಲ. ಆದರೆ ಒಳ್ಳೆಯ ಸ್ನೇಹ, ಪ್ರೀತಿ ಅಂತ ನಾವೆಲ್ಲೋ ಹೃದಯದಿಂದ ಆಯ್ಕೆ ಮಾಡಿಕೊಂಡವುಗಳನ್ನು ಸಾಯಿಸಬಾರದು. ಅಂತಹ ಪ್ರೀತಿ ಮತ್ತೆಲ್ಲೂ ಯಾವತ್ತೂ ಇನ್ನೊಂದು ದೊರೆಯುವುದಿಲ್ಲ. ಒಲವು ಸಹ ಇಂತದ್ದೊಂದು ಅವಕಾಶಕ್ಕೆ ಮುಕ್ತವಾಗಿರಲಿ. ನಮ್ಮ ನಮ್ಮ ಅಹಂಗಳಿಂದಾಗಿ ನಮ್ಮದೇ ಮನಸುಗಳು ನಲುಗದಿರಲಿ. ಇಷ್ಟೆಲ್ಲ ಹೇಳಿದ್ದು ಸ್ನೇಹದಿಂದ ಸ್ನೇಹಕ್ಕಾಗಿ.. ಸರೋವರದಲ್ಲಿಂದು ಜಿನುಗು ಮಳೆ... ತಂಪಾಗಿಸಲಿ ಎಲ್ಲ ಮನಸುಗಳ.. </div>
</div>
maanasa saarovrahttp://www.blogger.com/profile/14088976224552347105noreply@blogger.com4tag:blogger.com,1999:blog-7191814811569941492.post-68311773332573895802015-08-14T03:22:00.001-07:002015-08-14T03:23:21.904-07:00ದೇಶಾ ನನ್ನದು ನನ್ನದೀ ದೇಶ....<p dir="ltr"><br></p>
<p dir="ltr"><u>ಯಾಕೆ</u> ಸುಮ್ಮನೆ? ಬರೆದು, ಮಾತಾಡಿ  ಏನು ಸಾಧಿಸುವುದಿದೆ  ಅಂತ ಸಾವಿರಬಾರಿ ಅನ್ನಿಸುತ್ತದೆ. ಹಾಗಿದ್ದೂ ಒಮ್ಮೊಮ್ಮೆ  ಬರೆಯದಿರಲಾಗದ<br>
ಅಸಹನೆ ಕಾಡುತ್ತದೆ. ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸಿಗುವ ಅನವಶ್ಯಕ ವಿಷಯಗಳ ಕಂಡಾಗ, ದೊಡ್ಡ ದೊಟಡ್ಡವರೆನ್ನಿಸಿಕೊಂಡವರು ಸಣ್ಣತನಗಳ ಮೆರೆವಾಗ, ಭೌತಿಕ, ಆಧ್ಯಾತ್ಮಿಕ ಸಂಪತ್ತುಗಳಿಂದ ತುಂಬಿರುವ ಈ ನೆಲವನ್ನು ದೇಶವನ್ನು ಹೀನಾಯವಾಗಿ ನೋಡುವಾಗ, ನಮ್ಮದೇ  ಮನಸ್ಥಿತಿಯ ಜನರು ಇದ್ದಕ್ಕಿದ್ದಂತೆ ಕಳೆದು ಹೋಗುವಾಗ,  ಮಾನವೀಯ ಸಂಬಂಧಗಳು ಮೌಲ್ಯ ಕಳೆದುಕೊಳ್ಳುವಾಗ, ಒಳ್ಳೆಯದೆಲ್ಲವೂ ಕೆಟ್ಟದೆಂಬಂತೆ ಬಿಂಬಿಸಲ್ಪಟ್ಟಾಗ  ಬರೆದು ಹಗುರಾಗುವ ತವಕ<br>
ಹುಟ್ಟಿಕೊಳ್ಳುತ್ತದೆ. ಯಾರನ್ನೋ ಸುಧಾರಿಸಿಬಿಡುವ ಆವೇಶವಲ್ಲ ಇದು. ನನ್ನೊಳಗನ್ನು ಹಗುರಾಗಿಸಿಕೊಳ್ಳುವ ಸ್ವಾರ್ಥವೇ ಇರಬಹುದು. ಆದರೆ ಹೌದು ಒಮ್ಮೊಮ್ಮೆ ಮೌನ ಮುರಿದುಬಿಡಬೇಕು.  "ಛೆ" ಅನ್ನಿಸಿದರೆ ಹೇಳಿಬಿಡಬೇಕು. </p>
<p dir="ltr">     ಸಮಾಜದಲ್ಲಿ ಒಳ್ಳೆಯದು ಏನೂ ಇಲ್ಲವಾ? ಎಂಬುದು ನನ್ನ ಪ್ರಶ್ನೆ. ಹಿಂದೂ ಇರಲಿ ಮುಸಲ್ಮಾನ ಅಥವಾ ಇನ್ಯಾವುದೇ ಧರ್ಮವಿರಲಿ. ಏನೂ ಇಲ್ಲವಾ ಒಳ್ಳೆಯದು?ಯಾಕೆ ಒಳ್ಳೆಯ ವಿಚಾರಗಳು ಪ್ರಚಲಿತವಾಗುವುದಿಲ್ಲ? ಯಾಕೆ ಒಳ್ಳೆಯ ವಿಷಯಗಳು ಪದೇ ಪದೇ ನಮ್ಮ  ಕಿವಿಗಳ ಮೇಲೆ ಬೀಳುವುದು ನಿಂತು ಹೋದವು?</p>
<p dir="ltr">ಎಲ್ಲಾದರೂ ಏನಾದರೂ ಸಮಾಜಪೂರ್ಣ ಕುಳಿತು ಕೇಳುವ  ವಿಷಯ ನಡೆಯುತ್ತಿದ್ದರೆ ಮೊಸರಲ್ಲಿ ಕಲ್ಲು ಹುಡುಕಲು ಪ್ರಾರಂಭಿಸುತ್ತೇವೆ. ನಾವೇ. ನಮ್ಮ ನೆಲದಲ್ಲಿರುವ ಹುಳುಕುಗಳ ಮುಚ್ಚಿಟ್ಟು ಮತ್ತೊಬ್ಬರ ಬದುಕಿನ ನೊಣ ಹುಡುಕುವ ಕೆಲಸ ಸಮಾಜಮುಖಿ ಎಂಬಂತೆ ನಡೆಯುತ್ತದೆ. ಮತ್ತದನ್ನು ಪ್ರಚಾರಪಡಿಸಿ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಕಾದಿರುವ ಮಾದ್ಯಮಗಳು ಮತ್ತೆ ಮತ್ತೆ ಅದನ್ನೇ ಕಿವಿಗಿಂಪು ಎಂಬಷ್ಟು ಅನವಶ್ಯಕ ಚಚರ್ೆಗಳಲ್ಲಿ ಮುಳುಗುವ ಬುದ್ಧಿವಂತರು...</p>
<p dir="ltr">    ಬುದ್ಧೀಜೀವಿಗಳೆಂದು ಕರೆಸಿಕೊಳ್ಳುವವರೊಂದೇ ಅಲ್ಲ. ನಿಜವಾಗಿ ಬುದ್ಧ್ದಿ ಜೀವಿಗಳು ಎನ್ನಿಸಿಕೊಂಡವರು ಕೂಡ ಈ ಬಗ್ಗೆ ಚಕಾರವೆತ್ತುವುದಿಲ್ಲ. ಅವರಿಗೆ ಅವರಷ್ಟಕ್ಕೆ ಇರುವುದ ಬಹಳ ದೊಡ್ಡತನ. ತಾನು  ತನ್ನದು ತನಗೆ ಗೊತ್ತಿದೆ ಎಂಬ ಆತ್ಮವಿಶ್ವಾಸ ಅಹಂಕಾರವಾಗಿ ಬದಲಾಗಿದ್ದೂ ಗೊತ್ತಾಗದಂತ ಅವಸ್ಥೆಯೆನ್ನಬೇಕೇನೋ. ಸಹಜತೆಗಿಂತ ಅಲ್ಲಿ<br>
ದೊಡ್ಡತನ ಯಾವುದೂ ಇಲ್ಲ ಎಂಬುದನ್ನು ಮರೆತುಬಿಡುವ ಈ ದೊಡ್ಡವರೆದುರು ನೀವು ಎಂಥದ್ದೇ ತೆಗೆದುಕೊಂಡು ಹೋದರೂ ಅದೊಂದು ಯಕಶ್ಚಿತ್ ಎಂಬಂತೆ ಮಾತನಾಡುವ ಕಲೆ ಅವರಿಗೆ ಅವರ ಬೌದ್ಧಿಕ ಸಾಮಥ್ರ್ಯ ಕೊಟ್ಟಿರುತ್ತದೆ. ನಾನು ರಾಜಕಾರಣಿಗಳನ್ನು ಉದ್ದೇಶಿಸಿ ಯಾವ ಮಾತನ್ನೂ ಹೇಳುತ್ತಿಲ್ಲ. ಅವರು ಬೇರೆಯೇ ವರ್ಗದ ಜನ ಬಿಡಿ. ಸಮಾಜದ ಇನ್ನಿತರ ದೊಡ್ಡವರು ಮತ್ತು ಸಮಾಜ ಚಿಂತಕರ ಕುರಿತು ಹೇಳುತ್ತಿದ್ದೇನೆ. </p>
<p dir="ltr">        ಯಾವುದನ್ನಾದರೂ ಸರಿಯಿಲ್ಲ ಕೆಟ್ಟದ್ದು ಅಂತ ತೀಮರ್ಾನಿಸುವಾಗ ಸರಿ ತಪ್ಪು ಅರಿವಿದ್ದವರಾಗಿರಲೇಬೇಕು. ಹಾಗಿದ್ದರೆ ತಪ್ಪು ಅಂತ ಹೇಳುವವರು ಸರಿಯಾದ ಮಾರ್ಗ ತೋರುವ ಸಾಮಥ್ರ್ಯ ಇದ್ದವರಾಗಿರಬೇಕು. ಅವರು ಹೇಳದೇ ಉಳಿದರೆ ಅಂತಹ ಜ್ಞಾನ ಸಮಾಜಕ್ಕೆ<br>
ಉಪಯೋಗವಾಗದಿದ್ದರೆ ಅದಿದ್ದು ಪ್ರಯೋಜನವೇನು? ನನಗೆ ತಿಳಿದಂತೆ<br>
ಇದು ಜ್ಞಾನಿಗಳ ನಾಡು. ವೃಥಾ ಆರೋಪ ಪ್ರತ್ಯಾರೋಪಗಳಲ್ಲಿ ಕಳೆಯುವ ಮಾಧ್ಯಮಗಳಿಗೆ ಇಂತ ಜ್ಞಾನಿಗಳ್ಯಾರೂ ಹೋಗುವುದಿಲ್ಲ.   ಎಲ್ಲರೂ ಓದುವಂತ ಮನಸಿಗೆ ತಲುಪುವಂತ ಯಾವ ಸರಳ ಜ್ಞಾನವನ್ನೂ ಈ ಬುದ್ದಿವಂತರು ಸಮಾಜಕ್ಕೆ ಕೊಡಲು ಇಷ್ಟಪಡುವುದಿಲ್ಲ. ಸದಾ ಪೌರೋಹಿತ್ಯಶಾಹಿಗಳು  ಎಂದು ಜರಿಯಲ್ಪಡುವ ಒಂದೇ ಕಾರಣವೂ<br>
ಇದೇ ಅನ್ನಿಸುತ್ತದೆ ನನಗೆ. ವೇದಗಳ ಕುರಿತು ನಿಷ್ಠೆ ಸರಿ. ಕಟ್ಟು ನಿಟ್ಟಾಗಿ ಆಚರಿಸಲ್ಪಡಬೇಕೆಂಬುದು ಸರಿ. ಆದರೆ ಅದನ್ನೇ ವಿಷದವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಸಾಮಥ್ರ್ಯ ನಮ್ಮ ಪಂಡಿತರಿಗೆ ಇರಲಿಲ್ಲವಾ? ಒಂದುವೇಳೆ ಇವೆಲ್ಲವೂ ಯಾರಿಗಾದರೂ ಅನರ್ಹ ಎಂದು ವೇದ ಸಾರಿದೆಯಾ? ಇಲ್ಲ. ವೇದ ಏನೂ ಇಂತಹದನ್ನು<br>
ಹೇಳುವುದಿಲ್ಲ ಎಂದು ವೇದಪಂಡಿತರೇ ಹೇಳುತ್ತಾರೆ. ಹಾಗಾದರೆ ನಮ್ಮಲ್ಲಿಯ ಜ್ಞಾನಬಂಡಾರ, ನಮ್ಮ ದೇಶದ ಸಂಸ್ಕೃತಿ, ನಮ್ಮ ಮೂಲಗಳು ನಮ್ಮ  ನಾಡಿನ ಇಂದಿನ ಈ ಬೌದ್ದಿಕ ಅನಾಚಾರವನ್ನು ಯಾಕೆ ತಡೆಯಲು ಸಾಧ್ಯವಾಗುತ್ತಿಲ್ಲ? ಮಾನವೀಯ ಮೌಲ್ಯಗಳ ಮೂಲವೇ ಆದ ನಮ್ಮ ಸಂಸ್ಕೃತಿಯ ಪ್ರಬಂಧಕರು ಯಾಕೆ ಇವನ್ನು ಮಾದ್ಯಮಗಳ ಮೂಲಕ ಜನಸಾಮಾನ್ಯರ ಮನಸಿಗೆ ತಲುಪಿಸಲು ಶಕ್ಯರಾಗುತ್ತಿಲ್ಲ?  ಅವರ ಅಹಂ  ಅಡ್ಡಬರುತ್ತಿದೆಯಾ? ಅವರ ಜ್ಞಾನವೇ ಸಮಾಜದಲ್ಲಿ ಸಹಜವಾಗಿ ಸರಳ ಬದುಕಿನ ಸೂತ್ರಗಳ ಹೇಳಲು ಅವರಿಂದ ಸಾಧ್ಯವಾಗುತ್ತಿಲ್ಲವಾ? ಕೆಟ್ಟದ್ದನ್ನು ಬಾಯಿ ಬಿರಿದು ಬೊಬ್ಬಿರುವ ಜನ ಒಂದು ವರ್ಗವೇ ಸೃಷ್ಟಿಯಾಗಿದೆ. ಓಕೆ. ಅದು ಸಮಾಜದ ಒಂದು ಮುಖ. ಆದರೆ<br>
ಒಳ್ಳೆಯದಕ್ಕೆ ಸಮಾಜದಲ್ಲಿ ಜಾಗವೇ ಇಲ್ಲದಂತಾಗಿದ್ದರೆ  ಅದು ಬರೀ ಆ ವರ್ಗದವರ ತಪ್ಪಲ್ಲ.  ಬಾಯಿಬಿಡದೇ ಕೂತಿರುವ ಒಳ್ಳೆಯವರ ತಪ್ಪು ಕೂಡ ಹೌದು.</p>
<p dir="ltr">   ಸಮಯ ಬಂದಾಗ ಸಮಾಜದ ಪ್ರತಿಯೊಬ್ಬರೂ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ಕೆಲಸ ನಿರ್ವಹಿಸಬೇಕು. ಮೋದಿ ಈ ಕಾರಣಕ್ಕೆ ನನಗೆ ಇಷ್ಟವಾಗುತ್ತಾರೆ. ಅವರು ಮ್ಯಾಜಿಕ್<br>
ಮಾಡುತ್ತಾರೆಂದಲ್ಲ. ಹಿಂದೂ ಧರ್ಮ ಉದ್ಧಾರ ಮಾಡುತ್ತಾರೆಂದೂ ಅಲ್ಲ. ದೇಶದ ಎಲ್ಲಾ ಸಮಸ್ಯೆ ಪರಿಹರಿಸಿಬಿಡಬೇಕೆಂದೂ ಅಲ್ಲ. ದೇಶದ ಕೊನೆ ಕೊನೆಯಲ್ಲಿರುವ ಮನುಷ್ಯನ ಎದೆಯಲ್ಲಿ ದೇಶ ಎಂಬ ನುಡಿ ಮಾರ್ದನಿಸುವಂತೆ ಎಚ್ಚರಗೊಳಿಸುತ್ತಾರೆ. ಎಲ್ಲ ಹೃದಯದಲ್ಲೂ ಒಬ್ಬ ಮನುಷ್ಯ ಜೀವಂತವಾಗಿದ್ದಾನೆ. ಆ ಮನುಷ್ಯನ ಜೀವಂತಿಕೆಯ ಕೇಂದ್ರವನ್ನು<br>
ಎಚ್ಚರಗೊಳಿಸುವ ಸಾಮಥ್ರ್ಯ ಅವರ ನುಡಿಯಲ್ಲಿ ಮಾರ್ದನಿಸುತ್ತದೆ. ದೇಶ, ಭಾಷೆ,  ನನ್ನದು ಎಂಬ ಆ ಭಾವ ಮನುಷ್ಯನಲ್ಲಿ ಮೂಲದಲ್ಲಿ ಜಾಗೃತವಾದರೆ ತನ್ನಿಂದತಾನೇ ಮನುಷ್ಯನಲ್ಲಿ ಮಾನವತೆ ಜಾಗೃತಗೊಳ್ಳುತ್ತದೆ. ಅವನು ಸಮಾಜಮುಖಿ ಮತ್ತು ಮನುಷ್ಯನಾಗಿ ಬೆಳೆಯುವ ಹಾದಿಯಲ್ಲಿ ನಡೆಯುತ್ತಾನೆ. ಪ್ರತಿ ಹೃದಯವನ್ನೂ ಜೀವಂತಗೊಳಿಸಬಲ್ಲ ವಿವೇಕಾನಂದರ ಮಾತುಗಳಲ್ಲಿ ಇವತ್ತಿಗೂ ನಾವು ಕಾಣುವುದು ಇದೇ ಮೂಲ ಶಕ್ತಿಯನ್ನು.  ಬುದ್ಧಿವಂತರಿಗೆ, ವಿಷಯ ಜ್ಞಾನಿಗಳಿಗೆ, ಸಮಾಜದ ಪರಿವೆಯಿದ್ದರೆ ಈ ದೇಶದ ನೆಲ ಪಾವನವಾಗುತ್ತದೆ. ಅವರು ಸ್ವಾಥರ್ಿಗಳೂ ಮೌನಿಗಳೂ ಆದರೆ ಎಂಥ ಸಾಧಕರು ಜ್ಞಾನಿಗಳಿದ್ದರೂ ದೇಶ ನೆಲಕಚ್ಚುತ್ತದೆ.</p>
<p dir="ltr">  ಅಳಿಲುಸೇವೆ ರಾಮಾಯಣದಲ್ಲಿ ನನಗಿಷ್ಟವಾಗುವ ಪಾಠ. ನಮ್ಮದು  ಅಳಿಲುಸೇವೆಯಾಗಲಿ ಈ ಭೂಮಿಗೆ. ಹುಟ್ಟಿದ, ಬದುಕಿದ ಮಣ್ಣಿಗೆ ಋಣ ತೀರಿಸಲು ಸಾಧ್ಯವಿಲ್ಲ. ಅವರವರ ಕೈಲಾದ ಸೇವೆ ಸಾಕು. ಎಷ್ಟೋ  ಅಂತಹ ಪಾಠಶಾಲೆಗಳಿವೆ ನಮ್ಮಲ್ಲಿ, ಗುರುಕುಲ, ಆಶ್ರಮಗಳಿವೆ. ಸೇವೆ ಮಾಡುವ ದಾದಿಯಿಂದ ಹಿಡಿದು ವೈದ್ಯನ ವರೆಗೆ, ನರ್ಸರಿ ಶಿಕ್ಷಕಿಯಿಂದ ಹಿಡಿದು ಉಪನ್ಯಾಸಕರವರೆಗೆ  ಎಲ್ಲ ಕ್ಷೇತ್ರಗಳ ಎಲ್ಲ ಕೆಲಸಗಳ ಗೌರವಿಸುವ ಮನಸ್ಥಿತಿ ನಮ್ಮದಾಗಲಿ, ಚಕ್ರವತರ್ಿ ಸೂಲಿಬೆಲೆಯವರ ಜಾಗೋ ಭಾರತ್ ದಲ್ಲಿ ತುಂಬ<br>
ಒಳ್ಳೆಯ ಮಾತು ಹೇಳುತ್ತಾರೆ! ಅವರು ನನ್ನ ದೇಶ ಜಗತ್ತಿನಲ್ಲಿಯೇ ನಂಬರ್ ಒನ್ ಇದೆ ಅನ್ನುವ ಸಾಲು ಸಾಲು ಆ ಮಾತುಗಳ ಕೇಳುತ್ತಿದ್ದರೆ ಎಂತವನ ಮನದಲ್ಲಾದರೂ ಹೆಮ್ಮೆ ಸುಳಿಯದಿರದು. ಭಾರತದ ಸಾಧನೆಗಳ ಮಹಾ ಪಟ್ಟಿಯಲ್ಲಿ ನಮ್ಮ ಜ್ಞಾನಿ  ಹಾಗೂ ಮೌನಿ ಪಂಡಿತರೂ ಸೇರುವಂತಾಗಲೀ. ಮುಖ್ಯವಾಹಿನಿಗಳಲ್ಲಿ ಅವರು ರಾರಾಜಿಸಲಿ. ಆಗ<br>
ಸಮಾಜದಲ್ಲಿ  ಭಾವೀ ಸಮಾಜದಲ್ಲೀ ಮಕ್ಕಳ ಕಿವಿಗಳ ಮೇಲೆ ಒಳ್ಳೆಯದು ಪದೇ ಪದೇ ಬೀಳುತ್ತದೆ. ಮತ್ತು ಅದು ಅವರಲ್ಲಿ ಅಚ್ಚಾಗಿ ಉಳಿದು ಸತ್ಪ್ರಜೆಗಳ ನಿಮರ್ಾಣಕ್ಕೆ ಕಾರಣವಾಗುತ್ತದೆ. ಮನೆ, ತಾಯಿ, ಎಲ್ಲರನ್ನೂ ದೂಷಿಸುವ ಸಮಾಜದಲ್ಲಿ ಇನ್ನೂ ಅದೇ ಕುಟುಂಬವ್ಯವಸ್ಥೆ ಉಳಿದಿದ್ದರೆ ಅದೇ ಹೆಣ್ಣು<br>
ಮಗಳಿಂದ. ಕೆಟ್ಟು ಹೋಗಿರುವ ನೂರು ಜನರ ನಡುವೆ ಲಕ್ಷ ತಾಯಂದಿರ ವಾತ್ಸಲ್ಯ ನಮಗೆ ಕಾಣದುಳಿದರೆ ಅದು ನಮ್ಮ ತಾಯಂದಿರ ದೌಭರ್ಾಗ್ಯವಲ್ಲವೆ? </p>
<p dir="ltr">     ಸಮಾಜದ ಅತಿ ಸಾಧಾರಣ ಕೆಲಸ ನಿರ್ವಹಿಸುವ ಸ್ವಾರ್ಥ ತೊರೆದು ಸಮಾಜಕ್ಕೋಸ್ಕರ ಬದುಕುವದು ಹೆಮ್ಮೆಯ ವಿಚಾರ ಆಗುವವರೆಗೆ ಇದು  ಸರ್ವಮಾನ್ಯವಾಗಲಾರದು. ಪಂಡಿತನಲ್ಲದ ಒಬ್ಬ ಕೂಲಿ ಸಹ ಸಮಾಜಕ್ಕೆ ಉತ್ತಮವಾದದ್ದನ್ನು ಕೊಡಬಲ್ಲ. ಅಂತವರೆಲ್ಲರ ಗೌರವಿಸುವ ದೊಡ್ಡತನ ನಮಗೆ ಬರಲಿ. ಸನ್ಮಾನ ಮಾಡಬೇಕೆಂದು ಅವರೂ ಬಯಸುವುದಿಲ್ಲ. ಅವನ ಕೆಲಸ ಮಾನವೀಯ ಗೌರವಕ್ಕೆ ಅರ್ಹ ಎಂಬ ಪ್ರಜ್ಞೆ ಸಾಕು. ಕೆಲವರನ್ನು ಕೇಳಿ ನೋಡಿ. ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವವರೂ  ಜ್ಞಾನಿಗಳು ಎಂದು ಹೆಸರಿಸಿಕೊಂಡವರೂ ಕೂಡ  ಇನ್ಯಾರೋ ಒಬ್ಬ ಜನಸಾಮಾನ್ಯ ಅಥವಾ ಪಂಡಿತನ ಬಗ್ಗೆ ಅವನ ಸಾಮಾಜಿಕ ಸ್ವಾಸ್ಥ್ಯದ ಪ್ರಯತ್ನದ ಬಗ್ಗೆ.<br>
ಮಾತನಾಡುವುದು ತೀರಾ ಕೇವಲವಾಗಿ. ವಿಶೇಷವೆನ್ನಿಸುವುದು ಇಲ್ಲಿಯೇ. ಪಂಡಿತರು ಸಮಾಜಕ್ಕೆ ಹೆಚ್ಚೆಂದರೆ ಒಂದಿಷ್ಟು ಪುಸ್ತಕಗಳನ್ನು ಕೊಡಬಹುದು. ಆದರೆ ಪ್ರಯತ್ನಶೀಲರು<br>
ಸಮಾಜದ ಜನಮಾನಸದಲ್ಲಿ ಬೆರೆತು ನಾಲ್ಕೇ ಜನರಿಗಾದರೂ ಒಳ್ಳೆಯ ಬದುಕು ಕಲ್ಪಿಸಲು ನೆರವಾಗುತ್ತಾರೆ. </p>
<p dir="ltr"> ಕೆಟ್ಟದ್ದು ಅತಿಯಾದ ಕಾಲದಲ್ಲಿ ಒಳ್ಳೆಯದ ಹುಡುಕಬೇಕಾಗಿದೆ. ಇದು ಕಾಲದ ಅನಿವಾರ್ಯತೆ.. <br></p>
<div class="separator" style="clear: both; text-align: center;"> <a href="https://blogger.googleusercontent.com/img/b/R29vZ2xl/AVvXsEgE6yrTrvsG_Him62P2UeUOrx1p1MpWfJr3McV8Z4QQAi4YS2clS6DCsBuzW31qx8YM4dLMlNVzaaDGeuLzzsiyF0BprZiBCoFIXhjDDFp5xLiQJgrcRkthQoDlaDpPdM92jPbqMNSjt8w/s1600/IMG-20150814-WA0003.jpg" imageanchor="1" style="margin-left: 1em; margin-right: 1em;"> <img border="0" src="https://blogger.googleusercontent.com/img/b/R29vZ2xl/AVvXsEgE6yrTrvsG_Him62P2UeUOrx1p1MpWfJr3McV8Z4QQAi4YS2clS6DCsBuzW31qx8YM4dLMlNVzaaDGeuLzzsiyF0BprZiBCoFIXhjDDFp5xLiQJgrcRkthQoDlaDpPdM92jPbqMNSjt8w/s640/IMG-20150814-WA0003.jpg"> </a> </div>maanasa saarovrahttp://www.blogger.com/profile/14088976224552347105noreply@blogger.com3tag:blogger.com,1999:blog-7191814811569941492.post-26406656136104160632015-08-01T05:46:00.002-07:002015-08-01T06:04:14.097-07:00 ಬದುಕು ನಡೆಸಿದತ್ತ ಪಯಣ...<div dir="ltr" style="text-align: left;" trbidi="on">
<div style="text-align: justify;">
<br />
<span style="font-size: large;"><br /></span>
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgGvIVaS8PtzxFqjDsDhtw4OeHw_2EFm2DANGTmm0hUtu5MUU797Oge8ezPuSy3N5NZga-rEjceu6AqpDUVoW1o-NIP4OQs5y8C98589UrscoXbEyGshT-IrEsx6sQPSQugP1RVEggT13E/s1600/krishna-946833.jpg" imageanchor="1" style="margin-left: auto; margin-right: auto;"><img border="0" height="320" src="https://blogger.googleusercontent.com/img/b/R29vZ2xl/AVvXsEgGvIVaS8PtzxFqjDsDhtw4OeHw_2EFm2DANGTmm0hUtu5MUU797Oge8ezPuSy3N5NZga-rEjceu6AqpDUVoW1o-NIP4OQs5y8C98589UrscoXbEyGshT-IrEsx6sQPSQugP1RVEggT13E/s320/krishna-946833.jpg" width="253" /></a></td></tr>
<tr><td class="tr-caption" style="text-align: center;">ಚಿತ್ರಕೃಪೆ: ಅಂತರ್ಜಾಲ.</td></tr>
</tbody></table>
<span style="font-size: large;"><br /></span>
<span style="font-size: large;"><br /></span>
<span style="font-size: large;"> ಮಾನಸ ಸರೋವರದಲ್ಲಿ ವೈಚಾರಿಕ ಮಾತಿಗಿಂತ ಮನಸಿನ ಮಾತಿಗೆ ಹೆಚ್ಚು ಒಲವು ಅಲ್ಲವಾ ಮನಸೇ? ಮನಸೆಂಬ ಒಲವಿನ ಮೂಟೆಯೆದುರು ಮತ್ತೊಮ್ಮೆ ಹರವಿಕೊಳ್ಳುವ ಭಾವಸಾಗರದಲ್ಲಿ ನೀನು ಬಂದು ಕೂರುವುದೇನೂ ಬೇಡಬಿಡು. ಒಮ್ಮೊಮ್ಮೆಯಾದರೂ ಒಂಟಿಯಾಗಿ ಕೂತು ಮಾತನಾಡಿಕೊಳ್ಳಬೇಕೆನ್ನಿಸಿದೆ. ಹೀಗೆ...</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ಯಾವ ಚೆಲುವಿನೊಳಗೂ ನಮ್ಮೊಳಗಿನ ಸಮ್ಮೋಹನಗೊಳಿಸುವ ನಶೆಯಿರಲಿಲ್ಲ. ಹೂವುಗಳೆದೆಯಲ್ಲಿ ಗಂಧ ಹರಡಿಕೊಂಡಂತೆ ಭಾವದ ಹೂ ಅರಳಿಕೊಂಡಿತಿಲ್ಲಿ. ಮನಸಿನಂಗಳದಲ್ಲಿ.. ನಿನ್ನ ಒಲಿಸುವ ನನ್ನ ರಮಿಸುವ ಮಾತಿಗೆ ಎಂದಿಗೂ ಎಡೆಯಿರಲಿಲ್ಲ. ಮುಗಿಲಂತೆ ಚಾಚಿಕೊಂಡಿತು ಒರವಶರಧಿಯಲ್ಲಿ... ಮಾತು ಮಾತಿಗೆ ಮುನಿಸು ನಿತ್ಯ ನಿರೀಕ್ಷೆಯ ಕನಸು ಯಾವುದೂ ಇರಲಿಲ್ಲ. ನಾದವಾಯಿತು ನಮ್ಮೊಳಗಿನ ಚಿಂತನೆಗಳೆಲ್ಲ! ಎಲ್ಲ ಮೀರಿರುವಾಗ ಎಲ್ಲಿ ಅಡಗಲಿ ಹೇಳು? ಮಾಧವನೆಡೆಗೆ ಮೀರೆಯ ಒಲವಿರುವಂತೆ ಕೊಳಲಿನ ಕರೆಗೆ ಗಂಗೆ ಗೌರಿ ಬರುವಂತೆ ಈ ಮನಸು ನಿನ್ನದಾಯಿತಲ್ಲ! </span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ನೀನೊಂದು ಕ್ಷಣ ಮನಸಿಂದ ಮರೆಯಾದರೆ ಸಾಕು ಯಾಕೋ ಮಾತು ಮೌನ ಪ್ರೀತಿ ಕಾವ್ಯ ಬರಹ, ಬದುಕು ಎಲ್ಲವೂ ಮುಗಿಸಿಬಿಡಬೇಕೆಂದು ಹಟ ಹಿಡಿದಿಯುತ್ತಿದೆ ಮನಸು.. ಅದೇ ಮನಸು ಬೆಳದಿಂಗಳಲ್ಲಿ ಈಗ ತಾನೇ ಹೊಯ್ತಾ ಇರೋ ಮಳೆ ನೀರಲ್ಲಿ ರಮಿಸಿ ಆನಂದಿಸುತ್ತದೆ. ಕವಿತೆ ಬರೆಯುತ್ತದೆ. ಸುಡುವ ವಿರಹದ ಚಂದ್ರನಿಗಾಗಿ ಅಳಲಿಕೆಯಿದೆ ಈ ಬುವಿಯ ಕಳವಳದಲ್ಲಿ. ಕತ್ತಲಿಗೆ ಬೆಳಕಿಗೆ ಸಾಂಗತ್ಯಕ್ಕೆ ತೊರೆಯಿದೆ ಇಲ್ಲಿ... ಹೌದು ಪ್ರೀತಿಸದೇ ಉಳಿಯಲಾರೆ ನಾನು. ನೀ ಕೂಡ. ಆದರೆ ವ್ಯಕ್ತವಾಗುವಿಕೆಯನ್ನು ಕಟ್ಟಿ ಹಾಕಬೇಕೀಗ. ನಾನೂ ಹಾಗೆ ಮಾಡಿದರೆ ನಮ್ಮ ನಡುವೆ ಸಂವಹನ ಯಾವತ್ತೋ ನಿಂತುಹೋಗುತ್ತಿತ್ತು. ಮಾನಸಿಕ ಸಂವಹನದ ಜೊತೆ ಭೌತಿಕ ಸಂವಹನವೂ ನಿಂತು ಹೋಗುತ್ತಿತ್ತಲ್ಲವಾ! ನನ್ನ ನಿನ್ನ ಹಾದಿ ಎಷ್ಟೇ ಬೇರೆಯಾಗಲೀ ಅದು ಸಂಧಿಸಲೇ ಬೇಕು ನಾವು ಮತ್ತೆಮತ್ತೆ. ಕೃಷ್ಣಾ ಉರಿದು ಹೋಗಲಿ ಎಲ್ಲ ಕಾಯ ಎಂದುಕೊಂಡ ಭಾವಕ್ಕೆ ಬದುಕನ್ನೇ ದೀಕ್ಷೆಯಜ್ಞವಾಗಿಸಿಬಿಟ್ಟಿದ್ದೀ. ಸಾಕು ಅಂದರೆ ಬಿಡುವುದಲ್ಲ. ಬೇಕು ಅಂದರೆ ಸಿಗುವುದಲ್ಲ! ಎಂಥಾ ಜಾಗದಲ್ಲಿ ನನ್ನ ನಿಲ್ಲಿಸಿದೆ ನೀ! ನಗಲಾಗದ ಅಳಲಾಗದ ಮರುಗಲಾಗದ, ಖುಶಿಪಡಲಾಗದ ಬೇರೆ ಎಲ್ಲೋ ಏನೋ ಖುಶಿ ಕಂಡುಕೊಳ್ಳಲಾಗದ ನನ್ನ ಸ್ಥಿತಿ ನಿನಗೇ ಪ್ರೀತಿ. ಬಯಸಿದರೆ ಏನೆಲ್ಲವನ್ನೂ ಬೇಕಾದಲ್ಲಿ ಪಡೆಯಬಲ್ಲೆ ನಾನು. ಉಹುಂ. ಬಯಕೆಗಳೇ ಇಲ್ಲ. ಭಾವಗಳೂ ಇಲ್ಲ. ಎಷ್ಟೆಲ್ಲ ಬರಿದಾಗಿಸಿಕೊಂಡೆ ನನ್ನ ಒಳಗನ್ನು... ಬರಿದಾಗಿಸಿಕೊಂಡಷ್ಟೂ ನೀನೇ ತುಂಬಿಕೊಂಡುಬಿಟ್ಟೆ. ನನಗೆ ಗೊತ್ತಿಲ್ಲದೇ. ನನ್ನ ಅರಿವಿಲ್ಲದೇ.. ನನ್ನ ಬದುಕಿನ ಈ ಅಂಕವನ್ನು ಹಂಚಿಕೊಳ್ಳುವ ಕವಿತೆ ಕೂಡ ಬರೆಯಲಾರೆ ಇವತ್ತಿಗೆ ನಾನು. ಅದಕ್ಕೆಂದೇ ಇವನ್ನೆಲ್ಲ ಹೀಗೆ ಬರೆದು ಮನಸು ಹಗುರಾಗಿಸಿಕೊಳ್ಳುತ್ತಿದ್ದೇನೆ. ನನ್ನ ಕಣ್ಣಲ್ಲಿ ಹನಿ ನೀರಿಲ್ಲ, ಕನಸಿಲ್ಲ, ಖುಶಿಯಿಲ್ಲ. ಕತೆಯಿಲ್ಲ, ಕವಿತೆಯಿಲ್ಲ, ಆದರೆ ಎಲ್ಲವನ್ನೂ ಮರುಸೃಷ್ಟಿಸಿಕೊಳ್ಳುತ್ತೇನೆ. ಮತ್ತೆ ಜೀವನ್ಮುಖಿಯಾಗುತ್ತೇನೆ. ನನ್ನ ಭಾವಗಳ ನಾನು ಜೀವಂತ ಪೋಷಿಸಿಕೊಳ್ಳ್ಳುತ್ತೇನೆ. ಮತ್ತೆ ನಾನು ಜೀವಂತಿಕೆಯ ಉಸಿರು ಹಿಡಿಯುತ್ತೇನೆ. ತೊರೆಯುವಿಯಾದರೆ ಎಲ್ಲಿಯವರೆಗೆ? ಈ ಭೂಮಿ ಆಕಾಶಗಳು ಮುಗಿಯುವವರೆಗೆ... ನಿರೀಕ್ಷೆಯಾದರೂ ಏನಿತ್ತು ಇಲ್ಲಿ? ಪ್ರೀತಿ ತಾನೇ? ನನ್ನ ಪ್ರೀತಿಸಲು ನೀನ್ಯಾಕೆ ಬೇಕು ನನಗೆ? ನಾನೇ ನೀನೆಂಬ ಮನಸಾಗಿ ನನ್ನೊಳಗೆ ನೀನಿರುವವರೆಗೆ ಭೌತಿಕವಾದ ಯಾವ ಅಗತ್ಯಗಳೂ ನನ್ನ ಕಾಡದಿರುವವರೆಗೆ ನೀನೆಂಬ ನೀನು ನಾನೇ ಆಗಿ ನನ್ನ ಬದುಕೆಲ್ಲ ನಿನ್ನ ಸುಗಂಧವೇ ಪಸರಿಸಿ ಪ್ರೀತಿಸಿಕೊಳ್ಳುತ್ತಲೇ ಬದುಕುತ್ತೇನೆ. ಜೀವನ್ಮುಖಿಯಾಗಿ..ಇದು ನನ್ನ ಹಟ ಮಾತ್ರವಲ್ಲ. ಭಾವಗಳ ಮರುಸೃಷ್ಟಿಸಿಕೊಳ್ಳುವ ಮನಸ್ಸಿನ ನಿರಂತರ ಪ್ರಯತ್ನವೂ ಹೌದು. ಒಳಗನ್ನು ತುಂಬಿಕೊಂಡ ಅಗತ್ಯಗಳು ಮೀರಿದ ಒಲವಿದು.. ಇಷ್ಟಕ್ಕೂ ನೀ ನನಗೆ ಒಲವಿನ ಒರತೆ..ನಿನ್ನೊಳಗೆ ಎಲ್ಲವನ್ನೂ ನಾನೇ ಪಡೆದುಕೊಳ್ಳುವ ನಿರಂತರ ಜ್ಯೋತಿ.. ಪ್ರೀತಿ, ಭಕ್ತಿ, ಆನಂದ, ಪ್ರಜ್ಞೆ, ಮನಸು ಎಲ್ಲದರ ನೆಲೆ ನೀನು..ನಿನ್ನ ಹೊರತು ನಾನು ಏನು? ಇದಕ್ಕಿಂತ ಹೆಚ್ಚಿನ ತೃಪ್ತಿ ಬದುಕಿಗೆ ಏನು ಬೇಕು ಹೇಳು. ಏನು ಬೇಕು ನನಗೆ? ಇದೇ ನನ್ನದೇ ಮನಸಿನ ಜೊತೆ ಈ ಪಯಣ ನಿರಂತರ. ಇದು ನನ್ನ ಭ್ರಮೆಯಲೋಕವೆನ್ನಿಸದರೆ ಹೌದು. ಬದುಕಿಸುವುದು ಭ್ರಮೆಯಾದರೇನು ಕನಸಾದರೇನು? ನೀನೇ ಹಚ್ಚಿಟ್ಟ ಹಣತೆಯಿದೆ. ನನ್ನೊಲವಿನ ಕೈದೀಪವಿದೆ. ಸಾಕು ಬಿಡು. ಇನ್ನೆಂತ ಬರೆಯಲೀ... ಬದುಕ ಪ್ರೀತಿಸಲು ಹಟವೊಂದಿರಲೀ...</span></div>
<div style="text-align: justify;">
<span style="font-size: large;">ಮೌನಕ್ಕೆ ಧ್ಯಾನಕ್ಕೆ ಆತ್ಮಶಕ್ತಿ ಕೊಡಲಿ.. ಕೃಷ್ಣ ನನ್ನ ಹೋರಾಟಕ್ಕೆ ಬಲವನ್ನೀಯಲಿ.. ಬದುಕು ತೋರಿದತ್ತ.. </span></div>
<div style="text-align: justify;">
<span style="font-size: large;"> </span></div>
</div>
maanasa saarovrahttp://www.blogger.com/profile/14088976224552347105noreply@blogger.com0tag:blogger.com,1999:blog-7191814811569941492.post-24061735182735187812015-07-21T02:11:00.000-07:002015-07-21T02:13:50.629-07:00 ಮನಸಾರೆ ವಂದಿಸುತ್ತ......<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span style="font-size: large;"> ಬರೆಯೋದೇ ಬೇಡ ಅನ್ನಿಸಿ ಪೆನ್ನು ಬದಿಗಿಟ್ಟಾಗೆಲ್ಲ ಮತ್ತೆ ಬರೆಯುವ ಒತ್ತಡ ಹುಟ್ಟುವಂತೆ ಮಾಡುವುದು ಎಲ್ಲರಿಗೂ ಸಾಧ್ಯವಿರೋದಲ್ಲ. ತೀರಾ ನಮ್ಮವರು, ಆತ್ಮೀಯರು ಅಥವಾ ನಮ್ಮನ್ನು ಅಭಿಮಾನಿಸುವವರು ಎಲ್ಲೋ ಒಂದು ಒತ್ತಾಸೆಯ ನುಡಿಯಾಡಿದರೆ ಮಾತ್ರ ಬರೆಯಬೇಕನ್ನಿಸುತ್ತದೆ. ಓದುವುದು ನಮಗೆ ನಾವೇ ಮಾಡಿಕೊಳ್ಳುವ ಅಭ್ಯಾಸಬಲ. ಆದರೆ ಬರವಣಿಗೆ ಒಳಗಿನಿಂದ ಬರಬೇಕು. ಬರೆಯಬೇಕೆನ್ನಿಸುವ ಹಂಬಲ ಒತ್ತಡವಾಗಿಯೇ ಬರುವವರೆಗೆ ಅದು ತನ್ನ ಸಹಜತೆಯನ್ನು ಪಡೆದುಕೊಳ್ಳುವುದಿಲ್ಲ. ಆದರೆ ಎಲ್ಲೋ ನನ್ನಂತೆ ಆಗಾಗ ಪೆನ್ನು ಬದಿಗಿಟ್ಟು ಕಣಿ ಕೇಳುವ ಮೂಡಿನವರಿಗೆ ಯಾಕೆ ಬರೆಯುವುದು ಬರೆದೇನಾಗಬೇಕಿದೆ ಎಂಬ ಭಾವ ತುಂಬಿಕೊಳ್ಳುವವರೆಗೆ ಯಾವತ್ತೋ ನಾವೇ ಬರೆದ ನುಡಿಯೊಂದು ಎತ್ತಿ ತಂದು ಅಕ್ಕಾ ನಿನ್ನೀ ಮಾತು ನನ್ನ ಖುಶಿಗೊಳಿಸಿತು ಎಂಬ ಪುಟ್ಟದೊಂದು ಅನಿಸಿಕೆ ಮತ್ತೆ ಬರೆಯುವುದಕ್ಕೆ ಸ್ಪೂರ್ತಿಯಾಗಬಹುದು. ಅದಲ್ಲದೇ ಯಾರು ಓದಲಿ ಬಿಡಲಿ ನಿನಗನ್ನಿಸಿದ ಭಾವಗಳನ್ನು ಬರೆದು ಬಿಡು ಗೆಳತೀ ಅಂತ ಸಣ್ಣದೊಂದು ಬುದ್ದಿಮಾತು ಬರೆಯಬೇಕೆನ್ನುವ ಒತ್ತಡವ ಹುಟ್ಟುಹಾಕಬಹುದು. ನನ್ನದಾಗಿದ್ದೂ ನನ್ನದಲ್ಲದ ನಿನ್ನೆಗಳ ನಡುವೆ ಕಳೆದುಹೋಗುವ ಕನಸುಗಳಿಗೆಲ್ಲ ಮತ್ತೊಂದು ಮನಸು ಹೆಗಲುತಟ್ಟಿ ಬರೆಸಬಹುದು.</span></div>
<div style="text-align: justify;">
<span style="font-size: large;"> ಹಾಗೆಲ್ಲ ನಡೆಯಬೇಕೆಂದರೆ ನುಡಿಸುವ ಯಾವುದೋ ಮನಸುಗಳ ಒಲುಮೆ ಬೇಕು. ಪ್ರೀತಿ ಬೇಕು. ಇಂದಿಗೆ ನನ್ನ ಮತ್ತೊಮ್ಮೆ ಓದಿಸುವ ಬರೆಸುವ ಕೈಗಳಿಗೆಲ್ಲ ನನ್ನದೊಂದು ಪುಟ್ಟ ನಮನವಿದೆ. ಮೊನ್ನೆ ಮೊನ್ನೆಯವರೆಗೂ ಬ್ಲಾಗ್ ಅಪ್ಡೇಟ್ ಮಾಡದೇ ಸುಮ್ಮನಿದ್ದ ಮನಸ್ಸಿಗೆ ಬದರಿ ಸರ್ ಕಳೆದುಹೋದವರ ಲೀಸ್ಟ್ ಲ್ಲಿ ನನ್ನ ಹೆಸರು ನೋಡಿದ್ದೇ ಯಾಕೋ ಸಣ್ಣದೊಂದು ಅಳುಕು ಹುಟ್ಟಿತ್ತು. ಮತ್ತೆ ಬರೆಯಬಲ್ಲೆನಾ ಅಂತ. ಯಾಕೆಂದರೆ ಬರೆಯಲು ನನ್ನಲ್ಲಿ ಏನೂ ಇರಲಿಲ್ಲ. ಅಥವಾ ನನ್ನ ಬರೆಯುವ ಹವ್ಯಾಸವೇ ನನಗೊಂದು ಹುಚ್ಚು ಅನ್ನಿಸಿಬಿಟ್ಟಿತ್ತು. ಅಕ್ಷರಶಃ ಅಕ್ಷರಗಳು ಮೂಡದ ಮನಸ್ಸಾಗಿಬಿಟ್ಟಿತ್ತು. ಈ ನಡುವೆ ಬತ್ತಿಸಿಕೊಳ್ಳೋದಕ್ಕೆ ಭಾವಗಳು ಇರಲಿಲ್ಲ. ಹುಟ್ಟಿಸಿಕೊಳ್ಳೊದಕ್ಕೆ ಕನಸುಗಳು ಇರಲಿಲ್ಲ. ಕಾವ್ಯ ಪ್ರೀತಿಯ ಬಯಕೆ ಬತ್ತಿದಮೇಲೆ ಬರೆಯುವ ಮೂಢ ಕೆಲಸ ಮಾಡಿರಲಿಲ್ಲ. ಸುಮ್ಮನಿರಬೇಕೆನ್ನಿಸಿದರೆ ಸುಮ್ಮನಿದ್ದುಬಿಡಬೇಕೆ ವಿನಃ ಈ ಜೀವವಿರದ ಬರಹಗಳು ನನಗೇ ರುಚಿಸುತ್ತಿರಲಿಲ್ಲ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ಈ ಮಳೆಗಾಲದಲ್ಲಿ ಸರೋವರದಲ್ಲಿ ಮತ್ತೆ ನೀರುಕ್ಕಲಿ. ಯಾರೋ ನೋಡಬೇಕೆಂದು ಓದಬೇಕೆಂದು ಬರೆಯುವುದಲ್ಲ. ನಮ್ಮದೇ ಮನಸು ಹಸುರಾಗಿಸಲು, ಹಗುರಾಗಿಸಲು ಬರೆದುಬಿಡು ಅಂದ ಗೆಳೆಯ ಶ್ರೀವತ್ಸನ ಮಾತು, ಪುಟ್ಟಿ ಸಂಧ್ಯಾಳ ಪ್ರೀತಿ, ಆತ್ಮೀಯ ಗೆಳತಿ ರಜನಿಯ ನಿರಂತರ ಪ್ರೋತ್ಸಾಹ ಮತ್ತೊಮ್ಮೆ ಲೇಖನಿ ಹಿಡಿಸುವಂತೆ ಮಾಡಿತ್ತು! ಈ ಹಿಂದಿನ ಲೇಖನದ ಗಂಭೀರತೆಯೊ ಅಥವಾ ಅದರ ವಿಷಯವೋ ಬಹಳ ಜನರನ್ನು ತಲುಪಿದ್ದು ಸುಳ್ಳು. ಅಥವಾ ರುಚಿಸದಿರಬಹುದು. ಆದರೆ ಮತ್ತೆ ಮತ್ತೆ ಬಣ್ಣ ಬದಲಿಸುವ ಪೃಕೃತಿಯಂತೆ ಬರಹದ ಶೈಲಿ ವಿಷಯಗಳು ಕೂಡ ಬದಲಾಗಿದೆ ಸರೋವರದಲ್ಲಿ. ಮನಸುಗಳ ಮಾತೀಗ ಭಾವದಂಗಳ ದಾಟಿ ಒಳಜಗುಲಿಯ ವಿಚಾರತೋರಣಕ್ಕೆ ಕಾಲಿಟ್ಟಿದೆ. ನಿಮ್ಮ ಅನಿಸಿಕೆಗಳು ಮೊದಲಿನಂತೆ ಇರಲಿ ಎಂಬ ವಿನಂತಿ. ಇಷ್ಟವಾಗದಿದ್ದದ್ದನ್ನೂ ಹೇಳಬಹುದು. ಮತ್ತೆ ಮನಸುಗಳು ಮಾತಾಡಲಿ...</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ಪ್ರೀತಿ ಒಲವು ಸ್ನೇಹ, ಬಯಕೆ, ಭಾವ, ಬಂಧ, ಸಂಬಂಧಗಳಿಗೆ ಹೊರತಾದ ಪ್ರಪಂಚ ಯಾವುದಿದೆ? ಎಲ್ಲವೂ ಇಲ್ಲಿಯೇ ಹುಟ್ಟಿ ಇಲ್ಲಿಯೇ ಮುಗಿಯುತ್ತದೆ. ಮತ್ತಷ್ಟುಯ ವಿಜ್ಞಾನ, ತಾಂತ್ರಿಕತೆ, ನಾಗರಿಕತೆ,ಇತಿಹಾಸಗಳ ಬೇರೆ ಬೇರೆ ವಿಷಯಗಳಿರಬಹುದು. ಅಲ್ಲೂ ಕೂಡ ಮಾನವರ ಮನಸುಗಳೇ ಕೆಲಸ ಮಾಡುತ್ತಿವೆ. ಬುದ್ಧಿ ಅಭಿವೃದ್ಧಿಗೆ ಕಾರಣವಾಗಿದೆ. ಜಗತ್ತಿನ ಎಲ್ಲ ಅಭಿವೃದ್ಧಿಗೂ ಮೂಲ ಮನುಷ್ಯ ಬುದ್ಧಿಗಳೇ.. ಮನುಷ್ಯನೆಂದಮೇಲೆ ಅದೊಂದು ವಯಕ್ತಿಕ ಪ್ರಪಂಚವಿದ್ದೇಇದೆ. ಅಂತಹ ಮಾನಸಿಕ ಹಾಗೂ ತಾತ್ವಿಕ ಪ್ರಪಂಚದ ಒಳಹೊರಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸುವದೇ ನಮ್ಮಂತವರ ಬರಹಕ್ಕೆ ವಿಷಯ. ಹೀಗೆಲ್ಲ ಹೇಳಿದರೆ ಮತ್ತಷ್ಟು ಗೊಂದಲವಾಗಬಹುದೇನೋ. ರೈತನೊಬ್ಬನ ಬದುಕು, ಕಮ್ಮಾರನೊಬ್ಬನ ಮನಸು, ಶಿಲ್ಪಿಯೊಬ್ಬನ ಒಳಗು ಇಂತದ್ದನ್ನೇ ನಾವಿಂದು ಸಾಹಿತ್ಯಪ್ರಪಂಚದ ಉತ್ತಮ ಕಥೆಗಳಲ್ಲಿ ವಸ್ತುಗಳಾಗಿ ನೋಡುತ್ತಿರುವುದು. ಮುಂದಿನ ದಿನಗಳಲ್ಲಿ ಈ ಕಥಾಪ್ರಪಂಚದ ಇನ್ನಷ್ಟು ಪುಟಗಳೊಂದಿಗೆ ನಿಮ್ಮೆದುರು ಬರುತ್ತೇನೆ. ಅಲ್ಲಿಯವರೆಗೆ ಬದರಿ ಸರ್, ಸಂಧ್ಯಾ ಪುಟ್ಟಿ, ಶ್ರೀವತ್ಸ, ರಜನೀ ನಿಮಗೂ ನಿಮ್ಮಂತ ಪ್ರೀತಿ ತೋರಿದ ಎಲ್ಲರಿಗೂ ಮನಸಾರೆ ವಂದಿಸುತ್ತ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಸಣ್ಣದೊಂದು ವಿರಾಮ. </span></div>
</div>
maanasa saarovrahttp://www.blogger.com/profile/14088976224552347105noreply@blogger.com1tag:blogger.com,1999:blog-7191814811569941492.post-54319530768990521592015-07-08T00:10:00.001-07:002015-07-08T00:11:55.015-07:00 ವೈಚಾರಿಕತೆಯ ವೈರುಧ್ಯ.<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಮನುಷ್ಯ ತನ್ನ ವೈಚಾರಿಕ ವಿಚಾರಗಳನ್ನೆಲ್ಲ ಇನ್ನೊಬ್ಬರ ಮೇಲೆ ಹೇರಲು ಅವಕಾಶ ಸಿಕ್ಕಾಗೆಲ್ಲ ಪ್ರಯತ್ನಿಸುತ್ತಲೇ ಇರುತ್ತಾನೆ, ಒಂದು ಸೃಷ್ಟಿ ಇನ್ನೊಂದು ಪ್ರತಿಸೃಷ್ಟಿಯಂತ ಕಲಾತ್ಮಕ ವಿಚಾರಗಳನ್ನೇ ಇಟ್ಟುಕೊಂಡರೂ ತನ್ನದಾದ ಯಾವುದೋ ಒಂದು ನಿಲುವಿಗೆ ಬದ್ಧನಾದಂತೆ ತೋರುತ್ತಾ ಇನ್ನೊಂದಷ್ಟು ನಿಲುವುಗಳ ವಿರೋಧಿಸುತ್ತಿರುತ್ತಾನೆ. ಹೌದು ವೈಚಾರಿಕತೆಯೆಂಬ ಬಿಸಿ ತುಪ್ಪವೇ ಹಾಗೇ.. ಅದು ಒಳಗೂ ಸುಡುವ ಹೊರಗೂ ಸುಡುವ ಬೂದಿಮುಚ್ಚಿದ ಕೆಂಡದಂತೆ. ಅದನ್ನು ಬಾಯಿಬಿಟ್ಟು ಆಡಿದರೆ ಬಹಳಷ್ಟು ಜನರ ವಿರೋಧ ಕಟ್ಟಿಕೊಳ್ಳಬೇಕು. ಸುಮ್ಮನಿದ್ದರೆ ಯಾವುದೂ ಹಿತವೆನ್ನಿಸದಂತ ಕುದಿ ಒಳಗಿಂದ ಕುದಿಯುತ್ತಲೇ ಇರುತ್ತದೆ. ಅದು ಸುಮ್ಮನೆ ಕುಳಿತಿರಲಾಗದಷ್ಟು ಸುಡುತ್ತದೆ. ಒಂದಲ್ಲ ಒಂದು ದಿನ ಅದು ಲಾವಾದಂತೆ ಉರಿದು ಹೊರಬೀಳುತ್ತದೆ.. ಯಾವುದೋ ಒಂದನ್ನು ಸುಡುವುದಂತೂ ಸತ್ಯ.</div>
<div style="text-align: justify;">
<br /></div>
<div style="text-align: justify;">
ಒಂದುಕಾಲಕ್ಕೆ ವೈಚಾರಿಕತೆಯೊಂದು ಬೆಳವಣಿಗೆಯ ಸಾಧನ. ಇನ್ನೊಂದು ಕಾಲಕ್ಕೆ ವೈಚಾರಿಕತೆ ಎಂಬುದು ಬದುಕುವ ಸಾಧನ, ಮತ್ತೂ ಒಂದು ಕಾಲಕ್ಕೆ ವೈಚಾರಿಕತೆಯ ಪಾಠ ಮತ್ತಷ್ಟು ಕಾಲಕ್ಕೆ ಅದೊಂದು ಅನುಭವ. ಎಲ್ಲ ಕಾಲಕ್ಕೂ ಬದುಕಿಗೆ ನಿಲ್ಲುವುದು ಬರೀ ಅವರವರದ್ದೇ ಆದ ಒಂದು ಕಟು ಕಟು ವಾಸ್ತವ ಮತ್ತದರ ಆಗು ಹೋಗುಗಳಾಚೆ ಮನಸ್ಸಿನ ಆವೇಗಗಳ ನಿರ್ಧರಿಸುವ ಭಾವತೀವ್ರತೆಯ ಅಲೆಗಳಷ್ಟೆ. ಅತ್ಯಾಚಾರ ಕೂಡ ಇಂತದ್ದೇ ಒಂದು ಮನಸ್ಸಿನ ಒಂದು ವಾಸ್ತವದ ಘಟನೆ ಒಬ್ಬರಿಗಾದರೆ ಇನ್ನೊಬ್ಬರಿಗೆ ಅದು ಬದುಕಿಡೀ ಮಾಯದ ಗಾಯ.. ಚಿತ್ರ ವಿಚಿತ್ರವೆನ್ನಿಸುವ ನೂರೆಂಟು ಸತ್ಯಗಳಿಗೆಲ್ಲ ವೈಚಾರಿಕತೆಯಾಗಲೀ ತರ್ಕವಾಗಲೀ ಸ್ಪಷ್ಟನೆ ಕೊಡದು. ಮತ್ತದನ್ನು ನಿಯಂತ್ರಿಸಲಾಗದು. ಎಲ್ಲವನ್ನೂ ತನ್ನ ಕೈಯೊಳಗೇ ಅಂದುಕೊಳ್ಳುವ ಮಾನವ ಅಸಹಾಯಕನಾಗುವುದು ಇಂತ ಪ್ರತೀ ಸಂದರ್ಭಗಳಲ್ಲೂ. ಬೇಡ ಬೇಡವೆಂದರೂ ವಿಜ್ಞಾನದ ಸ್ಪೋಟಗಳಲ್ಲೂ, ಚಂದ್ರ ಗ್ರಹ ಯಾತ್ರೆಯಲ್ಲೂ, ರಾಕೆಟ್ಟು ಉಡ್ಡಯನದಲ್ಲೂ, ಅಮೇರಿಕ ಇಂಗ್ಲೆಂಡಲ್ಲೂ, ಗ್ರೀಕ್ ರೋಮನ್ನುಗಳಲ್ಲೂ ಮುಂದುವರಿದ ಎಲ್ಲ ಪ್ರಪಂಚದಲ್ಲೂ ಮಾನವ ಈ ನಿಸ್ಸಾಹಯಕ ಸ್ಥಿತಿಯಲ್ಲಿ ದೇವರೇ! ಎನ್ನುತ್ತಾನೆ!! ಮತ್ತೆ ಅದು ಯಾವುದೋ ಒಂದು ಹೆಸರಿಲ್ಲದ ಕಣ್ಣಿಗೆ ಕಾಣದ ಪ್ರಪಂಚವನ್ನೆಲ್ಲ ನಿಯಂತ್ರಿಸುವ ಇಂದ್ರಿಯಗಳಿಗೆ ನಿಲುಕದ ಶಕ್ತಿಯನ್ನು ನಂಬುತ್ತಾನೆ. ದೇವರೆಂದರೆ ಧರ್ಮ ಜಾತಿ, ಶಬ್ಧ, ವಾಕ್ಯಗಳಿಗೆ ಮೀರಿದ್ದು. ಅದನ್ನು ವಿವರಿಸುವ ಮೂರ್ಖತನ ಬೇಡ. ದೇವರ ಹೆಸರಿನಲ್ಲಿ ನೆಮ್ಮದಿಯ ಕಂಡುಕೊಳ್ಳುವ ಮನಸುಗಳನ್ನೂ ಮತ್ತದರ ವೈಚಾರಿಕ ಮುಖಗಳನ್ನೂ ನೋಡಿ ತಿಳಿಯಬೇಕಷ್ಟೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಬರಹಗಾರ ಅಥವಾ ಓದುಗ, ಕಲೆಗಾರ ಅಥವಾ ಕಲೋಪಾಸಕ, ಯಾವುದೇ ವಿಷಯತಜ್ಞ ಮತ್ತು ವಿಷಯಗ್ರಾಹಕ ಇಬ್ಬರೂ ಒಂದು ಸಂಪೂರ್ಣ ಸತ್ವಯುತವಾದದ್ದನ್ನು ಆಯ್ದುಕೊಳ್ಳಬೇಕಾದರೆ, ನಿಜವಾದ ಸತ್ಯ ತಿಳಿಯಬೇಕಾದರೆ, ರಸಸ್ವಾದನೆ ಸಾಧ್ಯವಾಗಬೇಕಾದರೆ ಅವನ್ನು ಪೂರ್ಣ ಅರಿತಿರಬೇಕು. ಕೇವಲ ಉತ್ತಮವನ್ನು ಆಯ್ಕೆ ಮಾಡಿಕೊಳ್ಳುತ್ತೇನೆಂಬುದು ಸಾಧ್ಯವಾಗುವುದಿಲ್ಲ. ಎರಡೂ ಮುಖಗಳ ಅರಿವು ಮಾತ್ರ ಸರಿ/ತಪ್ಪು, ಒಳ್ಳೆಯದು/ ಕೆಟ್ಟದ್ದು ನಿರ್ಣಯಿಸಬಲ್ಲದು. ಹಾಗೇ ಒಬ್ಬ ಮನುಷ್ಯ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಇರಲಾರ ಯೋಚಿಸಲಾರ ಎಂಬುದು ಸತ್ಯವಾದಲ್ಲಿ ಇನ್ನೊಬ್ಬರ ಆಸ್ವಾದನ ಮಟ್ಟವನ್ನು, ಬೇರೆಯವರ ಪರಿಕಲ್ಪನೆಗೆಷ್ಟೇ ನಿಲುಕಿದ ಅಲ್ಪ ವಿಷಯಗಳನ್ನೂ ಗೌರವಿಸಲೇ ಬೇಕು. ಈ ಪ್ರಪಂಚದಲ್ಲಿ ಎಲ್ಲರೂ ಶೇಕ್ಸ್ ಪಿಯರ್ ಆಗಲಾರರು. ಎಲ್ಲರೂ ರವಿವರ್ಮ ಆಗಲಾರರು, ಎಲ್ಲರೂ ಪಂಡಿತ್ ರವಿಶಂಕರ್ ಆಗಲಾರರು. ಅವರಂತಾಗುವ ಪ್ರಯತ್ನದಲ್ಲಿ ಇನ್ನೊಬ್ಬರು ಹುಟ್ಟಬಹುದಷ್ಟೆ ಹೊರತು ಕಾಪಿ ಪೇಸ್ಟ್ ಸಾಧ್ಯವಾಗದು. ಅದಕ್ಕೆಂದೇ ಇದು ದೇವರ ನಿರ್ಮಿತಿ!</div>
<div style="text-align: justify;">
<br /></div>
<div style="text-align: justify;">
ಒಂದೇ ಮನೆಯಲ್ಲಿರುವ ಮೂರು ನಾಲ್ಕು ಜನ ಒಂದೇ ರೀತಿ ಇರುವುದಿಲ್ಲ. ಹೊಟ್ಟೆಯಲ್ಲಿ ಹಂಚಿಕೊಂಡ ಮಕ್ಕಳು ತಂದೆ ತಾಯಿ ಎಲ್ಲವೂ ಬೇರೆಬೇರೆಯೇ ವ್ಯಕ್ತಿ, ಬೇರೆ ಬೇರೆ ವ್ಯಕ್ತಿತ್ವ. ಹಾಗಿರುವಾಗ ನಮ್ಮಂತೆ ಜಗತ್ತೆಲ್ಲ ಯೋಚಿಸಬೇಕೆನ್ನುಂದುಕೊಳ್ಳುವುದು ಮೂರ್ಖತನವಲ್ಲವೆ? ಸಮಾನ ಮನಸ್ಕರು ಎಂದರೆ ಸಮಾನ ಆಸಕ್ತಿಯುಳ್ಳವರಾಗಬಹುದೇ ಸಮಾನ ವಿಚಾರಗಳುಳ್ಳವರು ಆಗುವುದಿಲ್ಲ. ಯಾವುದೋ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಈ ಸಮಾನತೆ ಕಾಣಬಹುದಾದರೂ ಉಳಿದಂತೆ ಪ್ರತಿಯೊಬ್ಬರಲ್ಲೂ ವಿಭಿನ್ನ ವಿಚಾರಗಳಿದ್ದೇ ಇವೆ. ಹಾಗೆ ನೋಡಿದರೆ ಈ ವೈಚಾರಿಕತೆ, ಯೋಚನೆಗಳು, ಭಾವನೆಗಳು ಪ್ರತಿಯೊಂದೂ ವ್ಯಕ್ತಿಗೂ ಕಾಲಕ್ಕೂ ದೇಶಕ್ಕೂ ಬೇರೆ ಬೇರೆಯೇ. ಮನುಷ್ಯ ವಿಶ್ವಾಸದ ಮೇಲೆ ಮಾತ್ರ ಸ್ನೇಹ, ಸಂಬಂಧಗಳು ನಿಲ್ಲುತ್ತವೆ. ಅಥವಾ ಅವುಗಳನ್ನು ಕಾಯ್ದುಕೊಳ್ಳಲೇಬೇಕಾದ ಒಂದು ವ್ಯವಸ್ಥೆಯಲ್ಲಿ ಬಂಧಿಸಿಕೊಂಡು ಬದುಕುತ್ತೇವೆ. ಬೇಡ ಎಂದುಕೊಂಡ ಮರುಕ್ಷಣ ಮನಸು ಎಲ್ಲದರಿಂದ ಹೊರನಿಲ್ಲಬಲ್ಲ ಸಾಮಥ್ರ್ಯವನ್ನೂ ಹೊಂದುತ್ತದೆ. </div>
<div style="text-align: justify;">
<br /></div>
<div style="text-align: justify;">
ಸಾಮಾಜಿಕ ಬದುಕು ಮತ್ತು ವೈಚಾರಿಕ ಪ್ರಪಂಚದ ಅಬ್ಬರದ ಭರಾಟೆಯಲ್ಲಿ ಸ್ವಲ್ಪ ಸಂಯಮವಿಲ್ಲದ ಮನಸುಗಳು ಅಥವಾ ಪ್ರಜ್ಞೆ ಕಳೆದುಕೊಳ್ಳುವ ಬಲಹೀನ ಮನಸುಗಳು ಈಗ ಬಹುತೇಕ ದ್ವಂದ್ವದಲ್ಲಿ ಸಿಲುಕಿಕೊಂಡಿವೆ. ಯಾವುದು ಹಿತ ಯಾವುದು ಅಹಿತ ಎನ್ನುವುದರ ನಡುವೆ ಬುದ್ದಿ ಮತ್ತು ಮನಸಿನ ನೇರ ಹೋರಾಟವನ್ನೇ ಇಂದು ಎದುರಿಸುತ್ತಿವೆ. ಬರಹಗಾರ ಪ್ರತಿಯೊಬ್ಬನೂ ತನ್ನನ್ನು ತಾನು ಅತ್ಯುತ್ತಮನೆಂದು ಜಗತ್ತಿಗೆ ಏನೋ ಕೊಡುವ ಮಹಾನ್ ಎಂದುಕೊಳ್ಳುವ ಮೊದಲು ಈ ಮೊದಲು ಜಗತ್ತಿಗೆ ಏನೆಲ್ಲ ಕೊಟ್ಟವರ ಅಸ್ತಿತ್ವ, ಅವರ ಅಸ್ಮಿತೆಯನ್ನು ಅರಿಯಬೇಕು. ಇದ ಮಿತ್ಥಂ ಅನ್ನುವುದಕ್ಕೆ ಹೊರತಾಗಿಯೂ ಯೋಚಿಸುವ ಕಲ್ಪಿಸುವ ಮತ್ತು ಸೃಜಿಸುವ ವಿಶಾಲತೆಯನ್ನು ಹೊಂದಿರಬೇಕು. ನಾನು ನೋಡಿದ್ದು ಸತ್ಯವೆಂಬುದಾದರೆ ನೋಡದಿರುವ ನೂರು ಸತ್ಯಗಳೂ ಇರಬಹುದು. ನನ್ನೆಣಿಕೆಗೆ ಸಿಗದಿರುವ ಅಗಣಿತ ತಾರಾಗಣಗಳಿವೆ ಇಲ್ಲಿ ಎಂಬುದು ಅರಿವಿನ ಮೊದಲ ಹೆಜ್ಜೆ, ವೈಚಾರಿಕ ವಿರೋಧವೆಂಬುದು ವಿರೋಧಿಸುವುದು ಮತ್ತು ಮುಗಿಬೀಳುವುದರ ಮೇಲೇ ನಿಂತುಹೋಗುವ ಅಪಾಯವಿದೆ. ವಿಷಯದ ಮಂಥನವಾದಲ್ಲಿ ವಿಷ ಅಮೃತಗಳು ಹೊರಚೆಲ್ಲುವವರೆಗೂ ಕಾಯುವ ತಾಳ್ಮೆ ಬೇಕು. ಎಲ್ಲಕ್ಕಿಂತ ವಿಶಾಲತೆಯ ಅರಿವು ಬೇಕು. ಇಷ್ಟೆಲ್ಲದರ ನಡುವೆ ಕಳೆದುಹೋಗದ ಭಾವಗಳು, ಬದುಕಿನ ಕಟು ಸತ್ಯಗಳು, ವಾಸ್ತವದ ನೆಲೆಯ ಮೇಲೆ ನಿರಂತರದ ಹೋರಾಟದ ಈ ಯುದ್ಧಗಳೇ ನಮ್ಮನ್ನು ಬೆಳೆಸುವಂತದ್ದು. ಕಾಡುವಂತದ್ದು, ಕೊಡುವಂತದ್ದು. </div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಇಂದಿಗಿಷ್ಟು ಮಳೆ...</div>
<div style="text-align: justify;">
ಮತ್ತೆ ಸಿಗುವಾ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
maanasa saarovrahttp://www.blogger.com/profile/14088976224552347105noreply@blogger.com1tag:blogger.com,1999:blog-7191814811569941492.post-56332997970052934152015-05-23T04:41:00.000-07:002015-05-23T04:41:28.248-07:00 ಮನಸೇ......<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEibInFwtF6CEiuwwDA5KPHwLr-9ZrPStUeXgL0VTQbDrL56iJ5vaO6jJj6NQg2Hqc9YN8ZY5rMQ4GDpphyY5p5JJ5doTq0kY24sFQ55v4z5hRnL1Eb0dI2pSl9AZfnSYwqc5pERp3-vVJo/s1600/IMG_20150523_165520.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="240" src="https://blogger.googleusercontent.com/img/b/R29vZ2xl/AVvXsEibInFwtF6CEiuwwDA5KPHwLr-9ZrPStUeXgL0VTQbDrL56iJ5vaO6jJj6NQg2Hqc9YN8ZY5rMQ4GDpphyY5p5JJ5doTq0kY24sFQ55v4z5hRnL1Eb0dI2pSl9AZfnSYwqc5pERp3-vVJo/s320/IMG_20150523_165520.jpg" width="320" /></a></div>
<br />
ಮನಸೇ......<br />
<br />
ಬರೆಯುವುದಕ್ಕೆ ನೂರಾರು ನೆಪ, ಬರೆಯದಿರುವುದಕ್ಕೆ ಸಾವಿರಾರು ನೆಪ! ನೆಪಗಳಾಚೆ ಇಣುಕಿದರೆ ಮತ್ತೆ ಮನಸಿನೊಂದಿಗೆ ಮೌನದಲ್ಲೂ ಮಾತಿದೆ, ಪ್ರೀತಿಯಿದೆ, ಅಚ್ಚಟೆಯ ಆಲಿಂಗನವಿದೆ, ತಲೆತುಂಬ ವಿಷಯಗಳಿವೆ. ಬೆಳದಿಂಗಳ ಬಯಲೂ ಮಳೆ ಹನಿಯ ತಪವೂ ಹಾಗೇ ಇದೆ..<br />
ಇವತ್ತು ಮತ್ತೊಮ್ಮೆ ಅಂತದ್ದೇ ಮಳೆ ಮನಸಿನ ನಡುವೆ ಪುಟ್ಟ ಮಾತು-ಕತೆ.<br />
ನಿನ್ನೆ ಹಚ್ಚಿಟ್ಟ ಭಾವದ ತೋರಣಗಳಲ್ಲಿ ಇನ್ನೂ ಬೆಳಕಿನ ಪುಟ್ಟ ಹಣತೆ ಹಾಗೇ ಇದೆ. ನೀ ಬರುವಿಯೆಂಬ ಕಾತರಕ್ಕೆ ಕಿವಿಯಾಗಿ, ಎಲ್ಲೋ ಇಟ್ಟ ನಿನ್ನ ದೃಡ ಹೆಜ್ಜೆಗಳು ಮತ್ತೊಮ್ಮೆ ಹೊರಳೀತೆಂಬ ಪುಟ್ಟ ಬಯಕೆಯಾಗಿ, ಜಗತ್ತಿನ ಘನಘೋರ ಕ್ರೌರ್ಯಗಳೆಲ್ಲ ಕಳೆದು ಹೃದಯಕ್ಕೆ ತಂಪಾಗಿಸಿವ ವೀಣಾ ನಾದವೊಂದು ಎದೆಯಲ್ಲಿ ಹರಿಯುತ್ತಿದೆಯಲ್ಲ!ಒಮ್ಮೆ ಝೇಂಕರಿಸಲಿ ಎಂಬ ಒಲವಿನಿಂದ.. ಮೌನವಾಗಿರಬಹುದು. ಮಾತು ಮರೆತಿರಬಹುದು. ಮತ್ತೆಲ್ಲೋ ಕಳೆದುಹೋಗಲಾಗದ ಚಿತ್ತವೊಂದಿದೆ ನೋಡು. ಒಮ್ಮೆ ಬರಬಾರದೇ ಈ ಜುಮುರು ಮಳೆಯೊಂದಿಗೆ..<br />
ಒಮ್ಮೆ ನಾ ಎತ್ತಿ ಮುಚ್ಚಿಟ್ಟ ಹಾಳೆ ಪೆನ್ನುಗಳಲ್ಲಿ ಇಂಕು ಖಾಲಿಯಾಯಿತೇಕೆ ಎಂದು ನೋಡಬಾರದೇ.. ಬರೆಯದೇ ಉಳಿಸಿರುವ ಸಾಲು ಸಾಲುಗಳಲ್ಲಿ ನಿನ್ನೆಸೆರು ಅಳೀಸಿತೇ ಹುಡುಕಬಾರದೇ? ಕತೆ ಕಾವ್ಯ ಭಾವ, ಬಂಧ ಎಲ್ಲ ಮಾತುಗಳು ಮೌನವಾಗಿರಬಹುದು, ನಿನ್ನೆಯ ಪುಟಗಳಲ್ಲಿ ನಾನಿಟ್ಟ ನವಿಲುಗರಿಯಿನ್ನೂ ಹಾಗೇ ಇದೆಯಲ್ಲ! ಈ ವರುಷವೂ ಮತ್ತೆ ಧುಮುಗುಡುತ ಧಗಿಸುತ್ತ ಮಳೆರಾಯ ಬಂದನಲ್ಲ! ಪುಟ್ಟ ಹೂವಿನ ನಡುವೆ ನಿನ್ನ ಬೆರಳಿನ ಅಚ್ಚು ನನ್ನ ಗ್ಯಾಲರಿಯಲ್ಲಿ ಉಳಿದಿದೆಯಲ್ಲ! ಕವಲು ದಾರಿಯ ನಡುವೆ ನಿನ್ನ ಬೀಳ್ಕೊಡುವ ನೋವು ಸುಮ್ಮನಿದೆಯಲ್ಲ! ಕಿವಿಯಂಚಲ್ಲಿನ್ನೂ ಬೆಚ್ಚನುಸಿರಿನ ಗಾಳಿ ಹಾಗೇ ಇದೆಯಲ್ಲ! <br />
ಹೆಸರೆಂಬ ಬಂಧನವೇ ಇಲ್ಲದಿರೋ ಬಂಧವೇ ಬದುಕಿಸು ನೀ ನನ್ನ ನಾಳೆಗಳ ನಡುವೆ.. ಬರೆಯಿಸು ಇನ್ನಿಲ್ಲದೇ ಬೆರಳು ದಣಿವಂತೆ.. <br />
ಇರದಿರುವ ನಿನ್ನೆ ನಾಳೆಗಳ ನಡುವೆ ಮತ್ತೊಮ್ಮೆ ಹುಟ್ಟಿಸು ಈ ದಿನದ ನಗುವ, ನೇವರಿಸಿ ತಣಿಸು ಈ ನಿನ್ನ ಮನವ.. <br />
<br />
ಮತ್ತೆ ಮಾನಸ ಸರೋವರದಲ್ಲಿ ಮಳೆಯಾಗಿದೆ. ಪುಟ್ಟ ದೋಣಿಗಳೊಂದಿಗೆ ನಿಮ್ಮ ಜೊತೆ..<br />
<br />
</div>
maanasa saarovrahttp://www.blogger.com/profile/14088976224552347105noreply@blogger.com1tag:blogger.com,1999:blog-7191814811569941492.post-16433785906822283482014-11-29T03:08:00.000-08:002014-12-01T03:33:48.022-08:00ಗದ್ದಲ ಒಳಗೂ ಹೊರಗೂ...<div dir="ltr" style="text-align: left;" trbidi="on">
<br />
<br />
<br />
<span style="font-size: large;"> ಮನನ ಹೆಚ್ಚಾದರೂ ಮಾತು ಕಮ್ಮಿಯಾದಂತೆ ಅಪರೂಪಕ್ಕೆಂಬಂತೆ ಇಲ್ಲಿಗೆ ಬರಬೇಕಿದೆ. ಇದು ಕೂಡ ಆರಂಭವೂ ಅಲ್ಲದ ಅಂತ್ಯವೂ ಅಲ್ಲದ ಒಂದು ಮಥನ ಮಂಥನ. ಮನೆಯಲ್ಲಿ ಟೀವಿ ಯ ಕೇಬಲ್ ಕಟ್ ಮಾಡುವವರೆಗೂ ಮಹಾ ಗದ್ದಲವಿತ್ತು. ಬೇಕಾ ಬೇಡವಾ ಎಂಬುದರ ಬಗ್ಗೆ ಚಚರ್ೆಯದೇ ಗಲಾಟೆ ಕೆಲವು ದಿನವಿತ್ತು. ಆದರೆ ಈಗ</span><br />
<span style="font-size: large;">ನನಗಂತೂ ಮನೆಯಲ್ಲಿ ಶಾಂತಿಯ ತಂದಿಟ್ಟುಕೊಂಡ ಕುಶಿಯಾಗಿದೆ. ಬದುಕಿಗೆ ಅನಿವಾರ್ಯವಾದ ಕೆಲವು ವಸ್ತುಗಳು ಕೂಡ ಹೇಗೆ ಒಂದು ದಿನ ಅನುಪಯುಕ್ತ ಅನ್ನಿಸಲು ಆರಂಭಿಸುತ್ತವೆ ಎನ್ನುವುದಕ್ಕೆ ಇದೂ ಒಂದು ನಿದರ್ಶನವೆಂದುಕೊಂಡೆ. ಬೆಳಗಾದರೆ ಅಂಗಡಿಯ ಕೀಲಿ ಕೈ ಜೊತೆಗೆ ಎತ್ತಿಕೊಳ್ಳುವ ಪೇಪರ್ ಗಳೂ ಬಹುಶಃ ಇದೇ ತರ ಅಸಹನೀಯವೆನ್ನಿಸಿ</span><br />
<span style="font-size: large;">ದೂರವಿಡುವ ಸ್ಥಿತಿ ಎದುರಾಗಬಹುದು ಕೆಲವೇ ದಿನಗಳಲ್ಲಿ. ಇದಕ್ಕೆ ಒಂದು ಕಾರಣ ಬೆರಳ ತುದಿಯಲ್ಲಿ ಸಿಗುವ ಮೊಬೈಲ್ ನ್ಯೂಸ್ ಗಳು ಮತ್ತು ಇನ್ನೊಂದು ಕಾರಣ ಪತ್ರಿಕೆಗಳ ಅಸಹನೀಯ ಸುದ್ದಿ ಸಂಭ್ರಮಗಳು. ಮನುಷ್ಯ ರೇಜಿಗೆಗೆ ಒಳಪಡುವಷ್ಟು ಅಸಹನೀಯ ಸುದ್ದಿಗಳ ಬಿತ್ತರಿಕೆ.. ಬ್ರೇಕಿಂಗ್ ನ್ಯೂಸ್ ಗಳ ಭರಾಟೆ... ಪ್ರತೀ ಮನುಷ್ಯನ ಪ್ರೈವೇಸಿಯಲ್ಲಿ ಇಣುಕುವ ಅಣಕು ಸಂಭ್ರಮ..</span><br />
<span style="font-size: large;"><br /></span>
<span style="font-size: large;"><br /></span>
<span style="font-size: large;"> ಈ ಬರಹಕ್ಕೂ ಮುನ್ನ ಒಂದು ಸವಾಲು ಕಾಡುತ್ತಿದೆ. ಹೇಳಬೇಕನ್ನಿಸುತ್ತಿರುವ ವಿಷಯದ ವ್ಯಾಪ್ತಿ ದೊಡ್ಡದು. ಹೇಳಿ ಹಗುರಾಗುವ ಮನಸ್ಥಿತಿಯ ಒತ್ತಡ ಇನ್ನೊಂದು. ಸಾಮಾಜಿಕ ಪ್ರತಿಕ್ರಿಯೆಗಳ ಗೊಂದಲದೆಡೆಗೆ ವಿಚಾರಮಾಡುವಷ್ಟು ಸಹನೆ ಕಾಣಿಸುತ್ತಿಲ್ಲ. ಯಾವುದು ಮೊದಲು ಮತ್ತು ಯಾವುದು ಕೊನೆಗೆ ಎಂಬುದಕ್ಕೂ ನಿದರ್ಿಷ್ಟತೆಯಿಲ್ಲ.ಇಲ್ಲಿ ನನ್ನ ಅನಿಸಿಕೆಗಳೇ ಅಂತಿಮ ಸತ್ಯವೆಂಬ ಹುಂಬತನ ಕೂಡ ನನಗಿಲ್ಲ. ಆದರೂ ಕಾಡುವ ನೂರೆಂಟು ಪ್ರಶ್ನೆಗಳು..</span><br />
<span style="font-size: large;"><br /></span>
<span style="font-size: large;"> ಮೊನ್ನೆ ಮೊನ್ನೆ ನಡೆದ ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣ. ಪ್ರೇಮಲತಾ ಪ್ರಕರಣ, ನಿತ್ಯಾನಂದ ನ ಪ್ರಕರಣ, ಅಲ್ಲೆಲ್ಲೋ ಮಡೆಸ್ನಾನದ ಪ್ರಕರಣ, ಮತ್ತೆಲ್ಲೋ ದಲಿತರ ಮೇಲಿನ ದೌರ್ಜನ್ಯ, ಇನ್ನೊಂದೆಡೆ ಪುಟ್ಟಪುಟ್ಟ ಮಕ್ಕಳಮೇಲಿನ ಬಲಾತ್ಕಾರ... ಮುಚ್ಚಿ ಹಾಕುವ ಅದೆಷ್ಟೋ ಪ್ರಕರಣಗಳು. ನೈತಿಕ ಪೋಲಿಸ್ರು, ಪಕ್ಕಾ ಬಂಡಾಯ ಪಂಥದವರು..</span><br />
<span style="font-size: large;">ಇವೆಲ್ಲವೂ ಒಂದಿಲ್ಲೊಂದು ಅನ್ಯಾಯದ ವಿರುದ್ಧದ ಹೋರಾಟವೆಂದೇ ಭಾವಿಸೋಣ. ಇದರಲ್ಲಿ ಅನ್ಯಾಯಕ್ಕೊಳಗಾದ ವ್ಯಕ್ತಿ ಮತ್ತು ಅಪರಾಧದ ಆರೋಪಕ್ಕೊಳಗಾದವರು ಎರಡು ಭಾಗ ಸಾಮಾನ್ಯ. ಕಾನೂನಿನ ಭಾಷೆಯಲ್ಲಿ ಹೇಳುವುದಾದರೆ ಆರೋಪಿ ಪ್ರತ್ಯಾರೋಪಿ ಅನ್ನಬಹುದು. ಇವೆರಡೇ ಜನ ನ್ಯಾಯಾಲಯದ ಕಟೆಕಟೆಯಲ್ಲಿ ನಿಂತರೆ ಖಂಡಿತ ನ್ಯಾಯ</span><br />
<span style="font-size: large;">ಗೆಲ್ಲಬಹುದು. ಆದರೆ ಈ ಭಾಗವೆನ್ನುವುದು ದೇಶ, ಭಾಷೆ, ಸಮಾಜದ ಜನರನ್ನೇ ಇಬ್ಬಾಗವನ್ನಾಗಿ ನಿಲ್ಲಿಸುತ್ತಿರುವುದು ವಿಪರ್ಯಾಸವಾದರೂ ಸತ್ಯ. ಹೊಡೆದಾಡುತ್ತಿರುವವರು ಯಾರಿಗಾಗಿ ಹೊಡೆದಾಡುತ್ತಿದ್ದಾರೆ ಎಂಬುದೂ ಗೊತ್ತಿಲ್ಲದಷ್ಟು ಅವಿವೇಕಿಗಳಂತೆ ಹೊಡೆದಾಡುತ್ತಾರೆ ಒಮ್ಮೊಮ್ಮೆ. ಒಂದೇ ಒಂದು ಪ್ರಕರಣದಲ್ಲಿ ಕೂಡ ನ್ಯಾಯ ದೊಡ್ಡದು. ತಪ್ಪಿತಸ್ಥರು ಯಾರೇ ಇದ್ದರು ಶಿಕ್ಷೆಯಾಗಲಿ. ನ್ಯಾಯಾಲಯವನ್ನು ಗೌರವಿಸುತ್ತೇವೆ ಎಂಬ ನುಡಿ ಕೂಡ ಕೇಳಿಬರುವುದಿಲ್ಲ. ಯಾಕೆಂದರೆ ನ್ಯಾಯಾಲಯದ ವ್ಯವಸ್ಥೆಯ ಮೇಲೇ ನಮ್ಮ ಸಮಾಜಕ್ಕೆ ಭರವಸೆ ವಿಶ್ವಾಸ ಉಳಿದಿಲ್ಲ. ಇದೊಂದು ಸಮಾಜದ ದುರ್ಗತಿಯೆಂದೆ ನನಗನ್ನಿಸುತ್ತದೆ. ಒಬ್ಬ ನಿರಪರಾಧಿಯಾಗಿದ್ದು ನ್ಯಾಯಾಲಯದಿಂದ ನಿರಪರಾಧಿಯೆಂದು ಬಿಡುಗಡೆಗೊಂಡರೆ ಜನ ಅವನನ್ನು ನ್ಯಾಯ ಕೊಂಡುಕೊಂಡವನ ತರ ನೋಡುತ್ತಾರೆಂದರೆ ಇದು ವ್ಯವಸ್ಥೆಯ ಕುರಿತಾದ ನಿರಾಶಾವಾದವೇ. ಆದರೆ ವಸ್ತುಸ್ತಿತಿ ಹಾಗಿರುವುದಿಲ್ಲ.</span><br />
<span style="font-size: large;"> ವ್ಯವಸ್ಥೆಯ ಒತ್ತಡಗಳಿಗೆ ನ್ಯಾಯವ್ಯವಸ್ಥೆ ಕಾರಣವಲ್ಲ. ನಾವೇ ಕಾರಣ. ಪ್ರತಿಯೊಂದು ಪ್ರಕರಣ ನಡೆದಾಗಲೂ ನಮ್ಮ ಮೂಗು ತೂರಿಸಲು ವ್ಯವಸ್ಥೆಯ ದುರುಪಯೋಗ ಎಲ್ಲೆಲ್ಲಿ ಪಡೆದುಕೊಳ್ಳಬಹುದೆಂದು ಆಲೋಚಿಸಿ ಒಳ ಮಾರ್ಗಗಳ ಬೆಂಬತ್ತುವ ನಾವೇ ಅಲ್ಲವೆ ಈ ವ್ಯವಸ್ಥೆಯ ರೂವಾರಿಗಳು! ನಿಜವಾದ ನ್ಯಾನ ಅನ್ಯಾಯ ಎರಡೂ ಲೆಕ್ಕಕ್ಕಿಲ್ಲದೇ ಹೋಗುತ್ತದೆ. ರಾಮಚಂದ್ರಾಪುರ ಮಠದ ವಿಷಯ ತೆಗೆದುಕೊಂಡರೂ ನನಗನ್ನಿಸುವುದು ಇದೇ ಇರುವ ನಾಲ್ಕಾರು ಹವ್ಯಕ ಮಠಗಳಗಳ ನಡುವೆ ಒಂದು ಅಪನಂಬಿಕೆಯ ವೃತ್ತ ಹುಟ್ಟಿಕೊಂಡಿದ್ದಲ್ಲದೇ ಇನ್ನುಳಿದ ಸಮಾಜದ ಅನುಮಾನದ ದೃಷ್ಟಿಯಲ್ಲಿ ಹವ್ಯಕ ಸಮುದಾಯವೇ ನಿಲ್ಲುವಂತಾದದ್ದು ದುರದೃಷ್ಟಕರ. ಸತ್ಯಾಸತ್ಯತೆಯು ಸಾಕ್ಷ್ಯ ಹಾಗೂ ನ್ಯಾಯಾಲಯದಲ್ಲಿ ನಿರ್ಧರಿತವಾಗುತ್ತದೆ. ಒಂದು ವೇಳೆ ನಮ್ಮ ನಮ್ಮ ನಂಬಿಕೆ ಶೃದ್ಧೆಗಳು ಅಚಲವೇ ಆಗಿದ್ದಲ್ಲಿ ಈ ಯಾವ ಸಂಗತಿ ನ್ಯೂಸ್ಛಾನೆಲ್ಗಳ ಪ್ರವಾಹ ಅಥವಾ ಇನ್ಯಾವ ಒತ್ತಡಗಳ ನಮ್ಮ ಶೃದ್ಧೆಯನ್ನು ಬದಲಾಯಿಸಲಾಗದು. ದಿನಕ್ಕೊಬ್ಬರು ದಿನಕ್ಕೊಂದು ಹೇಳಿಕೆ ಕೊಡುವುದರಮೂಲಕ ಎಷ್ಟು ಕೆಟ್ಟದಾಗಿದೆ ನಮ್ಮ ಸ್ಥಿತಿಯೆಂದರೆ ಅಲ್ಲಿಯ ಘಟ್ಟದ ಮೇಲಿನ ಹೆಣ್ಣುಮಕ್ಕಳು ತವರಿಗೆ ಹೋದರೆ ಮುಖ ಬಾಡಿಸಿ ಬರಬೇಕು. ಅಲ್ಲಿಯವರು ಇಲ್ಲಿಗೆ ಬಂದರೆ ಇಲ್ಲೂ ಅದೇ ಗತಿ. ನಮ್ಮ ನಮ್ಮ ಮನೆಮನೆಯಲ್ಲೂ ಅದೇ ಭಕ್ತ ಮನಸುಗಳಿವೆ. ಅವರ ನಂಬಿಕೆಯ ನೋಯಿಸಬಾರದೆನ್ನುವ ಅಲ್ಪ ಮತಿಯೂ ಇಲ್ಲದ ಬುದ್ದಿವಂತರಾದರೆ ನಮ್ಮ ಜನ! ನಮ್ಮ ನಮ್ಮ ಅಹಂ ತೃಪ್ತಿಗೋಸ್ಕರ ಒಂದು ಮಠ ಒಂದಷ್ಟು ಶೃದ್ಧೆ ಭಕ್ತಿ ನಂಬಿಕೆಗಳಿಗೆ ಬಾಯಿಗೆ ಬಂದ ಮಾತನಾಡಿ ಚಪಲ ತೀರಿಸಿಕೊಳ್ಳುವುದಾದರೆ ಇದು ಯಾವ ಸಂಸ್ಕೃತಿ? ಹೆಣ್ಣುಗಳಿಗೋಸ್ಕರ ಪರದಾಡುವಂತ ಸ್ಥಿತಿ ನಿಮರ್ಾಣವಾಗಿದ್ದು ಕೂಡ ಇದೇ ಅತಿಯಾದ ಬುದ್ಧಿವಂತಿಕೆಯಿಂದ. ಮತ್ತು ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಮನಸ್ಸಿಗೆ ಬಂದಂತೆ ಮಾತನಾಡುವುದರ ಮೂಲಕ ಇದೇ ಜನ ನಮ್ಮ ಹೆಣ್ಣುಮಕ್ಕಳಿಗೆ ಪೇಟೆ ಒಳ್ಳೆಯದು ಅನ್ನಿಸೋದಕ್ಕೆ ಕಾರಣರಾದವರೂ ಇದೇ ಜನ. ಈ ಮಾತನ್ನು ಒಬ್ಬ ತಾಯಿಯಾಗಿ ಯೋಚನೆಮಾಡಿ ಹೇಳಲಿಕ್ಕೆ ಬೇಸರವೆನ್ನಿಸುತ್ತದೆ. ಹಳ್ಳಿಯ ಹುಡುಗರಿಗೆ ಹುಡುಗಿಯರ ಕೊಡಲು ಹಿಂದೇಟು ಹಾಕುತ್ತಿರುವುದು ಹುಡುಗಿಯ ಕಾರಣಕ್ಕಲ್ಲ. ಹುಡುಗನ ಕಾರಣಕ್ಕೂ ಅಲ್ಲ. ಅಂತ ಒಂದು ತಲೆಮಾರಿನ ತಾಯಂದಿರು ಈ ಹಳ್ಳಿಯ ಬದುಕಿನಲ್ಲಿ</span><br />
<span style="font-size: large;">ಪಟ್ಟ ಕಷ್ಟ ಕಾರ್ಪಣ್ಯಗಳ ಪ್ರತಿಫಲವಿದು. ಇಲ್ಲಿ ಸೊಸೆಯಂದಿರು ಮಗಳಾಗುವುದು ಬಹಳ ಅಪರೂಪ. ಇತ್ತೀಚೆಗೆ ಎಷ್ಟು ಸುಧಾರಿಸಿದೆ ವ್ಯವಸ್ಥೆ ಬದಲಾಗಿದೆ ಎಂದುಕೊಂಡರೂ</span><br />
<span style="font-size: large;">ಇಲ್ಲಿ ಹೆಂಗಸರಿಗಿರುವ ಗೌರವ ಎಷ್ಟು ಎಂಬುದು ಇಲ್ಲಿಯೇ ಬದುಕುವ ಎಲ್ಲ ಹೆಣ್ಣುಗಳ ಅನುಭವ. ಯಾವ ತಾಯಿಯಾದರೂ ತನ್ನ ಕಷ್ಟ ಮಗಳಿಗೆ ಬರದಿರಲಿ. ಅವಳು ಗೌರವಯುತವಾಗಿ ಬದುಕಲೆಂದು ಆಶಿಸಿ ವಿದ್ಯೆ ಆ ಮೂಲಕ ಹೊರ ಪ್ರಪಂಚದ ಬೆನ್ನು ಬಿದ್ದರೆ ಅದು ಯಾರ ತಪ್ಪು? ಬೆಂಕಿಯಿಂದ ಬಾಣಲೆಗೆ ಕಳಿಸುತ್ತಿದ್ದೇವೆ ಎಂಬ ಜ್ಞಾನ ಕೂಡ ಇರದ ಮುಗ್ಧ ತಾಯಂದಿರ ಕತೆಯಿದು. ಮಠವೆಂಬ ಪವಿತ್ರ ಕ್ಷೇತ್ರದಲ್ಲಿ ತನ್ನ ಭಾವ ಭಕ್ತಿಗಳ ಶೃದ್ಧೆಯ ಕಂಡುಕೊಂಡ ನಮ್ಮೆಲ್ಲ ತಾಯಂದಿರಿಗೆ ಅಕ್ಕ ತಂಗಿಯರಿಗೆ</span><br />
<span style="font-size: large;">" ಮಠಕ್ಕೋಪವರೆಲ್ಲ ಇಂಥವರೇ" ಅಂತ ಮಾತನಾಡುವವರಿಗೆ ಪ್ರಜ್ಞೆ ಬೇಕು.</span><br />
<span style="font-size: large;"><br /></span>
<span style="font-size: large;"> ಇನ್ನು ಸ್ತ್ರೀ ಕುರಿತಾಗಿ ಇರುವ ಇನ್ನೂ ಅನೇಕ ಅಸಂಗತಿಗಳ ನಾವಿಲ್ಲಿ ಗಮನಿಸಬಹುದು. ಒಂದೆಡೆ ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಬಂಡಾಯವೇಳು ಎನ್ನುವ ಮನಸ್ಥಿತಿ. ಇನ್ನೊಂದೆಡೆ ಸ್ತ್ರೀ ಮಗುವಿನ ಸ್ಪರ್ಷದಿಂದಲೂ ಸಂನ್ಯಾಸ ಹಾಳಾಗುತ್ತದೆ ಎಂಬ ಗುಮಾನಿ! ಸಾವಿರಾರು ಸ್ತ್ರೀಯರು ಸೇರುವ ಎಲ್ಲರ ದನಿ ಭಾವಗಳಿಗಿಲ್ಲ ಬೆಲೆ. ಅನ್ಯಾಯವೇ ನಡೆದಿದ್ದರೆ ಅದಕ್ಕೂ ಒಂದು ಕಾರಣವಿರಬೇಕಲ್ಲವೆ? ನನ್ನಲ್ಲಿ ಅನೇಕರು ಹೇಳಿದ್ದಾರೆ. ನೀನು ಸ್ತ್ರೀ ಯರ ದನಿಯಾಗಬೇಕು. ಅವರ ಮೇಲಿನ ದೌರ್ಜನ್ಯ ಖಂಡಿಸಬೇಕು. ಅದನ್ನು ಬರೆಯಬೇಕು. ಕಾವ್ಯವನ್ನು ಖತ್ತಿಯಾಗಿಸಿಕೊಳ್ಳಬೇಕು ಎಂದೆಲ್ಲ. ಹಾಗಿದ್ದೂ ಅನ್ಯಾಯಕ್ಕೊಳಗಾದ ಗೆಳತಿಯ ಬದುಕಿಗೆ ನಾನು ನೀನು ಬಂಡಾಯವೇಳು. ಮನೆ ಬಿಟ್ಟು ಬಾ. ಕೇಸ್ ಹಾಕು. ಡೈವೋರ್ಸ ಕೊಡು ಅಂತ ಸಲಹೆ ನೀಡಲಾರೆ. ಯಾಕೆಂದರೆ ನನಗಿದರಲ್ಲಿ ನಂಬಿಕೆಯಿಲ್ಲ. ಅತೀ ಅನಿವಾರ್ಯದ ಹೊರತು ಸಂಬಂಧಗಳ ಬಿಟ್ಟು ಹೊರನಡೆಯುವಲ್ಲಿ ಗೆಲುವು ಖಂಡಿತ ಇಲ್ಲ. ಅದರ ಬದಲು ಆತ್ಮವಿಶ್ವಾಸ ಬೆಳೆಸಿಕೋ. ನಿನ್ನ ಹಣ ನೀನು ದುಡಿ. ಬದುಕಿನ ಹೊಸಹೊಸ ದಾರಿ ನೋಡು. ಗಟ್ಟಿಯಾಗಿ ನಿಲ್ಲು. ನಿನ್ನವರೆಲ್ಲರ ಹೆಗಲಾಗು. ಮಕ್ಕಳಿಗೆ ಬದುಕು ಕೊಡು</span><br />
<span style="font-size: large;">ನಂಬಿದ ತತ್ವಗಳ ಆಚರಿಸು. ಅಂತ ಸಲಹೆ ಕೊಡುತ್ತೇನೆ. ಅನ್ಯಾಯ ನಡೆಯುತ್ತದೆ ಅಂತಾದರೆ ಅದು ನಮ್ಮ ದೌರ್ಬಲ್ಯದಿಂದ. ಅದನ್ನು ನಾವೇ ಗೆದ್ದುಕೊಂಡ ದಿನ ಯಾರಿಗೆ ಯಾರೂ ಅನ್ಯಾಯ ಮಾಡಲಾಗದು. ಬಲಪ್ರದರ್ಶನಕ್ಕೆ ಹೊರಟವರ ವಿರುದ್ಧ ಇದು ಪ್ರಯೋಜನಕ್ಕೆ ಬರದಿರಬಹುದು. ಆದರೆ ಬದುಕಿಗೆ ನಮ್ಮಂತ ಹಳ್ಳೀ ಜನರ ವಾಸ್ತವಕ್ಕೆ ಇದೇ ಸೂಕ್ತ ಅನ್ನಿಸುತ್ತದೆ ನನಗೆ.</span><br />
<span style="font-size: large;"><br /></span>
<span style="font-size: large;"><br /></span>
<span style="font-size: large;"> ಬಂಡಾಯವಾದಿಗಳ ಕುರಿತಾಗಿ ಒಂದು ಮಾತು ಹೇಳಲೇಬೇಕು. ಸ್ನೇಹಿತನೊಬ್ಬ ನನ್ನ ಪ್ರೊಫೈಲ್ ನಲ್ಲಿ ಇತ್ತೀಚೆಗೆ ಅವರೇ ಕಾಣಿಸುತ್ತಿದ್ದಾರೆ ಅಂತ ನನಗೆ ಎಚ್ಚರಿಕೆ ಹೇಳಿದ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳುವವರೆಗೂ ನನಗೆ ಯಾರೂ ವಿರೋಧಿಗಳಲ್ಲ. ನಾನ್ಯಾರನ್ನು ವಿನಾಕಾರಣ ದ್ವೇಷಿಸಲಾರೆ. ಆದರೆ ಆಗಲೇ ಹೇಳಿದಂತೆ ಮಾದ್ಯಮಗಳು ಹೇಗೆ ತನ್ನ ಮಿತಿಮೀರುವಿಕೆಯಿಂದ ರೇಜಿಗೆ ಹುಟ್ಟಿಸುತ್ತವೆಯೋ ಹಾಗೆ ಮಿತಿ ಮೀರುವ ಭಾಷೆ, ಟ್ಯಾಗ್ ಗಳು ಇನ್ನೊಬ್ಬರ ದೂಷಣೆ, ಬೈಗುಳ ಇದೇ ಇದ್ದರೆ ಅವರು ಯಾರೇ ಇರಲಿ ನಾನು ಬ್ಲಾಕ್ ಮಾಡುತ್ತೇನೆ. ನನಗೆ ನನ್ನ ನೆಮ್ಮದಿಯ ಕೆಡಿಸುವಂತ ಪೋಸ್ಟ್ ಗಳನ್ನು ನನ್ನ ಪ್ರೊಫೈಲ್ ನಲ್ಲಿ ನೋಡುವುದು ಇಷ್ಟವಾಗುವುದಿಲ್ಲ.ಇದರಿಂದಾಗಿ ಕೆಲವರನ್ನು ಬ್ಲಾಕ್ ಮಾಡುವುದು ಅನಿವಾರ್ಯವಾಗುತ್ತದೆ. ಅವರು ಲೆಪ್ಟಸ್ಟ್ ಗಳೇ ಆಗಬೇಕೆಂದೇನಿಲ್ಲ.</span><br />
<span style="font-size: large;"><br /></span>
<span style="font-size: large;"> ನಗು ತರಿಸುತ್ತವೆ ಒಮ್ಮೊಮ್ಮೆ. ಬಹುಶಃ ಭೈರಪ್ಪನಂತ ಸಾಹಿತಿ ಬ್ರಾಹ್ಮಣ ಸಮಾಜದ ಒಳಗಿನ ಹುಳುಕು ಕೊಳಕನ್ನೆಲ್ಲ ಸಾದೃಶ್ಯವಾಗಿ ವಿವರಿಸಿದಂತೆ ಮನುಷ್ಯನೊಳಗಿನ ತಣ್ಣಗಿನ ಕಾಮ ಕ್ರೌರ್ಯ ವಿವರಿಸಿದಂತೆ ಇನ್ಯಾರೂ ವಿವರಿಸಿಲ್ಲ. ಅಥವಾ ನಾನು ಓದಿಲ್ಲ. ಆದರೆ ಅವರನ್ನು ಎಡಪಂಥೀಯ ಸಮಾಜ ಒಪ್ಪುವುದಿಲ್ಲ. ಈ ಪಂಥೀಯರ ಸಿದ್ಧಾಂತದ ನೆಲೆ ಯಾವುದು ಎಂಬುದು ನನಗೀಗಲೂ ನಿದರ್ಿಷ್ಟವಾಗಿ ಗೊತ್ತಿಲ್ಲ. ಬ್ರಾಹ್ಮಣರನ್ನು ಮಾತ್ರ ದ್ವೇಷಿಸುವುದೇ? ಅಥವಾ ಬ್ರಾಹ್ಮಣ ಸಿದ್ಧಾಂತದವಿರೋಧಿಗಳೇ? ಸಮಾಜ ಸಿದ್ಧಾಂತ ಈ ಶತಮಾನದಲ್ಲಿ ಅನೇಕ ಬದಲಾವಣೆ ಕಂಡಿದೆ. ಬ್ರಾಹ್ಮಣನೊಬ್ಬ ಮಾಂಸ ತಿಂದರೆ ಮಧ್ಯ ಸೇವಿಸಿದರೆ ಸಮಾನತೆ ಸಾಧಿಸಿದಂತಾಯಿತೆಂದೆ? ಅಥವಾ ಇತರೆ ಸಮಾಜದಲ್ಲಿ ಅನ್ಯಾಯ ಅಧರ್ಮ ಜಾತಿ ದೌರ್ಜನ್ಯಗಳೇ ಇಲ್ಲವೆಂದೆ? ಬ್ರಾಹ್ಮಣ ಬ್ರಾಹ್ಮಣದಲ್ಲೂ ಪಂಥ ಮತ ಸಂಸ್ಕೃತಿ ಬೇಧವಿದೆ. ಇತರೆ ಜನರಲ್ಲೂ ಇದೆ. ಎಲ್ಲರಲ್ಲೂ ಒಂದು ಮಾನವೀಯ ಸಿದ್ಧಾಂತ ಬೆಳೆಸುವ ಯಾವ ಸಿದ್ದಾಂತ ನಮಗಿದೆ ಹೇಳಿ? ಇರುವ ವ್ಯವಸ್ಥೆಯಲ್ಲಿ ಒಬ್ಬರೊಬ್ಬರನ್ನು ಗೌರವಿಸುವುದನ್ನು ಕಲಿಸಬೇಕಾದ ಶಿಕ್ಷಣ ಅದೇ ನೆಲಕಚ್ಚಿದೆ. ಎಷ್ಟೋ ಬ್ರಾಹ್ಮಣರು ಬ್ರಾಹ್ಮಣ್ಯ ಬಿಟ್ಟಾಗಿದೆ. ಏನು ಸಾಧಿಸಿದರು ಅವರೆಲ್ಲ? ಅಥವಾ ಉಳಿದವರಿಗೆ ಏನು ಸಿಕ್ಕಿದೆ ಅದರಿಂದ? ಈ ಎಲ್ಲ ಹೊಡೆದಾಟ ತಿಕ್ಕಾಟ, ಚಚರ್ೆ ಇನ್ಯಾವುದರಿಂದಲೂ ಸಮಾಜದ ನೈತಿಕಮೌಲ್ಯ ಬೆಳೆದಿದೆಯೇ? ಎಲ್ಲ ಧರ್ಮದಲ್ಲೂ ಎಲ್ಲ ಜಾತಿಯಲ್ಲೂ ಒಂದು ನೈತಿಕ ಸಿದ್ಧಾಂತವೆಂದರೆ ಪಾಲಿಸಬೇಕಾದ ಕಾನೂನು. ಅದನ್ನಾದರೂ ನಾವು ಪಾಲಿಸುತ್ತೇವೆಯೇ? ಮನುಷ್ಯನೊಳಗಿನ</span><br />
<span style="font-size: large;">ಯಾವ ಬೆಂಕಿಯ ಕರಗಿಸುವುದು ಇವೆಲ್ಲ? ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವ ಮೊದಲು ಯೋಚಿಸಬೇಕು. ಹಾಗಿದ್ದರೆ ಒಂದಷ್ಟು ಜನರ ನಂಬಿಕೆ, ವಿಶ್ವಾಸ, ಶೃದ್ಧೆಯ ಬಗ್ಗೆ ಮಾತನಾಡುವ ಮೊದಲು ಎಷ್ಟು ಯೋಚಿಸಬೇಡ? ಅದರಲ್ಲೂ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವವರ ಮಾತಿಗೆ ಖಡಿವಾಣ ಅಗತ್ಯವಿದೆ. ಸತ್ಯ ಎಂದಿಗೂ ಸತ್ಯವೇ.</span><br />
<span style="font-size: large;">ನಾವು ಹೇಳಿದರೆ ಮಾತ್ರ ಸತ್ಯವಲ್ಲ. ಅದು ನಮಗೆ ನಮ್ಮ ತಿಳುವಳಿಕೆಗೆ ನಿಲುಕಿದ್ದಾದರೆ ವಿಶ್ವಾಸವಿಡಬೇಕು. ಬೆಳಕು ಬಂದೇ ಬರುತ್ತದೆ. ವಿಶ್ವಾಸವಿಲ್ಲದಿದ್ದರೆ ಕಾದು ನೋಡಬೇಕು.</span><br />
<span style="font-size: large;">ಅಪ್ರಬುದ್ಧ ಹೇಳಿಕೆಗಳ ಕೊಟ್ಟು ಸತ್ಯದ ಬೆಳಕಿಗೆ ನಾವೇನೋ ದೊಡ್ಡ ದೀಪ ಹಿಡಿದಿದ್ದೇವೆ ಎಂಬ ಭ್ರಮೆಗೊಳಗಾಬಾರದು. ಎಲ್ಲರಿಗೂ ಅವರವರ ಸತ್ಯ ನಂಬಿಕೆಗಳು ಇದ್ದೇ ಇರುತ್ತವೆ.ಹಿರಿಯರು ಹೇಳಿದ ಮಾತು ನೆನಪಿಸಿಕೊಳ್ಳಬೇಕಿಲ್ಲಿ. ಕಣ್ಣಾರೆ ಕಂಡರೂ ಪರಾಮಶರ್ಿಸಿ ನೋಡು ಎನ್ನುವ ಮಾತು ಸತ್ಯ.. ನಾವು ನೋಡುವುದಕ್ಕಿಂತ ತಿಳಿದಿರುವುದಕ್ಕಿಂತ</span><br />
<span style="font-size: large;">ಅಥರ್ೈಸಿಕೊಂಡಿರುವುದಕ್ಕಿಂತ ಬೇರೆಯಾದುದು ಕೂಡ ಇರಬಹುದು. ಬೇರೆಯವರ ವಿಚಾರಗಳ ಹಗುರಾಗಿಸುವುದಕ್ಕಿಂತ ನಮ್ಮಷ್ಟಕ್ಕೆ ಸುಮ್ಮನಿರುವುದು ಲೇಸಲ್ಲವೆ?</span><br />
<span style="font-size: large;"><br /></span>
<span style="font-size: large;"><br /></span>
<span style="font-size: large;"> ಈ ಹೊತ್ತಿಗಿಷ್ಟು. ಮತ್ತೆಂದಾದರೂ ಸಿಗೋಣ ಇದೇ ಸರೋವರದ ತೀರದಲ್ಲಿ..</span><br />
<span style="font-size: large;"><br /></span>
<span style="font-size: large;"><br /></span>
<span style="font-size: large;"><br /></span>
<span style="font-size: large;"><br /></span>
<span style="font-size: large;"><br /></span>
<span style="font-size: large;"> </span><br />
<span style="font-size: large;"><br /></span>
<span style="font-size: large;"> </span></div>
maanasa saarovrahttp://www.blogger.com/profile/14088976224552347105noreply@blogger.com5tag:blogger.com,1999:blog-7191814811569941492.post-70341190044148394432014-08-06T02:27:00.003-07:002014-08-06T02:29:35.448-07:00ಚೌಕಟ್ಟಿನೊಳಗಿನ ಚಿತ್ರ...<div dir="ltr" style="text-align: left;" trbidi="on">
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh1WSD_5FissLv938Rkb0Bzanzjm-xvBZxCv_IOgX33x6XgfbswJ8XPNTZIN_e_aL-LzLzUXQ1P-XvrWZurVYcrzeQVRb-vhjB-2v_1m_oicVSR6F8VgBCo-lUyKXLNG3W2JHKyiTE1fCQ/s1600/1367809231746.jpg" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEh1WSD_5FissLv938Rkb0Bzanzjm-xvBZxCv_IOgX33x6XgfbswJ8XPNTZIN_e_aL-LzLzUXQ1P-XvrWZurVYcrzeQVRb-vhjB-2v_1m_oicVSR6F8VgBCo-lUyKXLNG3W2JHKyiTE1fCQ/s1600/1367809231746.jpg" /></a></td></tr>
<tr><td class="tr-caption" style="text-align: center;">ಚಿತ್ರ ಕೃಪೆ: ಅಂತರ್ಜಾಲ</td></tr>
</tbody></table>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span style="font-size: large;"><b>ಇತ್ತೀಚೆಗೆ ತುಂಬಾ ವಿಷಯಗಳ ಗೋಜಲು ತುಂಬಿಕೊಳ್ಳುತ್ತಿದೆ! ಅಧ್ಯಾತ್ಮ, ಆತ್ಮ, ಕರ್ಮ, ನಂಬಿಕೆ, ಶೃದ್ಧೆ, ಪೃಕೃತಿ, ಭೌತಿಕ ಬದುಕು, ಸಮಾಜ, ನೈತಿಕ ಪ್ರಜ್ಞೆ, ಕಷ್ಟ, ಸುಖ, ಮಾನವತೆ, ಮಾನವೀಯ ಮೌಲ್ಯಗಳು, ಧರ್ಮಕರ್ಮ ಸಂಬಂಧ, ನಿರ್ವಹಣಾ ಕೌಶಲ, ಅಂತಿಮ ಸತ್ಯ, ಸಾವು, ಮುಕ್ತಿ, ಬ್ರಹ್ಮತ್ವ ಹೀಗೆ ನೂರಾರು... ಇಷ್ಟೊಂದು ವಿಷಯಗಳ ತರ್ಕಬದ್ಧ ವಿಶ್ಲೇಷಣೆಯಾಗಲೀ ಅಧ್ಯಯನವಾಗಲೀ ಒಮ್ಮೇಲೆ ಸಾಧ್ಯವಿರುವ ಮಾತಲ್ಲ. ಶಾಸ್ತೃಗಳ ಓದತೊಡಗಿದರೆ ಬದುಕು ಅಸ್ತವ್ಯಸ್ತವಾಗುವಷ್ಟು ಅಗಾಧ ಮುಳುಗುವಿಕೆಯಿದೆ ಅಲ್ಲಿ. ಹಲವು ಬಾರಿ ಬದುಕಿಗೆ ಅನ್ವಯಿಸಿ ಕೂಡ ಅನ್ವಯಿಸಲಾಗದ ವಿಚಿತ್ರ ಸನ್ನಿವೇಶಗಳ ಎದುರಲ್ಲಿಟ್ಟುಕೊಂಡು ಯಾವ ತಾತ್ವಿಕ ನೆಲೆಯಲ್ಲಿ ಕೊನೆಗೊಳ್ಳಬೇಕೆಂಬುದು ನಾವು ಹಾಕಿಕೊಳ್ಳಬೇಕಾದ ಚೌಕಟ್ಟು.</b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b> ಪೃಕೃತಿಯನ್ನು ಅನಂತವಾಗಿ ಆರಾಧಿಸುವ ಧ್ಯಾನ ನೆಲೆಯಾಗಿಸುವ ಮನಸ್ಸಿಗೆ ಪೃಕೃತಿಯೇ ಎಲ್ಲ ನೆಲೆಗಳ ಮೂಲ ಎನ್ನಿಸುತ್ತದೆ.ಹಾಗಾಗಿ ಅಧ್ಯಯನಕ್ಕೆ ಪೃಕೃತಿಗಿಂತ ಬೇರೆ ಏನು ಬೇಕು? ಎಲ್ಲ ತತ್ವಜ್ಞಾನಗಳು ಪೃಕೃತಿಯಲ್ಲೇ ನೆಲೆಯಾಗಿವೆ! ಸಣ್ಣದೊಂದು ಹುಳ ಕೀಟದಿಂದ ಹಿಡಿದು ಬೃಹ್ಮಾಂಡದ ಸೃಷ್ಟಿಯವರೆಗೆ ಎಲ್ಲವೂ ಪೃಕೃತಿದತ್ತವಾದುದು. ಕಾಲ ದೇಶ, ಭಾಷೆಗನುಗುಣವಾಗಿ ಎಷ್ಟೆಲ್ಲ ತತ್ವಜ್ಞಾನಗಳು ಇಲ್ಲಿ ನೆಲೆಯಾಗಿದ್ದರೂ ಪೃಕೃತಿ ತತ್ವ ಈ ಎಲ್ಲ ಕಾಲಕ್ಕೂ ಬದಲಾಗಿಲ್ಲ ಎಂಬುದು ಅದರ ನಿದರ್ಿಷ್ಟತೆಗೆ ಸಾಕ್ಷಿ ಎನ್ನಬಹುದು. ಅದಕ್ಕೆಂದೇ ವೇದಗಳು ಪೃಕೃತಿಯನ್ನೇ ಮೂಲವಾಗಿಟ್ಟುಕೊಂಡಿವೆ ಎಂಬುದು ವೇದಾಭ್ಯಾಸ ಮಾಡಿದವರಿಗೆ ಗೊತ್ತು.</b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b> ಹೆಣ್ಣು ಹೊನ್ನು ಮಣ್ಣು, ಮದ ಮೋಹ ಮತ್ಸರ, ಕಾಮ ಕ್ರೋದ, ಲೋಭ ಇವೆಲ್ಲವೂ ಸಹ ಪೃಕೃತಿಯಲ್ಲಿ ಒಂದಲ್ಲ ಒಂದು ವಿಧದಲ್ಲಿ ಸೇರಿಕೊಂಡಿವೆ. ಇವೆಲ್ಲದರಿಂದ ಮುಕ್ತವಾಗುವುದೆಂದರೆ ಪಂಚಭೂತಗಳಿಂದ ಮುಕ್ತವಾಗಿ ಅಂತಲರ್ೀನವಾಗುವುದು. ಅಷ್ಟು ಸಮಸ್ಥಿತಿ ಪೃಜ್ಞೆಯನ್ನು ಕಂಡುಕೊಳ್ಳುವ ಹಂಬಲಿಸಿದವರಿಗೆ ಈ ಪ್ರಪಂಚದ ಯಾವ ಬಂಧಗಳೂ ಕಾಡುವುದಿಲ್ಲ. ಇಲ್ಲಿ ಕಾಡುವಿಕೆ, ಚಿಂತನೆಯ ಹಂಬಲವಿದೆ ಅಂದರೆ ಅದು ಸಜೀವ ಲಕ್ಷಣ. ಚಂಚಲತೆಯ ಚಿತ್ತದಲ್ಲಿ ಹೊತ್ತಿಕೊಳ್ಳುವ ಸಾವಿರ ಕೋಟಿ ಭಾವನೆಗಳೇ ಇಲ್ಲಿಯ ಸರ್ವಕ್ಕೂ ಕಾರಣ ಈ ನಿಟ್ಟಿನಲ್ಲಿ ಯೋಚನೆ ಮಾಡುವಾಗೆಲ್ಲ ಗೀತೆ ನನಗೆ ತುಂಬಾ ಆದರ್ಶವೆನ್ನಿಸುತ್ತದೆ. ಅದು ಪ್ರಪಂಚದ ಯಾವ ಭಾವಗಳನ್ನೂ ನಿರ್ಲಜ್ಜವೆಂದು ಸಾರುವುದಿಲ್ಲ. ನಿಷೇಧೀಸುವುದೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಏನು ಮಾಡಬೇಕು ಏನು ಮಾಡಬಾರದು ಯಾಕಾಗಿ ಮಾಡಬೇಕು ಮತ್ತು ಯಾಕಾಗಿ ಮಾಡಬಾರದು ಎಂಬುದನ್ನು ದೃಷ್ಟಾಂತ ಸಹಿತವಾಗಿ ವಿವರಿಸುತ್ತದೆ. ಮತ್ತೆ ಕರ್ತವ್ಯವನ್ನೂ ಕರ್ಮವನ್ನೂ ಮಾಡುವುದರ ಉದ್ದೇಶ ಫಲಾಫಲಗಳ ನಿರೀಕ್ಷೆಯಲ್ಲ. ಫಲಾಫಲಗಳು ನಿರಪೇಕ್ಷತೆಯಿಂದಲೇ ಸಿದ್ದಿಸುವ ಬಗೆಯನ್ನು ಹೇಳುತ್ತದೆ. ಎಲ್ಲಿಯೂ ಬೃಹ್ಮತ್ವಕ್ಕಾಗಿ ಕರ್ಮವನ್ನು ತೊರೆಯುವುದನ್ನು ಹೇಳುವುದಿಲ್ಲ. ಎಲ್ಲಾ ಕರ್ಮಗಳೂ ಬೃಹ್ಮತ್ವ ಸಿದ್ಧಿಗಾಗೇ ಎಂಬುದನ್ನು ಹೇಳುತ್ತದೆ. ಮುಕ್ತಿ ಮಾರ್ಗವನ್ನು ಕರ್ತವ್ಯದ ದಾರಿಯಲ್ಲಿ ನಡೆಸುವ ಗೀತೆ ಎಲ್ಲ ಧರ್ಮದವರಿಗೂ ಆದರ್ಶ, ಎಲ್ಲ ಕಾಲಕ್ಕೂ ಅನ್ವಯ, ಎಲ್ಲ ಮನುಷ್ಯರಿಗೂ ನೆಮ್ಮದಿ ಕೊಡಬಲ್ಲ ಶಕ್ತಿ.</b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b> ಯಾವ ಕೆಲಸವಾಗಲೀ ಯಾವ ಜಾತಿಯಾಗಲೀ ಯಾವ ನೀತಿಯಾಗಲೀ ಸತ್ಯ ಮಾರ್ಗವನ್ನು ಬಿಡಬೇಡ ಅನ್ನುವ ಭೌತಿಕ ಬದುಕಿನ ಸೂತ್ರ ಅದು. ಪಾಪ ಪುಣ್ಯಗಳ ಹೊರೆಯಿಳಿಸಿ ಮನಸು ಹಗುರಾಗಿಸಕೊಳ್ಳುವ ಗಂಗಾ ನದಿಯಂತೆ ಅದು. ಗೀತೆ ಯಲ್ಲಿ ಸ್ವಯಂ ಶ್ರೀ ಕೃಷ್ಣ ನೇ ಅಪೂರ್ವವಾದ ಭೌತಿಕ ಬದುಕಿನ ಎಲ್ಲ ಕೊಳೆಗಳ ತೊಳೆದುಕೊಳ್ಳುವ ಮಾರ್ಗ ತೋರುತ್ತಾನೆ. ಮತ್ತು ಕರ್ಮಫಲಗಳ ಎಲ್ಲವನ್ನೂ ದೈವ ಸಂಭೂತನಲ್ಲಿ ಅಪರ್ಿಸಿ ನಿರಾಳವಾಗುವ ದಾರಿಯಿದೆ ಅಲ್ಲಿ..</b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b> ಇಷ್ಟಕ್ಕೂ ಪ್ರಪಂಚವೆಲ್ಲ ಅರಿಯದ ಯಾವುದೋ ಒಂದು ಶಕ್ತಿಯ ಹಿಂದೆ ಓಡುತ್ತಿದೆ ಎಂಬುದು ನಿಜ. ಅದು ವಿಜ್ಞಾನ ಹುಡುಕುತ್ತಿರುವ ಸೃಷ್ಟಿಯ ಮೂಲವಾಗಿರಬಹುದು ಸಾಮಾನ್ಯ ಮನುಷ್ಯ ಹುಡುಕುತ್ತಿರುವ ನೆಮ್ಮದಿಯ ಮೂಲವಾಗಿರಬಹುದು. ಮೂಲತಃ ಅರಿವು ಎಂಬುದು ಮುಗಿಯದ ನಿಧಿ. ಯಾವುದನ್ನೋ ನಂಬಿಬಿಟ್ಟರೆ ಅದು ನೆಮ್ಮದಿಗೆ ದಾರಿ ಅಭೌತಿಕವಾದ ಯಾವುದನ್ನಾದರೂ ದೇವರ ಹೆಸರಿನಲ್ಲಿ ನಂಬಿಕೊಂಡರೆ ಅದು ನೆಮ್ಮದಿಯ ಮೂಲವಾದರೆ ಆ ದೇವರಿಗೆ ಯಾವ ಹೆಸರಿಟ್ಟರೇನು? ಒಬ್ಬೊಬ್ಬರ ಧ್ಯಾನಕ್ಕೆ ಒಂದೊಂದು ರೀತಿ ತೆರೆದುಕೊಳ್ಳುವ ಪೃಕೃತಿಯೇ ಅದನ್ನು ಸಾಕ್ಷೀಕರಿಸಿದೆ. ಉರಿಯುತ್ತಿರುವ ಕಲಿಕಾಲವೆಂಬುದು ಒಂದಷ್ಟು ಸಂಕರಗಳ ಬೆಂಕಿ ಹೊತ್ತಿಸಿದೆ! ವಿಚಿತ್ರವೆಂದರೆ ಕಾಲ ಕೆಟ್ಟಷ್ಟೂ ಸತ್ಯದ ಮೌಲ್ಯ ಹೆಚ್ಚು. ಉಳಿಸಿಕೊಳ್ಳುವ ಮನೋಬಲವೊಂದಿದ್ದರೆ ಸಾಧನೆಗೆ ವಯಸ್ಸು ಜಾತಿ ಲಿಂಗ ಬೇಧಗಳ ಕಟ್ಟುಪಾಡಿಲ್ಲ ಇಂದು. ಆದರೆ ಮೌಲ್ಯ ನಿಧರ್ಾರ ಮಾಡಿಕೊಳ್ಳಬಹುದಾದ ಮನುಷ್ಯರಿಗೆ ಮೌಲ್ಯದ ಶಿಕ್ಷಣವೇ ಇಲ್ಲ ಎನ್ನುವುದು ದುರಂತ.</b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b> ತತ್ವಾದರ್ಶಗಳ ಅಧ್ಯಯನಕ್ಕಿಂತ ಬದುಕಿನ ಅಧ್ಯಯನವೇ ಹೆಚ್ಚು ಆಪ್ತ ಅನ್ನಿಸುವುದಾಗ. ನೋವು ನಲಿವುಗಳಿಗೆ ಮುಕ್ತನಾಗುವುದಕ್ಕಿಂತ ನೋವು ನಲಿವುಗಳ ಅನುಭವಿಸಿ ಗೆಲ್ಲುವುದು ಹೆಚ್ಚು ಅರ್ಥಪೂರ್ಣ ಅನ್ನಿಸತೊಡಗಿದಾಗ ಬದುಕಿನ ಜೀವಂತಿಕೆಗೆ ಮತ್ತೆ ಬೆರಗಾಗುತ್ತೇನೆ. ಅಹಂಗಳ ನೋಯಿಸಿಕೊಂಡು ಬದುಕಿಸಿಕೊಳ್ಳುವ ಪ್ರೀತಿಯ ಕುರಿತು ಚಿಂತಿಸುತ್ತೇನೆ, ಎಲ್ಲವನ್ನೂ ಮೀರಿ ನಗುವಾಗ ಒಳಗೆಲ್ಲೋ ಮತ್ತೆ ಪೃಕೃತಿಯ ಧ್ಯಾನ ತೆರೆದುಕೊಳ್ಳುತ್ತದೆ. ಆನಂದವೆಂಬ ಬೆಳದಿಂಗಳಿಗೆ ತೆರೆದುಕೊಂಡರೆ ಮತ್ತೆ ಅಹಂನ ಪರದೆ ಹರಿಯುತ್ತದೆ. ಮೌನ ಮಾತು ಎಲ್ಲವೂ ಹರಿಯುವ ನದಿಯಾಗುತ್ತದೆ... ಎಲ್ಲವನ್ನೂ ದೂರೀಕರಿಸಿ ಯಾವುದೋ ಗುಹೆಯಲ್ಲಿ ಅಡಗಿ ಕಂಡುಕೊಳ್ಳುವ ಶಾಂತಿಗಿಂತ ಪ್ರಜ್ಞಾಸ್ಥಿತಿಯಲ್ಲಿ </b></span></div>
<span style="font-size: large;"><b>ಯುದ್ಧಭೂಮಿಯಲ್ಲಿ ನಿಂತು ಸ್ಥಿತಪ್ರಜ್ಞತೆಯ ಹುಡುಕುವ ಈ ಯತ್ನವೇ ಸಾಕು ಎನ್ನಿಸುತ್ತದೆ! ದಾರಿ ದುರ್ಗಮವಾದಷ್ಟೂ ಪಯಣ ರೋಚಕ...</b></span><br />
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<span style="font-size: large;"><b><br /></b></span></div>
<div style="text-align: justify;">
<br /></div>
</div>
maanasa saarovrahttp://www.blogger.com/profile/14088976224552347105noreply@blogger.com4tag:blogger.com,1999:blog-7191814811569941492.post-58396897935195713802014-02-21T01:50:00.001-08:002014-03-21T04:29:10.607-07:00ವ್ಯಕ್ತಿತ್ವವೆಂಬ ಹೂ ಅರಳುವಾಗ..<div dir="ltr" style="text-align: left;" trbidi="on">
<div style="text-align: justify;">
<span style="color: orange;"> </span></div>
<div style="text-align: justify;">
<span style="color: orange;"><br /></span></div>
<div style="text-align: justify;">
<span style="color: orange;"><br /></span></div>
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjPHz21qfX6GBQjyJrHOQ9yknUu6g-iUwlHwHDBdq9IAjHaLkB6oAz3pRbwikp_iZvNIgOrbbxjypbIQqMrVJN7Vd3JB1C_Zg1Xh68pxmE6AbX2TlWZXYBf-jVDc_nRVTfXTTZIOTUFKYY/s1600/1618631_711464568885301_547773627_n.jpg" imageanchor="1" style="margin-left: auto; margin-right: auto;"><span style="color: orange;"><img border="0" src="https://blogger.googleusercontent.com/img/b/R29vZ2xl/AVvXsEjPHz21qfX6GBQjyJrHOQ9yknUu6g-iUwlHwHDBdq9IAjHaLkB6oAz3pRbwikp_iZvNIgOrbbxjypbIQqMrVJN7Vd3JB1C_Zg1Xh68pxmE6AbX2TlWZXYBf-jVDc_nRVTfXTTZIOTUFKYY/s1600/1618631_711464568885301_547773627_n.jpg" height="320" width="240" /></span></a></td></tr>
<tr><td class="tr-caption" style="text-align: center;"><span style="color: orange;">ಚಿತ್ರಕೃಪೆ: ಅಂತರ್ಜಾಲ</span></td></tr>
</tbody></table>
<div style="text-align: justify;">
<span style="color: orange;"><br /></span></div>
<div style="text-align: justify;">
<span style="color: orange;"> <span style="font-size: large;"> ಬದುಕೆಂಬ ಬಣ್ಣ ಬದಲಿಸುವ ಗೋಸುಂಬೆಯ ಎದುರು ಸ್ವಾಥರ್ಿ ಮನಸ್ಸಿನ ಮಾತುಗಳನ್ನು ಬಿಚ್ಚಿಡತೊಡಗಿದರೆ ಅದು ಕೇಳುಗರಿಗೆ ಅಸಹನೀಯವೋ ಗೊತ್ತಿಲ್ಲ. ಒಮ್ಮೊಮ್ಮೆ ಹೀಗನ್ನಿಸುತ್ತದೆ. ಇಷ್ಟು ವರ್ಷಗಳಲ್ಲಿ ನನಗಾಗಿ ನಾನು ಬದುಕಿದ ಎಷ್ಟು ಕ್ಷಣಗಳಿವೆ? ಪ್ರತಿಯೊಬ್ಬರೂ ಸ್ವಾಥರ್ಿಗಳೇ ಆದರೂ ನಮಗಾಗಿ ನಾವು ಬದುಕುವ ಕ್ಷಣಗಳ ಮಾತ್ರ ಹುಡುಕಾಡಬೇಕು! ಅದೂ ಈ ಹೆಣ್ಣುಕುಲದಲ್ಲಂತೂ ಯಾವಾಗ ನೋಡಿದರೂ ಇನ್ನೊಬ್ಬರಿಗಾಗಿಯೇ ಬದುಕುವ ಮತ್ತು ಅದರಲ್ಲೇ ಸಾರ್ಥಕತೆಯ ಹುಡುಕುವ ಹುಚ್ಚು ಭ್ರಮೆಯಲ್ಲೇ ಕಳೆದುಬಿಡುವ ದಿನಗಳೇ ಹೆಚ್ಚು. ನನ್ನನ್ನೂ ಸೇರಿಸಿಯೇ ಈ ಮಾತನ್ನು ಹೇಳುತ್ತಿದ್ದೇನೆ. ನಮಗೆ ನಮಗಾಗಿ ಬದುಕಲು ಬರುವುದಿಲ್ಲ. ನಮ್ಮ ಕುಶಿಗಳೆಲ್ಲ ನಮ್ಮ ಭಾವಗಳೆಲ್ಲ ಅಪ್ಪ ಅಮ್ಮನ ಮೇಲೆ, ಅಣ್ಣ ತಮ್ಮಂದಿರ ಮೇಲೆ, ಅಕ್ಕ ತಂಗಿಯರ ಮೇಲೆ, ಪ್ರೀತಿಸಿದವನ ಮೇಲೆ, ಗಂಡನ ಮೇಲೆ, ಮಕ್ಕಳ ಮೇಲೆ, ಒಟ್ಟೂ ಅವರಿವರ ಮೇಲೆ ಡಿಪೆಂಡೆಡ್ ಕುಶಿಗಳು. ಎಲ್ಲ ಭಾವಗಳಲ್ಲಿ ಯಾರೋ ನಮ್ಮನ್ನು ಕುಶಿಪಡಿಸಬೇಕಾಗಿದೆ ವಿನಃ ಅವರು ಮುನಿದರೆ ನಮಗೆ ನೋವು! ಅವರು ಸೋತರೆ ನಮಗೆ ಹಿಂಸೆ, ಅವರು ಅವಮಾನಿಸಲ್ಪಟ್ಟರೆ ನಾವು ಕುದಿಯುತ್ತೇವೆ! ಹೀಗೇ ಹೀಗೇ ಈ ಪಟ್ಟಿ ಬೆಳೆಯುತ್ತದೆ. ಕೊನೆಗೊಂದು ದಿನ ನನಗಾಗಿ ಯಾರಿಲ್ಲ ಮತ್ತು ನನಗಾಗಿ ನಾ ಒಂದು ದಿನವೂ ಬದುಕಲೇ ಇಲ್ಲ ಎಂಬ ಹಳಹಳಿಕೆಯೊಂದು ಹಾಗೇ ಉಳಿದುಬಿಡುತ್ತದೆ.</span></span></div>
<div style="text-align: justify;">
<span style="color: orange; font-size: large;"><br /></span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEg-lM7b0z9YHtlGYwljJfu7CVcBxQoMJTsT-gycTiuHa-NHTtfkijyrFT8mVcsx-D2iGO3QRdJ-UgsyCRw2WslAF3AZw5ZLs5LNhzvLvED8cR7JGcWt58lGksia47fMXwJcQe4UwRF7KUE/s1600/1249809794063.jpg" imageanchor="1" style="margin-left: 1em; margin-right: 1em;"><span style="color: orange; font-size: large;"><img border="0" src="https://blogger.googleusercontent.com/img/b/R29vZ2xl/AVvXsEg-lM7b0z9YHtlGYwljJfu7CVcBxQoMJTsT-gycTiuHa-NHTtfkijyrFT8mVcsx-D2iGO3QRdJ-UgsyCRw2WslAF3AZw5ZLs5LNhzvLvED8cR7JGcWt58lGksia47fMXwJcQe4UwRF7KUE/s1600/1249809794063.jpg" /></span></a></div>
<div style="text-align: justify;">
<span style="color: orange; font-size: large;"><br /></span></div>
<div style="text-align: justify;">
<span style="color: orange; font-size: large;"><br /></span></div>
<div style="text-align: justify;">
<span style="color: orange; font-size: large;"> ಕೆಲವರ ಅಭಿಪ್ರಾಯದಲ್ಲಿ ಸಂಸಾರದಲ್ಲಿ ಹೆಣ್ಣು ಸ್ವಲ್ಪ ಅಧಿಕಾರಯುತವಾಗಿ ಮಾತನಾಡುತ್ತಿದ್ದರೆ ಅವಳದ್ದೇ ದಬರ್ಾರು ಎಂಬ ಮಾತು ಉಳಿಯುಯತ್ತದೆ. ಹಾಗಿದ್ದೂ ಯಾಕೋ ಈ ದಬರ್ಾರು ಅವಳ ಸಂಭ್ರಮವಾಗಲು ಸಾಧ್ಯವಿಲ್ಲ. ಅದೂ ಕೂಡ ಜವಾಬ್ಧಾರಿ ಅಷ್ಟೇ. ಮತ್ತೆಲ್ಲೋ ಅವಳು ಕುಶಿಯೆಂದರೆ ಇದೇ ಎಂಬ ಭ್ರಮೆಗೆ ಒಳಗಾಗುತ್ತ ಅದನ್ನೇ ಆಯ್ಕೆ ಮಾಡಿಕೊಂಡುಬಿಡುತ್ತಾಳೆ. ನಮ್ಮ ನಡೆ ನುಡಿ, ಬಟ್ಟೆ ಬರೆ, ನಮ್ಮ ಕೇಶ ವಿನ್ಯಾಸದಿಂದ ಹಿಡಿದು ಕಾಲಿನ ಚಪ್ಪಲಿಯವರೆಗೆ ಇನ್ನೊಬ್ಬರಿಗೆ ಚಂದ ಕಾಣಲೆಂಬ ಬಯಕೆಯ ಬೆನ್ನಲ್ಲೇ ಸಂತಸ ಹುಡುಕುತ್ತೇವೆ ವಿನಃ ನನ್ನ ಇಷ್ಟ ಎಂಬುದುಹೇಗಿರುತ್ತದೆ ಎಂದು ಬಹಳ ಬಾರಿ ಯೋಚನೆಯೂ ಮಾಡಿರುವುದಿಲ್ಲ.</span></div>
<div style="text-align: justify;">
<span style="color: orange; font-size: large;"><br /></span></div>
<div style="text-align: justify;">
<span style="color: orange; font-size: large;">ಕೊಂಡುಕೊಳ್ಳುವ ಪ್ರತೀ ವಸ್ತುವಿನ ಜೊತೆಗೂ ಪಕ್ಕದಲ್ಲಿರುವವರ ಸಮ್ಮತಿಯ ನೋಟಕ್ಕೆ ನಾವು ಅಪೇಕ್ಷಿಸುತ್ತೇವೆ. ಮತ್ತು ನಮ್ಮ ವ್ಯಕ್ತಿತ್ವಕ್ಕೆ ನಮಗೆ ಕಂಫರ್ಟ ಯಾವುದು ಕೊಡುತ್ತದೆಂಬುದನ್ನು ಆಮೇಲೆ ಯೋಚನೆ ಮಾಡುತ್ತೇವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಇಷ್ಟಾನಿಷ್ಟಗಳು ಇರುತ್ತವೆ. ಜೊತೆಗೆ ಒಂದು ಒಪ್ಪ ಓರಣ ಎನ್ನಿಸುವ ವ್ಯಕ್ತಿತ್ವಕ್ಕೊಂದು ಪೂರಕ ಬಾಹ್ಯ ಬೆಡಗೂ ಇರುತ್ತದೆ. ಇವೆರಡನ್ನೂ ಒಟ್ಟಾಗಿ ಅಲಂಕರಿಸಿದಾಗ ಒಳಗಿನ ಕುಶಿ ಇಮ್ಮಡಿಯಾಗುತ್ತದೆ. ಬದುಕು ರಮ್ಯವೆನ್ನಿಸುತ್ತದೆ. ಇದು ಎಲ್ಲರಿಗೂ ಅನ್ವಯಿಸುವ ಮಾತು. ಮದುವೆಯವರೆಗೂ ಹುಡುಗಿಯರು ಅಷ್ಟೋ ಇಷ್ಟೋ ಅಂದಚಂದ ಅಂತ ಬಣ್ಣ ಬಳಿಯುವುದುಂಟು. ಒಂದು ಮಗುವಾಗುವವರೆಗೂ ಈ ಸಂಭ್ರಮ ಮುಂದುವರೆಯುತ್ತದೆ. ಆಮೇಲೆ ಮತ್ತೆ ಶುರು, ಜವಾಬ್ದಾರಿ ಹೆಚ್ಚುತ್ತದೆ ಎಂಬುದನ್ನು ಒಪ್ಪುತ್ತೇನಾದರೂ ಜವಾಬ್ಧಾರಿ ನಮ್ಮ ವ್ಯಕ್ತಿತ್ವದ ಸೌಂದರ್ಯಹರಣವನ್ನಂತೂ ಕೇಳುವುದಿಲ್ಲ. ಕೆಲವರ ಲೆಕ್ಕದಲ್ಲಿ ಸೌಂದರ್ಯ ಎನ್ನುವುದು ಮೂರೂ ಹೊತ್ತು ಕನ್ನಡಿಯ ಮುಂದೆ ನಿಲ್ಲುವ ನಮ್ಮ ಸೀರಿಯಲ್ಗಳ ನಾಯಕಿಯರ ತರ ಎಂದುಕೊಂಡುಬಿಡುತ್ತಾರೆ. ನಾನು ಹೇಳುತ್ತಿರುವುದು ಎಷ್ಟು ಜನರಿಗೆ ಅರ್ಥವಾಗುತ್ತದೆ ಎಂದು ತಿಳಿಯದಿದ್ದರೂ ಸೌಂದರ್ಯ ಕೆಲಸಗಳ ಒಪ್ಪ ಓರಣ ಹಾಗೂ ನಮ್ಮ ನಮ್ಮ ವ್ಯಕ್ತಿತ್ವ ಸಮಯ ಸಂದರ್ಭಕ್ಕೆ ತಕ್ಕಂತ ವೇಷಭೂಷಣ,ಸರಳತೆ, ಕ್ರಿಯಾಶೀಲತೆಯಲ್ಲಿ ಮಿಳಿತವಾಗಿರುತ್ತದೆ. ಗಾಢವಾದ ಡಾಳಾದ ಮೇಕಪ್ ಬಳಸಿದಾಕ್ಷಣ ಸುಂದರವಾಗಿ ಕಾಣುತ್ತೇವೆ ಎಂಬುದು ಮತ್ತೊಂದು ಹುಚ್ಚುಕಲ್ಪನೆ. ಹಿತ ಮಿತವಾದ ಮೇಕಪ್ ಮತ್ತು ಅಲ್ಪ ಸ್ವಲ್ಪ ಬದಲಾವಣೆ ಇವು ದಿನ ನಿತ್ಯದ ಬದುಕನ್ನು ಕುಶಿ ಕುಶಿಯಾಗಿಡುತ್ತವೆ. ವಿನಾಕಾರಣ ಎದುರಾಗುವ ಯಾರೋ ಒಬ್ಬರು ಕಣ್ಣರಳಿಸಿ ನಮ್ಮನ್ನು ನೋಡಿ ಮುಗುಳ್ನಗುತ್ತ ಸಾಗಿದರೆ ಆ ದಿನ ಉಲ್ಲಾಸವೆನ್ನಿಸುತ್ತದೆ. ಹಾಗೆ ನಾವಿರಬೇಕೆಂದರೆ ನಾವು ಇನ್ನೊಬ್ಬರಿಗಾಗಿ ಬದುಕುವುದು ಅಲಂಕರಿಸಿಕೊಳ್ಳುವುದಕ್ಕಿಂತ ನಮಗಾಗಿ ಅಲಂಕರಿಸಿಕೊಳ್ಳಲು ಕಲಿಯಬೇಕು. ನಮ್ಮಲ್ಲಿ ಇನ್ನೊಂದು ಗುಣವಿದೆ. ಬೇರೆಯವರು ಅಲಂಕರಿಸಿಕೊಂಡ ಪರಿಗೆ ಅವರ ಅಂದಕ್ಕೆ ನಾವು ಬೆರಗಾಗುತ್ತೇವೆ. ವಾಹ್! ಎಂಬ ಉದ್ಘಾರ ತೆಗೆಯುತ್ತೇವೆ. ಅದನ್ನೇ ನಾವು ಮಾಡಲು ಹಿಂಜರಿಯುತ್ತೇವೆ. ಒಳಗೊಳಗೇ ಇಷ್ಟವಿದ್ದರೂ ಇನ್ಯಾರೋ ಏನೋ ಅಂದುಕೊಳ್ಳಬಹುದೆಂಬ ಭಯಕ್ಕೆ ಮುಖವಾಡ ಹಾಕಿಕೊಳ್ಳುತ್ತೇವೆ!! </span></div>
<div style="text-align: justify;">
<span style="color: orange; font-size: large;"><br /></span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhXmPfQrAno_Qsl5-p42dZelTfVw05ZwA2eZe-gdO7T8QbRybhQ7FCIAdnQGUCWJWORZUJb69ZPf2-wbA220krz7nwsSFapNDSh1iDu3zndI3UAy2QfK3exZRCBxFHcQJYckzng3OXOMwk/s1600/DSC00548.JPG" imageanchor="1" style="margin-left: 1em; margin-right: 1em;"><span style="color: orange; font-size: large;"><img border="0" src="https://blogger.googleusercontent.com/img/b/R29vZ2xl/AVvXsEhXmPfQrAno_Qsl5-p42dZelTfVw05ZwA2eZe-gdO7T8QbRybhQ7FCIAdnQGUCWJWORZUJb69ZPf2-wbA220krz7nwsSFapNDSh1iDu3zndI3UAy2QfK3exZRCBxFHcQJYckzng3OXOMwk/s1600/DSC00548.JPG" height="240" width="320" /></span></a></div>
<div style="text-align: justify;">
<span style="color: orange; font-size: large;"><br /></span></div>
<div style="text-align: justify;">
<span style="color: orange; font-size: large;"> ಇನ್ನಷ್ಟು ಜನರಿಗೆ ಸಮಯಪ್ರಜ್ಞೆ ಕಡಿಮೆ. ಅವರಿಗೆ ಯಾವ ಸಂದರ್ಭಕ್ಕೆ ಯಾವ ಬಟ್ಟೆ ಧರಿಸಬೇಕೆಂಬ ಅಲ್ಪ ಜ್ಞಾನವಿರುವುದಿಲ್ಲ. ಮದುವೆಯಂತ ಸಾಂಪ್ರದಾಯಿಕ ಸಮಾರಂಭಗಳಿಗೆ ಝೀನ್ಸ್ ಧಾರಿಯಾಗಿ ಪ್ರವೇಶಿಸುತ್ತಾರೆ. ತಪ್ಪಲ್ಲ. ಅಲ್ಲಿ ಎಲ್ಲರೂ ತನ್ನನ್ನೇ ನೋಡುತ್ತಾರೆ ಎಂಬುದಕ್ಕೆ ಅನ್ ಕಂಪರ್ಟ ಅನುಭವಿಸುತ್ತಾರೆ! ಬೆಟ್ಟ ಗುಡ್ಡ ಹತ್ತುವ ಸಾಹಸಕಾರೀ ಪ್ರವಾಸಗಳಲ್ಲಿ ಸೀರೆಯುಡುತ್ತಾರೆ. ಅಲ್ಲಿಯೂ ಅನ್ಕಂಪರ್ಟ ಅನುಭವಿಸುತ್ತಾರೆ. ಇನ್ನು ಕೆಲವರು ಶಾಪಿಂಗ್ ಹೋಗುವಾಗ ಭರ್ಜರಿ ರೇಶ್ಮೆ ಸೀರೆ ಹಾಗೂ ದೇವಸ್ಥಾನಗಳಿಗೆ ಪ್ಯಾಂಟು ಶರ್ಟ ಧರಿಸಿ ಇಂಥದ್ದೇ ಪಾಡು ಪಡುತ್ತಾರೆ. ನಿಶೇಧವೇನಿಲ್ಲ. ಆದರೆ ಸಮಯ,ಋತುಮಾನಹಾಗೂ ಸಂದರ್ಭಗಳಿಗೆ ತಕ್ಕಂತೆ ಉಡುಗೆ ತೊಡುಗೆ, ಅಲಂಕಾರವಿರುವುದರಿಂದ ಹೆಚ್ಚು ಆರಾಮಾವಾಗಿ ಇರಬಹುದು.</span></div>
<div style="text-align: justify;">
<span style="color: orange; font-size: large;"><br /></span></div>
<div style="text-align: justify;">
<span style="color: orange; font-size: large;"> ಪ್ರೆಶ್ ಆಗಿ ಕಾಣುವುದು ಅಪರಾಧವೇನಲ್ಲ. ಮನೆಯಲ್ಲಂತೂ ಸಾದಾ ಸೀದಾ ಎನ್ನುತ್ತ ಗಬ್ಬಾಗಿ ಇರುವವರ ಮುಖದಲ್ಲಿ ಈ ಪ್ರೆಶ್ ನೆಸ್ ಹುಡುಕಿದರೂ ಸಿಗುವುದಿಲ್ಲ. ಬಹುಶಃ ತೀರಾ ತೀರಾ ಮೇಕಪ್ ಮಾಡಿಕೊಳ್ಳುವವರು ಹಾಗೂ ತೀರಾ ಗಬ್ಬಾಗಿ ಇರುವವರು ಇಬ್ಬರನ್ನೂ ಯಾರೂ ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ಇನ್ನೊಂದು ಮಾತು ಸೇರಿಸಲೇ ಬೇಕು. ಮಕ್ಕಳು ದೊಡ್ಡವರಾಗುತ್ತಿದ್ದಂತೆ ನಾವೇನೂ ಮುದುಕಿಯರಾಗಿಬಿಡುವುದಿಲ್ಲ. ವಯಸ್ಸಿಗನುಗುಣವಾಗಿ ಸ್ವಲ್ಪ ಸಂತೋಷವಾಗಿ ನಗುಮೊಗದ, ಸರಳ ಅಲಂಕಾರದ ಅಮ್ಮಂದಿರನ್ನು ಇಂದಿನ ಮಕ್ಕಳು ಇಷ್ಟಪಡುತ್ತಾರೆ. ಈ ಸಂದರ್ಭದಲ್ಲಿ ಪುರುಷರಿಗೂ ಒಂದು ಮಾತು ಹೇಳಲೇಬೇಕು. ಅಲಂಕಾರದಲ್ಲಿ ಅವರೇನು ಕಮ್ಮಿಯಿಲ್ಲ. ಡೀಸೆಂಟ್ ಅನ್ನಿಸೋ ಅಲಂಕಾರ ಅವರ ವ್ಯಕ್ತಿತ್ವವನ್ನೂ ಚಂದವಾಗಿಡುತ್ತದೆ. ಯಾವುದೇ ಇರಲಿ. ನಮ್ಮ ಮನಸ್ಸಿಗೆ ಕುಶಿಕೊಡುವ ಅಲಂಕಾರ ನಮ್ಮದಾಗಿರಲಿ. ಸಣ್ಣ ಪುಟ್ಟ ಬಯಕೆಗಳನ್ನೂ ಯಾರಿಗಾಗಿಯೋ ಅದುಮಿಟ್ಟು ಕನವರಿಸುವುದ ಬಿಟ್ಟು ಚಂದವಾಗಿರಿ ಎಂಬುದಷ್ಟೆ ಇಂದಿನ ಮಾತು.</span></div>
<div style="text-align: justify;">
<span style="color: orange; font-size: large;"><br /></span></div>
<div style="text-align: justify;">
<span style="color: orange; font-size: large;">ಸಿಗೋಣ ಮತ್ತೆ.</span></div>
<div style="text-align: justify;">
<span style="color: orange;"><br /></span></div>
<div style="text-align: justify;">
<span style="color: orange;"><br /></span></div>
<div style="text-align: justify;">
<br /></div>
</div>
maanasa saarovrahttp://www.blogger.com/profile/14088976224552347105noreply@blogger.com4tag:blogger.com,1999:blog-7191814811569941492.post-8340757380905067792014-01-30T04:15:00.003-08:002014-01-30T04:17:53.455-08:00 ಬಿಕ್ಕುಗಳ ಸದ್ದಡಗಿ..<div dir="ltr" style="text-align: left;" trbidi="on">
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಕಾಯ್ದ ಕನಸುಗಳ ಮೇಲೆ</span></div>
<div style="text-align: justify;">
<span style="font-size: large;">ಸುರಿದ ವಿರಹದ ಉರಿಗೆ</span></div>
<div style="text-align: justify;">
<span style="font-size: large;">ಸತ್ವಗಳ ತತ್ವಗಳ </span></div>
<div style="text-align: justify;">
<span style="font-size: large;">ಹೇಳಿಕೊಟ್ಟವರಾರು?</span></div>
<div style="text-align: justify;">
<span style="font-size: large;">ಮರುಳೆ!</span></div>
<div style="text-align: justify;">
<span style="font-size: large;">ಮತ್ತಷ್ಟು ಕಾಯುತ್ತಿದೆ</span></div>
<div style="text-align: justify;">
<span style="font-size: large;">ನಿನ್ನ ಸಹಾನುಭೂತಿಯ </span></div>
<div style="text-align: justify;">
<span style="font-size: large;">ನಗು,</span></div>
<div style="text-align: justify;">
<span style="font-size: large;">ನಗುವಿನಾಚೆಯ </span></div>
<div style="text-align: justify;">
<span style="font-size: large;">ಒಣ ಬಿಗು!</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬರೀ ಬಿಕ್ಕುಗಳ ಸದ್ದಡಗಿ,</span></div>
<div style="text-align: justify;">
<span style="font-size: large;">ಸಂಗದ ಅಮಲಿನ ಒಳಗೆ</span></div>
<div style="text-align: justify;">
<span style="font-size: large;">ಎಲ್ಲೋ ಅಡಗಿ, </span></div>
<div style="text-align: justify;">
<span style="font-size: large;">ಮತ್ತಡಗಿ</span></div>
<div style="text-align: justify;">
<span style="font-size: large;">ಮತ್ತೂ ಅಡಗಿದೆ. ಕಾಣದಾದೆ!</span></div>
<div style="text-align: justify;">
<span style="font-size: large;">ಕಡೆಗೂ ಸಿಗಲಿಲ್ಲ</span></div>
<div style="text-align: justify;">
<span style="font-size: large;">ಅಡಗಲು ತಾಣ</span></div>
<div style="text-align: justify;">
<span style="font-size: large;">ಒಳಗಿಂದ ಎದ್ದ</span></div>
<div style="text-align: justify;">
<span style="font-size: large;">ಉರಿಗೆ ಹೊರಗಿಂದ</span></div>
<div style="text-align: justify;">
<span style="font-size: large;">ಯಾವ ತಂಪು ಸೊಂಪು?</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಚಿಗುರೆಲೆಯ ಕಂಪಿಗೆ</span></div>
<div style="text-align: justify;">
<span style="font-size: large;">ಕರಗಿದೆ, </span></div>
<div style="text-align: justify;">
<span style="font-size: large;">ಕಲ್ಲಾಗಿ ಕರಗಿದ್ದ</span></div>
<div style="text-align: justify;">
<span style="font-size: large;">ಲಾವಾರಸಗಳೆಲ್ಲ...</span></div>
<div style="text-align: justify;">
<span style="font-size: large;">ಹೊಸಕಿದ್ದ ಹೂವು</span></div>
<div style="text-align: justify;">
<span style="font-size: large;">ತೆನೆ ಹೊತ್ತ ಬಂಗಾರ!</span></div>
<div style="text-align: justify;">
<span style="font-size: large;">ಗೊಂಚಲ ತೊನೆಯುವ</span></div>
<div style="text-align: justify;">
<span style="font-size: large;">ಕಾಲ ಗರ್ಭ!</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಬೆಳಕು ಕತ್ತಲೆಯ ಒಳಗೊಳಗೆ</span></div>
<div style="text-align: justify;">
<span style="font-size: large;">ಹುಟ್ಟಿಕೊಂಡಿದೆ</span></div>
<div style="text-align: justify;">
<span style="font-size: large;">ಮತ್ತೆರಡು ಕಣ್ಣುಗಳು</span></div>
<div style="text-align: justify;">
<span style="font-size: large;">ಕಾವ್ಯದ್ದೋ ಕಲ್ಲಿನದ್ದೋ!</span></div>
<div style="text-align: justify;">
<span style="font-size: large;">ನಗು</span></div>
<div style="text-align: justify;">
<span style="font-size: large;">ಮುಗುಳ್ನಗು</span></div>
<div style="text-align: justify;">
<span style="font-size: large;">ಮತ್ತೊಮ್ಮೆ </span></div>
<div style="text-align: justify;">
<span style="font-size: large;">ಸಾಕು ಅದನ್ನು </span></div>
<div style="text-align: justify;">
<span style="font-size: large;">ಮೂರು ಹೊತ್ತು..</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಯುಗ ಸಾವಿರ</span></div>
<div style="text-align: justify;">
<span style="font-size: large;">ಮತ್ತೆ ಸಾವಿರ</span></div>
<div style="text-align: justify;">
<span style="font-size: large;">ಒಮ್ಮೆ ಮಿಂಚು</span></div>
<div style="text-align: justify;">
<span style="font-size: large;">ಯಾವತ್ತೋ ಮಳೆ</span></div>
<div style="text-align: justify;">
<span style="font-size: large;">ಮತ್ತೆಲ್ಲಾ ಸಿಡಿಲು ಗುಡುಗಿನ</span></div>
<div style="text-align: justify;">
<span style="font-size: large;">ನಡುವೆ</span></div>
<div style="text-align: justify;">
<span style="font-size: large;">ಭಾವೋನ್ಮಾದ!</span></div>
<div style="text-align: justify;">
<span style="font-size: large;">ಲಯ-ಸೃಷ್ಟಿ ನಿರಂತರ..</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;">ಒಂದು ಕವಿತೆ ಬರೆಯುವಾಗ ಭಾವೋನ್ಮಾದ ಹೇಗಿರುತ್ತದೆಂದರೆ ಅದರ ಒಳಗಡೆ ನಾವೇ ಜೀವಂತವಾಗಿಬಿಡುತ್ತೇವೆ. ಈ ಕವಿತೆಯೊಂದಿಗೆ ಅಂತದ್ದೊಂದು ಭಾವದ ಜೊತೆ ಈ ಹೊತ್ತಿನ ಮಾತು.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ಕವಿತೆಗಳು ಜೀವ ಭಾವ ಸಂಚಲನಗಳೆಂಬದು ಸತ್ಯ. ಬರಹಗಳಿಗೆ ಜೀವ ಬರುವುದೇ ಬರೆಯುವವನೊಳಗೆ ಪಾತ್ರ ಎಷ್ಟು ಜೀವಂತವಾಗಿದೆ ಎಂಬ ಅಂಶದಿಂದ. ಹಾಗೆ ಪಾತ್ರಗಳನ್ನೆಲ್ಲ ವಾಸ್ತವದಲ್ಲಿ ಜೀವಿಸಿರದಿದ್ದರೂ ಅನುಭವಿಸಿ ಬರೆಯುವ ತಾಕತ್ತಿರುವವ ಒಳ್ಳೆಯ ಬರಹಗಾರ ಎನಿಸಿಕೊಳ್ಳುತ್ತಾನೆಂಬುದು ಒಂದು ಅನಿಸಿಕೆ. ಇನ್ನು ಕೆಲವರ ಬದುಕೇ ಬಹಳಷ್ಟು ನೋವು ನಲಿವುಗಳ ಅನುಭವದ ಸಂಗಮ. ಅವರದನ್ನು ಅಷ್ಟೇ ತಾದಾತ್ಮ್ಯದಿಂದ ಬರೆದಾಗ ಆ ಬರಹಗಳು ಹೃದಯ ತಲುಪುತ್ತವೆ. ಎದೆಗಿಳಿಯುತ್ತವೆ. ಯಾವ ಒತ್ತಡಗಳಿಲ್ಲದೇ.. ಹಾಗಿದ್ದೂ ಅನುಭವದ ಬದುಕನ್ನೇ ಎಲ್ಲರೂ ಬರೆಯಲಾಗದೆಂಬುದು ನಿಜ. ಇಂದು ಒಂದಿಷ್ಟು ನೋವು, ರೊಚ್ಚು, ಮನಸಿನೊಳಗಿನ ಅಸಹನೆಯನ್ನೆಲ್ಲ ಬರಹಕ್ಕಿಳಿಸಿದರೆ ಅಥವಾ ಅದೇ ಭಾವಗಳ ಬಿಚ್ಚಿಟ್ಟರೆ ಸಾಕು ಬರಹಗಾರ ಸದ್ದಿಲ್ಲದೇ ಪ್ರಸಿದ್ದಿಗೆ ಬಂದು ಬಿಡುತ್ತಾನೆ. ಅನ್ಯಾಯ, ಬಲಾತ್ಕಾರ, ಅಕ್ರಮಗಳ ವಿರುದ್ಧ ಒಂದಿಷ್ಟು ದನಿ ಎತ್ತಿದರೆ ಅದು ಯಾವುದೋ ಎದೆಯ ಕೂಗಾಗಿ ಪರಿಣಮಿಸಿ ಬಹುಬೇಗ ಅವನ ಕೂಗು ಆಲಿಸುವ ಒಂದು ಸಮುದಾಯ ಎಚ್ಚೆತ್ತುಕೊಳ್ಳುತ್ತದೆ. ಮತ್ತೆ ಕೆಲವು ಬಾರಿ ಪ್ರತಿಭೆಗಳಿಗಿಂತ ಇವು ಹೆಚ್ಚು ಆತ್ಮೀಯವೂ ಸ್ಪಂದನೀಯವೂ ಆಗಿರುವ ಕಾರಣಕ್ಕೆ ಸಾಹಿತ್ಯದಲ್ಲಿ ಈ ಪ್ರಕಾರಕ್ಕೆ ಹೆಚ್ಚು ಮನ್ನಣೆ ದೊರೆತರೆ ತಪ್ಪಲ್ಲ. ಹಾಗಿದ್ದೂ ಈ ಒಳಗಿನ ಕೂಗು ಒಂದು ಸ್ವಂತಿಕೆಯೊಂದಿಗೆ ಸಾರ್ವಜನಿಕವಾಗಬೇಕೆಂಬುದು ಆಶಯ. ಕಣ್ಣಿಗೆ ಕಾಣುವ ಯಾವುದೇ ಪಾತ್ರಗಳು ಒಂದು ಹಂತದಲ್ಲಿ ಸ್ವತಂತ್ರವಾಗಿ ನಿಲ್ಲಬೇಕೆಂದರೆ ಅದು ಲೇಖಕನ ಒಳಗಿಂದ ಹೊರಟ ಅವನ ಕೂಗಾಗದೇ ಪಾತ್ರದ ಕೂಗು ಅನ್ನಿಸಬೇಕು. ಹೀಗೆ ಬರೆಯುವ ಹಂತದಲ್ಲಿ ನಿಜಕ್ಕೂ ಪ್ರತಿಭೆ ಪಾತ್ರವಾಗುತ್ತದೆ. ಮತ್ತು ಮನುಷ್ಯ ಭಾವಗಳು, ಬದುಕುಗಳನ್ನು ಚಿತ್ರಿಸ ಹೊರಟ ಬರಹಗಾರ ನಿಸ್ಪೃಹತೆಯಿಂದ ನಿಂತು ನೋಡುವ ನಿರೂಪಕನಾಗುತ್ತಾನೆ. ಇದು ಸತ್ವಶೀಲ ಬರಹಕ್ಕೆ ಮುನ್ನುಡಿ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ಇವೆಲ್ಲ ವಿಚಾರಕ್ಕೆ ಬರಲು ಒಂದು ಚಿಕ್ಕ ಕಾರಣವಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏನೋ ಒಂದು ಪುಟ್ಟ ಮೊಟ್ಟ ಮೊದಲ ಬಾರಿಗೆ ಬರೆದಿದ್ದೆ ನಾನು."ಗೃಹಿಣಿ ಗೃಹಮುಚ್ಯತೆ" ಅನ್ನುವ ತುಂಬ ಚಿಕ್ಕ ಬರಹ ಅದು. ಅವತ್ತು ಅದೇ ಬರಹಕ್ಕೆ ನನಗೆ ಬಂದ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತೆಂದರೆ ಇವತ್ತೂ ಆಶ್ಚರ್ಯವಾಗುತ್ತದೆ. ಪೋನ್, ಅಂತಜರ್ಾಲ ಹಾಗು ಮೊಬೈಲ್ಗಳ ಕಾಲವಲ್ಲ ಅದು. ಹಾಗಿದ್ದೂ ಬರಹ ಸ್ತ್ರೀ ಪರ ಎಂಬ ಕಾರಣಕ್ಕೆ ಒಂದು ಪುಟ್ಟ ಸಂಚಲನ ಹುಟ್ಟುಹಾಕಿತ್ತು.. ಅದಾದ ನಂತರ ಯಾಕೋ ಈ ಪರ ಮತ್ತು ವಾದಗಳನ್ನು ಹಿಂದೆಬಿಟ್ಟು ಕೇವಲ ಓದು ಮತ್ತು ಬರಹ ಅಷ್ಟನ್ನೇ ರೂಢಿಸಿಕೊಳ್ಳಲು ಮನಸು ಮಾಡಿದ ಮೇಲೆ ಬಹುಶಃ ಎಷ್ಟೋ ಬರಹಗಳು ಪ್ರಕಟವಾದರೂ ಆ ಸಂಚಲನವನ್ನು ಹುಟ್ಟಿಸಲಿಲ್ಲ ನನ್ನ ಸುತ್ತ ಮುತ್ತ. ಅದಾದ ಇತ್ತೀಚಿನ ವರ್ಷಗಳಲ್ಲಿ ತುಂಬಾ ಲೇಖಕರನ್ನು ವಿದ್ವಾಂಸರನ್ನು ಭೇಟಿಯಾಗಿ ನನ್ನ ಬರಗಳನ್ನು ಓದಲು ಕೊಟ್ಟಿದ್ದೇನೆ. ಮೊದಲ ಓದಿಗೆ ಮೆಚ್ಚಿಕೊಂಡ ಕೆಲವರು, ತಪ್ಪು ಒಪ್ಪುಗಳನ್ನು ತಿದ್ದಿದ ಅನೇಕರಿದ್ದಾರೆ. ಹಾಗೇ ಬಹಳಷ್ಟು ಬಾರಿ ಯಾವುದೋ ಗೊತ್ತಿಲ್ಲದ ಅಥವಾ ಸ್ಪಷ್ಟವಾಗಿ ಹೇಳದೇ ಇರುವ ಸತ್ಯವನ್ನು ಬರೆಯಬೇಕೆಂಬ ಒತ್ತಡ ಹೇರಿದವರಿದ್ದಾರೆ. " ನೀವು ಮಹಿಳೆಯರು, ಮಹಿಳೆಯರ ದನಿಯಾಗಬೇಕು. ಅವರ ಕುರಿತು, ಅವರ ಸಮಸ್ಯೆಗಳ ಕುರಿತು ಬರೆಯಬೇಕು. ನಿಮ್ಮಲ್ಲಿರುವ ಲೋಪ ದೋಷಗಳ ಎತ್ತಿ ತೋರಿಸಬೇಕು" ಒಟ್ಟಾರೆ ಅರ್ಥ ಸ್ತ್ರೀ ಪರ ಕಾಳಜಿಯುಳ್ಳ ಬರಹಗಳನ್ನು ಬರೆ ಎಂಬುದನ್ನು ನೇರವಾಗಿಯಲ್ಲದೆ ಅಸ್ಪಷ್ಟವಾಗಿ ಹೇಳಿದ್ದಾರೆ. ಹಾಗೆ ಅಂತಹ ಬರಹಗಳ ಬರೆಯಬಾರದೆಂಬ ಕಟ್ಟಳೆಗಳೇನೂ ನನಗಿರಲಿಲ್ಲ. ಹಾಗಿದ್ದೂ ಯಾವುದೇ ಒಂದು ವಾದಗಳಿಗೆ ಬ್ರಾಂಡ್ ಆಗುವುದನ್ನು ಮನಸು ಒಪ್ಪಿರಲಿಲ್ಲ. ಅದಕ್ಕೆಂದೇ ಎಷ್ಟೋ ಬಾರಿ ಸ್ತ್ರೀ ಪರವಾದ ನನ್ನ ನಿಲುವನ್ನು ತಡೆಹಿಡಿದದ್ದಿದೆ. ಮುಖ್ಯವಾಗಿ ನಾವು ಬದುಕುವ ಸಮಾಜದಲ್ಲಿ ನಾವು ಹಾಗೆ ಯಾರ ಪರ ಆಗುವುದನ್ನು ಮನಸು ಒಪ್ಪುವುದಿಲ್ಲ. ಎಲ್ಲರಲ್ಲೂ ಕೆಟ್ಟದ್ದಿದೆ. ಎಲ್ಲರಲ್ಲೂ ಒಳ್ಳೆಯದಿದೆ. ಒಳ್ಳೆಯತನ ಮತ್ತು ಕೆಟ್ಟತನ, ಕ್ರೌರ್ಯ ಮತ್ತು ಪ್ರೀತಿ ಎಲ್ಲ ಸಮಾಜದಲ್ಲೂ ಇರುವುದನ್ನು ನೋಡುತ್ತಿದ್ದೇನೆ. ಹೆಣ್ಣು ಗಂಡು ಬೇಧವಿರದೇ ಎಲ್ಲ ಜಾತಿ ಪಂಥ ಧರ್ಮಗಳಲ್ಲೂ ಇವೆರಡೂ ಇವೆ. ಸಾಹಿತ್ಯ ಸಮಾಜದ ಈ ಮುಖವಾಗಬೇಕೆಂಬ ಹಂಬಲದಲ್ಲಿ ಎಲ್ಲೋ ಒಳಗಿನ ಒತ್ತಡಗಳಿಗೆ ಬೇಲಿ ಕಟ್ಟಿದ್ದಿದೆ.</span></div>
<div style="text-align: justify;">
<span style="font-size: large;"> </span></div>
<div style="text-align: justify;">
<span style="font-size: large;"> ಮೇಲಿನ ಕವಿತೆಯ ಒಳಗೆ ಇಂತದ್ದೊಂದು ಪರಭಾವ ತತ್ವವಿದೆ. ಕವಿತೆ ಓದುಗರ ಭಾವಕ್ಕೆ ಬಿಟ್ಟಿದ್ದು. ಹಾಗಿದ್ದೂ ಸ್ಪಷ್ಟನೆ ಕೊಡುತ್ತಿರುವುದಕ್ಕೆ ಕ್ಷಮಿಸಿ. ಒಬ್ಬಳು ಬಲಾತ್ಕಾರಕ್ಕೊಳಗಾದ ಹೆಣ್ಣುಮಗಳ ಬದುಕಿನ ಭಾವ ಅದರಲ್ಲಿದೆ. ಪ್ರತಿ ಬಾರಿ ಕವಿತೆ ಬರೆದಾಗ, ಕಥೆಗಳು ಪ್ರಕಟವಾದಾಗಲೂ ಇದು ನಿಮ್ಮದೇ? ಎನ್ನುವ ಅಥವಾ ಅಂದುಕೊಳ್ಳುವ ಮಿತ್ರರಿಗೆ ಹೀಗೊಂದು ಮನವಿ ಮಾಡಬಹುದೇನೋ ಈ ಸಂದರ್ಭದಲ್ಲ. ಬರೆಯುವಾಗ ಎಲ್ಲ ಪಾತ್ರಗಳೂ ನಾವೇ.. ಆದರೆ ಬರಹಗಾರ ಮತ್ತು ಬರಹಗಳಿಗೆ ಬೇರೆಯದೇ ವ್ಯಕ್ತಿತ್ವವಿರುತ್ತದೆ. ಎಲ್ಲ ಪಾತ್ರಗಳನ್ನೂ ಜೀವಿಸಲು ಸಾಧ್ಯವಿಲ್ಲವಲ್ಲ! ಹಾಗಾಗಿ ಸೃಷ್ಟಿಸುವ ಪಾತ್ರಗಳ ಜೀವಂತಿಕೆ ಎಷ್ಟು ಎಂಬುದು ಬರಹಗಾರನ ಪ್ರತಿಭೆಯನ್ನು ನಿರ್ಣಯಿಸುವ ಪರೀಕ್ಷೆ. ಕೇವಲ ಜ್ಞಾನವನ್ನು ಬಿತ್ತರಿಸುವ ಬರಹಗಾರರಿಗೆ ಇದು ಅನ್ವಯವಾಗುವುದಿಲ್ಲ. ಪ್ರತೀ ಪಾತ್ರದ ಒಳಹೋಗುವ ಸೂಕ್ಷ್ಮತೆ ಇರುವ ಮತ್ತು ಪ್ರತಿಸೃಷ್ಟಿ ಮಾಡುವ ಬರಹಗಾರನಲ್ಲಿ</span></div>
<div style="text-align: justify;">
<span style="font-size: large;">ಒಬ್ಬ ವಿಮರ್ಶಕ, ಒಬ್ಬ ನಿರೂಪಕ, ಮತ್ತು ಹೊರನಿಂತು ತನ್ನ ಪಾತ್ರಗಳ ವೀಕ್ಷಿಸಬಲ್ಲ ಒಬ್ಬತತ್ವಜ್ಞಾನಿಯ ನಿಲರ್ಿಪ್ತತೆಯೂ ಇರಬೇಕಿದೆ. ಈ ಎಲ್ಲವನ್ನೂ ರೂಢಿಸಿಕೊಂಡವ ಕಾಲ ದೇಶಗಳ ಮೀರಿ ನಿಲ್ಲುವ ಸಾಹಿತಿಯಾಗುತ್ತಾನೆ. ಮತ್ತು ಕುವೆಂಪು ಅಡಿಗರಂತ ವೇದಾಂತಿಯೂ ಮಾನವತಾವಾದಿಯೂ ಆಗುತ್ತಾನೆ. ಅಂತಹ ಸಾಹಿತಿಗಳಲ್ಲಿ ಹೆಣ್ಣಿನೊಳಗಿನ ಕಣ್ಣೀರು, ಅಸಹಾಯತೆ, ದ್ವಂದ್ವ, ಗೊಂದಲ ಗಳು, ಬಡತನ, ಹಿಂಸೆ, ಕ್ರೌರ್ಯ ಎಲ್ಲವೂ ಪಾತ್ರಗಳಾಗುತ್ತವೆ. ಸಮಾಜದ ಅತಿ ಸೂಕ್ಷ್ಮ ಸಂಗತಿಗಳು ಕಥೆಗಳಾಗುತ್ತವೆ, ಎಲ್ಲೋ ನೊಂದರೆ, ರಕ್ತಪಾತಗಳಾದರೆ ಇವರ ಹೃದಯಗಳು ಮಿಡಿಯುತ್ತವೆ, ಮರುಗುತ್ತವೆ, ಕಂಬನಿ ಸುರಿಸುತ್ತವೆ. ಇಂತಹ ಸ್ವಾತಂತ್ರ್ಯ, ಲೇಖಕನದ್ದಾಗಿರಬೇಕು. ಒಂದು ಕಡೆ ಕಟ್ಟಿಕೊಳ್ಳದ ಮುಕ್ತ ತತ್ವದ ಮನಸು ಮಿಡಿಯುವ ಹೃದಯವಂತರ ಬರಹಗಳು ಪ್ರೌಢಿಮೆಯ ಹೊರತಾಗಿ ಸರಳತೆಯಿಂದಲೇ ಅನುಗಾಲ ಬಾಳುತ್ತವೆ.</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
<span style="font-size: large;"> ಈ ಸಂಜೆಗೆ ಇಷ್ಟು ಮಾತು. ನಿಮ್ಮ ಅನಿಸಿಕೆಗಳಿಗೆ ಸ್ವಾಗತ..</span></div>
<div style="text-align: justify;">
<span style="font-size: large;"><br /></span></div>
<div style="text-align: justify;">
</div>
</div>
maanasa saarovrahttp://www.blogger.com/profile/14088976224552347105noreply@blogger.com9tag:blogger.com,1999:blog-7191814811569941492.post-69931638081467712012013-12-27T01:57:00.001-08:002013-12-27T01:57:44.694-08:00 ಗೋವಿಂದ ಕತೆಯೊಳಗಿಂದ..<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEgA7K6iSYyO7gB8h5CvCOSJefzs0yC4GHRJ8zuRLxJXVhrAMIXMRSDfTjLunCoVKxdYRl5kXxHwNkD6_qRQXxV8mIZBZCftDvSH9snAyoViOhQtOr2YLFzJz1ReZliu7i_R5An6xjscbBY/s1600/133.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="313" src="https://blogger.googleusercontent.com/img/b/R29vZ2xl/AVvXsEgA7K6iSYyO7gB8h5CvCOSJefzs0yC4GHRJ8zuRLxJXVhrAMIXMRSDfTjLunCoVKxdYRl5kXxHwNkD6_qRQXxV8mIZBZCftDvSH9snAyoViOhQtOr2YLFzJz1ReZliu7i_R5An6xjscbBY/s320/133.jpg" width="320" /></a></div>
.<br />
<br />
ಭಾವನಾತ್ಮಕವಾದ ಮನಸು ಹೊತ್ತು ಬರೆಯಹೊರಟರೆ ಬುದ್ಧಿ ಸೋಲುತ್ತದೆ ಕೆಲವೊಮ್ಮೆ. ಪ್ರಜ್ಞೆ ಮಸುಕಾಗುತ್ತದೆ. ಹಾಗಾಗಬಾರದೆಂದರೆ ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಲೇಬೇಕು. ಈ ಕ್ಷಣದಲ್ಲಿ "ಗೋವಿಂದ" ಎಂಬುದು ಒಂದು ಭಾವನದಿ. ಅಲ್ಲಿಯ<br />
ಜೈಗೋಮಾತಾ, ಜೈಗೋಪಾಲಾ, ಎಂಬುವ ಜೈಕಾರಗಳಾಗಲಿ, ಅಂಬರಕೇರಲಿ ಅಂಬಾರವ ಎಂಬ ಅಮೃತ ನುಡಿಗಾನವಾಗಲೀ ಮೈ ಮನಸುಗಳ ಒಳಗೆ ನಶೆಯೋಪಾದಿಯಲ್ಲಿ ತುಂಬಿಕೊಂಡಿದೆ. ಅದು ನಶೆಯಲ್ಲ. ಐದು ದಿನಗಳು ಝೇಂಕರಿಸಿದ ನಾದಪ್ರಪಂಚದ ಅಮಲೆನ್ನಬಹುದು. ಈ ಅಮಲು ನಾಲ್ಕು ದಿನಕ್ಕೆ<br />
ಇಳಿದುಹೋಗಬಾರದೆಂಬ ಪ್ರಜ್ಞೆಯಲ್ಲಿ ಇದು ನರನಾಡಿಗಳಲ್ಲಿ ಹರಿಯಬೇಕಾದ ರಕ್ತವಾಗಲೀ ಎಂಬ ಆಶಯದೊಂದಿಗೆ ಮಾನಸ ಸರೋವರದಲ್ಲಿ ಪುಟ್ಟದೊಂದು ಅಲೆ. ಗುರುಚರಣಕ್ಕೆ ನುಡಿನಮನ. ಗೋವಿನ ಗೋವಿಂದನ ಪದತಲಕ್ಕೆ ಈ ಕುಸುಮ.<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEizLiu7UL43lNcUfKZB8ntVfhFWx3lg1XeAfVEEb7hJ4fiYXtNdIe_w-h5JBWpWgCQz7q2S9UaIeQlWvLBWNc4WmmtQ4p1b-9i5QBmnPi6MRfEglSlO2XjJCPgEcrxBFTwDtE4UTLcvfgg/s1600/582053_3403018071772_581454491_n.jpg" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEizLiu7UL43lNcUfKZB8ntVfhFWx3lg1XeAfVEEb7hJ4fiYXtNdIe_w-h5JBWpWgCQz7q2S9UaIeQlWvLBWNc4WmmtQ4p1b-9i5QBmnPi6MRfEglSlO2XjJCPgEcrxBFTwDtE4UTLcvfgg/s1600/582053_3403018071772_581454491_n.jpg" /></a></td></tr>
<tr><td class="tr-caption" style="text-align: center;">ಚಿತ್ರ ಕೃಪೆ ಅಂತರ್ಜಾಲ</td></tr>
</tbody></table>
<br />
<br />
<br />
<br />
<br />
<br />
ಕಡಿಮೆಯೆಂದರೆ ಪ್ರತಿ ದಿನ ಸಾವಿರ ಸಾವಿರ ಸಾವಿರ ಜನ ಸಾಗರೋಪಾದಿಯಲ್ಲಿ ಆಗಮಿಸಿ ಜಗಜನನಿ<br />
ಗೋ ಕತೆಯ ಆಲಿಸಿದರು. ಕಥೆಯ ಕೇಳೋ ಅಭ್ಯಾಸವಿಲ್ಲದವರೂ ಕೂತು ಕಥೆಯನ್ನಾಲಿಸಿದರು. ಹಾಡುಗಾರರ ಘನ ಕಂಠದಲ್ಲಿ ಮೊಳಗಿದ ಗೋ ಮಾತೆಯ ಕೂಗು ಕೇಳಿದರು. ಕೆಲವೊಮ್ಮೆ ಭಾವುಕರಾಗಿ<br />
ಕಂಗಳು ತೇವವಾದರೆ ಇನ್ನು ಕೆಲವೊಮ್ಮ ರಕ್ತ ಬಿಸಿಯಾಗಿ ಕುದಿದರು. ಗೋವಿನ ಹತ್ತು ಹಲವು ರೂಪಗಳ<br />
ಚಿತ್ರ, ಗಾನ, ಶ್ರವಣ ಹೀಗೆ ಆನಂದಿಸಿದರು. ಎಲ್ಲ ಮುಗಿಯಿತು. ಗುರು ಪೀಠದ ಮುಂದೆ ಸಂಕಲ್ಪವೂ ನಡೆಯಿತು. ಗೋ ಕಥೆ ಸಂಪನ್ನವಾಯಿತು.ಮಕ್ಕಳು ಮಹಿಳೆಯರು ಹಿರಿಯರು, ಕಿರಿಯರು ಗೋ ಜೈ ಜೈ<br />
ಧೇನು ಕಥಾ ಎಂದು ಕುಣಿದು ಕುಪ್ಪಳಿಸಿ ಎದೆ ಭಾವ ಜೀವದಲ್ಲಿ ಅದೊಂದು ಲಹರಿಯನ್ನು ತುಂಬಿಕೊಂಡು ಮನೆಯೆಡೆಗೆ ಮುಖಮಾಡಿದರು. ಹಲವರ ನಿರಂತ ಶ್ರಮ ಸೇವೆ ಅದೆಷ್ಟೋ ಜನರ<br />
ಕನಸು ಏನೇನೆಲ್ಲ ನನಸಾಗಿ ಈ ಗೋ ಕತೆಯೊಡನೆ ಸಂಪನ್ನವಾಯಿತೆಂಬುದಕ್ಕೆ ಲೆಕ್ಕವಿಲ್ಲ. ಆದರೆ ಇದೆಷ್ಟು ದಿನದ ನಶೆ? ಹೀಗೊಂದು ಪ್ರಶ್ನೆ ನನ್ನೊಳಗೆ ಏಳುವುದಕ್ಕೆ ಕಾರಣವಿದೆ.<br />
<br />
<br />
ಒಬ್ಬ ಸಾಮಾನ್ಯ ಗೃಹಿಣಿಯಾಗಿ, ಒಂದು ಸಮಾಜದ ಪ್ರತಿನಿಧಿಯಾಗಿ, ಸಹಜ ಮನೆಮನೆಗಳಲ್ಲಿ<br />
ಗೋವಿನೊಡನೆ ಹುಟ್ಟಿ ಒಡನಾಡಿ ಬೆಳೆದು ಇದೀಗ ಇದೇ ಗೋವಿನ ಬಗ್ಗೆ ಬರೆಯುವಾಗ ನನ್ನ ಮನೆಯಲ್ಲಿ<br />
ಒಂದು ಗೋವು ಕಟ್ಟಿ ಸಾಕಲಾಗದ ಸ್ಥಿತಿಯಲ್ಲಿ ನಾನೇನಾದರೂ ಮಾತನಾಡಿದರೆ ತಪ್ಪಾದೀತೇನೋ ಎನ್ನುವ ಒಳಗಿನ ತಾಕಲಾಟದಲ್ಲೇ ಗೋವೆಂಬ ಗೋವಿಂದನ ಕುರಿತು ನನ್ನೆರಡು ಮಾತುಗಳ ತಂದಿದ್ದೇನೆ ಈ ಸರೋವರದ ಅಂಚಿನಲ್ಲಿ. ಗೋವನ್ನು ಸಾಕಬೇಕೆಂಬುದು ಈ ಕ್ಷಣಕ್ಕೂ ಮನಸ್ಸಿನ ಭಾವ. ಆದರೆ ವಾಸ್ತವ?<br />
<br />
ಆಕಳು ತಂದರಾಯಿತೆ? ಅವುಗಳಿಗೆ ಬೇಕಾದ ಹುಲ್ಲು, ಹಿಂಡಿ, ಸಮಯ ಇವನ್ನೆಲ್ಲ ಎಲ್ಲಿಂದ<br />
ತರುವುದು? ಒಂದು ವೇಳೆ ಇದು ಸಾಮಾನ್ಯ ಮನುಷ್ಯನೊಬ್ಬನ ಪ್ರಶ್ನೆ. ಎಲ್ಲವೂ ಗೊತ್ತಿರುವಷ್ಟು ಸುಲಭಕ್ಕೆ ಬಗೆಹರಿಯಲಾಗದ ಪ್ರಶ್ನೆಕೂಡ. ಮನೆಯಲ್ಲಿ ಆಕಳೊಂದನ್ನು ಸಾಕುವುದು ಮೊದಲಿನ ಕಾಲದಲ್ಲಿ ಅಷ್ಟೊಂದು<br />
ಕಷ್ಟವೇನಿರಲಿಲ್ಲ. ಸಮೃದ್ಧ ಅಕ್ಕಿ ಮನೆಯಲ್ಲಿ ಬೆಳೆಯುವ ಕಾಲಕ್ಕೆ ಕೊನೆಗೆ ಊರಲ್ಲಾದರೂ ಬೆಳೆಯುವ<br />
ಕಾಲಕ್ಕೆ ಮನುಷ್ಯನಂತೆ ದನಗಳ ಮೇವು ಕೂಡ ಸಮಸ್ಯೆ ಆಗಿರಲಿಲ್ಲ. ಇವತ್ತು ಅಕ್ಕಿ ಬೆಳೆಯುವವರೇ ಇಲ್ಲವಾಗಿರುವಾಗ ಹುಲ್ಲು ಬೆಳೆಯುವವರ ಎಲ್ಲಿ ಹುಡುಕುವುದು ನಾವು? ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಮೊದಲಾದರೆ ದನಕರುಗಳ ಮೇವಿಗೆಂದು ಹೊರಗೆ ಬಿಡಬಹುದಿತ್ತು. ಈಗ ಅವು ಎಲ್ಲಿ ಬಿಟ್ಟರೂ ಹೋಗಲು ಜಾಗವೇ ಇಲ್ಲ. ಮೇವಿನ ಬದಲು ಪ್ಲಾಸ್ಟಿಕ್, ಕಾಗದಗಳ ತಿನ್ನುವಂತಾಗಿದೆ. ಅದು ಕೂಡ ಘೋರ ಪಾಪವೆನ್ನಿಸುತ್ತದೆ. ಗೋವನ್ನು ಕೇವಲ ಲಾಭದೃಷ್ಟಿಯಿಂದ ನೋಡಲಾರಂಭಿಸಿದರೆ ಜರ್ಸಿ ತಳಿಗಳು ಹಾಕುವ ಹಿಂಡಿಗೆ ಸಮನಾದ ಹಾಲು ಕೊಡುತ್ತವೆ ಎಂಬುದು ದೊಡ್ಡ ವಿಷಯವಾಗುತ್ತದೆ. ಇಷ್ಟೇ ಅಲ್ಲ.ಅದು ಲೆಕ್ಕಾಚಾರದಲ್ಲಿ ಸಮ ತೋರುವುದರಿಂದ ಹಾಲಿನೊಳಗಿನ ಅಂಶಗಳಿಗಿಂತ ಹಾಲಿನ ಉತ್ಪನ್ನದ ಬಗ್ಗೆಯಷ್ಟೇ<br />
ಯೋಚಿಸುವುದು ಸಾಮಾನ್ಯ.<br />
<br />
ಎಲ್ಲವೂ ರೂಪಾಯಿಗಳ ಲೆಕ್ಕಾಚಾರಕ್ಕಿಳಿದಮೇಲೆ ಮನುಷ್ಯ ಹೆತ್ತವರನ್ನೂ ಲೆಕ್ಕಾಚಾರದ ತಕ್ಕಡಿಯಲ್ಲಿಟ್ಟು<br />
ತೂಗಿದ ಮೇಲೆ ಗೋವಿನಂತ ಗೋವು ಕೂಡ ಭಾರವಾಗುತ್ತದೆ ಎಂಬುದು ಇವತ್ತಿನ ನಿದರ್ಶನ. ಗೋ ಪ್ರೇಮಿಗಳು ಸಾಗರೋಪಾದಿಯಲ್ಲಿ ಬಂದು ಗೋ ಕಥೆ ಕೇಳಿದವರೆಲ್ಲ ಒಂದೊಂದೇ ರೂಪಾಯಿಯಷ್ಟು<br />
ಗೋ ಸೇವೆಯೆಂಬ ಭಾವಕ್ಕೆ ಬಿದ್ದರೆ ಇಂಥ ಗೋ ಕಥೆ ಮಾಡುವವರ ಕೇಳುವವರ ಶ್ರಮ ಸಾರ್ಥಕವೆನ್ನಿಸುತ್ತದೆ. ಇವತ್ತು ಸಮಾಜದಲ್ಲಿ ಬರ ಬಿದ್ದಿರುವುದು ಹಣಕ್ಕಲ್ಲ, ಹೊನ್ನಿಗಲ್ಲ, ಶ್ರಮಕ್ಕೆ ಮತ್ತು<br />
ಭಾವಕ್ಕೆ. ಯಾರಿಗೆ ಯಾರ ಕುರಿತಾಗಿಯೂ ಶುದ್ಧ ಭಾವ ಹುಟ್ಟುವುದು ಸಾಧ್ಯವೇ ಇಲ್ಲದ ಸ್ಥಿತಿ ಇಂದಿನದು. ಪ್ರತಿಯೊಬ್ಬರನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ಅನಿವಾರ್ಯವೂ ಆಗಿ ಹೋಗಿದೆ. ಹೀಗಿರುವಾಗ ಗೋ ಪ್ರೇಮದ ಕಥೆ ಕೇಳಿ ಬಂದ ಮನಸಿನ ಸರೋವರದಲ್ಲಿ ಇಂತದ್ದೊಂದು ಗೋವಿಂದಾ ಎನ್ನುವ ಅಲೆ ಏಳುವ ಸಾಧ್ಯತೆ ಹುಟ್ಟಿಕೊಂಡರೆ ...<br />
<br />
<br />
ಸತ್ಯವನ್ನೇ ನುಡಿ ಸತ್ಯವನ್ನೇ ನಡೆ ಸತ್ಯ ವಾಕ್ಯಕೆ ತಪ್ಪಿ ನಡೆಯಬೇಡ ಎನ್ನುವುದು ಬಾಲ್ಯದಿಂದ ಇಂದಿನವರೆಗೆ ಗೋವಿನ ಕಥೆಯಿಂದಲೇ ಕಲಿತೆವು ನಾವೆಲ್ಲ. ಇಂದು ಅದೇ ಗೋವಿಗಾಗಿ ನಾವೇನು ಮಾಡಬಲ್ಲೆವು ಎಂದು ಕೇಳಿಕೊಂಡರೆ ಕನಿಷ್ಟ ಸತ್ಯ ದ ನಡೆನುಡಿ ಕೂಡ ಬಿಟ್ಟೆವಲ್ಲ!ನಮ್ಮಲ್ಲಿ ಒಂದು ಮಾತಿದೆ. ಬಯಲು ಸೀಮೆಯ ಜನ ನಡೆನುಡಿಗಳಿಂದ ಒರಟರೆಂಬುದು ಅದರ ಅರ್ಥ. ಆದರೆ ಈ ವಿಚಾರದಲ್ಲಿ ಸುಸಂಸ್ಕೃತರಿಗಿಂತಲೂ ಈ ಶ್ರಮಜೀವಿಗಳ ಬದುಕು ಮತ್ತು ಭಾವದಲ್ಲಿ ಗೋವಿಗೊಂದು<br />
ಅಮೂಲ್ಯ ಸ್ಥಾನವಿರುವುದ ನೋಡುತ್ತೇವೆ. ಕೃಷಿಗೆ ಗೋವು ಆಧಾರ, ಗೋವಿಗೆ ಮೇವು ಆಧಾರ ಇನ್ನೂ<br />
ಗೋವಿನ ಜಾತ್ರೆಗಳು ಗೋವಿನ ತಳಿಗಳನ್ನು ನಾವು ಈ ಬಯಲುಸೀಮೆಯಲ್ಲಿ ನೋಡಬಹುದೇನೋ.<br />
ಹಳ್ಳಿಗರ ಬದುಕಿನಲ್ಲಿ ಗದ್ದೆ ಗೋಮಾಳಗಳು ಇರುವವರೆಗೂ ದನಗಳ ಕುರಿತು ನಾವು ಇಷ್ಟೊಂದು<br />
ನಿಷ್ಕರುಣಿಗಳಾಗಿರಲಿಲ್ಲ. ಗದ್ದೆ ತೋಟವಾಯಿತು. ಉಳುವ ಅಗತ್ಯವಿಲ್ಲದೇ ಎತ್ತುಗರುಗಳು ಮಾರಲ್ಪಟ್ಟವು<br />
ಜಾತಿ ಸಂಕರಣ ಅಲ್ಲಿಂದ ಆರಂಭವಾಯಿತು. ಇಂಜೆಕ್ಷನ್ ಕರುಗಳು ಜನಿಸಲಾರಂಭಿಸಿದವು. ಗೋವು<br />
ಉದ್ಯಮವಾಯಿತು. ಭಾವನಾತ್ಮಕ ಸಂಬಂಧ ಹೋಗಿ ಅಲ್ಲಿ ಕೇವಲ ಲಾಭನಷ್ಟಗಳು ಉಳಿದಕೊಂಡವು.<br />
ಅದು ಇಂದಿನ ಘೋರ ರೂಪ ತಳೆಯಿತು. ಪಟ್ಟಣಗಳ ವಿಷಯ ಅವರ ಅನಿವಾರ್ಯತೆಗಳನ್ನು ಬಿಟ್ಟರೆ<br />
ಹಳ್ಳಿಗಳಲ್ಲಿ ಇಂದಿಗೂ ಕೆಲವರು ದನ ಸಾಕಿಕೊಳ್ಳುತ್ತಾರೆ. ಇಲ್ಲವೆಂದಲ್ಲ. ಆದರೆ ಅದು ಸಹ ಹೆಚ್ಚು ಹಾಲುಕೊಡುವ ತಳಿಗಳನ್ನು ಮಾತ್ರ. ಇಲ್ಲಿ ಸಮೃದ್ಧಿಯ ವಿಷಯ ಬಂದಾಗೆಲ್ಲ ಹಾಲು ಎಲ್ಲ ಒಂದೇ<br />
ಅನ್ನಿಸಿಬಿಡುತ್ತದೆ. ದೀರ್ಘ ಪರೀಕ್ಷೆಯ ವಿಚಾರಗಳ ಒತ್ತಡಕ್ಕೆ ಬೀಳುವವರಲ್ಲ.ನಮ್ಮ ದನಕರುಗಳ ಕುರಿತು<br />
ಸಾಮಾನ್ಯ ಪ್ರಜ್ಞೆ ಕೂಡ ಇರುವುದಿಲ್ಲ. ಹಾಗೆ ನೋಡಿದರೆ ಗೋವು ಪ್ರತೀ ಮನೆಯ ಅಗತ್ಯ. ಆದರೂ ಕೂಡ<br />
ಅದೊಂದು ಬಲಿಷ್ಟ ಉದ್ಯಮವಾಗಿಯಷ್ಟೇ ಪ್ರಚಲಿತವಾಗುತ್ತಿರುವುದು ದುರಂತ.<br />
<br />
ಒಮ್ಮೊಮ್ಮೆ ಅನ್ನಿಸುತ್ತದೆ. ಮನುಷ್ಯ ಮನುಷ್ಯನ ಕುರಿತಾಗಿಯೇ ಸಂವೇದನೆ ಕಳೆದುಕೊಂಡು ಮೃಗೀಯವಾಗುತ್ತಿರುವ ಈ ದಿನಗಳಲ್ಲಿ ನಾವು ಮನುಷ್ಯನಿಂದ ಪ್ರಾಣಿಗಳ ಕುರಿತು ಸಂವೇದನೆ<br />
ಬಯಸುವುದು ಸ್ವಲ್ಪ ಹೆಚ್ಚಿನ ನಿರೀಕ್ಷೆ ಅನ್ನಿಸಬಹುದು. ಆದರೆ ಮನುಷ್ಯ ಮತ್ತು ಪ್ರಾಣಿಗಳ ಒಡನಾಟ<br />
ಅದೆಷ್ಟೋ ಕಾಲದಿಂದ ಉಳಿದುಕೊಂಡು ಬಂದಿದೆಯೆಂದರೆ ಅದು ಮಾನವ ಸಂಬಂಧಗಳಿಗಿಂತ ಬಲಿಷ್ಠವಾಗಿ ತೋರುತ್ತದೆ. ಮನುಷ್ಯರ ಜೊತೆ ಸಂಬಂಧ ಅಹಂಗಳಿಂದಾಗಿ ಬಹಳ ಬೇಗ ಶಿಥಿಲಗೊಳ್ಳುತ್ತಿದೆ ಇಂದು.<br />
ಆದರೆ ಪ್ರಾಣಿಗಳು ಹಾಗಲ್ಲ. ಅವುಗಳಿಗೆ ಅಹಂ ಕಾಡುವುದಿಲ್ಲ. ಸ್ವಾರ್ಥ ಇರುವುದಿಲ್ಲ ಅವುಗಳಿಗೆ. ಪ್ರೀತಿ<br />
ಮತ್ತು ಅನ್ನ ಕೊಟ್ಟವನಿಗಾಗಿ ಜೀವ ಕೊಡುತ್ತವೆ. ಅವುಗಳು ಮಾತು ಬರದೇ ಪ್ರೀತಿಸುವ ಪರಿಗೆ ಮನುಷ್ಯ<br />
ಮೂಕವಾಗುತ್ತಾನೆ. ಪ್ರಾಣಿಗಳ ಪ್ರೀತಿಸುವ ಮನುಷ್ಯ ಹೃದಯಗಳು ಸದಾ ಜೀವಂತಿಕೆಯಿಂದ ಇರುತ್ತವೆ.<br />
ಎಲ್ಲೋ ಓದಿದ ನೆನಪಿನಂತೆ ಸಾಕು ಪ್ರಾಣಿಗಳ ಪ್ರೀತಿಸುವವರಲ್ಲಿ ಹೃದಯದ ಕಾಯಿಲೆ ಕಡಿಮೆಯಂತೆ.<br />
ಇಷ್ಟೆಲ್ಲಾ ತಿಳಿದೇ ಅಲ್ಲವಾ ಎಷ್ಟೋ ಸಾವಿರ ಜೀವ ಜಂತುಗಳಲ್ಲಿ ಕಣಕಣವೂ ಪವಿತ್ರವಾಗಿರುವ<br />
ಉಪಯುಕ್ತವಾಗಿರುವ ಗೋವನ್ನು ನಮ್ಮ ಪೂಜನೀಯ ದೇವರಂತೆ ಕಂಡಿರುವುದು ನಮ್ಮ ಹಿರಿಯರು.<br />
ಜ್ಞಾನ ಬೆಳೆದಂತೆ ಪ್ರಪಂಚ ಚಿಕ್ಕದಾದಂತೆ ವಿಸ್ತಾರವಾಗಬೇಕಿದ್ದ ಜೀವ, ಭಾವ, ಔದಾರ್ಯ, ಪ್ರೀತಿಗಳು,<br />
ಸಂಕೀರ್ಣತೆ ಕಳೆದುಕೊಂಡು ಮೃದುವಾಗಬೇಕಿದ್ದ ಮನಸುಗಳು ಮನುಷ್ಯ ಸ್ವಾರ್ಥವೊಂದೇ ಮುಖ್ಯವಾಗಿಬಿಡುತ್ತಿರುವುದು ಎಂಥ ವಿಪರ್ಯಾಸ! ಆದರೂ ಅನ್ನಿಸುತ್ತದೆ. ಎಲ್ಲ ಬದಲಾವಣೆಗಳಿಗೂ ಒಂದು<br />
ಸಂಕ್ರಮಣ ಕಾಲ ಬರುತ್ತದೆ. ವಿನಾಶದ ಬಿಸಿ ತಟ್ಟಿದಾಗ ಮಾತ್ರ ಎಚ್ಚರಿಕೆಯ ಪೃಕೃತಿ ಮೊಳಗುತ್ತದೆ.<br />
ಅಂತದ್ದೊಂದು ವಿನಾಶ ಕಾಲದಲ್ಲಿ ಇಂಥ ಮಹಾನುಭಾವರ ದರ್ಶನವಾಗುತ್ತದೆ. ಹಿಂದೂ ಧರ್ಮವೇ<br />
ಒಡೆದು ವಿನಾಶದ ದಾರಿ ಹಿಡಿದಾಗ ಶಂಕರರ ಅವತಾರವಾಯಿತು. ಇಂದು ಗೋವು ತಳಿಗಳೇ ನಿನರ್ಾಮವಾಗಿ ಜನ ದನ ದ ಬದುಕು ಅಳಿಯುವಾಗ ಹೀಗೊಂದು ಜಾಗೃತಿಯ ಸಂಸ್ಥಾಪನೆಗಾಗಿ<br />
ಆ ಗೋವಿಂದನೇ ಗೋವಿಗಾಗಿ ಜನ್ಮತಳೆದಿರಬಹುದೆಂಬ ಭಾವ ಮೂಡುತ್ತದೆ! ಮತ್ತೆ ಮತ್ತೆ ಗೋವಿಗಾಗಿ<br />
ಮಡಿವ ಮಿಡಿವ ಹಲವು ಗೋ ಪ್ರೇಮಿಗಳೆಲ್ಲ ಗೋಪಾಲಂದಿರೇ....<br />
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgfkJvJgYiNnZ3puj2L00HIJ7qUkEPbrfa9Rq6pA4Ob-pNxNpEd0Xgh6niUX0yeSTU10jmGHOMYGsMCMJP5mONi0dycxEB_EJb6wHD6FteF6F7QmBQK1VuEs2SyrPVRnbpdtCuJJszNQic/s1600/1044090_601103799929771_2109801108_n.jpg" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEgfkJvJgYiNnZ3puj2L00HIJ7qUkEPbrfa9Rq6pA4Ob-pNxNpEd0Xgh6niUX0yeSTU10jmGHOMYGsMCMJP5mONi0dycxEB_EJb6wHD6FteF6F7QmBQK1VuEs2SyrPVRnbpdtCuJJszNQic/s1600/1044090_601103799929771_2109801108_n.jpg" /></a></td></tr>
<tr><td class="tr-caption" style="text-align: center;">ಚಿತ್ರ ಕೃಪೆ ಅಂತರ್ಜಾಲ</td></tr>
</tbody></table>
<br />
<br />
ಇದು ಸಾಧ್ಯವಾ ಅಂತಂದುಕೊಂಡರೆ ಯಾವುದೂ ಸಾಧ್ಯವಿಲ್ಲ. ಸಾಧ್ಯ ಅಂದುಕೊಂಡರೆ ಎಲ್ಲವೂ ಸಾಧ್ಯ.<br />
ಸಾಧ್ಯವಾಗಿಸಿದ ನೂರಾರು ನಿದರ್ಶನಗಳಿವೆ ಇಲ್ಲಿ. ಗೋವನ್ನು ಕೇವಲ ಪ್ರಾಣೀ ಅಂತಾಗಲೀ, ಹಿಂದೂ ಧರ್ಮದ ಪೂಜನೀಯ ದೇವತೆ ಅಂತಾಗಲೀ ನೋಡಲಾಗದಿದ್ದರೆ ಗೋವನ್ನು ಮನುಷ್ಯ ಜನ್ಮಸಾರ್ಥಕಗೊಳಿಸುವ ಪ್ರಾಣೀ ಅಂತಾದರೂ ನೋಡಬಹುದಲ್ಲ! ವೈಜ್ಞಾನಿಕವಾಗಿಯೇ ಸಾಬೀತಾಗಿದೆ ಭಾರತೀಯ ತಳಿಗಳ ಗೋವುಗಳು ಎಷ್ಟು ಸಂಪದ್ಭರಿತವಾದವು ಎಂಬುದು. ಹಾಗಿದ್ದಾಗ ನಮ್ಮ ದೇಶ ನಮ್ಮ ಜನರ ಬದುಕು ಭಾವ ಎಲ್ಲ ಆಗಿರುವ ಗೋವನ್ನು ಕಾನೂನು ರೀತ್ಯ ಹತ್ಯೆಗೈಯ್ಯುವ ಸರಕಾರವನ್ನು<br />
ನಾವು ಆರಿಸಿಕೊಂಡಿದ್ದೇವೆ ಎಂಬುದು ಕೂಡ ಯೋಚಿಸುವ ವಿಷಯ! ನಿಂದಕರು ಇರಬೇಕೆಂದಿದ್ದಾರೆ<br />
ದೊಡ್ಡವರು. ಆದರೆ ಹಂತಕರು ಇದ್ದಾರೆ ಇಲ್ಲೆಲ್ಲ. ಇವತ್ತು ಗೋವು, ನಾಳೆ ನಾವು. ಇವೆರಡನ್ನೂ ಯೋಚಿಸುವ<br />
ಸಮಯ ಬಂದಿದೆ ಅನ್ನಿಸುವುದಿಲ್ಲವೆ?<br />
<br />
<br />
<br />
<br />
<br />
ನಿಮ್ಮ ಅನಿಸಿಕೆಗಳಿಗಾಗಿ.<br />
<br />
ಹೊತ್ತು ಹೆತ್ತ ಮಾತೆಗೆ, ಹಾಲುಕೊಟ್ಟ ಹಸುವಿಗೆ, ನಿಮ್ಮ ಭಾವದ ಒಂದು ಅರ್ಪಣೆ ಹೇಗೆ ಹೇಳುತ್ತೀರಿ?<br />
<br />
<br />
<br />
<br />
<br />
<br />
<br />
<br />
</div>
maanasa saarovrahttp://www.blogger.com/profile/14088976224552347105noreply@blogger.com7tag:blogger.com,1999:blog-7191814811569941492.post-31126566271075952342013-12-11T02:14:00.000-08:002013-12-11T02:14:11.987-08:00ವ್ಯಾವಹಾರಿಕ ಪ್ರಪಂಚದಲ್ಲಿ ಸಾತ್ವಿಕ ಪ್ರತಿಭಾವಂತ..<div dir="ltr" style="text-align: left;" trbidi="on">
<br />
<br />
ಸಾತ್ವಿಕ ಚಿಂತನೆಗಳ ಹಂಚಿಕೊಳ್ಳಲೆಂದೇ ಒಂದಷ್ಟು ಸ್ನೇಹಗಳು ಹುಟ್ಟಿಕೊಳ್ಳುತ್ತವೆ. ಅಂತಹ ಸ್ನೇಹಗಳಿಗೆ<br />
ಋಣಿ ನಾನು. ಬದುಕಿನ ಅಸಮ್ಮತಿಗಳ ನಡುವೆ ಸಮ್ಮತಿಯೆಂಬುದು ಹುಟ್ಟುವುದೇ ಇಲ್ಲಿ. ಸಾತ್ವಿಕ ಚಿಂತನೆಗಳು<br />
ಹರಡಿಕೊಂಡು ಅವುಗಳಿಗೆ ಸರಿಯಾದ ಆಧಾರವನ್ನು, ಬಲವನ್ನು ಪಡೆದುಕೊಳ್ಳುವುದು ಸಮಾನ ಮನಸ್ಕರ ಸ್ನೇಹ<br />
ಗಳಿಂದಾಗಿ ಕಾವ್ಯ,ಕಥನ, ಭಾವ, ಭಜನೆ, ಲಲಿತ ಕಲೆಗಳ ಯಾವುದೇ ಪ್ರಕಾರಗಳು ಹಾಗೂ ಎಲ್ಲಾ ಜೀವಂತ ಪ್ರತಿಭೆಗಳು<br />
ರಸೋತ್ಪನ್ನಗೊಳ್ಳುವ ಎಲ್ಲ ಭಾವಕಲೆಗಳಿಗೂ ಬಲಕೊಡುವುದು ಸಮಾನ ಆಸಕ್ತಿ ಹಾಗೂ ವಿಮರ್ಶೆಯ ಒರೆಹಚ್ಚುವಿಕೆ.<br />
ಹಾಗೆ ಆರಂಭವಾದ ಎಲ್ಲ ಸ್ನೇಹಗಳೂ ಹಂತ ಹಂತವಾಗಿ ಬೆಳವಣಿಗೆಯನ್ನು ಕಾಣಬೇಕು. ಹಾಗಾದಾಗ<br />
ನಾವೂ ಬೆಳೆಯುತ್ತೇವೆ. ನಮ್ಮೊಂದಿಗೆ ಎಲ್ಲರೂ ಬೆಳೆಯುತ್ತಾರೆ.<br />
<br />
ದುರದೃಷ್ಟವಶಾತ್ ಇವತ್ತು ಹೀಗಾಗುತ್ತಿಲ್ಲ. ಹುಟ್ಟಿಕೊಳ್ಳುವಾಗ ಸಾತ್ವಿಕವಾಗಿರುವ ಸ್ನೇಹ ಬೆಳೆಯುತ್ತ ಬೆಳೆಯುತ್ತ<br />
ಸ್ವಾರ್ಥವಾಗುತ್ತದೆ. ಎಲ್ಲಿ ಯಾರನ್ನು ಎಷ್ಟು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಬಹುದೆಂಬ ಮಾನದಂಡದ ಮೇಲೆ ಸ್ನೇಹ<br />
ನಿಲ್ಲುತ್ತದೆ. ಯಾರು ಎಷ್ಟು ಸಹಾಯ ಸಹಕಾರ ನೀಡಬಲ್ಲರೆಂಬುದು(ಲೆಕ್ಕಾಚಾರವಾಗಿ) ಸ್ನೇಹದ ತಳಪಾಯವಾಗುತ್ತದೆ.<br />
ಋಣ ಸಂದಾಯ ಕೂಡ ಬಹಳ ದೊಡ್ಡ ಮೊತ್ತದ ಏನನ್ನೋ ನಿರೀಕ್ಷಿಸುತ್ತದೆ. ಅದು ಹಣ ಹೆಸರು ಇನ್ನೇನೂ ಆಗಿರಬಹುದು!<br />
ಇದು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ನಾಟ್ಯ, ಸಂಗೀತ, ಅಭಿನಯ, ಚಿತ್ರಕಲೆ, ಯಾವುದೇ ಇರಬಹುದು. ಕಲಾಕಾರ ವ್ಯಾವಹಾರಿಕ ಮೋಸಕ್ಕೆ ಪದೇ ಪದೇ ಒಳಗಾಗುವುದು ನೋಡುತ್ತೇವೆ. ಯಾಕೆಂದರೆ ಪ್ರತೀ ಕಲಾವಿದನೂ ಭಾವಜೀವಿಯಾಗಿದ್ದಾನೆ. ಬದುಕು ಅವನಿಗೆ ನಿರಂತರ ವ್ಯಾವಹಾರಿಕ ಪಾಠಗಳನ್ನು ಹೇಳಿಕೊಡುತ್ತದೆ. ಹಾಗೆ ಹೇಳಿಕೊಡುವವರಲ್ಲಿ ಸುತ್ತ ಮುತ್ತಲಿನವರೇ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಾರೆ.<br />
<br />
ಸಾಹಿತಿಯ ಪುಸ್ತಕಗಳು ಅವನ ಮತ್ತು ಅವನ ಸಂಸಾರದ ಹೊಟ್ಟೆತುಂಬಿಸುವುದಿಲ್ಲ. ಆಸಕ್ತ ಪ್ರಕಾಶಕರು ಕೈ ಸುಟ್ಟುಕೊಳ್ಳುತ್ತಾರೆ ಆದರೆ ವೃತ್ತಿನಿರತ ಪ್ರಕಾಶಕರು ಪುಸ್ತಕವನ್ನೇ ಬಂಡವಾಳವಾಗಿಸಿಕೊಂಡು ಬೇಕಾದಷ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಅವರಿಗೆ ಪುಸ್ತಕದಲ್ಲಿ ಏನಿದೆ ಎಂಬ ಮಾಹಿತಿಯೂ ಬೇಕಾಗುವುದಿಲ್ಲ ಕೆಲವು ಬಾರಿ. ಸಂಗೀತವನ್ನೇ ಉಸಿರಾಗಿಸಕೊಂಡು ಹಾಡುವವರು ಕೆಲವೇ ಪ್ರೋಗ್ರಾಂಗಳಿಗೆ ತೃಪ್ತಿಪಟ್ಟುಕೊಳ್ಳಬೇಕು. ದೇವಸ್ಥಾನ ಸಭೆ ಸಮಾರಂಭಗಳಿಗೆ ಹಾಡಿ ಖುಶಿ ಪಡಬೇಕು ಸಂಗೀತವನ್ನು ವೃತ್ತಿಯಾಗಿಸಿಕೊಂಡವರಿಗೆ ಹಣದ ಹೊಳೆ. ನಿಜಕ್ಕೂ ಕಲಾವಿದನಾದವನು ವೃತ್ತಿಯಾಗಿ ಆಯ್ದುಕೊಂಡಾಗ ಅವನಿಗೆ ಯಾವುದೇ ಕಲೆಯನ್ನು ಪೂರ್ಣ ನೂರಕ್ಕೆ ನೂರು ತೊಡಗಿಸಿಕೊಳ್ಳಲಾಗದು ಹಾಗೆ ತೊಡಗಿಸಿಕೊಂಡವನನನ್ನೂ ಕೂಡ ಅವರನ್ನೂ ಉಪಯೋಗಿಸಿಕೊಂಡು ಹಣ ಹೆಸರು ಮಾಡಿಕೊಳ್ಳುವ ಅನೇಕರನ್ನು ನೋಡಬಹುದು.<br />
<br />
<br />
ಭಾರತೀಯ ಶಾಸ್ತ್ರೀಯ ನೃತ್ಯ, ಸಂಗೀತಗಳು ಇಂದು ಬಹಳ ದುಬಾರಿಯಾಗುತ್ತಿವೆ ಎಂಬದು ಸದ್ಯದ ಒಳನೋಟ ಬಲ್ಲವರ ಮಾತು. ಗುರುಕುಲ ಮಾದರಿಯ ಈ ಶಾಲೆಗಳು ಕೂಡ ಹಣ ಮಾಡುವ ಕೇವಲ ಹಣ ಮಾಡುವ ಇಂದಿನ ವಿದ್ಯಾಸಂಸ್ಥೆಗಳ ದಾರಿ ಹಿಡಿದಿವೆ. ಈ ನೃತ್ಯಪಟುಗಳು, ಸಂಗೀತ ಸಾಧಕರು ಮತ್ತು ಸಾಹಿತ್ಯದ ಉನ್ನತ ಹೆಸರು ಪಡೆದವರು ಸಹ ಕಲೆಯನ್ನು ಮೊದಲಿನಂತೆ ಸರಸ್ವತಿಯಾಗಿ ಆರಾಧಿಸುವ ಬದಲು ಲಕ್ಷ್ಮಿಯನ್ನು ಕೊಡುವ ಸಾಧನವಾಗಿ ಬಳಸಿ ಕೊಳ್ಳುತ್ತಿರುವುದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ತಿಳಿಯುತ್ತಿಲ್ಲ. ನಮ್ಮ ಸಂಸ್ಕೃತಿಯ ಕೊಡುಗೆಯಂತಿರುವ ಈ ವಿದ್ಯೆಗಳು ಸಹ ಇಂದು ಕೇವಲ ಹಣ ಇರುವವರ ಸೊತ್ತಾಗುತ್ತಿರುವುದು ದೌರ್ಭಾಗ್ಯವಲ್ಲವೆ? ದೊಡ್ಡ ದೊಡ್ಡ ಸಿಟಿಗಳಲ್ಲಿ ಹಣವಂತರ ಮಕ್ಕಳಿಗೆ ನೃತ್ಯ ಶಾಲೆಗಳಿಗೆ ಸೇರಿಸುವುದು ಮತ್ತು ಸಂಗೀತಕ್ಕೆ ಕಲಿಸುವುದೆಂಬದು ಪ್ರೆಸ್ಟೀಜ್ ನ ಪ್ರಶ್ನೆಯಷ್ಟೆ. ಮಕ್ಕಳಲ್ಲಿಯ ಪ್ರತಿಭಾವಂತರ ಗುರುತಿಸಬೇಕಾದ ಗುರುಸ್ಥಾನಿಗಳು ಇದನ್ನು ಯೋಚಿಸಬೇಕಾಗಿದೆ.<br />
<br />
ಸರಕಾರಗಳಿಗಂತೂ ಸಂಸ್ಕೃತಿಯ ಉಳಿಸಿ ಬೆಳೆಸುವದರಲ್ಲಿ ಆಸಕ್ತಿಯಿಲ್ಲ. ಒಂದೊಂದು ಇಲಾಖೆಗಳೂ ಒಂದಿಷ್ಟು ಜನರ<br />
ಹೊಟ್ಟೆತುಂಬಿಸುವ ಸಾಧನಗಳಷ್ಟೆ. ಉಳಿಸಿ ಬೆಳೆಸುವ ಗುರು ಸ್ಥಾನದ ಪ್ರತಿಯೊಬ್ಬರೂ ಯೋಚಿಸಬೇಕಿದೆ ಸಂಸ್ಕೃತಿಗೆ ಈ ತಲೆಮಾರಿನ ಕೊಡುಗೆಗಳೇನು ಅಂತ. ಅದು ಕೇವಲ ವ್ಯಾಪಾರವಾಗಿ ಉಳಿಯದೇ ಪ್ರತಿಭೆಯ ಮೌಲ್ಯ ಮಾಪನ ವಾಗಲಿ ಎಂದಷ್ಟೇ ಕೋರಬಹುದು ನಮ್ಮಂತವರು.<br />
<br />
<br />
ವಿಷಯ ಆರಂಭವಾದದ್ದು ಸಾತ್ವಿಕ ಚಿಂತನೆಗಳ ಸ್ನೇಹದ ಕುರಿತು. ಎಲ್ಲಿಂದ ಎಲ್ಲಿಗೋ ತಲುಪಿತು. ಆದರೆ ವಾಸ್ತವದಲ್ಲಿ ಯೋಚನೆ ಮಾಡಿದರೆ ಇಂತಹ ಸಂದರ್ಭದಲ್ಲಿ ಮನುಷ್ಯನ ಒಳಗಿರುವ ನಿಜವಾದ ಪ್ರತಿಭೆ ಅರಳುವುದು ಸ್ನೇಹವಲಯದಲ್ಲಿ. ಜೀವಂತಿಕೆಯ ಒಳ ತುಡಿತಗಳು ಕಲೆಯ ರೂಪದಲ್ಲಿ ಮೊದಮೊದಲು ತಾಗುವುದು ಸ್ನೇಹಗಳಲ್ಲೇ. ಅದರಲ್ಲೂ ಆಸಕ್ತ ಮನಸ್ಸಿನವರ ನಡುವೆ ಮಾತ್ರ ಕಲಾವಿದ ತನ್ನೊಳಗಿನ ಪ್ರತಿಭೆಯನ್ನು ಹೊರಗಿಡಬಲ್ಲ. ಅದು ಒಳ್ಳೆಯ ಸಾತ್ವಿಕ ಚಿಂತನೆ, ಮಂಥನಗಳ ಮೂಲಕ ಒರೆಹಚ್ಚಿಕೊಳ್ಳುತ್ತ ಬೆಳೆಯುವ ಮೊದಲ ಹೆಜ್ಜೆ. ಈ ಹೆಜ್ಜೆಗೆಷ್ಟು ಬಲವಿದೆ ಎಂಬುದು ಗುರುವಿಲ್ಲದೇ ಅರಳಿದ ಇಂತ ನೂರಾರು ನವ ನವೀನ ಪ್ರತಿಭೆಗಳ, ಹಳ್ಳೀ ಮರೆಯಲ್ಲಿ ಹರಡಿದ ಕುಸುಮ ಗಂಧಗಳ ನಾವು ನೋಡುತ್ತೇವೆ. ಅವೇನೂ ಯಾವ ದೊಡ್ಡ ವಿದ್ವಾಂಸನ ವಂಶಸ್ಥನಾಗಲೀ ಯಾವ ಗಾಡ್ ಪಾದರ್ ಗಳ ನೆರಳಾಗಲೀ ಕಂಡಿರುವುದಿಲ್ಲ. ಎಷ್ಟೋ ಬಾರಿ ಮಕ್ಕಳಲ್ಲಿರುವ ಪ್ರತಿಭೆ ತಂದೆ ತಾಯಿಗಳ ಗಮನಕ್ಕೂ ಬಂದಿರುವುದಿಲ್ಲ. ಅಂತ ಅನೇಕ ಜನ ನಮ್ಮೊಡನೆ<br />
ಆಡುತ್ತ ಹಾಡುತ್ತ ನಲಿಯುತ್ತ ಅನೇಕ ವಿಸ್ಮಯಗಳ ಕಟ್ಟಿಕೊಡುತ್ತಾರೆ ಅಂಥ ಎಲ್ಲ ಜೀವ ಭಾವ ತುಂಬಿದ ಕಲಾವಿದರೂ ಸಾಹಿತಿಗಳೂ ಬಹುತೇಕ ಭಾವುಕ ಮನದವರಿರುತ್ತಾರೆ. ಅವರನ್ನು ಸಾತ್ವಿಕವೆಂದು ನಂಬಿದ್ದ ಸ್ನೇಹವಲಯದಲ್ಲಿ ದುರುಪಯೋಗ ಮಾಡಿಕೊಳ್ಳಲು ಒಬ್ಬ ಬುದ್ದಿವಂತ ಸಿಕ್ಕರೆ ಸಾಕು. ಎಷ್ಟೋ ಬಾರಿ ಇಂದಿನ ಕಾರ್ಪೋರೇಟ್ ಪ್ರಪಂಚ ಕೂಡ<br />
ಇಂತಹ ಕೆಲಸ ಮಾಡುತ್ತಿರುವುದು ಕಂಡರೆ ಬೇಸರವಾಗುತ್ತದೆ. ಇಲ್ಲಿ ಎಲ್ಲರೂ ಅಂಥವರೇ ಎಂದು ಹೇಳುತ್ತಿಲ್ಲ ನಾನು. ಆದರೆ ಸಮಾನ ಮನಸ್ಕರೆಂದು ಕಂಡು ಆದರಿಸಿ ಹರಡಿ ಹಂಚಿಕೊಂಡ ಪ್ರತಿಭೆಗಳು ಇಂಥ ಮೋಸಗಳಿಗೆ ಬಲಿಯಾದಾಗ ನೋವಾಗುವುದು ಸಹಜವಲ್ಲವೇ? ಬರಹಗಳನ್ನು ಬ್ಲಾಗ್ಗಳಿಗೆ ಹಾಕಿಕೊಂಡರೆ ಬರಹಗಳನ್ನು ಕದ್ದು ಬೇರೆ ಹೆಸರಲ್ಲಿ ಹಾಕಿಕೊಳ್ಳುವ ಪತ್ರಿಕೆಗಳು, ಫೇಸ್ಬುಕ್ಕ್ ಪ್ರತಿಭಾವಂತರು, ಕವಿತೆಗಳ ಕದ್ದು ಓದುವ ಕವಿಪಲ್ಲವರು ಇವರೂ ಕೂಡ ಈ ಸಾಲಿಗೆ ಸೇರುತ್ತಾರೆ ಅಲ್ಲವೆ? ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲದಂತೆ ರಾಜಕೀಯ, ಸ್ವಾರ್ಥ ಈ ಕಲಾವಿದರ ಸಾಹಿತಿಗಳ ಪ್ರಪಂಚದಲ್ಲಿ ಕಂಡರೆ ಅಸಹನೆ ತನ್ನಂತಾನೇ ಹುಟ್ಟಿಕೊಳ್ಳುತ್ತದೆ. ಒಳ್ಳೆಯವರು ಇಲ್ಲ ಅಂತೇನಿಲ್ಲ. ಆದರೆ ಪ್ರಮಾಣ ಯಾವುದು ಹೆಚ್ಚಾಯಿತು ಎಂಬುದರ ಮೇಲೆ ಆ ರಂಗದ ಭವಿಷ್ಯ ನಿಲ್ಲುತ್ತದೆ. ಈ ಕುರಿತಾದ ನಿಮ್ಮ ಅನಿಸಿಕೆಗಳಿಗಾಗಿ ಕಾಯುತ್ತ..<br />
<br />
<br />
<br />
<br />
<br />
</div>
maanasa saarovrahttp://www.blogger.com/profile/14088976224552347105noreply@blogger.com8tag:blogger.com,1999:blog-7191814811569941492.post-87648104729913998802013-12-03T01:05:00.003-08:002013-12-03T01:42:57.520-08:00ನನಗೀಗ ಸಮಯವಿಲ್ಲ..<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEj8ZWB5m5FnK3cBTon7TRX9fPoWw-q23zElqbIOxSzm9wCjq2SPaYd4fQVP3C4F_PPcYYuPRgUuXk8wtqff7kRRWfax7g6_EA7EAaurl-wqGDVckP1_Pj6S0UDmnk3XlD_MgQ3FEcLIy88/s1600/DSC00822.JPG" imageanchor="1" style="clear: left; float: left; margin-bottom: 1em; margin-right: 1em;"><img border="0" src="https://blogger.googleusercontent.com/img/b/R29vZ2xl/AVvXsEj8ZWB5m5FnK3cBTon7TRX9fPoWw-q23zElqbIOxSzm9wCjq2SPaYd4fQVP3C4F_PPcYYuPRgUuXk8wtqff7kRRWfax7g6_EA7EAaurl-wqGDVckP1_Pj6S0UDmnk3XlD_MgQ3FEcLIy88/s1600/DSC00822.JPG" height="132" width="320" /></a></div>
<br /></div>
<div style="text-align: justify;">
"ಈಗ ಮಾನಸ ಸರೋವರದಲ್ಲಿ ನೀರೇ ಇಲ್ಲ ಅನ್ನಿಸುತ್ತಿದೆ. ಎಲ್ಲ ಸಮುದ್ರಗಳಲ್ಲಿ ಚಂಡಮಾರುತ ಬೀಸಿ ಭರ್ಜರಿ ಅಲೆಗಳ ಪ್ರವಾಹದಂತಿವೆ. ಆದರೆ ಮಾನಸ ಸರೋವರದಲ್ಲಿ ಮಾತ್ರ ನೀರವ ಮೌನ! ಚಿಕ್ಕ ಅಲೆಯ ಸದ್ದೂ ಇಲ್ಲ! ಏನಾದರೂ ಟ್ಯಾಂಕರ್ ನಿಂದ ನೀರು ತಂದು ಬಿಡಬೇಕಾ?" </div>
<div style="text-align: justify;">
<br /></div>
<div style="text-align: justify;">
ಎಷ್ಟು ಚಂದದ ಮುಗ್ಧ ಪ್ರಶ್ನೆ! ಈ ಪ್ರಶ್ನೆಗೆ ಉತ್ತರವಾಗಿಯೂ ಮೌನ ಕರಗಿ ನೀರಾಗದಿದ್ದರೆ ಸರೋವರ ಹೃದಯ ಕಳೆದುಕೊಳ್ಳಬಹುದೆಂಬ ಭಯ ನನಗೇ ಹುಟ್ಟುತ್ತಿದೆ. ಸಾವಿರ ಜನರನ್ನು ತಲುಪದಿದ್ದರೇನಾಯಿತು? ತಲುಪಿದ ಜನರ ಮಾನಸದಲ್ಲಿ ಒಂದು ನಿರೀಕ್ಷೆ ಹುಟ್ಟಿಸಿದೆಯೆಂಬ ಪ್ರೀತಿಗೆ ಮತ್ತೆ ಅಲೆಗಳು ಮಾನಸ ಸರೋವರದ ತೀರದಲ್ಲಿ.</div>
<div style="text-align: justify;">
<br /></div>
<div style="text-align: justify;">
</div>
<div style="text-align: justify;">
ಮನಸಿನ ಮನೆಯಲ್ಲಿ ಮನಸಿನೊಂದಿಗೆ ಹೊರಟ ಪಯಣ ಮುಗಿದಿದೆ. ಇದು ಮತ್ತೊಂದು ಪಯಣ. ನಿಮ್ಮೊಂದಿಗಿನ ಮಾತಿನದು. ಈ ಅಲೆಗಳು ಸ್ವಲ್ಪ ಭಿನ್ನವಾಗಿರಬಹುದು. ಆದರದು ಕೂಡ ಈ ಸರೋವರದಲ್ಲೆದ್ದ ಅಲೆಗಳು. ಚೂರು ಚೂರು ತಾಗಿದರೆ ಸಾರ್ಥಕ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಬರೆಯ ಹೊರಟರೆ ಎಷ್ಟೊಂದು ಪ್ರಶ್ನೆಗಳು ಎದುರಾಗುತ್ತವೆಯೆಂದರೆ ನಾನೇ ಕಳೆದುಹೋಗುವಷ್ಟು. ಯಾವ ಯಾರ ಹಂಗೂ ಇಲ್ಲದೆ ನಿಭರ್ೀಡೆಯಿಂದ ಮನಸಿನ ಮಾತುಗಳ ಬರೆಯತೊಡಗಿದರೆ ಅದೆಷ್ಟೋ ಮನಸುಗಳಿಗೆ ನೋವಾಗಬಹುದು! ಅದೆಷ್ಟೋ ವಿರೋಧಗಳಿಗೆ ಎಡೆಯಾಗಬಹುದು. ಯಾಕೆಂದರೆ ನನ್ನ ಭಾವ ವಿಚಾರಗಳೆಲ್ಲ ಎಲ್ಲರದ್ದೂ ಆಗಿರಬೇಕೆಂಬ ನಿಯಮವಿಲ್ಲ. ಇತ್ತೀಚೆಗೆ ಹಲವು ಬ್ಲಾಗ್ ಓದುತ್ತಿದ್ದಂತೆ ಹಲವು ಪುಸ್ತಕಗಳ ನೋಡುತ್ತಿದ್ದಂತೆ ಇಂತ ಹಲವು ಪ್ರಶ್ನೆಗಳ ಇಟ್ಟುಕೊಂಡು ಏನು ಬರೆಯಲಿ ಎಂದೇ ತೋಚುವುದಿಲ್ಲ. ಒಳಗಿನ ಹಸಿ ಹಸಿ ಭಾವಗಳ ಕಾವ್ಯವಾಗಿಸುವಂತ ಮನಸ್ಥಿತಿ ಇಂದಿಗಿಲ್ಲ. ಬರೆದದ್ದೆಲ್ಲ ಪ್ರಕಟವಾಗಬೇಕೆಂಬ ತೆವಲು ಇಂದಿಗೂ ಹುಟ್ಟಿಲ್ಲ ಎಂಬುದಕ್ಕೆ ನನಗೆ ನಾನೇ ಹಲವು ಬಾರಿ ಸ್ಪಷ್ಟಪಡಿಸಿಕೊಂಡಿದ್ದೇನೆ. ಹಾಗಿದ್ದೂ ಉತೃಷ್ಟತೆಯ ಹಪಹಪಿ ಕೂಡ ಇಲ್ಲ ಅಂತಲೇ ಅಂದುಕೊಂಡಿದ್ದೇನೆ. ನನ್ನದಾದ ಬ್ಲಾಗ್ ನ</div>
<div style="text-align: justify;">
ಈ ಪಯಣದಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು ನನ್ನದಿರಲಿ ಅಂತಷ್ಟೇ. ಮತ್ತೆ ಬರೆಯುವ ಈ ಭಾವ ಸ್ವಾರ್ಥ ಅಂದುಕೊಂಡರೆ ಹಾಂ ಹಾಗೇ ಇರಬಹುದು.</div>
<div style="text-align: justify;">
<br /></div>
<div style="text-align: justify;">
ಈ ಸ್ವಾರ್ಥ ನಿಸ್ವಾರ್ಥಗಳ ಬಗ್ಗೆ ಗೋಜಲು. ನಮ್ಮವರನ್ನು ಪ್ರೋತ್ಸಾಹಿಸುವುದು ಅವರನ್ನು ಮುಂದೆ ತರುವುದಕ್ಕಾಗಿ ಒಂದಿಷ್ಟು ಸಲಹೆ ಪ್ರಚಾರ ಕೊಡುವುದು ತಪ್ಪಾ? ಪ್ರತಿಯೊಬ್ಬರೂ ಅದೂ ಅಂತಜರ್ಾಲದ ಈ ಸಾಮಾಜಿಕ ಪ್ರಪಂಚದಲ್ಲಿ ಹಾಗೆ ಒಟ್ಟೊಟ್ಟಿಗೆ ಬೆಳೆಯುವವರ ಸಲಹುವವರ ನೋಡುತ್ತೇವೆ. ಯಾರ್ಯಾರೋ ಪ್ರತಿಭಾವಂತರಿಗೆ ಇನ್ಯಾರೋ ಮಣೆ ಹಾಕಬಹುದು! ಆದರೆ ನಮ್ಮವರಿಗೆ ನಾವೇ ಮಣೆ ಹಾಕದಿರುವ ಮತ್ತು ಮತ್ತೊಬ್ಬರು ಅವರಷ್ಟಕ್ಕೇ ಅಂತ ಪ್ರೀತಿ ಕಟ್ಟಿಕೊಂಡರೆ ಅದನ್ನು ಗುಂಪುಗಾರಿಕೆ ಅಂದುಕೊಳ್ಳುವುದು ಸರಿಯಾ? ಎಷ್ಟೋ ಬಾರಿ ನಮ್ಮೂರಿನಲ್ಲಿ ಇಂತಹ ಅನೇಕ ವ್ಯಕ್ತಿಗಳ ನೋಡುತ್ತೇವೆ ನಾವು. ಪಕ್ಕದ ಮನೆಯಲ್ಲಿರುವ ಯಾವುದೋ ವಿಷಯ ಪಾರಂಗತ ಪ್ರತಿಭಾವಂತ ಲೋಕವಿಖ್ಯಾತಿ</div>
<div style="text-align: justify;">
ಪಡೆದಿರುತ್ತಾನೆ. ಅವನನ್ನು ಅವನವರು ಅವನೂರು ಗುರುತಿಸುವುದೇ ಇಲ್ಲ. ಒಮ್ಮೆ ನಮ್ಮೂರಿನ ಅಂಧ ಕೊಳಲು ಕಲಾವಿದ ಮಂಜಣ್ಣ ನಿಗೆ ಒಂದು ಪುಟ್ಟ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಅವರೊಂದು ಮಾತು ಹೇಳಿದ್ದು ಈಗಲೂ ನೆನೆಪಿಗೆ ಬರುತ್ತಿದೆ. ಎಷ್ಟು ಪ್ರಸಿದ್ದಿ ಪಡೆದರೇನು ನಿನ್ನವರು ನಿನ್ನ ಪ್ರತಿಭೆ ಗುರುತಿಸದಿದ್ದರೆ! ಊರಲ್ಲಿ ನಡೆಸಿದ ಈ ಸನ್ಮಾನ ರಾಜ್ಯಪ್ರಶಸ್ತಿ ಸಿಕ್ಕಿದ್ದಕ್ಕಿಂತ ದೊಡ್ಡದು ಎಂದು ಅವರನ್ನುವಾಗ ಅವರ ಕಣ್ಣಲ್ಲಿ ಅಕ್ಷರಶಃ ನೀರಿತ್ತು. ನಮ್ಮವರನ್ನು ನಾವು ಗುರುತಿಸಿಕೊಳ್ಳುವುದು ಸನ್ಮಾನಿಸುವುದು, ಗೌರವಿಸುವುದು ಇವೆಲ್ಲ ಸ್ವಾರ್ಥವಾ ಹಾಗಾದರೆ?</div>
<div style="text-align: justify;">
<br /></div>
<div style="text-align: justify;">
ಹಲವು ಬಾರಿ ಗೆದ್ದೆತ್ತಿನ ಬಾಲ ಹಿಡಿಯುವ ಮತ್ತು ನಾವು ಪೂರ್ಣ ಸಂಭಾವಿತರೆಂದು ತೋರಿಸಿಕೊಳ್ಳುವ ಅನೇಕರನ್ನು ನಾವು ನೋಡುತ್ತಿರುತ್ತೇವೆ. ಪ್ರತಿಭೆ, ಸಾಧನೆಗಳ ಮಾಡಿದವರ ಜೊತೆ ನಿಂತುಕೊಂಡು ತಾನೂ ಮಾಡಿದ್ದೆಂಬ ಹಮ್ಮು ತೋರುವವರು. ಇಲ್ಲ ಅವರನ್ನು ಮಾತ್ರ ತಮ್ಮವರೆಂದುಕೊಳ್ಳುತ್ತ ಪರಿಚಯಿಸಿಕೊಳ್ಳುವವರು. ಇಂತವರ ಬಗ್ಗೆ ಇದೀಗ ಒಂದಿಷ್ಟು ಅಸಹನೆ ಹುಟ್ಟಿಕೊಂಡಿದೆಯೆಂದರೆ ತಪ್ಪಲ್ಲ. ಅವರಿಗೆ ಬೇರೆಯವರು ಮಾಡಿದ ಯಾವ ಕೆಲಸಗಳೂ ಒಳ್ಳೆಯದು ಅನ್ನಿಸುವುದಿಲ್ಲ. ಅವರ ಮೂಗಿನ ನೇರಕ್ಕೇ ಪ್ರತಿಯೊಂದೂ ಸರಿಯೆಂಬ ಪ್ರತಿಪಾದಕರು. ಇವರ ಬಾಯಲ್ಲಿ ಕೂಡ ಎಲ್ಲರೂ ಸ್ವಾರ್ಥಿಗಳು. ಸಂಭಾವಿತರ ಸಾಲಿನಲ್ಲಿ ಅವರು ಮೊದಲಿರುತ್ತಾರೆ! ತಪ್ಪೇನೂ ಇಲ್ಲದಿದ್ದರೂ ಅವರು ಉಳಿದವರನ್ನೆಲ್ಲ</div>
<div style="text-align: justify;">
ತಪ್ಪಿತಸ್ಥರಂತೆ ಕಾಣುತ್ತಿರುತ್ತಾರೆ! ಇಂಥವರು ಪ್ರೋತ್ಸಾಹಕರಾಗಿ ತೋರುತ್ತಾರೆ. ಪ್ರೋತ್ಸಾಹದ ಹಿಂದೆಯೂ ಸ್ಮರಣೆಯಿರಲಿ ಎಂಬ ಸ್ವಾರ್ಥವೇ ಎದ್ದುನಿಲ್ಲುತ್ತದೆ. ಆಗೆಲ್ಲ ಉಪಕಾರಸ್ಮರಣೆ ಕೂಡ ಸ್ವಾರ್ಥ ಅನ್ನಿಸಿಕೊಳ್ಳುತ್ತದೆ. ಈ ಸ್ವಾರ್ಥ ಒಂದು ಹಂತದವೆರಗೆ ಸರಿಯೇ.. ಆದರೂ ಪ್ರತಿಫಲಾಕ್ಷೆಯಿಂದಲೇ ಪ್ರೋತ್ಸಾಹ ನೀಡುವುದು ಎನ್ನುವುದು ಒಂದು ತರದ ವ್ಯಾಪಾರೀ ಮನೋಭಾವ ಅನ್ನಿಸಿಕೊಳ್ಳುತ್ತದೆ. ಇಲ್ಲಿ ಕೂಡ ಸಹಾಯ ಸಹಕಾರ ಪಡೆದವರಿಗೆ ಸ್ಮರಣೆ ಎಂಬುದು ಬೇಕೇ ಬೇಕು. ಉಪಕಾರ ಸ್ಮರಣೆ ಇಲ್ಲದವನು ಸಹಾಯ ಪಡೆದುಕೊಳ್ಳಲು ಅರ್ಹನಲ್ಲ. ಹಾಗಿದ್ದರೆ ಇಲ್ಲಿ ನ್ಯಾಯ ಯಾವುದು? ಸ್ವಾರ್ಥ ರಹಿತ ಮತ್ತು ಸ್ವಾರ್ಥ ಸಹಿತ ಇವೆರಡದರ ನಿರ್ಣಯ ಹೇಗೆ?</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
ಬದುಕು ಒಂದಿಷ್ಟು ಕಾಲಘಟ್ಟದಲ್ಲಿ ಹದವಾಗುತ್ತದೆ, ಇನ್ನೊಂದು ಕಾಲಘಟ್ಟದಲ್ಲಿ ಪಕ್ವಗೊಳ್ಳುತ್ತದೆ. ಮತ್ತೊಂದು ಕಾಲಘಟ್ಟದಲ್ಲಿ ಪರಮಾನ್ನವಾಗುತ್ತದೆ ಆಗಬೇಕು ಎಂಬುದು ಸಹಜ. ಹಾಗಿದ್ದೂ ಕೆಲವರು ಮಕ್ಕಳಂತೆ ಮುಗ್ಧವಾಗಿ ಅನುಗಾಲ ಬಾಳುತ್ತಾರೆ. ತಮ್ಮ ಸಾವಿರ ಗೋಜಲುಗಳ ನಡುವೆ ಈಗಿನವರ ಕಷ್ಟ ಸುಖ ವಿಚಾರಿಸುತ್ತಾರೆ. ಎಷ್ಟೋ ಬಾರಿ ಅವರ ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲದವರೂ ಅಂತವರ ಬಳಿ ಬಂದು ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತಾರೆ. ಅವರನ್ನು ಕೇಳಿಸಿಕೊಳ್ಳುವ ಸಹನೆಯಿದೆಯಲ್ಲ. ಅದೂ ಸಹ ಆದರಣೀಯ ಗುಣ. ಅಂಥಹ ಅನೇಕರು ನಮ್ಮ ನಡುವೆ ಸಿಗುತ್ತಾರೆ. ವಿಪಯರ್ಾಸವೆಂದರೆ ಹಾಗೆ ಕೇಳಿಸಿಕೊಂಡವರನ್ನೇ ಕಾಲಕ್ರಮೇಣ ಅವರೂ ಮರೆತುಬಿಡುತ್ತಾರೆ! ಬದುಕಿನ ಜಂಜಾಟಗಳ ಮಧ್ಯೆ ಯಾರಿಗೂ ಯಾರಿಗಾಗಿಯೂ ಸಮಯ ಕೊಡಲೇಬೇಕೆಂಬ ನಿಯಮವಿಲ್ಲ. ಪ್ರಪಂಚದಲ್ಲಿ ಎಲ್ಲಕ್ಕಿಂತ ಬೆಲೆಬಾಳುವುದೆಂದರೆ ಸಮಯ. ಅಂತಹ ಅಮೂಲ್ಯ ಸಮಯವನ್ನು ನಮಗೋಸ್ಕರ ಕೊಟ್ಟವರಿಗಾಗಿ ನಮ್ಮ ಬಳಿ ಐದು ಸೆಕೆಂಡಿನಷ್ಟು ಸಮಯ ಉಳಿಯದೇ ಹೋಗುವುದಿದೆಯಲ್ಲ ಇದಕ್ಕೆ ಏನನ್ನಬೇಕು ಅನ್ನುವ ಪ್ರಶ್ನೆ ಕೂಡ ಇದೆ ನನಗೆ.!</div>
<div style="text-align: justify;">
<br /></div>
<div style="text-align: justify;">
ವಿನಾಕಾರಣ ಪ್ರೀತಿಸುವವರನ್ನು ನೋಡುತ್ತೇವೆ. ಹೀಗೆ ಪ್ರೀತಿಸಲು ಕಾರಣಗಳು ಬೇಕಿಲ್ಲ. ಯಾವ ನಿರೀಕ್ಷೆಗಳಿಲ್ಲದೇ ನಮ್ಮ ನಡುವೆ ನಮ್ಮನ್ನು ಪ್ರೀತಿಸುವೆಷ್ಟೋ ಶಿಕ್ಷಕರಿರುತ್ತಾರೆ. ಅಭಿಮಾನಿಗಳಿರುತ್ತಾರೆ. ಸುಮ್ಮನೆ ಸ್ನೇಹಿತರಿರುತ್ತಾರೆ. ಕೆಲವರಿಗೆ ಪ್ರೀತಿ ಎನ್ನೋದು ಕಾಮುಕ. ಆದರೆ ಇನ್ನು ಕೆಲವರಿಗೆ ಪ್ರೀತಿ ದೈವಿಕ. ಅವರಲ್ಲಿ ನಿರಪೇಕ್ಷತೆಯಿರುತ್ತದೆ ಎಂಬುದು ನಿಜವಾದರೂ ಸ್ಪಂದಿಸುವ ಮನಸ್ಸನ್ನಂತೂ ಹೊಂದಿರಬೇಕಾಗುತ್ತದೆ. ಎಲ್ಲರ ಪ್ರೀತಿಗೆ ತೆರೆದುಕೊಳ್ಳಲಾಗದು ಎಂಬುದು ಒಂದು ಸತ್ಯವಾದರೆ ಒಂದು ಸಹಜ ಒರತೆಗೆ ಒಡ್ಡಿಕೊಳ್ಳುವಷ್ಟು ಮನಸಿನ ಕೊಳವನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಸ್ನೇಹ, ಅಣ್ಣ, ತಮ್ಮ, ಅಕ್ಕ, ತಂಗಿ, ಇನ್ಯಾವುದೋ ನಂಟಿನ ಭಾವಕ್ಕೆ ಕಲ್ಮಶವಿಲ್ಲದಿದಲ್ಲಿ ಪ್ರೀತಿ ಎಷ್ಟು ಅಂದ! ಆನಂದ!ಹಾಗಿದ್ದೂ ಅವನ್ನೆಲ್ಲ ನಮ್ಮ ನಮ್ಮ ಈಗೋ ಗಳ ಮೂಲಕ ಸದಾ ಹಳದಿಕಣ್ಣಿನ ಗ್ಲಾಸಿನ ಮೂಲಕ ನೋಡುವವರು ಬೇಕಾದಷ್ಟು ಜನರಿದ್ದಾರೆ. ಇದಕ್ಕೆ ಪೂರಕವಾಗಿ</div>
<div style="text-align: justify;">
ಪ್ರೀತಿಯ ಹೆಸರಲ್ಲಿ ಸ್ನೇಹದ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳುವವವರೂ ಸಾಕಷ್ಟು ಜನರಿದ್ದಾರೆ. ಹಾಗಾದರೆ ನಾವು ನಿರ್ಮಲವಾಗಿ ಇರಬೇಕೆಂದರೆ ಹೇಗಿರಬೇಕು ಸ್ನೇಹ? </div>
<div style="text-align: justify;">
<br /></div>
<div style="text-align: justify;">
ಇವತ್ತಿಗೆ ಸಾಕಲ್ಲವಾ ಇಷ್ಟು ಪ್ರಶ್ನೆ? ಮತ್ತೆ ಇದೇ ತೀರದಲ್ಲಿ ಸಿಗೋಣ ಆಗಾಗ. ನಿಮ್ಮ ಅನಿಸಿಕೆಗಳಿಗಾಗಿ ಮುಂದಿನ ಜಾಗ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
</div>
<div style="text-align: justify;">
<br /></div>
<div style="text-align: justify;">
<br /></div>
</div>
maanasa saarovrahttp://www.blogger.com/profile/14088976224552347105noreply@blogger.com14tag:blogger.com,1999:blog-7191814811569941492.post-31801898400748651402013-08-04T23:36:00.000-07:002013-08-04T23:36:08.406-07:00<div dir="ltr" style="text-align: left;" trbidi="on">
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEg-GSOq3wPyHU_MKk57e9NwDPyeYwEXhJc5fjsUJbqJAEpqDAxZ6AAUFx0ubvIgyB0G7jUjd6SZUwd32FVsZ737SwdSoQ6CGcldn73lcb40P2jBW3JoYjZNbUSyyT81Erv896ZOgY8KVG0/s1600/DSCN6835.JPG" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEg-GSOq3wPyHU_MKk57e9NwDPyeYwEXhJc5fjsUJbqJAEpqDAxZ6AAUFx0ubvIgyB0G7jUjd6SZUwd32FVsZ737SwdSoQ6CGcldn73lcb40P2jBW3JoYjZNbUSyyT81Erv896ZOgY8KVG0/s1600/DSCN6835.JPG" height="320" width="288" /></a></td></tr>
<tr><td class="tr-caption" style="text-align: center;">ಚಿತ್ರಕೃಪೆ: ಅಂತರ್ಜಾಲ</td></tr>
</tbody></table>
<br />
ಮಡುಗಟ್ಟಿದ ಹಿಮಶಿಲೆಯಂತೆ ಮನಸು ಕೂಡ ಹಿಮವಾಗುತ್ತಿದೆ. ಮಾನಸ ಸರೋವರದಲ್ಲಿ ಅಲೆಗಳ ಬದಲಾಗಿ ಸ್ಪಟಿಕದಷ್ಟು ಶುದ್ಧ ಹಿಮವು ತನ್ನ ಹರಿವಿನ ಅಲೆಗಳ ನಿಲ್ಲಿಸಿ ಗಟ್ಟಿಕೊಳ್ಳುತ್ತಿದೆ. ಅದು ಹಿಮವಾಗಬೇಕು. ಮತ್ತೆ ಸಮಯ ಬರಬೇಕು! ಸ್ಪಟಿಕದಷ್ಟು ಶುಭ್ರ ಅಲೆಗಳು ಅಲ್ಲಿ ಕಾಣುವವರೆಗೆ ಸುಮ್ಮನೆ ಮನಸು ಮೌನವಾಗಬೇಕು. ಅಲ್ಲಿಯವರೆಗೆ ಮೌನದ ಮನೆಯಲ್ಲಿ ಮನಸಿನ ತಪಕ್ಕೆ ಸುಮ್ಮನೆ ಸಣ್ಣದೊಂದು ವಿದಾಯ. ಮತ್ತೆ ಬರುವವರೆಗೆ ನಿಮ್ಮ ಪ್ರೀತಿ ಹೀಗೆ ಇರಲಿ..<br />
</div>
maanasa saarovrahttp://www.blogger.com/profile/14088976224552347105noreply@blogger.com4tag:blogger.com,1999:blog-7191814811569941492.post-72012501725609826392013-06-29T04:29:00.000-07:002013-06-29T04:31:08.885-07:00ಸುಮ್ಮನೆ ಮಾತು ...<div dir="ltr" style="text-align: left;" trbidi="on">
<div style="text-align: justify;">
ಶರಣಾಗತಿಗೂ ಮುನ್ನ..</div>
<div style="text-align: justify;">
<br /></div>
<div style="text-align: justify;">
ಬದುಕು ಒಮ್ಮೊಮ್ಮೆ ವಿಚಿತ್ರ ತಿರುವುಗಳಲ್ಲಿ ನಿಂತು ಚಿತ್ರ ವಿಚಿತ್ರ ಎನ್ನಿಸುವ ಪಾಠ ಕಲಿಸುತ್ತದೆ! ನಮಗೆ ಬೇಕಾಗೋ ಬೇಡವಾಗೋ ಕೆಲವು ಬಂಧನಗಳಲ್ಲಿ ನಾವು ಸುತ್ತಿಕೊಂಡುಬಿಡುತ್ತೇವೆ! ಎಷ್ಟೆಂದರೆ ಉಸಿರುಗಟ್ಟುವಷ್ಟು! ಅಲ್ಲಿರಲೂ ಆಗದೇ ಹೊರಬರಲೂ ಆಗದೇ ಒದ್ದಾಡುತ್ತೇವೆ. ಆಗೆಲ್ಲ ಮನಸಿನ ನಿಧರ್ಾರಕ್ಕಿಂತ ಬುದ್ದಿಯ ನಿಧರ್ಾರ ಯಾವಾಗಲೂ ಶ್ರೇಷ್ಟವಾಗಿರುತ್ತದೆ. ಆದರೆ ವಿಪಯರ್ಾಸವೆಂದರೆ ಹಾಗಾಗುವುದಿಲ್ಲ. ಅಂತಹ ಸಂದರ್ಭಗಳಲ್ಲೆಲ್ಲ ಮನಸಿನ ಮೋಹಗಳೇ ಗೆದ್ದುಬಿಡುತ್ತವೆ. ಮತ್ತು ನಾವು ಮೋಹಕ್ಕೆ ಅಥವಾ ಪ್ರೀತಿಗೆ ಕಟ್ಟುಬಿದ್ದು ಬದುಕಿನ ವಾಸ್ತವಗಳಲ್ಲಿ ಅನಾವಶ್ಯಕ ಗೊಂದಲಗಳ ಸೃಷ್ಟಿಸಿಕೊಳ್ಳುತ್ತೇವೆ. ಇದು ಒಂದು ಸಣ್ಣ ಕತೆಯ ಆರಂಭ.</div>
<div style="text-align: justify;">
<br /></div>
<div style="text-align: justify;">
ಮನಸೇ ಯಾವತ್ತಾದರೂ ಮಾತನಾಡುವಾಗ ಆಡಿದ ಮಾತು ಮುಂದೊಮ್ಮೆ ಪ್ರಶ್ನೆಯಾಗಿ ಅಥವಾ ನನ್ನನ್ನೇ ಕಾಡುವ ಭೂತವಾಗಿ ಎದುರು ನಿಲ್ಲಲಾರದೆಂಬ ವಿಶ್ವಾಸದಿಂದ ಬರೆದಿರುವ ಇಲ್ಲಿಯ ಮನಸಿನ ಮಾತುಗಳಿಗೆಲ್ಲ ಒಂದಿಷ್ಟು ವಿಶ್ವಾಸದ ತಳಹದಿಯಿದೆ. ಅದೇ ವಿಶ್ವಾಸದಿಂದ ಈ ಮಾತುಗಳು ಮುಂದುವರೆಯುತ್ತವೆ. ದಿನದಿನಕೂ ಅಲ್ಲ ಕ್ಷಣ ಕ್ಷಣಕೂ ತೆರೆಯೇಳುವ ಈ ಮನಸಿನ ಸರೋವರದಲ್ಲಿ ಸುಮ್ಮನೇ ಯೋಚನೆಗಳು ಮಡುಗಟ್ಟುತ್ತವೆ.</div>
<div style="text-align: justify;">
<br /></div>
<div style="text-align: justify;">
ಬದುಕು ನಮ್ಮ ಅಧೀನವಂತೂ ಅಲ್ಲ. ಆದರೆ ಪರಾಧೀನವೂ ಅಲ್ಲ. ರೂಪಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿಯೇ ಮತ್ತಷ್ಟು ಹೊಂದಾಣಿಕೆಗಳಿಗೆ ಬದುಕನ್ನು ಒಡ್ಡಿಕೊಳುತ್ತೇವೆ. ಕೆಲವು ಸಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕ ತಪ್ಪುಗಳ ಮಾಡುತ್ತಿರುತ್ತೇವೆ. ಪ್ರತೀ ಬಾರಿ ತಪ್ಪು ಮಾಡಿದಾಗಲೂ ಇಂತಹ ತಪ್ಪು ಮತ್ತೆ ಮಾಡಬಾರದೆಂಬ ಸಂಕಲ್ಪ ಮಾಡಿಯೂ ಮತ್ತೆ ಇನ್ಯಾವುದೋ ತಪ್ಪುಗಳ ಮಾಡುತ್ತಲೇ ಇರುತ್ತೇವೆ. ಮುಖ್ಯ ಹೇಳಬೇಕೆಂದರೆ ಇಲ್ಲಿ ಸರಿ ತಪ್ಪುಗಳ ನಿರ್ಣಯ ಬಹಳ ಕಷ್ಟ. ಪ್ರತಿಯೊಂದು ವಿಷಯಗಳಿಗೂ ಎರಡು ಮುಖಗಳು. ಬೇಕಾದರೆ ಸರಿ ಅಂದುಕೊಳ್ಳಬಹುದು. ಬೇಡವಾದರೆ ತಪ್ಪು ಅಂದ್ಕೊಬಹುದು. ಉದಾಹರಣೆಗೆ ಯಾರದ್ದೋ ಮಗು ಬಿದ್ದು ಅಳುತ್ತಿದ್ದರೆ ನಮ್ಮ ಮನಸು ಅಳುತ್ತದೆ. ನೋಡಿದಾಕ್ಷಣ ನಾವು ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಮಗು ಇನ್ನೂ ಜೋರಾಗಿ ಅಳುತ್ತದೆ. ಅದಕ್ಕೆ ನಮ್ಮ ಅಪರಿಚತತೆ ಮತ್ತಷ್ಟು ಭಯವಾಗಿ ಕಾಡುತ್ತದೆ. ನಮಗೆಲ್ಲೋ ಮನಸು ಇರುಸು ಮುರುಸು. ಆ ಮಗುವಿನ ಅಮ್ಮ ನಾವಾಗಲಾರೆವು ಎಂಬುದು ಮಗುವಿನ ಸತ್ಯ. ಮಗು ಬಿದ್ದುದನ್ನು ನೋಡಿಯೂ ಹಾಗೆ ಹೊರಟು ಹೋಗಲಾಗದ್ದು ನಮ್ಮೊಳಗಿನ ಸತ್ಯ. ನೋವು ಮತ್ತು ಬೀಳುವಿಕೆಯ ಆ ಎರಡೂ ಘಟನೆಗಳು ನಮ್ಮ ಇರುವಿಕೆಯ ಮೇಲೆ ಅಥವಾ ನಮ್ಮ ಭಾವಗಳ ಆ ಕ್ಷಣದ ಮೇಲೆ ಅವಲಂಬಿತವಾಗುತ್ತವೆ. ಸತ್ಯವೂ ಹಾಗೇ. ಅದು ಹಲವು ಮುಖಗಳ ಹೊಂದಿರುವ ಒಂದು ಪ್ಲೆಕ್ಸಿಬಲ್ ಆಗಿರುವ ಮತ್ತು ಆ ಕ್ಷಣದ ವಾಸ್ತವವಕ್ಕೆ ಹತ್ತಿರವೆನಿಸುವ ವಿಷಯವಾಗಿದೆ.</div>
<div style="text-align: justify;">
<br /></div>
<div style="text-align: justify;">
ನೈತಿಕತೆಯ ವಾದವನ್ನು ತೆಗೆದುಕೊಂಡರೂ ಜಾತೀಯತೆಯ ವಿಷಯ ತೆಗೆದುಕೊಂಡರೂ ಇಂತಹ ಅನೇಕ ಪ್ರಶ್ನೆಗಳು ಪದೇ ಪದೇ ಉದ್ಭವಿಸುತ್ತವೆ. ಪ್ರಶ್ನಾತೀತ ವೆನ್ನಿಸುವ ಧರ್ಮ ಸತ್ಯಗಳೂ ಇಲ್ಲಿ ಪ್ರಶ್ನೆಗಳೇ. ತತ್ಕ್ಷಣದ ವಾಸ್ತವದೆದುರು ಉಳಿದೆಲ್ಲ ಸತ್ಯಗಳೆಂಬ ಸತ್ಯಗಳೂ ಮಾಯವಾಗಿರುತ್ತವೆ!</div>
<div style="text-align: justify;">
<br /></div>
<div style="text-align: justify;">
ಈ ವಿಷಯವನ್ನೇ ಯಾಕೆ ಹೇಳುತ್ತಿದ್ದೇನೆಂದರೆ ಬದುಕನ್ನು ರೂಪಿಸಿಕೊಳ್ಳುವಾಗ ಒಂದಿಷ್ಟು ನಮ್ಮ ಕನಸುಗಳಿಗೆ ವಿರುದ್ಧವಾದ ಅಥವಾ ಸಮಾಧಾನವಿಲ್ಲದ ದಿನಗಳನ್ನು ಪ್ರತಿಯೊಬ್ಬರೂ ಎದುರಿಸಲೇಬೇಕಾಗುತ್ತದೆ. ವಿಧಿಯೋ ಕರ್ಮವೋ ದೈವವೋ ಯಾವುದೋ ಒಂದು ನಮಗಿಂತಲೂ ಮೀರಿದ್ದು ಮತ್ತು ನಮ್ಮೆಲ್ಲರ ಬದುಕನ್ನು ನಿಣರ್ಾಯಿಸುವ </div>
<div style="text-align: justify;">
ಶಕ್ತಿಯಿದೆ ಎಂಬುದು ನಿವರ್ಿವಾದ. ಅದಕ್ಕೆ ಸಡ್ಡುಹೊಡೆದು ಬದುಕುವ ಛಲವೇ ನಮ್ಮ ಈ ಬದುಕಿನ ತುಂಬ ನಡೆಸುವ ಹೋರಾಟ. ಇಲ್ಲಿ ಶರಣಾಗತಿಯೆಂದರೆ ರಣರಂಗದಲ್ಲಿ ಗಾಂಡೀವ ಕೆಳಗಿಟ್ಟ ಅಜರ್ುನನ ಶರಣಾಗತಿಯಂತೆ. ನನಗೆ ಕೃಷ್ಣ ತತ್ವ ಪ್ರಿಯವೆನ್ನಿಸುವುದೂ ಈ ಕಾರಣಕ್ಕೆ. ಫಲಾಫಲಗಳ ದೈವಕ್ಕೆ ಬಿಟ್ಟು ಬಿಡೋಣ. ಹೋರಾಟದಿಂದ ಹಿಂದೆ ಸರಿಯುವ ಹೇಡಿಯಾಗಬಾರದು. ಯುದ್ಧಕ್ಕೆ ಮೊದಲೇ ಕುಸಿಯುವ ಬಲಹೀನರಾಗುವುದು ನಮಗಂತೂ ಶ್ರೇಷ್ಠ ಮಾರ್ಗವಲ್ಲ. ನಿನಗೆ ಬೇರೆ ಮಾರ್ಗವೇ ಇಲ್ಲ ಅಂದುಕೊಂಡಾಗ ಇರುವ ಒಂದೇ ಮಾರ್ಗದಲ್ಲಿ ಎಂತದ್ದೇ ಹೋರಾಟವೆದುರಾದರೂ ಗೆಲ್ಲುವ ಹಠ ಹುಟ್ಟಿಕೊಳ್ಳುತ್ತದೆ. ಮತ್ತು ಈ ಹಠಕ್ಕೆ ಸೋಲೆಂಬುದಿಲ್ಲ. ಅದು ವಿಧಿಯನ್ನು ಗೆಲ್ಲುವ ಏಕೈಕ ಮಾರ್ಗ.</div>
<div style="text-align: justify;">
<br /></div>
<div style="text-align: justify;">
ನಿನ್ನೆಯವರೆಗೂ ಡಿಗ್ರಿ ಮುಗಿಸಿಕೊಂಡ ಹುಡುಗಿಯೊಬ್ಬಳು ಮುಂದೇನು ಮಾಡುವುದೆಂಬ ನಿಶ್ಚಿತತೆಯೇ ಇಲ್ಲದೇ ತೊಳಲಾಟದಲ್ಲಿದ್ದಳು! ಅವಳದ್ದು ಸಮಸ್ಯೆ ಒಂದೆರಡಲ್ಲ. ಕೆಲಸ ಹುಡುಕಬೇಕೆಂದರೆ ಅವಳಿಗೆ ತಕ್ಕಂತ ಯಾವ ಕೆಲಸವೂ ತತ್ಕ್ಷಣಕ್ಕೆ ಸಿಗಲಾರದು. ಅಪ್ಪ, ಅಮ್ಮನಿಗೆ ಇನ್ನೂ ಎರಡು ವರ್ಷ ಲಕ್ಷ ಗಟ್ಟಲೆ ಕಚರ್ು ಮಾಡಿ ಓದಿಸಲು ಮನಸ್ಸಿಲ್ಲ. ಒಂದು ಹಂತದ ಓದು ಮುಗಿದಿದೆ. ಏನಾದರೂ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ವರ್ಷ ಕಳೆದರೆ ಮುಂದಿನ ವರ್ಷ ಮದುವೆ ಮಾಡಿ ಜವಾಬ್ಧಾರಿ ಕಳೆದುಕೊಳ್ಳುವ ಯೋಚನೆ ಅವರದ್ದು. ಅದು ಒಂದು ವಿಧದಲ್ಲಿ ಸರಿಯೇ. ತಂದೆ ತಾಯಿಯಾಗಿ ಅವರ ಯೊಚನೆ. ಮುಂದೆ ಓದಿದರೂ ನೌಕರಿ ಮಾಡುವ ಯೋಗವಾಗಲೀ ಅಥವಾ ಅಷ್ಟು ಓದಿದ ಮೇಲೆ ಕೆಲಸ ಮಾಡಲೇಬೇಕಾದ ಒತ್ತಡಗಳೂ ಅವಳ ಮೇಲೆ ಬೀಳಬಹದು. ಆಗಲೂ ಅಪ್ಪ ಅಮ್ಮನ ಇಷ್ಟದ ಪ್ರಕಾರ ಮದುವೆಯಾಗಬೇಕಾದ ಜವಾಬ್ಧಾರಿಯಿದೆ ಅವಳಿಗೆ. ಸಿಇಟಿ ಬರೆದರೆ ಇದೇ ಊರಲ್ಲಿ ಕಾಲೇಜು ಸೀಟು ಸಿಗುವುದೆಂಬ ಗ್ಯಾರಂಟಿಯಿಲ್ಲ. ಬೇರೆ ಊರಿಗೆ ತಂದೆ ತಾಯಿ ಕಳಿಸೋದಿಲ್ಲ. ಒಂದೆರಡು ಸಮಸ್ಯೆಗಳೇ ಅಲ್ಲ. ಎಲ್ಲಕ್ಕಿಂತ ದೊಡ್ಡದು ಹಣದ ಸಮಸ್ಯೆಯಿದೆ. ಇಷ್ಟೆಲ್ಲವೂ ರೆ ಗಳ ನಡುವೆ ಅವಳು ಒಂದು ನಿಧರ್ಾರಕ್ಕೆ ಬಂದಿದ್ದಳು. ಅದು ನಿಧರ್ಿಷ್ಟವಾಗಿ. ಮುಂದಿನ ಎರಡು ವರ್ಷಗಳು ಓದುತ್ತೇನೆಂಬುದು. ಹೇಗೆ ಏನು ಎಲ್ಲಿ ಈ ಪ್ರಶ್ನೆಗಳೆಲ್ಲ ಆ ನಿಧರ್ಾರದ ಜೊತೆಗೆ ಕರಗಲೇಬೇಕಿತ್ತು. ಸಿಇಟಿ ಪಾರ್ಮ್ ತುಂಬುವಾಗ ಇನ್ನಷ್ಟು "ರೆ' ಗಳು ಹುಟ್ಟಿಕೊಂಡವು! ಊರಿಂದ ಇನ್ನೂ ಒಬ್ಬಳೇ ಎಲ್ಲಗೂ ಕಾಲಿಡದಿದ್ದ ಅವಳು ದೂರದ ಜಿಲ್ಲೆಯ ಯೂನಿವಸರ್ಿಟಿಗೆ ಒಬ್ಬಳೇ ಹೋಗಿಬರಲು ನಿಶ್ಚಯಿಸಿಕೊಂಡಳು. ಮತ್ತೆಲ್ಲ ವಿರೋಧಗಳನ್ನೂ ಅವಳ ನಿಧರ್ಾರ ನಿಧಾನವಾಗಿ ಕರಗಿಸಿತು. ಹಣದ ವ್ಯವಸ್ಥೆ ಹೇಗೋ ಹೊಂದಿತು. ಅದೊಂದಾದರೆ ಉಳಿದಂತೆ ಎಲ್ಲವೂ ಅವಳ ಆತ್ಮಸ್ಥೈರ್ಯದ ಎದುರು ನಿಲ್ಲುವುದಾಗಲಿಲ್ಲ. ಸಿಇಟಿ ಯ ಒಳ್ಳೇ ಅಂಕಗಳು ಅವಳನ್ನು ಇದೇ ಊರಿಗೆ ಅಡ್ಮಿಷನ್ ಪಡೆಯಲು ಸಹಾಯಕವಾದವು! ಈಗವಳು ಪೋಸ್ಟ್ ಗ್ರಾಜುಯೇಟ್ ಓದುತ್ತಿದ್ದಾಳೆ! ಮತ್ತೆ ಅದನ್ನು ಮುಗಿಸಿ ಒಳೆಯ ಉದ್ಯೋಗ ಹೊಂದುವ ಭರವಸೆಯಲ್ಲಿದ್ದಾಳೆ. ಒಂದುವೇಳೆ ಮದುವೆಯೇ ಎಂದಾದರೂ ಓದು ತನ್ನ ಅವಶ್ಯಕತೆ. ಅದನ್ನು ಪೂರೈಸಿಕೊಂಡ ತೃಪ್ತಿ ಅವಳಿಗಿರುತ್ತದೆ. </div>
<div style="text-align: justify;">
<br /></div>
<div style="text-align: justify;">
ಇಷ್ಟೆಲ್ಲ ಕಥೆ ಹೇಳಿದ್ದುದರ ಅರ್ಥವಿಷ್ಟೇ. ಬದುಕನ್ನು ಭೂತಗನ್ನಡಿಯಲ್ಲಿ ತೋರಿಸುವುದು ವಿಧಿಯ ಸ್ವಭಾವ. ಒಮ್ಮೆ ಬೆಚ್ಚಿದರೆ ಬೆಚ್ಚಿ ಹಿಂದೆ ಸರಿದರೆ ನಿಶ್ಚಿತ ಗುರಿಯನ್ನು ತಲುಪಲಾಗದು. ಹಾಗಂತ ಬದುಕು ತುಂಬಾ ಈಸಿ ಅಂತ ಹೇಳುವುದು ನನ್ನ ಉದ್ದೇಶವಲ್ಲ. ನಾಳೆಗಳ ಕುರಿತು ನಾವೆಷ್ಟು ಲೆಕ್ಕಾಚಾರವಿಟ್ಟುಕೊಂಡೇ ಬದುಕಿದರೂ ಒಮ್ಮೊಮ್ಮೆ ತಲೆಕೆಳಗಾಗುವ ಲೆಕ್ಕಾಚಾರಗಳನ್ನೂ ಎದುರಿಸುವ ಮನಸ್ಥೈರ್ಯ ಎಂದಿಗೂ ಇಟ್ಟುಕೊಳ್ಳಲೇಬೇಕು. ಒಂದು ಚಿಕ್ಕ ಆಕ್ಸಿಡೆಂಟ್ ಸಾಕು ಬದುಕಿನ ಬಣ್ಣ ಬದಲಾಯಿಸಿಬಿಡಲು! ಯಾರೋ ಒಬ್ಬ ವ್ಯಕ್ತಿ ಸಾಕು ನಮ್ಮ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿಸಲು. ಹಾಗಂಥ ಲೆಕ್ಕಾಚಾರವಿಲ್ಲದ ನಿದರ್ಿಷ್ಟತೆಯಿಲ್ಲದ ಬದುಕು ಬದುಕಲಾಗದು. ಅದು ಸರಿಯೂ ಅಲ್ಲ. ಹಾಗಿದ್ದೂ ಬದುಕಿನ ಅನಿವಾರ್ಯ ಪರ್ವಗಳ ಅಷ್ಟೇ ಪ್ರೀತಿಯಿಂದ ಬದುಕಲು ಒಪ್ಪಿಕೊಳ್ಳುವುದಿದೆಯಲ್ಲ ಇದು ವಿಧಿಗೆ ನಾವು ಹಾಕುವ ಸವಾಲು. ಏನೇ ಬರಲಿ ಬಂದಂತೆ ಸ್ವೀಕರಿಸಿಬಿಡುವ ಮತ್ತೆ ಬದುಕಿನ ಕನಸಿಗೆ ಜೀವ ತುಂಬಿಕೊಳ್ಳುವ ಹೋರಾಟದ ಜೊತೆಗೆ ಎಂತ ವಿಧಿಯೂ ಸೋಲಬೇಕು! ಸೋತು ಗೆಲ್ಲುವ ಜಾಣ್ಮೆಯಿದು.</div>
<div style="text-align: justify;">
<br /></div>
<div style="text-align: justify;">
ಸಾಕು ಇಂದಿಗೆ. ಮನಸಿನ ಮಾತಿಗೆ ಕೊನೆಯೇ ಇಲ್ಲ. ಮತ್ತೊಮ್ಮೆ ಸಿಗೋಣ ಈ ತೀರದಲ್ಲಿ... </div>
<div style="text-align: justify;">
<br /></div>
<div style="text-align: justify;">
</div>
</div>
maanasa saarovrahttp://www.blogger.com/profile/14088976224552347105noreply@blogger.com6tag:blogger.com,1999:blog-7191814811569941492.post-73938418471462525032013-06-07T01:02:00.002-07:002013-06-07T01:59:37.672-07:00 ಮಾನಸ ಸರೋವರದ ಎಲ್ಲ ಬರಹಗಳನ್ನು ಸೇರಿಸಿ ಪುಸ್ತಕ ಮಾಡುವ ರಾಘು ಬಿ. ಎಂ ಅವರ ಕನಸು ನನಸಾಗಿದೆ. "ಮನನ" ಪುಸ್ತಕದ ರೂಪ ಪಡೆದು ಲೋಕಾರ್ಪಣೆಗೊಂಡ ಮಧುರ ಕ್ಷಣಗಳು <div dir="ltr" style="text-align: left;" trbidi="on">
<div class="separator" style="clear: both; text-align: center;">
</div>
<table cellpadding="0" cellspacing="0" class="tr-caption-container" style="float: left; margin-right: 1em; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEj5fk3TqjOkJji-_so6oDsWWILYLYt1hbQzlNFweHYQYiPMtTmRfozaX92zdc_zW4r1GvYbHkgKaTJuI8TlC1VbbeGbxR79DEja3X411Rk4jWfYAl8WkvZ45UbDP8vzxSGKs_irfQ_C6gU/s1600/DSCN4962.JPG" imageanchor="1" style="clear: left; margin-bottom: 1em; margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEj5fk3TqjOkJji-_so6oDsWWILYLYt1hbQzlNFweHYQYiPMtTmRfozaX92zdc_zW4r1GvYbHkgKaTJuI8TlC1VbbeGbxR79DEja3X411Rk4jWfYAl8WkvZ45UbDP8vzxSGKs_irfQ_C6gU/s320/DSCN4962.JPG" width="320" /></a></td></tr>
<tr><td class="tr-caption" style="text-align: center;">ಉದ್ಘಾಟನೆ</td></tr>
</tbody></table>
"ಸ್ವಸ್ತಿ ಪ್ರಕಾಶನ" ಹಾಗೂ"ಚೈತ್ರರಶ್ಮಿ" ಬಳಗದ ಸ್ನೇಹಮಿಲನ ಕಾರ್ಯಕ್ರಮ<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhupUKvKQN32wgX-kytT7AP7-8hHbqQtufeYU5Pmz79-OnfbuSWe_m18ISYtYiy0bwp7Y-r0Q-vspRvq18G2dfzZdD1yw6m5zznh9Lr-jqMtOheu1pU5X7WlN1VpXm3CMgj7CJs9kAcN-o/s1600/DSCN5002.JPG" imageanchor="1" style="margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEhupUKvKQN32wgX-kytT7AP7-8hHbqQtufeYU5Pmz79-OnfbuSWe_m18ISYtYiy0bwp7Y-r0Q-vspRvq18G2dfzZdD1yw6m5zznh9Lr-jqMtOheu1pU5X7WlN1VpXm3CMgj7CJs9kAcN-o/s320/DSCN5002.JPG" width="320" /></a></td></tr>
<tr><td class="tr-caption" style="text-align: center;">ಶ್ರೀ ರಾಮಚಂದ್ರ ಹೆಗಡೆ ಸಿ.ಎಸ್. ಹಾಗೂ ಡಾ.ಮಹೇಶ ಅಡಕೋಳಿ.</td></tr>
</tbody></table>
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEijlDGUNcc8vZ7Xgnkx7pKbm99ie3C-mk_SUbx4qMebdNzSCpRKfEwh9bMYJ4ptq_OOIQ04WzIdtD7ELVHJROoOvbI4JCCLhUGz8xGoVri7AWBVa045stEXVPNbnFwwx6XBkYKayY0JqeM/s1600/DSCN4975.JPG" imageanchor="1" style="margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEijlDGUNcc8vZ7Xgnkx7pKbm99ie3C-mk_SUbx4qMebdNzSCpRKfEwh9bMYJ4ptq_OOIQ04WzIdtD7ELVHJROoOvbI4JCCLhUGz8xGoVri7AWBVa045stEXVPNbnFwwx6XBkYKayY0JqeM/s320/DSCN4975.JPG" width="320" /></a></td></tr>
<tr><td class="tr-caption" style="text-align: center;">"ಮನನ" ಲೋಕಾರ್ಪಣೆ</td></tr>
</tbody></table>
<br />
<table cellpadding="0" cellspacing="0" class="tr-caption-container" style="float: left; margin-right: 1em; text-align: left;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEilr-cXsfQNWd5u1kSZg-RedRKRggQcvukyoPEEg7e-0c40xq_VSoxgMQTjb8GJ8tvA6pUP2-DJqeF9F4vE8wcpqSQ9HOJXpAZMB_6-jkyfTfkE4Og8YXqCs-eUXa7hN2Vi4PVnU_VwQeU/s1600/DSCN4978.JPG" imageanchor="1" style="clear: left; margin-bottom: 1em; margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEilr-cXsfQNWd5u1kSZg-RedRKRggQcvukyoPEEg7e-0c40xq_VSoxgMQTjb8GJ8tvA6pUP2-DJqeF9F4vE8wcpqSQ9HOJXpAZMB_6-jkyfTfkE4Og8YXqCs-eUXa7hN2Vi4PVnU_VwQeU/s320/DSCN4978.JPG" width="320" /></a></td></tr>
<tr><td class="tr-caption" style="text-align: center;">"ಚೈತ್ರರಶ್ಮಿ" ಲೋಕಾರ್ಪಣೆ</td></tr>
</tbody></table>
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEirhafvAm5rZqQsNlC3rOfLbpmHN7knwZ9LWDRemPk8zgaTgp7GLCBxd5qk4eqgSIUKUXcxc5SUWs-3bj45FxdFAfBJnbZu00WqgRsnVY4BfKq8TmpCigrC4kfqJo95gvXna-wYhn9do4k/s1600/DSCN4987.JPG" imageanchor="1" style="margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEirhafvAm5rZqQsNlC3rOfLbpmHN7knwZ9LWDRemPk8zgaTgp7GLCBxd5qk4eqgSIUKUXcxc5SUWs-3bj45FxdFAfBJnbZu00WqgRsnVY4BfKq8TmpCigrC4kfqJo95gvXna-wYhn9do4k/s320/DSCN4987.JPG" width="320" /></a></td></tr>
<tr><td class="tr-caption" style="text-align: center;">ಶ್ರೀ ರಾಚಂ ಅವರಿಗೆ ಸಮ್ಮಾನ ಉತ್ತರಕನ್ನಡ ಬಳಗದಿಂದ</td></tr>
</tbody></table>
<table cellpadding="0" cellspacing="0" class="tr-caption-container" style="float: right; margin-left: 1em; text-align: right;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgqMKTNCkAmhnH6ivswX69haDFvOoR9atdAXEX2YZ3MU4GBi3fEMdFcP_gSOqXD0U0eaGKd-UOe0S5i-N2inTkEN3E5dG5lCrUw9D1rr0ovcfHLjoPuIy9h4w_MZFUbWypTlv58riS4SUI/s1600/DSCN5021.JPG" imageanchor="1" style="clear: right; margin-bottom: 1em; margin-left: auto; margin-right: auto;"><img border="0" height="240" src="https://blogger.googleusercontent.com/img/b/R29vZ2xl/AVvXsEgqMKTNCkAmhnH6ivswX69haDFvOoR9atdAXEX2YZ3MU4GBi3fEMdFcP_gSOqXD0U0eaGKd-UOe0S5i-N2inTkEN3E5dG5lCrUw9D1rr0ovcfHLjoPuIy9h4w_MZFUbWypTlv58riS4SUI/s320/DSCN5021.JPG" width="320" /></a></td></tr>
<tr><td class="tr-caption" style="text-align: center;">ನಮ್ಮ ಬಳಗ</td></tr>
</tbody></table>
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjETEfFPcYVsD1HnTBWkZmHPovqhkT5untKN3duoy7Bx5PamXIGl2eqTYii88tdJ_p3K7CN2uQj4CGoRW_IrIS7fhyphenhyphen4vQ4Y3xi2OC75f4yaf72uDknqWFz1LcxgjZ0VwHaQSToxMG07fNM/s1600/akka+cover2.jpg" imageanchor="1" style="margin-left: auto; margin-right: auto;"><img border="0" height="245" src="https://blogger.googleusercontent.com/img/b/R29vZ2xl/AVvXsEjETEfFPcYVsD1HnTBWkZmHPovqhkT5untKN3duoy7Bx5PamXIGl2eqTYii88tdJ_p3K7CN2uQj4CGoRW_IrIS7fhyphenhyphen4vQ4Y3xi2OC75f4yaf72uDknqWFz1LcxgjZ0VwHaQSToxMG07fNM/s320/akka+cover2.jpg" width="320" /></a></td></tr>
<tr><td class="tr-caption" style="text-align: center;">ಮುಖಪುಟಗಳು</td></tr>
</tbody></table>
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiRYs4tb5QPExg-069yfchwUWmgNrjCHFFsjh54npXWuPz2nwh6lx7nqq2xBDAQFlPJceXQiq74J0Srwuhc7RyNqeNksvH7RrSaUkHaupAcyltVPDKGtitWDrMmfNtopszIqFtY0QfZfMQ/s1600/matte+final.jpg" imageanchor="1" style="margin-left: auto; margin-right: auto;"><img border="0" height="320" src="https://blogger.googleusercontent.com/img/b/R29vZ2xl/AVvXsEiRYs4tb5QPExg-069yfchwUWmgNrjCHFFsjh54npXWuPz2nwh6lx7nqq2xBDAQFlPJceXQiq74J0Srwuhc7RyNqeNksvH7RrSaUkHaupAcyltVPDKGtitWDrMmfNtopszIqFtY0QfZfMQ/s320/matte+final.jpg" width="186" /></a></td></tr>
<tr><td class="tr-caption" style="text-align: center;">ಕರೆ ಓಲೆ.<br />
<br />
<br /></td></tr>
</tbody></table>
<br />
<br />
<br /></div>
maanasa saarovrahttp://www.blogger.com/profile/14088976224552347105noreply@blogger.com8tag:blogger.com,1999:blog-7191814811569941492.post-42411761039382432212013-04-30T02:35:00.002-07:002013-04-30T02:35:58.546-07:00ಅಮ್ಮನೆಂದರೆ........<div dir="ltr" style="text-align: left;" trbidi="on">
<br />
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEixlBINlgwnTEhJhK3sboviTBxvk-6unyYOMH7tIWW8NYzk_GKbGjqUH_Y_vaOJKIHRxBaPH54eylbds4ZZXnJ2LG3mBBmwJPOfkIxSULX9WSsirLQv8vC6Bmse-EKWHC2F9JwR-FAekAA/s1600/Absolute+best+and+final+Mother's+Love150.jpg" imageanchor="1" style="margin-left: auto; margin-right: auto;"><img border="0" src="https://blogger.googleusercontent.com/img/b/R29vZ2xl/AVvXsEixlBINlgwnTEhJhK3sboviTBxvk-6unyYOMH7tIWW8NYzk_GKbGjqUH_Y_vaOJKIHRxBaPH54eylbds4ZZXnJ2LG3mBBmwJPOfkIxSULX9WSsirLQv8vC6Bmse-EKWHC2F9JwR-FAekAA/s1600/Absolute+best+and+final+Mother's+Love150.jpg" height="320" width="233" /></a></td></tr>
<tr><td class="tr-caption" style="text-align: center;">ಚಿತ್ರ ಕೃಪೆ: ಅಂತರ್ಜಾಲ.</td></tr>
</tbody></table>
<br />
<span style="color: yellow; font-size: large;">ತುಂಬಾ ವರ್ಷಗಳಿಂದ ನೋಡುತ್ತಿದ್ದೇನೆ. ಇವತ್ತಿನ ಯುವ ಜನಾಂಗದ ಮನಸ್ಥಿತಿಯ ಕುರಿತು ಭಯವಾಗುತ್ತದೆ.</span><br />
<span style="color: yellow; font-size: large;">ಶಾಲಾ ಕಾಲೇಜು ದಿನಗಳಲ್ಲಿ ಗುರು ಹಿರಿಯರ ಕುರಿತು ಒಂದಿಷ್ಟು ಭಯವನ್ನೂ ಒಂದಿಷ್ಟು ಸಂಸ್ಕಾರವನ್ನೂ ತುಂಬಿಕೊಂಡ ನಮ್ಮ ಹುಡುಗರಿಂದು ಮಾನವೀಯತೆಯನ್ನೂ ಮರೆಯುತ್ತಿದ್ದಾರೆ. ಯಾಕೆ ಈ ಮಾತು ಹೇಳಬೇಕೆನಿಸಿತು ಗೊತ್ತಾ? ನಿನ್ನೆ ಒಂದು ಘಟನೆ ನಡೆಯಿತು.ಅದನ್ನೂ ಅದರ ಹಿನ್ನೆಲೆಯನ್ನೂ ಹೇಳಿಕೊಳ್ಳಬೇಕು ನಾ.</span><br />
<span style="color: yellow; font-size: large;"><br /></span>
<span style="color: yellow; font-size: large;"> ತುಂಬಾ ಹಿಂದೆ ಅಂದರೆ ಹತ್ತು ವರ್ಷಗಳ ಹಿಂದಿನ ಮಾತಿದು. ಪುಟ್ಟ ಮಗುವನ್ನೆತ್ತಿಕೊಂಡು ಒಬ್ಬಳು ಸ್ತ್ರೀ ಬಸ್ಸೇನಿರುವಾಗ ವಿಪರೀತ ರಶ್ಶು. ನಮ್ಮ ಹಳ್ಳಿಗಳ ಬಸ್ಸಿನ ದಿನದ ಹಣೆಬರಹ ಇದೇ. ಎಲ್ಲರಿಗೂ ಗೊತ್ತಿರೋದೇ. ಇಂದಿಗೂ ಅದು ಹಾಗೇ ಇದೆ. ಹಾಗೆ ಹತ್ತುವ ಮೊದಲು ಕಿಟಕಿಯಂಚಿನಿಂದ ತನ್ನ ಬಳಿ ಇರೋ ಏನೋ ಚೀಲ ಒಬ್ಬರ ಬಳಿ ಕೊಟ್ಟು ಒಂದು ಸೀಟು ಹಿಡಿಯಲು ವಿನಂತಿಸಿಕೊಂಡಳು. ಆ ಮಹನೀಯರು ಅವಳಿಗಾಗಿ ಒಂದು ಸೀಟನ್ನೂ ಇಟ್ಟು ಇಳಿದು ಹೋದರು. ಬಸ್ಸಿನ ರಶ್ಶಿನಲ್ಲಿ ವಿಪರೀತ ಸೆಕೆಯಿಂದ ಅಳುತ್ತಿದ್ದ ಮಗುವನ್ನೆತ್ತಿಕೊಂಡು ಮೇಲೇರಿದರೆ ಅವಳ ಬ್ಯಾಗಿನ ಸಹಿತ ಸೀಟು ನಾಪತ್ತೆ. ಇಡೀ ಬಸ್ಸಲ್ಲಿ ಅವಳ ಬ್ಯಾಗೂ ಇರಲಿಲ್ಲ. ಅವಳಿಗೊಂದು ಸೀಟು ಯಾರೂ ಕೊಡಲಿಲ್ಲ. ಅದೇ ಸೀಟಿನ ಮೇಲೆ ಮೂವರು ಕಾಲೇಜು ಹುಡುಗಿಯರು ಕುಳಿತು ತಮಗೇನೂ ಗೊತ್ತಿಲ್ಲದೇ ಇರೋರ ಹಾಗೇ ಹರಟುತ್ತಿದ್ದರು. ಅವಳು ಕೇಳಿಕೊಂಡರೂ ಒಂಚೂರು ಜಾಗ ಇಡೀ ಬಸ್ಸಲ್ಲಿ ಎಲ್ಲಯೂ ಅವಳಿಗೆ ದೊರೆಯಲಿಲ್ಲ. ಬಸ್ಸಿನ ತುಂಬಾ ತುಂಬಿದ್ದ ಹೈಸ್ಕೂಲು ಮತ್ತು ಕಾಲೇಜು ಮಕ್ಕಳೇ ಅವಳೆಡೆಗೆ ಕನಿಕರವನ್ನೂ ತೋರಲಿಲ್ಲ. ಆಮೇಲೆ ವೃದ್ಧರೊಬ್ಬರು ಅವಳನ್ನು ತಮ್ಮ ಸೀಟು ಬಿಟ್ಟು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟರು. ಹಾಲಿಗಾಗಿ ರಚ್ಚೆಹಿಡಿದ ಮಗು ಅವಳ ಮಡಿಲಲ್ಲಿ ಶಾಂತ ಮಲಗಿತು. ನಿನ್ನೆ ಮತ್ತದೇ ಅನುಭವ. ತಿಂಗಳು ತುಂಬಿದ ಗರ್ಭಿಣಿಗೆ ನಾನೊಂದು ಸೀಟು ಹಿಡಿದುಕೊಂಡರೆ ಯಾವ ಮುಲಾಜಿಲ್ಲದೇ ಪೇಪರ ಇಟ್ಟಲ್ಲೇ ಚೂರೂ ಬೇಸರವಿಲ್ಲದೇ ಕೂರುವ ಇದೇ ಹುಡುಗಿಯರು ಇಡೀ ಬಸ್ಸು ತುಂಬ ತಮ್ಮ ಬ್ಯಾಗ ಇಟ್ಟು ಬುಕ್ ಮಾಡಿಕೊಳ್ಳುವವರಂತೆ ಸೀಟು ಹಿಡಿದುಕೊಂಡಾಗ ಅವರ ಬ್ಯಾಗು ಸ್ವಲ್ಪ ಸರಿಸಿದರೆ ಕೆಂಡಾ ಮಂಡಲವಾಗುತ್ತಾರೆ! ನನಗ್ಯಾಕೆ ಉಸಾಬರಿ ಅಂತವಾ ಮನಸೇ.. ನಿಜಕ್ಕೂ ನೋವಾಗುತ್ತದೆ. ಹುಡುಗರ ಬಗ್ಗೆ ನಾನು ಹೇಳೋದಿಲ್ಲ. ಆದರೆ ಇವರು ಹುಡುಗಿಯರು. ಇನ್ನೊಂದು ದಿನ ಇವರು ತಾಯಿಯಾಗುವವರು. ಯಾವುದೋ ತಾಯಿಯ ಮಗ್ಗುಲಲ್ಲಿ ಹೀಗೇ ಜೋತಾಡಿಕೊಂಡು ಬೆಳೆದವರು. ಯಾವುದೋ ತಾಯಿಯ ಗರ್ಭದಲ್ಲಿ ಕುಳಿತೇ ಧರೆಗಿಳಿದವರು. ನಾಳೆಯ ಮಕ್ಕಳಿಗೆ ಹಾಲುಣಿಸುವವರು. ಯಾಕಿಷ್ಟು ಮಾನವೀಯತೆ ಮರೆತ ಕ್ರೂರರಾಗುತ್ತಾರೆ! ಮನಸ್ಸು ರೋಧಿಸುತ್ತದೆ. ಭಗವಂತ ಹೆಣ್ಣಿಗೆ ಕೊಟ್ಟಿರೋ ವರ ತಾಯ್ತನ ಎನ್ನುವುದು. ಅದು ಪ್ರತೀ ಹೆಣ್ಣಿಗೆ ಒಂದಲ್ಲ ಒಂದು ದಿನ ನಿಲ್ಲಲೇಬೇಕಾದ ಸ್ಥಾನ. ಅಂಥವಳಿಗೇ ನಮ್ಮ ತಾಯಂದಿರ ಬಗ್ಗೆ ಗಭರ್ಿಣಿ ಹೆಣ್ಣಿನ ಬಗ್ಗೆ ಒಂದಿಷ್ಟು ಸಹಾನುಭೂತಿಯೂ ಇಲ್ಲದಂತಾಗುತ್ತಿದೆಯೆರಂದರೆ ಎಂಥ ನೋವು.!! </span><br />
<span style="color: yellow; font-size: large;"> ನಾನು ಸಮಾಜ ಸುಧಾರಕಳಾಗಿ ಹೇಳ್ತಿಲ್ಲ ಈ ಮಾತನ್ನು. ತುಂಬ ನೋವಿನಿಂದ ಹೇಳುತ್ತಿದ್ದೇನೆ. ಯಾರನ್ನೂ ಗೌರವದಿಂದ ಕಾಣುವ ಮನೋಭಾವವೇ ಉಳಿಯುತ್ತಿಲ್ಲ. ಸಹಾಯ ಮಾಡುವುದು ದೂರ ಉಳಿಯಿತು. ಒಂದಿನ ನನ್ನ ಕಣ್ಣಲ್ಲೇ ಕಂಡಿದ್ದೇನೆ. ಇಂತದೇ ಸಂದರ್ಭದಲ್ಲಿ ಒಬ್ಬಳು ಗರ್ಭಿಣಿ ಹೆಣ್ಣಿಗೆ ಜಾಗ ಬಿಟ್ಟುಕೊಟ್ಟ ತನ್ನದೇ ಗೆಳತಿಯ ಕುರಿತಾಗಿ ಆಡಿಕೊಂಡು ನಗುವುದನ್ನ. ಒಳ್ಳೆಯ ಮನಸಿನವರಿಲ್ಲ ಅನ್ನುತ್ತಿಲ್ಲ. ಆದರೆ ಅಂತಹ ಒಳ್ಳೆಯತನವನ್ನೂ ಕೆಟ್ಟದಾಗಿಸುವಂತೆ ನಗುತ್ತಿದ್ದಾರೆ</span><br />
<span style="color: yellow; font-size: large;">ನಮ್ಮ ಭಾವೀ ತಾಯಂದಿರು.! ಬದುಕಲ್ಲಿ ಯಾವತ್ತಾದರೂ ಇಂತಹ ದಿನಗಳು ಅವರ್ಯಾರಿಗೂ ಬಾರದಿರಲಿ. ಯಾಕಂದರೆ ಎಲ್ಲರಿಗೂ ಕಾರಲ್ಲೇ ಮೆರೆಸುವ ಗಂಡಂದಿರು ಸಿಗುವುದಿಲ್ಲ. ಬಸ್ಸುಗಳಲ್ಲೂ ಓಡಾಡುವ ದಿನಗಳು ಅವರಿಗೂ ಬರಬಹುದು. ಭಗವತೀ ಆ ದಿನ ಅವರಿಗೆ ಅರಿವಾಗಿಸಲೀ ಹೊರತೂ ಆ ಕಷ್ಟಗಳ ಅವರಿಗೆ ಕೊಡೋದು ಬೇಡ.</span><br />
<span style="color: yellow; font-size: large;"><br /></span>
<span style="color: yellow; font-size: large;"> ತಾಯ್ತನ ಎಂದರೆ ಸುಲಭದ್ದಲ್ಲ. ನೋಡೋವಷ್ಟು ಅಂದ್ಕೊಂಡಷ್ಟು ಸರಳದ್ದಲ್ಲ. ಒಂದು ಜೀವವನ್ನು ತನ್ನುಡಿಯೊಳಗೆ ಹೊತ್ತು ಆಜೀವ ಎರಡಾಗುವವರೆ ಜೀವ ಉಸಿರಾಗಿಸಿಕೊಂಡು ರಕ್ತ ಮಾಂಸಗಳ ಜೊತೆ ಬೆರೆತುಕೊಂಡ ಹೆಣ್ಣಿನ ದೇಹ ಭಾವ ಎಲ್ಲವೂ ತಾಯ್ತನಕ್ಕೆ ಕೇಳೋದು ಅವಳ ಜೀವಿತದ ಒಂದು ಹೊಸ ಉಸಿರನ್ನ. ತಾಯಿಯಾಗದ ಹೆಣ್ಣಿಗೆ ಅದರ ಅರಿವಾಗೋದು ಕಷ್ಟವಿರಬಹುದು. ಆದರೆ ಹೆಣ್ಣಾಗಿ ಹುಟ್ಟಿ ತಾಯ್ತನದ ಕುರಿತು ಒಂದಿಷ್ಟೂ ಗೌರವ ಆದರ ಪ್ರೀತಿ ಇಲ್ಲದಿದ್ದರೆ ಅಂತಹ ಸ್ತ್ರೀ ಬಗ್ಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಯಾಕೋ ಈ ಘಟನೆ ನನ್ನ ತುಂಬ ನೋಯಿಸಿತು. ಅದಕ್ಕೇ ನಿನ್ನೊಂದಿಗೆ ಹಂಚಿಕೊಂಡೆ. ಯಾರು ಏನೂ ಸಹಾಯ ಮಾಡದಿದ್ದರೂ ತಾಯಿ ತನ್ನ ಮಗುವನ್ನು ಸಲಹುತ್ತಾಳೆ. ಎಂತ ನೋವು ಸಂಕಟಗಳಲ್ಲೂ ಸಹಿಸುತ್ತಾಳೆ. ಆದರೆ ನಮ್ಮದೇ ಹುಡುಗಿಯರಿಗೆ ತಾಯ್ತನವೆಂದರೆ ಅಪಹಾಸ್ಯದ ಸಂಗತಿಗಳಾ! ನೋವಾಗೋದಿಲ್ಲವಾ?</span><br />
<span style="color: yellow; font-size: large;"><br /></span>
<span style="color: yellow; font-size: large;"> " ಅಮ್ಮ " ಎಷ್ಟಾಪ್ತ ಶಬ್ಧ! ಎಷ್ಟು ಆಪ್ತ ವ್ಯಕ್ತಿ. ಅವಳ ಒಡಲಿಂದ ಇಳಿದು ಬಂದ ಮಾಂಸದ ಮುದ್ದೆಯಂತ ನಮ್ಮನ್ನ ಬೆಳೆಸಿದ ಪೋಷಿಸಿದ ಅವಳ ಮಮತೆಗೆ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾ? ಅಮ್ಮ ಅನ್ನೋ ಶಬ್ಧವೇ ಸಾಕು ಎಂಥ ಕಲ್ಲು ಮನಸನ್ನೂ ಕರಗಿಸುವ ಶಕ್ತಿಯಿದೆ ಅದಕ್ಕೆ. ಹಾಗಿದ್ದೂ ಮೊನ್ನೆ ನಮ್ಮ ನಡುವೆ ಮಾತು ಬಂತಲ್ವಾ? ಅಮ್ಮನ ಪ್ರೇಮವೂ ಸ್ವಾರ್ಥದ್ದು ಅನ್ನೋ ವಿಷಯವಿರಬೇಕು.ನೀ ಇದಕ್ಕೆ ಏನಂತೀಯ? ನನಗಿಲ್ಲಿ ಯಾವುದೇ ಒಂದು ಕೋನ ಮಾತ್ರ ಸರಿ ಅನಿಸಲ್ಲ. ಅಮ್ಮ ಅನ್ನೋಳು ಸದಾ ಮಕ್ಕಳ ಹಿತ ಬಯಸ್ತಾಳೆ ನಿಜ. ಅಮ್ಮನಿಗೆ ಹೋಲಿಕೆ ಅಮ್ಮ ಮಾತ್ರ ಅದೂ ನಿಜ. ಆದರೆ ಅಮ್ಮ ಅನ್ನೋಳು ಸಹ ಒಂದು ಜೀವ. ಅದು ಮನುಷ್ಯ ಸಹಜ ಎಲ್ಲ ಭಾವಗಳ ಹೊತ್ತಂತ ಒಂದು ಮಾನವ ಜೀವ. ಅಮ್ಮ ಮಕ್ಕಳನ್ನ ತನ್ನ ಮಡಿಲಲ್ಲಿ ಅನುಗಾಲವೂ ಇಟ್ಕೊಳ್ಳೋಕೆ ಸಾಧ್ಯವಿಲ್ಲ. ಬೆಳೆಯುತ್ತ ಬೆಳೆಯುತ್ತ ರಕ್ತಗತವಾದ ಮತ್ತು ಪರಿಸರಗತವಾದ ನೂರೆಂಟು ರೂಪಗಳ ಮನುಷ್ಯ ಪಡೆದುಕೊಳ್ಳುತ್ತಾನೆ. ಮತ್ತು ಅದು ತಾಯಿ ಮತ್ತು ಮಕ್ಕಳ ಸಂಬಂಧದ ಮೇಲೂ ತನ್ನದೇ ಆದ ಪರಿಣಾಮ ಬೀರುತ್ತದೆ. ಒಂದಿಷ್ಟು ಅಂತರವನ್ನೂ ಸೃಷ್ಟಿಸುತ್ತದೆ. ಹಾಗಾಗಿ ತಾಯಿ ತನ್ನ ಮಮತೆಯನ್ನು ಹಲವು ಬಾರಿ ಅಧಿಕಾರವಾಗಿಯೂ ಚಲಾಯಿಸ್ತಾಳೆ. ಮತ್ತು ಮಕ್ಕಳು ತನ್ನ ಅಂಗೈಯನ್ನ ಬಿಟ್ಟು ಹೋಗುವುದು ಎಂತಹ ತಾಯಿಗಾದರೂ ಸಂಕಟವೇ... ಅಷ್ಟು ಮಾತ್ರದ ಹಕ್ಕೂ ಅವಳ ಸ್ವಾರ್ಥ ಅನಿಸಿದರೆ ನಿಜಕ್ಕೂ ತಾಯಿಯ ಪ್ರೇಮ ಸ್ವಾರ್ಥವೆನಿಸಿದ್ರಲ್ಲಿ ಯಾವ ತಪ್ಪೂ ಇಲ್ಲ. ಆದರೆ ತನ್ನದನ್ನು ತನ್ನದು ಅನ್ನುವುದು ಮತ್ತು ಅದನ್ನ ತನ್ನದೇ ಆಗಿ ಉಪಯೋಗಿಸುವುದು ಸಾಮಾನ್ಯ ಎಲ್ಲರೂ ಬಯಸುವ ಸ್ವಾರ್ಥ. ಒಬ್ಬ ವಿರಾಗಿ ಯೋಗಿ ಸಹ ಅವನದಾದ ಅನುಷ್ಟಾನ, ಅವನದಾದ ಪ್ರಪಂಚ. ಖಾವಿ, ಮತ್ತು ಕಮಂಡಲಗಳ ತನ್ನದೆಂದೇ ಉಪಯೋಗಿಸುತ್ತಾನೆ. ಮತ್ತು ಅದು ತನ್ನದೇ ಆಗಿರಲಿ ಎಂದು ಬಯುಸುತ್ತಾನೆ. ಹಾಗಿದ್ದಮೇಲೆ ತನ್ನದೇ ಕರುಳಕುಡಿಯ ಮೇಲೆ ತಾಯಿಗಿರುವ ಅಧಿಕಾರಯುಕ್ತ ಪ್ರೇಮ ಸ್ವಾರ್ಥ ಎಂದು ಅನ್ನಿಸಿಕೊಳ್ಳಬಹುದಾ?</span><br />
<br />
<span style="color: yellow; font-size: large;"> ಹಾಂ.. ಅಮ್ಮ ಅನ್ನೋ ಶಬ್ಧದಡಿಯಲ್ಲಿ ತಮ್ಮದಲ್ಲದ ಜೀವಗಳನ್ನ ತಮ್ಮದೆಂದೇ ನಂಬಿ ಪ್ರೀತಿಸುವ ಜೀವಗಳು ಇಲ್ಲಿವೆ.ಅಲ್ಲಿ ಮಾತ್ರ ಸ್ವಾರ್ಥ ಇರಕೂಡದು. ಅಮ್ಮನ ಪ್ರೇಮ ಅಧಿಕಾರವಾಗಿ ಹಕ್ಕಾಗಿ ಚಲಾಯಿಸಹೋದರೆ ಅದು ಮಕ್ಕಳ ಮನಸಿನ ಮೇಲೆ ನಿರ್ದಿಷ್ಟ ಪರಿಣಾಮ ಬೀರುತ್ತದೆ.ಬೆಳೆದು ನಿಂತ ಜೀವಗಳಿಗೆ ಪ್ರೇಮ ಬೇಕು. ಆದರೆ ಅದು ಆಪ್ತವಾಗಿರುವಷ್ಟು ಕಾಲ ಅಧಿಕಾರ ಹಕ್ಕೂ ಎಲ್ಲವೂ ಆಪ್ತ ಅನಿಸುತ್ತದೆ. ಮಕ್ಕಳು ಸ್ವತಂತ್ರಪಕ್ಷಿಗಳಾದಮೇಲೆ ಈ ಅಧಿಕಾರ ಹಕ್ಕು ಎಲ್ಲಾ ಮರೆತು ಒಂದು ಸುಂದರ ಸ್ನೇಹದಂತ ಪ್ರೀತಿಯ ನಿರೀಕ್ಷೆ ಮಾತ್ರ ಮಕ್ಕಳಿಗೆ ಉಳಿದಿರುತ್ತದೆ. ಹಾಗಾಗೇ ಸ್ವಂತದ್ದೇ ಮಕ್ಕಳಾದರೂ ಬೆಳೆದಂತೆ ಅವರ ಜೊತೆ ಸ್ನೇಹವೇ ಹೆಚ್ಚು ಇಷ್ಟವಾಗುವುದು ಅವರಿಗೆ. ಅಲ್ಲಿ ಇರುವ ವಾತ್ಸಲ್ಯದ ಎಳೆ ಖಂಡಿತ ಮಕ್ಕಳ ಮನಸನ್ನ ತಲುಪುತ್ತದೆ.ಅಮ್ಮನ ಕುರಿತು ಮಾತನಾಡುವಾಗ ಈ ಜಗತ್ತಲ್ಲಿ ದಾದಿ (ನರ್ಸ್) ಗಳ ಸೇವೆ ನೆನೆಯಬೇಕು. ನಮ್ಮದೇ ದೇಶದಲ್ಲಿ ಎಷ್ಟೋ ಸಾವಿರ ಸಾವಿರ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ದಾದಿಯರಿದ್ದಾರೆ! ಇತ್ತೀಚೆಗೆ ಇದು ಸಹ ಒಂದು ಹಣ ಮಾಡುವ ವೃತ್ತಿಯಾಗುತ್ತಿದೆ ಅಂತ ಗೊತ್ತು ನಂಗೆ. ಆದರೂ ನಿಸ್ವಾರ್ಥ ಮನಸ್ಸಿನಿಂದ ರೋಗಿಗಳ ಸೇವೆ ಮಾಡುವ ಆ ದಾದಿಯರಲ್ಲಿ ಎಂತಹ ತಾಯಿಯಿದ್ದಾಳೆ! ಒಬ್ಬ ಮದರ್ ಥೆರೆಸಾ ನಮಗೆ ಕಾಣುತ್ತಾರೆ. ಅಂತಹ ಸಾವಿರ ಸಾವಿರ ಅಮ್ಮಂದಿರು ಈ ನೆಲದಲ್ಲಿದ್ದಾರೆ. ಅವರಿಗೆ ಅವರ ಸೇವೆಗೆ ಯಾವ ಮಿತಿಯೂ ಇಲ್ಲ. ಮತ್ತವರಲ್ಲಿನ ಅಮ್ಮನಿಗೆ ಮತ್ಯಾರೂ ಸಾಟಿಯಲ್ಲ. ಹಾಗಾಗಿ ಸ್ತ್ರೀ ಯೊಳಗಿನ ಇಂತಹ ತಾಯ್ತನಕ್ಕೆ ಅದನ್ನಿಟ್ಟ ಆ ಭಗವತಿಗೆ ನೂರು ನಮನಗಳೊಂದಿಗೆ.</span><br />
<span style="color: yellow; font-size: large;"><br /></span>
<span style="color: yellow; font-size: large;">ಸಿಗೋಣ ಮತ್ತೊಂದು ತೀರದ ಸಂಜೆಯಲಿ...</span><br />
<br />
</div>
maanasa saarovrahttp://www.blogger.com/profile/14088976224552347105noreply@blogger.com10tag:blogger.com,1999:blog-7191814811569941492.post-64214072487015986352013-04-04T22:50:00.001-07:002013-04-04T22:50:09.815-07:00ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ....<div dir="ltr" style="text-align: left;" trbidi="on">
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh6uweG1HWUjBDxfwVJ89CUp48d01eja7L9maH0ZAINQ6hL7WDi46nykiE6q25grht83ggy8uVuAAxeVTmnOflPAt8u7CK7C7-cnqFS2g82ewEzbtzWRpivFMXglKEjfrDLAz0_-PuunMU/s1600/heaven-way.jpg" imageanchor="1" style="margin-left: auto; margin-right: auto;"><img border="0" height="320" src="https://blogger.googleusercontent.com/img/b/R29vZ2xl/AVvXsEh6uweG1HWUjBDxfwVJ89CUp48d01eja7L9maH0ZAINQ6hL7WDi46nykiE6q25grht83ggy8uVuAAxeVTmnOflPAt8u7CK7C7-cnqFS2g82ewEzbtzWRpivFMXglKEjfrDLAz0_-PuunMU/s320/heaven-way.jpg" width="281" /></a></td></tr>
<tr><td class="tr-caption" style="text-align: center;">ಚಿತ್ರಕೃಪೆ: ಅಂತರ್ಜಾಲ</td></tr>
</tbody></table>
<br />
<br />
<br />
<br />
ಕಳೆದು ಹೋಗುವ ಕಾಲವೆಂಬ ವಿಸ್ಮಯದಲ್ಲಿ ಒಂದು ಪುಟ್ಟ ಕಲಾಕೃತಿಯಂತೆ ಜೀವಿಸುವ ಭಾಗ್ಯವಿದ್ದರೆ ಅದು<br />
ಜೀವನದ ಸಾರ್ಥಕತೆ! ಉತ್ಕೃಷ್ಟವಾದದ್ದೇನೋ ಸೃಷ್ಟಿಸಿಬಿಡಬೇಕೆಂಬ ಹಂಬಲದಿಂದ ಹೊರಟ ಚಿತ್ರಕಾರನ ನೈಜತೆ ಮತ್ತು ಪ್ರತಿಭೆಗೆ ಸವಾಲುಗಳಿವೆ!<br />
ಮನೆಯ ಮಗುವಿನ ಬಾಲ ಕೈಗಳಲ್ಲಿ ಮೂಡಿ ಬಂದ ಸಹಜ ರಂಗೋಲಿಗೆ ಅಂತಹ ಯಾವ ಸವಾಲುಗಳಿಲ್ಲ. ಈ ಮಾತಿನ ಹೋಲಿಕೆ ಯಾಕೆಂದರೆ<br />
ನಾವು ಯಾವುದೋ ಗೊತ್ತಿಲ್ಲದ ಅಥವಾ ಅದು ಸವಾಲೊಡ್ಡುವ ಉತ್ಕೃಷ್ಟವೆಂಬ ಮಾಯಾಜಿಂಕೆಯ ಹಿಂದೆ ಬಿದ್ದುಬಿಟ್ಟಿದ್ದೇವೆ ಇತ್ತೀಚೆಗೆ! ಅದು<br />
ಅರಿವಿಲ್ಲದ ಮಾಯಾಜಿಂಕೆ ಕೂಡ ಅಲ್ಲ. ಅರಿವು ತಂದುಕೊಟ್ಟ ಮಾಯಾಜಿಂಕೆ!<br />
<br />
ಸಮಾಜದ ಮಾತನಾಡುತ್ತ ಸಮಾಜಕ್ಕೆ ನಾವು ಹೊರತೆಂಬಂತೆ ಸೊಲ್ಲನ್ನೆತ್ತುತ್ತೇವೆ! ನಮ್ಮಿಂದಲೇ ಸಮಾಜ ಎಂಬುದು ಕ್ಷಣದ ಮರೆವಿಗೆ ಸಾಕ್ಷಿಯಾಗುತ್ತದೆ! ಮನಸೇ ಯಾಕೆ ಹೀಗೆ? ಎದೆಬಗೆಯುವಂತ ಕಟುಸತ್ಯಗಳನ್ನು,ಹೋಗಲಿ ನಮ್ಮದೇ ಬದುಕನ್ನು ಬೆತ್ತಲೆಗೊಳಿಸುವ ಸಮಾಜದ ಮುಂದೆ ಅನಾವರಣ ಗೊಳಿಸುವ ಸಾಮಥ್ರ್ಯ ನಮ್ಮಲ್ಲಿ ಎಷ್ಟು ಜನರಿಗಿದೆ? ಸ್ಟಾರ್ ಪ್ಲಸ್ ನಲ್ಲಿ "ಸಚ್ ಕಾ ಸಾಮನಾ" ಎಂಬುದೊಂದು ಕಾರ್ಯಕ್ರಮ ಪ್ರಕಟವಾಗುತ್ತಿತ್ತು! ಆ ಕಾರ್ಯಕ್ರಮದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಆದರೆ ಆ ಕಾನ್ಸೆಪ್ಟ್ ಇದೆಯಲ್ಲ! ಅದು ಅದ್ಭುತ! ಬದುಕಲ್ಲಿ ಹಾಗೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಮಾಡುತ್ತ ಹೋದರೆ ಸಂಬಂಧಗಳು ಕರಕಲಾಗುವುದು ತಪ್ಪುತ್ತದೆ! ಸಮಾಜ ಸ್ವಸ್ಥವಾಗುತ್ತದೆ! ತಪ್ಪುಗಳನ್ನು ಒಪ್ಪಿಕೊಂಡಾಕ್ಷಣ ಅದನ್ನು ತಿದ್ದಿಕೊಳ್ಳುವ ಹೊಣೆಗಾರಿಕೆ ಕೂಡ ಶುರುವಾಗುತ್ತದೆ. ಸುತ್ತಲು ಗಮನಿಸುವ ನೂರು ಕಣ್ಣುಗಳು ಮತ್ತು ನಮ್ಮನ್ನು ನಾವು<br />
ತಿದ್ದಿಕೊಳ್ಳಬೇಕೆಂಬ ಚಿಕ್ಕ ಸಂಕಲ್ಪ ಮನುಷ್ಯನಿಗೆ ಯಾವ ಗುರು, ದೇವರು, ಹಾಗೂ ಶಿಕ್ಷಣ ಕೊಡದ ಆತ್ಮಿಕ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಬದಲಾವಣೆಗೆ ಬದುಕಿನ ವಿಶಾಲತೆಗೆ ಮನಸು ತೆರೆದುಕೊಳ್ಳುತ್ತದೆ.<br />
<br />
ಅಂತರಾಳದ ಒಳಗಿಂದ ಒಮ್ಮೊಮ್ಮೆ ಸ್ಪುರಿಸುವ ಭಾವಸ್ಪುರಣಗಳಿಗೆ ಕಾರಣಗಳು ದೊಡ್ಡವಲ್ಲ. ಆದರೆ ಅದು ಕೊಡುವ ಆನಂದ ದೊಡ್ಡದು! ಆನಂದವೆಂಬುದು ಮನುಷ್ಯ ಸಹಜತೆಗಳಲ್ಲಿ ಒಂದು. ಹಾಗಿದ್ದೂ ಆನಂದದ ಬೆನ್ನು ಬೀಳಬಾರದಲ್ಲ! ಮನಸ್ಯಾಕೋ ಇತ್ತೀಚೆಗೆ ಈ ಆನಂದವೆಂಬ ನಿಜಕ್ಕು, ಆನಂದ ಸ್ವರೂಪಕ್ಕೂ ಮತ್ತೆ ಆನಂದವೆಂಬ ಮರೀಚಿಕೆಗೂ ನಡುವೆ ತೂಗಾಡುತ್ತಿದೆ. ಸತ್ಯವೆಂದರೆ ಆನಂದದ ಅಪೇಕ್ಷೆ ಸ್ವಾರ್ಥದ ರೂಪವೇ ಆಗಿದ್ದರೂ ಅಷ್ಟರಮಟ್ಟಿನ ಸ್ವಾರ್ಥ ಅಪೇಕ್ಷಣೀಯ ಅಲ್ಲವಾ? ಮನುಷ್ಯ ಆನಂದ ವೆಂಬುದು ಎಲ್ಲಿದೆ ಅಂತ ಹುಡುಕುವಾಗೆಲ್ಲ ನಿಜವಾದ ಆನಂದದ ಬೆನ್ನುಬೀಳುತ್ತೇನೆ! ಪೃಕೃತಿಯ ಸಹಜತೆಗಳಿಗಿರುವ ದಿವ್ಯಾನಂದ ಅದರ ಅನುಭೂತಿ ಬೇರೆಯೇ.. ಹಾಗಿದ್ದು ಅದನ್ನು ಹಂಚಿಕೊಳ್ಳುವ ಮನಸೊಂದಿಲ್ಲದಿದ್ದರೆ ಆನಂದದ ಅನುಭೂತಿ ಮರುಕ್ಷಣವೇ ಒಂಟಿತನವನ್ನು ಬಾಧಿಸುತ್ತದೆ! ಹಾಗಿದ್ದರೆ ಆನಂದವೆಂಬುದು ಮನಸುಗಳ ಸಾಮಿಪ್ಯದಲ್ಲಿ ಮಾತ್ರ ಸಿಗುವ ಭೌತಿಕವೇ? ಈ ಪ್ರಶ್ನೆ ಏಳುತ್ತಿದ್ದಂತೆ ಮನುಷ್ಯ ಸದಾ ಮತ್ತನಾಗಲು ಬಯಸುವುದೇ ಆನಂದ ಅಂದುಕೊಂಡಿದ್ದಾನೆಂಬ ಮಾತು ಕಾಡುತ್ತದೆ! ಅದು ಅರ್ಥ, ಕಾಮ, ಮೋಹ,ಅಧಿಕಾರ, ಮದಿರೆ ಯಾವುದೂ ಇರಬಹುದು! ಇವತ್ತು ಪ್ರಪಂಚವೇ ಈ ಆನಂದಗಳ ಹೊಂದಲು ಬಯಸುವ ಧಾವಂತಕ್ಕೆ ಬಿದ್ದಿದೆ! ಇದರ ಮಧ್ಯೆ ಪ್ರಜ್ಞೆಯೆಂಬ ಮತ್ತೊಂದು ಆನಂದವಿದೆ! ಪ್ರಜ್ಞಾಪೂರ್ವಕ ಸಾಧಿಸಿಕೊಳ್ಳುವ, ಪ್ರೀತಿಸಿಕೊಳ್ಳುವ ಅಲೌಕಿಕ ಆನಂದದ ಬೆಳಕೊಂದಿದೆ! ಅದನ್ನು ಹುಡುಕುವ ಪ್ರಯತ್ನವಷ್ಟೆ! ನಮ್ಮಂತ ಸಾಮಾನ್ಯರಿಗೆ ಅದು ನಿಲುಕುವುದಲ್ಲ! ಇಂತೆಲ್ಲ ಯೋಚನೆಗಿಳಿಯುವ ಮನಸಿನ ವೈಚಾರಿಕ ಪ್ರಪಂಚಕ್ಕೆ ಎಷ್ಟೊಂದು ತಿರುವುಗಳಿವೆ! ಅಂತದ್ದೇ ಮತ್ತೊಂದು ತಿರುವಿನಲ್ಲಿ ಮತ್ತೊಂದಿಷ್ಟು ಮಾತು....<br />
<br />
ಮೊನ್ನೆ ಒಬ್ಬಳು ಗೆಳತಿ ಹೇಳುತ್ತಿದ್ದಳು! ನಿನ್ನ ಇತ್ತೀಚೆಗಿನ ಮಾತು ವೈಚಾರಿಕವಾಗ್ತಿದೆಯೇ.. ಹೃದ್ಯವಾಗ್ತಿಲ್ಲ! ಅಂತ. ನಿಜ. ಕೆಲವು ಸಲ ಬದುಕು ಏನನ್ನು ಹೇಳುತ್ತದೆಯೋ ಅದನ್ನೇ ಮಾತನಾಡುವ ಹೊತ್ತಿಗೆ ಅದೊಂದಿಷ್ಟು ರಸವಿಲ್ಲದ ಮಾತುಗಳಾಗಿಬಿಡುತ್ತವೆಯೇನೋ.. ಹಾಗೆ ಪ್ರತಿ ಬಾರಿ ಮನಸಿನೊಂದಿಗೆ ಮಾತಿಗೆ ಕೂತಾಗಲೂ ನಾನು ಬಯಸುವುದು ಮನಸಿನ ಮಾತು ಹೃದಯಕ್ಕಿಳಿಯೆಂಬ ಬಯಕೆಯಿಂದಲೇ.. ಆದರೆ ಹಾಗಾಗುವುದಿಲ್ಲ. ಸಹಜತೆಯೆಂದರೆ ಇದೇ ಇರಬಹುದು.. ಜೀವಿಸುವ ಸರಳತೆಯನ್ನೇ ಮನಸಿನೊಂದಿಗೆ ಹಂಚಿಕೊಳ್ಳುವ ಕನಸು ನನ್ನದು. ಒಮ್ಮೆ ಹಾಗೆ ಒಮ್ಮೆ ಹೀಗೆ...<br />
<br />
ಮುಂದ್ಯಾಕೋ ಮಾತುಗಳು ತೋಚುತ್ತಿಲ್ಲ.ಒಂದಷ್ಟು ಕ್ಷಣಗಳ ಕಾಲ ಮೌನ ಮೌನ ಮೌನವೆಂಬ ಮಾತಿಲ್ಲದ ಮನೆಯೊಳಗೆ.. ನೆಲೆಯಾಗಲಿ ಆತ್ಮದರಿವು ಬೆಳಕಾಗಲಿ ಎಲ್ಲ ಕಡೆಗೆ..<br />
ಒಂದು ಪುಟ್ಟ ವಿರಾಮಕ್ಕೆ ಅನುಮತಿ ಕೋರುತ್ತ..<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
</div>
maanasa saarovrahttp://www.blogger.com/profile/14088976224552347105noreply@blogger.com7tag:blogger.com,1999:blog-7191814811569941492.post-87567903883136618072013-03-12T03:24:00.000-07:002013-03-12T03:24:53.113-07:00 ಬರೆಯಲೇಬೇಕೆ ಈ ಬಯಲದಾರಿ?<div dir="ltr" style="text-align: left;" trbidi="on">
<br />
ಬರೆಯಲೇಬೇಕೆ ಈ ಬಯಲದಾರಿ?<br />
<br />
<br />
<br />
<a href="https://blogger.googleusercontent.com/img/b/R29vZ2xl/AVvXsEiTq4e1DMuZ4zCaD13Soa69QuGuOEUvZcp-d9r5OHrtth3MAhuZBPI8pDRQ58W-gRyGl4ktfrbtfybAwv5tTy4zMAOrv4u7JrbTdBFtBMOMes9tMNmggqHt9FWS3ss1hE0zWY5hcwfBXAs/s1600/desert-rajasthan.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="233" src="https://blogger.googleusercontent.com/img/b/R29vZ2xl/AVvXsEiTq4e1DMuZ4zCaD13Soa69QuGuOEUvZcp-d9r5OHrtth3MAhuZBPI8pDRQ58W-gRyGl4ktfrbtfybAwv5tTy4zMAOrv4u7JrbTdBFtBMOMes9tMNmggqHt9FWS3ss1hE0zWY5hcwfBXAs/s320/desert-rajasthan.jpg" width="320" /></a> ತಿಂಗಳ ಹಿಂದೆ ಬರೆಯಬೇಕಾಗಿತ್ತು ನಾನಿದನ್ನು! ಇಂದು ಆರಂಭಿಸಿದ್ದೇನೆ. ಅಂದರೆ ಸಂಕಲ್ಪಗಳು ನಮ್ಮವೇ ಎಂದು ನಾವಂದುಕೊಳ್ಳುತ್ತೇವೆ! ಭಗವಂತನ ಸಂಕಲ್ಪ ಬೇರೆಯೇ ಇದ್ದರೆ ನಮ್ಮ ಸಂಕಲ್ಪಗಳೆಲ್ಲ ತಿರುಮುರುಗಾಗಲು ಅದೆಷ್ಟು ಹೊತ್ತು! ಕ್ಷಣ ಮಾತ್ರ ಸಾಕು! ನಿರೀಕ್ಷೆಯಿಲ್ಲದ ಒಂದು ಪುಟ್ಟ ಘಟನೆ ಎಷ್ಟೋ ಮಾನವ ಸಂಕಲ್ಪಗಳನ್ನು ಹಿಂದೆ ಮುಂದಾಗಿಸಿದ್ದ ಕಾಣುತ್ತೇವೆ! ಹಾಗಿದ್ದೂ ನಮ್ಮದೇ ಸಂಕಲ್ಪ ಬಲದಿಂದಲೇ ಬದುಕುತ್ತೇವೆಂದು ನಂಬುತ್ತೇವೆ! ಎಲ್ಲ ನಿಮಿತ್ತ ಮಾತ್ರವಾದರೆ ಈ ಬರಹ ಕೂಡ ಒಂದು ನಿಮಿತ್ತ. ಇದರ ಹಿಂದೆ ಮಹಾ ಸಾಧನೆಯ ಉದ್ದೇಶಗಳಿಲ್ಲ. ಸುಮ್ಮನೆ ಹೇಳಿಕೊಳ್ಳುವ ತವಕವೊಂದಿದೆ. ಅದು ನಿನ್ನ ತಲುಪಿ ಪುಟ್ಟದೊಂದು ಸ್ಪಂದನೆಯ ಅಲೆ ಹುಟ್ಟಿಸುವುದೆಂಬ ವಿಶ್ವಾಸವೊಂದಿದೆ. ಅಂತದ್ದೇ ವಿಶ್ವಾಸಗಳ, ತವಕಗಳ, ಬೆರಗು ಬಿನ್ನಾಣಗಳ ಕೊಡು ಕೊಳ್ಳುವಿಕೆಯೇ ಸಾಹಿತ್ಯ ನಿಮರ್ಾಣದ ಪರಮೋದ್ದೇಶ. ಬಹುಶಃ ದೊಡ್ಡ ದೊಡ್ಡ ಮಹಾ ಕಾವ್ಯಗಳೂ ಹುಟ್ಟುವಾಗಲು ಅವು ಮಹಾಕಾವ್ಯಗಳಾಗಬೇಕೆಂದೇ ಹುಟ್ಟಿದವಲ್ಲ. ಅವೆಲ್ಲ ಶಾರದೆಯ ನಿಮಿತ್ತ ಮಾತ್ರದ ಕೂಸುಗಳು. ಕವಿ ಸೃಷ್ಟಿ ಕೇವಲ ಭಾಷೆಗಿಟ್ಟ ಬಣ್ಣಗಳಲ್ಲ. ಭಾವಗಳಲ್ಲಿ ಕುಣಿದಾಡಿದ ಆ ದೇವನ ನೃತ್ಯಭಂಗಿಗಳು! ಅವನನ್ನು ಸೃಷ್ಟಿಸುವ ಎಲ್ಲ ಪ್ರತಿಭೆಗೆ ಆ ಪ್ರತಿಭೆಯ ಸದುದ್ದೇಶಗೊಳಿಸಿಕೊಳ್ಳುವ ಅವನ ಶ್ರಮಕ್ಕೆ. ಅದಕ್ಕೆ ಪೂರಕವಾದ ವಾತಾವರಣ, ಸಮಾಜ, ಮನಸುಗಳ ಕಟ್ಟಿಕೊಡುವ ಬದುಕಿಗೆ ಎಲ್ಲಕ್ಕು ಋಣಿ ಒಂದು ಶ್ರೇಷ್ಟ ಕೃತಿ. ಹಾಗಿದ್ದಮೇಲೆ ನಾನು ಬರೆಯುತ್ತೇನೆನ್ನುವುದಕ್ಕಿಂತ ಅವಳು ಬರೆಸುತ್ತಾಳೆನ್ನುವುದು ಸರಿ ಎಂದು ತೋರುತ್ತಿದೆ ನನಗೆ. ನಿನಗೆ?<br />
<br />
<br />
<br />
ಒಂದು ಅದಮ್ಯ ಉತ್ಸಾಹದೊಂದಿಗೆ ಆರಂಭಿಸಬೇಕಿದ್ದ ಬರಹ ಒಂದು ವಿಷಾದನಿಟ್ಟುಸಿರಿನೊಂದಿಗೆ ಕೂಡಿಕೊಂಡು ಹೊಸದೊಂದು ಹುಟ್ಟಿಗೆ ಕಾರಣವಾಗಿ ಬದಲಾಗಲು ಎಷ್ಟು ಹೊತ್ತು ಬೇಕು? ಮನಸ್ಸಿನ ಭಾವಗಳಿಗೆ ಬದಲಾಗಲು ಕ್ಷಣಕಾಲ ಸಾಕು. ಅದರ ಗತಿ ಹಿಂದು ಮುಂದಾಗಲು ಬರಹ ಕೂಡ ಬೇರೆಯದೇ ರೂಪ ಪಡೆದುಕೊಳ್ಳುವುದು ಸತ್ಯ.<br />
ಹಾಗಿದ್ದೂ ಬರಹಕ್ಕೊಂದು ನಿದರ್ಿಷ್ಟ ಚೌಕಟ್ಟಿದೆ. ಪ್ರಾಮಾಣಿಕತೆಯಿದೆ. ಬರೆಯುವವನ ಮನಸಿನಲ್ಲಿ ಹೇಳುವ ತವಕವಿದೆ, ಅ ತವಕಕ್ಕೆ ಸಾಂದಭರ್ಿಕ ಹಾಗೂ ಶಕ್ತ ಭಾಷೆಯ ರೂಪ ಕೊಡುವಲ್ಲಿ ಬಹುಶಃ ಬಹಳಷ್ಟು ಜನ ಕವಿಗಳು ಸೋಲುತ್ತಾರೆ! ಮತ್ತೆ ಅಂತಹ ಸೋಲನ್ನು ಗೆದ್ದು ಓದು, ಅಧ್ಯಯನ, ತಾದಾತ್ಮ್ಯ ಹಾಗೂ ಶೃದ್ಧೆಗಳ ರೂಢಿಸಿಕೊಂಡ ಕೆಲವರಷ್ಟೆ<br />
ದಿಗ್ಗಜರೆನಿಸಿಕೊಳ್ಳುತ್ತಾರೆ! ಅದಕ್ಕೆಂದೆ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಕುವೆಂಪು, ಒಬ್ಬ ಬೇಂದ್ರೆ, ಒಬ್ಬರು ಭೈರಪ್ಪ ಎಲ್ಲರೂ ಒಬ್ಬೊಬ್ಬರೇ ಉಳಿಯುತ್ತಾರೆ! ಬರೆದವರೆಲ್ಲ ಕಾರಂತರೋ<br />
ಅಡಿಗರೋ ಆಗುವುದಾದರೆ ಸಾಹಿತ್ಯಕ್ಕೊಂದು ಮೌಲ್ಯ ಉಳಿದುಕೊಳ್ಳುತ್ತಿರಲಿಲ್ಲ. ಹಾಗಂತ ಬರೆದವರನ್ನೆಲ್ಲ ನಾವು ದೂಡಿ ಬಿಡಲಾಗದು! ಇಂದಿಗೂ ಕಾವ್ಯ ಪ್ರಪಂಚದ ಪುಟ್ಟ ಆಶುಕವಿತೆಗಳ ಸೃಷ್ಟಿಯಲ್ಲಿ ತೊಡಗಿರುವ ಈ ಭಾವುಕ ಮನಸುಗಳೇ ನಮ್ಮ ಸಾಹಿತ್ಯಾಭಿಮಾನಿಗಳು. ಮತ್ತು ಸಾಹಿತ್ಯವನ್ನು ಪ್ರೀತಿಯಿಂದ ಓದುವ ಜನಸಾಮಾನ್ಯರು. ಅವರೆದೆಗೆ ತಟ್ಟುವ<br />
ಕಾವ್ಯಗಳ ಸರಳತೆ ಜನಪದದಷ್ಟು ಪ್ರಿಯವಾಗುತ್ತದೆ. ವೇದಾಂತಗಳೆಲ್ಲ ಪುಟ್ಟ ಜೀವನ ಪಾಠದಲ್ಲಿ ಸೇರಿಕೊಳ್ಳುತ್ತ ಮನೆಮನೆಯ ಅಮ್ಮಂದಿರ ಹಾಡುಗಳಾಗುತ್ತವೆ. ಯಾರಿಗೋಸ್ಕರ ಬರೆಯಬೇಕು? ಯಾವ ಸಾಧನೆಗೋಸ್ಕರ ಯಾವ ಪದವಿ ಪ್ರಚಂಡಗಳಿಗೋಸ್ಕರ ಬರೆಯಬೇಕೆಂಬ ಮನಸ್ಸಿಗೆ ಉತ್ತರ ಹೇಳುತ್ತದೆ. ನಾನಂತು ಎಲ್ಲರಿಗಾಗಿ ಬರೆಯುವುದಿಲ್ಲ. ಬರೆದದ್ದರಲ್ಲಿ ಒಂದು ಸಾಲು ಎಲ್ಲೋ ಒಂದು ಮನಸಿನ ಸಣ್ಣ ಪದರವನ್ನು ಸ್ಪಷರ್ಿಸಿ ಹೋದರೂ ಸಾರ್ಥಕವೆಂಬ ತೃಪ್ತಿಗೋಸ್ಕರ ಬರೆದುಕೊಳ್ಳುತ್ತೇನೆ. ಇದು ಸರಿಯಾ ತಪ್ಪಾ ನಿರ್ಣಯಿಸಿಕೊಳ್ಳಲು ಕಾಲವೇ ಉತ್ತರವಾಗಬೇಕು!<br />
<br />
<br />
<br />
<br />
ಪ್ರತಿ ಕ್ಷಣ ಕೂಡ ಇಲ್ಲಿ ಬದಲಾಗುವ ಜೀವಂತಿಕೆಯ ಹೇಳುವ ಪಾಠ. ನಿನ್ನೆಯ ನಮ್ಮದೇ ಬಾಲಿಶ ಕವಿತೆಗಳ ಕಂಡು ನಗುವ ನಾವು ಪದಪುಂಜಗಳ ಸಾಮ್ರಾಜ್ಯಕಟ್ಟಿಕೊಂಡರೂ ಮತ್ತೆ ಬಾಲಿಶವಾಗದಿದ್ದರೆ ಬಾಲ್ಯವನ್ನು ಬರೆಯಲಾರೆವು! ಒಂದು ದೀರ್ಘ ಕಾದಂಬರಿಯನ್ನೋ ಕಥೆ, ಕವಿತೆ ಏನನ್ನೇ ತೆಗೆದುಕೊಂಡರೂ ಒಂದು ಬಾಲ್ಯದ ಚಿತ್ರಣವಾಗಬೇಕಾದರೆ ಮತ್ತೆ ಸಾಹಿತಿ ಅಂತ ಬಾಲ್ಯವನ್ನು ಅನುಭವಿಸಿ ಸೃಜಿಸುತ್ತಾನೆ! ಹಾಗೇ ಪ್ರೇಮ ಪ್ರಣಯಗಳು ಒಂದು ವಯಸ್ಸನ್ನು ದಾಟುತ್ತಿರುವಂತೆ ಗಂಭೀರತೆಯನ್ನು ಪಡೆದುಕೊಂಡು ಹುಡುಗಾಟ ಅನ್ನಿಸಿಕೊಂಡುಬಿಡುತ್ತವೆ. ಸತ್ಯವದು ಕಾಲಕ್ಕೆ. ಹಾಗಂತ ಕವಿ ಹರಯವನ್ನು ಗಂಭೀರ ವೇದಾಂತಿಯನ್ನಾಗಿಸಲಾರ. ಕವಿತನಕ್ಕೆ ಎಷ್ಟೇ ವಯಸ್ಸಾದರೂ ಹಾಗೆ ಹರಯವನ್ನು ಪ್ರೇಮ ಹುಡುಗಾಟಗಳನ್ನು ಸೃಜಿಸುವ ಶಕ್ತಿಯಿದ್ದೇ ಇದೆ. ಅದಕ್ಕೆಂದೇ ಸಮಯ ನಮ್ಮನ್ನು ಎಷ್ಟೇ ಬೆಳೆಸಿದರೂ ಮನಸ್ಸನ್ನು ಎಲ್ಲ ವಯಸ್ಸಿಗೂ ಎಲ್ಲ ಕ್ಷಣಗಳಿಗೂ ಸ್ಪಂದಿಸುವ ಆರ್ದತೆಯನ್ನು ಉಳಿಸಿಕೊಳ್ಳುವುದು ಬಹುಶಃ ಕವಿಮನಸ್ಸಿಗಷ್ಟೇ ಸಾಧ್ಯವೆನ್ನಿಸತ್ತದೆ ನನಗೆ. ಹಾಗಾಗಿ ಸಹೃದಯರೆಲ್ಲರು ಕವಿಗಳಾಗುತ್ತಾರೆ!<br />
ಸಾಹಿತ್ಯಪ್ರಿಯರಾಗುತ್ತಾರೆ! ಅಲ್ಲಿ ಗುಣಮಟ್ಟಗಳ ನಿರ್ದರಿಸುವುದು ಕಾಲವೇ ಹೊರತು ಮನುಷ್ಯ ಮಾತ್ರ ಆಗಲಾರದು. ಬರೆಯುವ ಮೊದಲು ಯೋಚಿಸುವ ಬದ್ಧತೆ, ಅದಕ್ಕಿಂತ ಹೆಚ್ಚಿನದಾಗಿ ಬರೆದದ್ದೆಲ್ಲ ಸಾಹಿತ್ಯವಾಗಲಾರದೆಂಬ ಎಚ್ಚರ, ಕಾಲ ದೇಶ ಸಮಯಗಳ ಪ್ರಜ್ಞೆ, ಭಾಷೆಯ ಮೇಲಿನ ಗೌರವ, ಅಧ್ಯಯನದ ಅಗತ್ಯ, ಇವೆಲ್ಲವನ್ನು<br />
ಎಚ್ಚರದಲ್ಲಿಟ್ಟುಕೊಂಡು ಬರೆಯುವ ಅನುಭವಗಳಿರಲಿ ಕಲ್ಪನೆಗಳಿರಲಿ ಅದು ಸಾಹಿತ್ಯ ಪ್ರಪಂಚದಲ್ಲಿ ನೆಲೆಗೊಳ್ಳಲು ಅರ್ಹತೆ ಪಡೆದುಕೊಳ್ಳುತ್ತದೆ. ಒಮ್ಮೆ ಯಾರೋ ಹಿರಿಯರೊಬ್ಬರು ಹೇಳಿದ್ದು ಇಲ್ಲಿ ನೆನಪಾಗುತ್ತದೆ. ನೃತ್ಯ, ಸಂಗೀತ, ಇತ್ಯಾದಿ ಲಲಿತಕಲೆಗಳ ಪ್ರದರ್ಶನಕ್ಕಿಡುವವಾಗ ಅದಕ್ಕೆ ತಕ್ಕಷ್ಟು ಅವರು ಅಭ್ಯಾಸ ಮಾಡಬೇಕಾಗುತ್ತದೆ. ಹಾಗೂ ಅಂತ ಶ್ರೇಷ್ಟ ಗುರುಗಳ ಮಾರ್ಗದರ್ಶನದಲ್ಲಿ ಇವು ಜನರೆದುರು ಪ್ರದರ್ಶನಗೊಳ್ಳುತ್ತವೆ. ಸಾಹಿತ್ಯದಲ್ಲಿ ಮಾತ್ರ ಹಾಗಿಲ್ಲ. ಯಾರು ಬೇಕಾದರು ಪುಸ್ತಕ ಮಾಡುತ್ತಾರೆ. ಏನು ಬರೆದರೂ ನಡೆಯುತ್ತದೆ. ಇಲ್ಲೊಂದು ನಿದರ್ಿಷ್ಟ ಮಾನದಂಡವಿಲ್ಲ ಎಂದು ಅವರು ಹೇಳುತ್ತಿದ್ದದ್ದು ಅರ್ಧದಷ್ಟು ಸತ್ಯವೆನ್ನಿಸದರೂ ಮತ್ತಷ್ಟು ವಿಚಾರ ಮಾಡುವಾಗ ಹಾಗೊಂದುವೇಳೆ ವಿದ್ಯೆ ಡಿಗ್ರಿಗಳೇ ಮಾನದಂಡಗಳಾದರೇ ಇಂದಿನ ಪಿ.ಎಚ್.ಡಿ ಪ್ರಬಂಧಗಳೆಲ್ಲ ಶ್ರೇಷ್ಟ ಸಾಹಿತ್ಯಗಳಾಗಬೇಕಿತ್ತಲ್ಲವಾ? ಅವರೆಲ್ಲ ದೊಡ್ಡ ಸಾಹಿತಿಗಳಾಗಬೇಕಿತ್ತಲ್ವ? ಇಲ್ಲ ಸಾಹಿತ್ಯ ಕೇವಲ ಅಧ್ಯಯನದ ಕೂಸಲ್ಲ. ಅದು ಹೃದಯದ ಕೂಸು. ಅದಕ್ಕೆಂದೇ ಜನಪದ ಕಾವ್ಯಗಳೂ. ಅನಾಮಿಕ ಸಾಹಿತ್ಯಗಳೂ ಎಷ್ಟೋ ಶತಮಾನಗಳಾಚೆಯೂ ಉಳಿದುಬಂದಿವೆ. ಉಳಿಯುತ್ತವೆ! ಹಾಗಾಗಿ ಕೇವಲ ಅಧ್ಯಯನಗಳಷ್ಟೇ ಸಾಹಿತ್ಯದ ಹೃದಯವಾಗಲಾರದೆಂಬುದು ಜೀವಂತ.<br />
<br />
<br />
<br />
ಅಧ್ಯಯನ ನಿರತ ಪತ್ರಿಕಾಕರ್ತರು ಎಷ್ಟೆಲ್ಲ ಜನರಿದ್ದಾರೆ! ಅವರೆಲ್ಲ ಈ ನಾಡಿನ ಜೀವಂತ ಪತ್ರಿಕೆಗಳ ಈ ಕ್ಷಣದ ಒಡನಾಡಿಗಳಾಗಿದ್ದಾರೆ! ಆದರೆ ಅವರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಾಹಿತ್ಯಾಸಕ್ತರು, ಅಭಿಮಾನಿಗಳು, ಸಾಹಿತಿಗಳು ಇರಬಹುದಷ್ಟೆ. ಉಳಿದವರೆಲ್ಲ ವೃತ್ತಿನಿರತ ಬರಹಗಾರರಷ್ಟೇ... ಸಾಹಿತ್ಯದ ಹೃದಯಕ್ಕಿಳಿಯುವ ಚೇತನವೆಂಬುದು ಅದು ಬರೀ ಮನುಷ್ಯ ಪ್ರಯತ್ನವಷ್ಟೇ ಅಲ್ಲ. ಅದೇ ದೈವಪ್ರತಿಭೆ. ಅಂತಹ ಸಂಕಲ್ಪಗಳು ನಮ್ಮದಲ್ಲ. ದೈವ ಸಂಕಲ್ಪ. ಹಾಗಾಗಿ ಕೆಲವಷ್ಟು ವಿಚಾರಗಳ ಅನವಶ್ಯಕ ಚಿಂತಿಸುವುದನ್ನು ಬಿಟ್ಟುಬಿಡೋಣ. ನಾವು ನಿಮಿತ್ತಕಗಳು ಮಾತ್ರ ಎಂದುಕೊಂಡರೆ ಮನಸು ಹಗುರ..... ಬರೆಯುವ ಮುನ್ನ ಶುದ್ಧ ಸಂಕಲ್ಪ ಮಾತ್ರ ನಮ್ಮದಾಗಿರಲಿ... ವಿಚಾರಗಳ ನೇರವಂತಿಕೆ, ಬದುಕಿನ ಅನುಭವಗಳ ಸತ್ವ, ವಿಷಯ ವಿಜ್ಞಾನಗಳ ತಿಳುವಳಿಕೆ, ಕಾಲ ದೇಶಗಳ ಪರಿವೆ... ಇವಿಷ್ಟು ನಮ್ಮ ಬರಹಗಳಿಗೆ ಸರಳತೆಯನ್ನು ತಂದುಕೊಡಲಿ.<br />
ಉಳಿದದ್ದೆಲ್ಲ ಅವಳಿದ್ದಾಳೆ.. ಶಾರದೆಯ ಮಡಿಲಿಗೆ ಈ ನುಡಿಕುಸುಮಗಳ ಅಪರ್ಿಸುತ್ತ ಮಾನಸ ಸರೋವರದ ಈ ಪಯಣಕ್ಕೆ ಪುಟ್ಟ ವಿರಾಮ...<br />
<br />
<br />
<br />
<br />
<br />
</div>
maanasa saarovrahttp://www.blogger.com/profile/14088976224552347105noreply@blogger.com11