Tuesday, March 12, 2013

ಬರೆಯಲೇಬೇಕೆ ಈ ಬಯಲದಾರಿ?


         ಬರೆಯಲೇಬೇಕೆ ಈ ಬಯಲದಾರಿ?
       


               ತಿಂಗಳ ಹಿಂದೆ ಬರೆಯಬೇಕಾಗಿತ್ತು ನಾನಿದನ್ನು! ಇಂದು ಆರಂಭಿಸಿದ್ದೇನೆ. ಅಂದರೆ ಸಂಕಲ್ಪಗಳು ನಮ್ಮವೇ  ಎಂದು ನಾವಂದುಕೊಳ್ಳುತ್ತೇವೆ! ಭಗವಂತನ ಸಂಕಲ್ಪ ಬೇರೆಯೇ ಇದ್ದರೆ ನಮ್ಮ ಸಂಕಲ್ಪಗಳೆಲ್ಲ ತಿರುಮುರುಗಾಗಲು ಅದೆಷ್ಟು ಹೊತ್ತು! ಕ್ಷಣ ಮಾತ್ರ ಸಾಕು! ನಿರೀಕ್ಷೆಯಿಲ್ಲದ ಒಂದು ಪುಟ್ಟ ಘಟನೆ ಎಷ್ಟೋ  ಮಾನವ ಸಂಕಲ್ಪಗಳನ್ನು ಹಿಂದೆ ಮುಂದಾಗಿಸಿದ್ದ ಕಾಣುತ್ತೇವೆ! ಹಾಗಿದ್ದೂ ನಮ್ಮದೇ ಸಂಕಲ್ಪ ಬಲದಿಂದಲೇ ಬದುಕುತ್ತೇವೆಂದು ನಂಬುತ್ತೇವೆ! ಎಲ್ಲ ನಿಮಿತ್ತ ಮಾತ್ರವಾದರೆ ಈ ಬರಹ ಕೂಡ ಒಂದು ನಿಮಿತ್ತ. ಇದರ ಹಿಂದೆ ಮಹಾ ಸಾಧನೆಯ ಉದ್ದೇಶಗಳಿಲ್ಲ. ಸುಮ್ಮನೆ ಹೇಳಿಕೊಳ್ಳುವ ತವಕವೊಂದಿದೆ. ಅದು ನಿನ್ನ ತಲುಪಿ ಪುಟ್ಟದೊಂದು ಸ್ಪಂದನೆಯ ಅಲೆ ಹುಟ್ಟಿಸುವುದೆಂಬ ವಿಶ್ವಾಸವೊಂದಿದೆ. ಅಂತದ್ದೇ ವಿಶ್ವಾಸಗಳ, ತವಕಗಳ, ಬೆರಗು ಬಿನ್ನಾಣಗಳ ಕೊಡು ಕೊಳ್ಳುವಿಕೆಯೇ ಸಾಹಿತ್ಯ ನಿಮರ್ಾಣದ ಪರಮೋದ್ದೇಶ. ಬಹುಶಃ ದೊಡ್ಡ ದೊಡ್ಡ ಮಹಾ ಕಾವ್ಯಗಳೂ ಹುಟ್ಟುವಾಗಲು ಅವು ಮಹಾಕಾವ್ಯಗಳಾಗಬೇಕೆಂದೇ ಹುಟ್ಟಿದವಲ್ಲ. ಅವೆಲ್ಲ ಶಾರದೆಯ ನಿಮಿತ್ತ ಮಾತ್ರದ ಕೂಸುಗಳು. ಕವಿ ಸೃಷ್ಟಿ ಕೇವಲ ಭಾಷೆಗಿಟ್ಟ ಬಣ್ಣಗಳಲ್ಲ. ಭಾವಗಳಲ್ಲಿ ಕುಣಿದಾಡಿದ ಆ ದೇವನ ನೃತ್ಯಭಂಗಿಗಳು! ಅವನನ್ನು ಸೃಷ್ಟಿಸುವ ಎಲ್ಲ ಪ್ರತಿಭೆಗೆ ಆ ಪ್ರತಿಭೆಯ ಸದುದ್ದೇಶಗೊಳಿಸಿಕೊಳ್ಳುವ ಅವನ ಶ್ರಮಕ್ಕೆ. ಅದಕ್ಕೆ ಪೂರಕವಾದ ವಾತಾವರಣ, ಸಮಾಜ, ಮನಸುಗಳ ಕಟ್ಟಿಕೊಡುವ ಬದುಕಿಗೆ ಎಲ್ಲಕ್ಕು ಋಣಿ ಒಂದು ಶ್ರೇಷ್ಟ ಕೃತಿ. ಹಾಗಿದ್ದಮೇಲೆ  ನಾನು ಬರೆಯುತ್ತೇನೆನ್ನುವುದಕ್ಕಿಂತ ಅವಳು ಬರೆಸುತ್ತಾಳೆನ್ನುವುದು ಸರಿ ಎಂದು ತೋರುತ್ತಿದೆ ನನಗೆ. ನಿನಗೆ?



      ಒಂದು ಅದಮ್ಯ ಉತ್ಸಾಹದೊಂದಿಗೆ ಆರಂಭಿಸಬೇಕಿದ್ದ ಬರಹ ಒಂದು ವಿಷಾದನಿಟ್ಟುಸಿರಿನೊಂದಿಗೆ ಕೂಡಿಕೊಂಡು ಹೊಸದೊಂದು ಹುಟ್ಟಿಗೆ ಕಾರಣವಾಗಿ ಬದಲಾಗಲು ಎಷ್ಟು ಹೊತ್ತು ಬೇಕು?  ಮನಸ್ಸಿನ ಭಾವಗಳಿಗೆ ಬದಲಾಗಲು ಕ್ಷಣಕಾಲ ಸಾಕು. ಅದರ ಗತಿ ಹಿಂದು ಮುಂದಾಗಲು  ಬರಹ ಕೂಡ ಬೇರೆಯದೇ ರೂಪ ಪಡೆದುಕೊಳ್ಳುವುದು ಸತ್ಯ.
ಹಾಗಿದ್ದೂ ಬರಹಕ್ಕೊಂದು ನಿದರ್ಿಷ್ಟ ಚೌಕಟ್ಟಿದೆ. ಪ್ರಾಮಾಣಿಕತೆಯಿದೆ.  ಬರೆಯುವವನ ಮನಸಿನಲ್ಲಿ ಹೇಳುವ ತವಕವಿದೆ, ಅ ತವಕಕ್ಕೆ ಸಾಂದಭರ್ಿಕ ಹಾಗೂ ಶಕ್ತ ಭಾಷೆಯ ರೂಪ ಕೊಡುವಲ್ಲಿ ಬಹುಶಃ ಬಹಳಷ್ಟು ಜನ ಕವಿಗಳು ಸೋಲುತ್ತಾರೆ! ಮತ್ತೆ ಅಂತಹ ಸೋಲನ್ನು ಗೆದ್ದು ಓದು, ಅಧ್ಯಯನ, ತಾದಾತ್ಮ್ಯ ಹಾಗೂ ಶೃದ್ಧೆಗಳ ರೂಢಿಸಿಕೊಂಡ ಕೆಲವರಷ್ಟೆ
ದಿಗ್ಗಜರೆನಿಸಿಕೊಳ್ಳುತ್ತಾರೆ! ಅದಕ್ಕೆಂದೆ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಕುವೆಂಪು, ಒಬ್ಬ ಬೇಂದ್ರೆ, ಒಬ್ಬರು ಭೈರಪ್ಪ  ಎಲ್ಲರೂ ಒಬ್ಬೊಬ್ಬರೇ ಉಳಿಯುತ್ತಾರೆ! ಬರೆದವರೆಲ್ಲ ಕಾರಂತರೋ
ಅಡಿಗರೋ ಆಗುವುದಾದರೆ ಸಾಹಿತ್ಯಕ್ಕೊಂದು ಮೌಲ್ಯ ಉಳಿದುಕೊಳ್ಳುತ್ತಿರಲಿಲ್ಲ. ಹಾಗಂತ ಬರೆದವರನ್ನೆಲ್ಲ ನಾವು ದೂಡಿ ಬಿಡಲಾಗದು! ಇಂದಿಗೂ ಕಾವ್ಯ ಪ್ರಪಂಚದ ಪುಟ್ಟ ಆಶುಕವಿತೆಗಳ ಸೃಷ್ಟಿಯಲ್ಲಿ ತೊಡಗಿರುವ ಈ  ಭಾವುಕ ಮನಸುಗಳೇ ನಮ್ಮ ಸಾಹಿತ್ಯಾಭಿಮಾನಿಗಳು. ಮತ್ತು ಸಾಹಿತ್ಯವನ್ನು ಪ್ರೀತಿಯಿಂದ ಓದುವ ಜನಸಾಮಾನ್ಯರು. ಅವರೆದೆಗೆ ತಟ್ಟುವ
ಕಾವ್ಯಗಳ ಸರಳತೆ ಜನಪದದಷ್ಟು ಪ್ರಿಯವಾಗುತ್ತದೆ.  ವೇದಾಂತಗಳೆಲ್ಲ ಪುಟ್ಟ ಜೀವನ ಪಾಠದಲ್ಲಿ ಸೇರಿಕೊಳ್ಳುತ್ತ ಮನೆಮನೆಯ ಅಮ್ಮಂದಿರ ಹಾಡುಗಳಾಗುತ್ತವೆ. ಯಾರಿಗೋಸ್ಕರ ಬರೆಯಬೇಕು? ಯಾವ ಸಾಧನೆಗೋಸ್ಕರ ಯಾವ ಪದವಿ ಪ್ರಚಂಡಗಳಿಗೋಸ್ಕರ ಬರೆಯಬೇಕೆಂಬ ಮನಸ್ಸಿಗೆ ಉತ್ತರ ಹೇಳುತ್ತದೆ. ನಾನಂತು ಎಲ್ಲರಿಗಾಗಿ ಬರೆಯುವುದಿಲ್ಲ. ಬರೆದದ್ದರಲ್ಲಿ ಒಂದು ಸಾಲು ಎಲ್ಲೋ ಒಂದು ಮನಸಿನ ಸಣ್ಣ ಪದರವನ್ನು ಸ್ಪಷರ್ಿಸಿ ಹೋದರೂ ಸಾರ್ಥಕವೆಂಬ ತೃಪ್ತಿಗೋಸ್ಕರ ಬರೆದುಕೊಳ್ಳುತ್ತೇನೆ.  ಇದು ಸರಿಯಾ ತಪ್ಪಾ ನಿರ್ಣಯಿಸಿಕೊಳ್ಳಲು ಕಾಲವೇ ಉತ್ತರವಾಗಬೇಕು!

       


           ಪ್ರತಿ ಕ್ಷಣ ಕೂಡ ಇಲ್ಲಿ ಬದಲಾಗುವ ಜೀವಂತಿಕೆಯ ಹೇಳುವ ಪಾಠ. ನಿನ್ನೆಯ ನಮ್ಮದೇ ಬಾಲಿಶ ಕವಿತೆಗಳ ಕಂಡು ನಗುವ ನಾವು ಪದಪುಂಜಗಳ ಸಾಮ್ರಾಜ್ಯಕಟ್ಟಿಕೊಂಡರೂ ಮತ್ತೆ  ಬಾಲಿಶವಾಗದಿದ್ದರೆ ಬಾಲ್ಯವನ್ನು ಬರೆಯಲಾರೆವು! ಒಂದು ದೀರ್ಘ  ಕಾದಂಬರಿಯನ್ನೋ ಕಥೆ, ಕವಿತೆ ಏನನ್ನೇ ತೆಗೆದುಕೊಂಡರೂ ಒಂದು ಬಾಲ್ಯದ ಚಿತ್ರಣವಾಗಬೇಕಾದರೆ ಮತ್ತೆ ಸಾಹಿತಿ ಅಂತ ಬಾಲ್ಯವನ್ನು ಅನುಭವಿಸಿ ಸೃಜಿಸುತ್ತಾನೆ! ಹಾಗೇ ಪ್ರೇಮ ಪ್ರಣಯಗಳು ಒಂದು ವಯಸ್ಸನ್ನು ದಾಟುತ್ತಿರುವಂತೆ ಗಂಭೀರತೆಯನ್ನು ಪಡೆದುಕೊಂಡು ಹುಡುಗಾಟ ಅನ್ನಿಸಿಕೊಂಡುಬಿಡುತ್ತವೆ. ಸತ್ಯವದು ಕಾಲಕ್ಕೆ. ಹಾಗಂತ ಕವಿ ಹರಯವನ್ನು ಗಂಭೀರ ವೇದಾಂತಿಯನ್ನಾಗಿಸಲಾರ. ಕವಿತನಕ್ಕೆ ಎಷ್ಟೇ ವಯಸ್ಸಾದರೂ ಹಾಗೆ ಹರಯವನ್ನು ಪ್ರೇಮ ಹುಡುಗಾಟಗಳನ್ನು ಸೃಜಿಸುವ ಶಕ್ತಿಯಿದ್ದೇ ಇದೆ. ಅದಕ್ಕೆಂದೇ  ಸಮಯ ನಮ್ಮನ್ನು ಎಷ್ಟೇ ಬೆಳೆಸಿದರೂ ಮನಸ್ಸನ್ನು ಎಲ್ಲ ವಯಸ್ಸಿಗೂ ಎಲ್ಲ ಕ್ಷಣಗಳಿಗೂ  ಸ್ಪಂದಿಸುವ ಆರ್ದತೆಯನ್ನು ಉಳಿಸಿಕೊಳ್ಳುವುದು ಬಹುಶಃ ಕವಿಮನಸ್ಸಿಗಷ್ಟೇ ಸಾಧ್ಯವೆನ್ನಿಸತ್ತದೆ ನನಗೆ. ಹಾಗಾಗಿ ಸಹೃದಯರೆಲ್ಲರು ಕವಿಗಳಾಗುತ್ತಾರೆ!
 ಸಾಹಿತ್ಯಪ್ರಿಯರಾಗುತ್ತಾರೆ!  ಅಲ್ಲಿ ಗುಣಮಟ್ಟಗಳ ನಿರ್ದರಿಸುವುದು ಕಾಲವೇ ಹೊರತು ಮನುಷ್ಯ ಮಾತ್ರ  ಆಗಲಾರದು.  ಬರೆಯುವ ಮೊದಲು ಯೋಚಿಸುವ ಬದ್ಧತೆ, ಅದಕ್ಕಿಂತ ಹೆಚ್ಚಿನದಾಗಿ ಬರೆದದ್ದೆಲ್ಲ ಸಾಹಿತ್ಯವಾಗಲಾರದೆಂಬ ಎಚ್ಚರ, ಕಾಲ ದೇಶ ಸಮಯಗಳ ಪ್ರಜ್ಞೆ,  ಭಾಷೆಯ ಮೇಲಿನ ಗೌರವ, ಅಧ್ಯಯನದ ಅಗತ್ಯ, ಇವೆಲ್ಲವನ್ನು
ಎಚ್ಚರದಲ್ಲಿಟ್ಟುಕೊಂಡು  ಬರೆಯುವ ಅನುಭವಗಳಿರಲಿ ಕಲ್ಪನೆಗಳಿರಲಿ ಅದು  ಸಾಹಿತ್ಯ ಪ್ರಪಂಚದಲ್ಲಿ ನೆಲೆಗೊಳ್ಳಲು ಅರ್ಹತೆ ಪಡೆದುಕೊಳ್ಳುತ್ತದೆ.  ಒಮ್ಮೆ ಯಾರೋ ಹಿರಿಯರೊಬ್ಬರು ಹೇಳಿದ್ದು ಇಲ್ಲಿ ನೆನಪಾಗುತ್ತದೆ. ನೃತ್ಯ, ಸಂಗೀತ, ಇತ್ಯಾದಿ ಲಲಿತಕಲೆಗಳ ಪ್ರದರ್ಶನಕ್ಕಿಡುವವಾಗ ಅದಕ್ಕೆ ತಕ್ಕಷ್ಟು ಅವರು ಅಭ್ಯಾಸ ಮಾಡಬೇಕಾಗುತ್ತದೆ. ಹಾಗೂ ಅಂತ ಶ್ರೇಷ್ಟ ಗುರುಗಳ ಮಾರ್ಗದರ್ಶನದಲ್ಲಿ ಇವು ಜನರೆದುರು ಪ್ರದರ್ಶನಗೊಳ್ಳುತ್ತವೆ. ಸಾಹಿತ್ಯದಲ್ಲಿ ಮಾತ್ರ  ಹಾಗಿಲ್ಲ. ಯಾರು ಬೇಕಾದರು ಪುಸ್ತಕ ಮಾಡುತ್ತಾರೆ. ಏನು ಬರೆದರೂ ನಡೆಯುತ್ತದೆ. ಇಲ್ಲೊಂದು ನಿದರ್ಿಷ್ಟ ಮಾನದಂಡವಿಲ್ಲ ಎಂದು ಅವರು ಹೇಳುತ್ತಿದ್ದದ್ದು ಅರ್ಧದಷ್ಟು ಸತ್ಯವೆನ್ನಿಸದರೂ ಮತ್ತಷ್ಟು ವಿಚಾರ ಮಾಡುವಾಗ ಹಾಗೊಂದುವೇಳೆ ವಿದ್ಯೆ ಡಿಗ್ರಿಗಳೇ ಮಾನದಂಡಗಳಾದರೇ ಇಂದಿನ ಪಿ.ಎಚ್.ಡಿ ಪ್ರಬಂಧಗಳೆಲ್ಲ ಶ್ರೇಷ್ಟ ಸಾಹಿತ್ಯಗಳಾಗಬೇಕಿತ್ತಲ್ಲವಾ? ಅವರೆಲ್ಲ ದೊಡ್ಡ ಸಾಹಿತಿಗಳಾಗಬೇಕಿತ್ತಲ್ವ? ಇಲ್ಲ ಸಾಹಿತ್ಯ ಕೇವಲ ಅಧ್ಯಯನದ ಕೂಸಲ್ಲ. ಅದು ಹೃದಯದ ಕೂಸು. ಅದಕ್ಕೆಂದೇ ಜನಪದ ಕಾವ್ಯಗಳೂ. ಅನಾಮಿಕ ಸಾಹಿತ್ಯಗಳೂ ಎಷ್ಟೋ ಶತಮಾನಗಳಾಚೆಯೂ ಉಳಿದುಬಂದಿವೆ. ಉಳಿಯುತ್ತವೆ! ಹಾಗಾಗಿ ಕೇವಲ ಅಧ್ಯಯನಗಳಷ್ಟೇ ಸಾಹಿತ್ಯದ ಹೃದಯವಾಗಲಾರದೆಂಬುದು ಜೀವಂತ.



          ಅಧ್ಯಯನ ನಿರತ ಪತ್ರಿಕಾಕರ್ತರು ಎಷ್ಟೆಲ್ಲ ಜನರಿದ್ದಾರೆ! ಅವರೆಲ್ಲ ಈ ನಾಡಿನ ಜೀವಂತ ಪತ್ರಿಕೆಗಳ ಈ ಕ್ಷಣದ ಒಡನಾಡಿಗಳಾಗಿದ್ದಾರೆ! ಆದರೆ ಅವರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಾಹಿತ್ಯಾಸಕ್ತರು, ಅಭಿಮಾನಿಗಳು, ಸಾಹಿತಿಗಳು ಇರಬಹುದಷ್ಟೆ. ಉಳಿದವರೆಲ್ಲ ವೃತ್ತಿನಿರತ ಬರಹಗಾರರಷ್ಟೇ... ಸಾಹಿತ್ಯದ ಹೃದಯಕ್ಕಿಳಿಯುವ ಚೇತನವೆಂಬುದು ಅದು ಬರೀ ಮನುಷ್ಯ ಪ್ರಯತ್ನವಷ್ಟೇ ಅಲ್ಲ. ಅದೇ ದೈವಪ್ರತಿಭೆ. ಅಂತಹ ಸಂಕಲ್ಪಗಳು ನಮ್ಮದಲ್ಲ. ದೈವ ಸಂಕಲ್ಪ. ಹಾಗಾಗಿ ಕೆಲವಷ್ಟು ವಿಚಾರಗಳ ಅನವಶ್ಯಕ ಚಿಂತಿಸುವುದನ್ನು ಬಿಟ್ಟುಬಿಡೋಣ. ನಾವು ನಿಮಿತ್ತಕಗಳು ಮಾತ್ರ ಎಂದುಕೊಂಡರೆ  ಮನಸು ಹಗುರ..... ಬರೆಯುವ ಮುನ್ನ ಶುದ್ಧ ಸಂಕಲ್ಪ ಮಾತ್ರ ನಮ್ಮದಾಗಿರಲಿ... ವಿಚಾರಗಳ ನೇರವಂತಿಕೆ, ಬದುಕಿನ ಅನುಭವಗಳ ಸತ್ವ, ವಿಷಯ ವಿಜ್ಞಾನಗಳ ತಿಳುವಳಿಕೆ, ಕಾಲ ದೇಶಗಳ ಪರಿವೆ... ಇವಿಷ್ಟು ನಮ್ಮ ಬರಹಗಳಿಗೆ ಸರಳತೆಯನ್ನು ತಂದುಕೊಡಲಿ.
ಉಳಿದದ್ದೆಲ್ಲ ಅವಳಿದ್ದಾಳೆ.. ಶಾರದೆಯ ಮಡಿಲಿಗೆ ಈ  ನುಡಿಕುಸುಮಗಳ ಅಪರ್ಿಸುತ್ತ  ಮಾನಸ ಸರೋವರದ ಈ ಪಯಣಕ್ಕೆ ಪುಟ್ಟ ವಿರಾಮ...





11 comments:

  1. ಒಬ್ಬ ಗೆಳೆಯನೊಂದಿಗೆ ಮಾತಾಡುವಂತೆ ಬರೆಯುವ ನಿಮ್ಮ ಶೈಲಿ ನಿಜಕ್ಕೂ ತುಂಬ ಇಷ್ಟ ಆಗುತ್ತೆ...ಎಂಥ ಗಂಭೀರ ವಿಚಾರಾನ ಎಷ್ಟು ಸರಳವಾಗಿ ತೆರೆದಿಟ್ಟಿದ್ದೀರಾ...ಗೆಳೆಯನೆದುರು ಮನಸ ತೆರೆದಿಟ್ಟಂತೆ...
    ಸಾಹಿತ್ಯ ಕೇವಲ ಅಧ್ಯಯನದ ಕೂಸಲ್ಲ. ಅದು ಹೃದಯದ ಕೂಸು...ಎಷ್ಟೊಂದು ಸತ್ಯ ಈ ಮಾತು...
    ಬೆಳ್ಳಂಬೆಳಗ್ಗೆ ಒಂದು ಒಳ್ಳೆಯ ಬರಹ ಓದಿದ ಖುಷಿ ನನ್ನದು...ಬರೆಯುತ್ತಿರಿ...

    ReplyDelete
  2. ಪ್ರತಿ ಕ್ಷಣ ಕೂಡ ಇಲ್ಲಿ ಬದಲಾಗುವ ಜೀವಂತಿಕೆಯ ಹೇಳುವ ಪಾಠ. ನಿನ್ನೆಯ ನಮ್ಮದೇ ಬಾಲಿಶ ಕವಿತೆಗಳ ಕಂಡು ನಗುವ ನಾವು ಪದಪುಂಜಗಳ ಸಾಮ್ರಾಜ್ಯಕಟ್ಟಿಕೊಂಡರೂ ಮತ್ತೆ ಬಾಲಿಶವಾಗದಿದ್ದರೆ ಬಾಲ್ಯವನ್ನು ಬರೆಯಲಾರೆವು! ಒಂದು ದೀರ್ಘ ಕಾದಂಬರಿಯನ್ನೋ ಕಥೆ, ಕವಿತೆ ಏನನ್ನೇ ತೆಗೆದುಕೊಂಡರೂ ಒಂದು ಬಾಲ್ಯದ ಚಿತ್ರಣವಾಗಬೇಕಾದರೆ ಮತ್ತೆ ಸಾಹಿತಿ ಅಂತ ಬಾಲ್ಯವನ್ನು ಅನುಭವಿಸಿ ಸೃಜಿಸುತ್ತಾನೆ! ಹಾಗೇ ಪ್ರೇಮ ಪ್ರಣಯಗಳು ಒಂದು ವಯಸ್ಸನ್ನು ದಾಟುತ್ತಿರುವಂತೆ ಗಂಭೀರತೆಯನ್ನು ಪಡೆದುಕೊಂಡು ಹುಡುಗಾಟ ಅನ್ನಿಸಿಕೊಂಡುಬಿಡುತ್ತವೆ. ಸತ್ಯವದು ಕಾಲಕ್ಕೆ. ಹಾಗಂತ ಕವಿ ಹರಯವನ್ನು ಗಂಭೀರ ವೇದಾಂತಿಯನ್ನಾಗಿಸಲಾರ. ಕವಿತನಕ್ಕೆ ಎಷ್ಟೇ ವಯಸ್ಸಾದರೂ ಹಾಗೆ ಹರಯವನ್ನು ಪ್ರೇಮ ಹುಡುಗಾಟಗಳನ್ನು ಸೃಜಿಸುವ ಶಕ್ತಿಯಿದ್ದೇ ಇದೆ. ಅದಕ್ಕೆಂದೇ ಸಮಯ ನಮ್ಮನ್ನು ಎಷ್ಟೇ ಬೆಳೆಸಿದರೂ ಮನಸ್ಸನ್ನು ಎಲ್ಲ ವಯಸ್ಸಿಗೂ ಎಲ್ಲ ಕ್ಷಣಗಳಿಗೂ ಸ್ಪಂದಿಸುವ ಆರ್ದತೆಯನ್ನು ಉಳಿಸಿಕೊಳ್ಳುವುದು ಬಹುಶಃ ಕವಿಮನಸ್ಸಿಗಷ್ಟೇ ಸಾಧ್ಯವೆನ್ನಿಸತ್ತದೆ ನನಗೆ. ಹಾಗಾಗಿ ಸಹೃದಯರೆಲ್ಲರು ಕವಿಗಳಾಗುತ್ತಾರೆ...... wonderful truth!

    ReplyDelete
  3. ಹೌದು , ಸಾಹಿತ್ಯಕ್ಕೆ ಯಾವುದೇ ಮಾನದಂಡವಿಲ್ಲ ....ಓದು ಬರಹ ಬರದೆ ಇರುವ ನಮ್ಮ ಹಳ್ಳಿಗರು ಹೇಳುತಿದ್ದ ಜನಪದ ಗೀತೆಗಳೇ ಇದಕ್ಕೆ ಉದಾಹರಣೆ ..... ವಿದ್ಯಾವಂತರು ಕೂಡ ನಾಚುವ ತೆರದಲ್ಲಿ ಅವರು ರಚಿಸಿಕೊಂಡಿದ್ದ ಆ ಸುಮಧುರ , ಅರ್ಥಭರಿತ ಗೀತೆಗಳು ವಿದ್ಯೆ ಯು ಸಾಹಿತ್ಯಕ್ಕೆ ಮಾನದಂಡ ವಲ್ಲ ಎಂಬುದನ್ನು ಎತ್ತಿ ತೊರಿಸುತ್ತದೆ.

    ಸಾಹಿತ್ಯ ಕೇವಲ ಅಧ್ಯಯನದ ಕೂಸಲ್ಲ. ಅದು ಹೃದಯದ ಕೂಸು. ನಿಜ ..... "ಹೃದಯದಿಂದ ಬಂದದ್ದು ಹೃದಯಕ್ಕೆ ಹೋಗುತ್ತದೆ . ಹೃದಯದಿಂದ ಬಂದ ಪುಸ್ತಕವು ಶತಮಾನಗಳ ನಂತರವೂ ಇನ್ನೂ ಜನ್ಮವೆತ್ತಿ ಬರದಿರುವ ಪೀಳಿಗೆಗಳ ಹೃದಯವನ್ನು ತಟ್ಟುತ್ತದೆ" ಎಂದು 'ಪಾಪು' ಒಂದು ಕಡೆ ಹೇಳಿದ್ದರು. ನಿಮ್ಮ ಈ ಬರಹವನ್ನು ಓದಿದರೆ ಎಲ್ಲರಿಗೂ ತಮ್ಮ ಭಾವನೆಗಳೇ ಪ್ರತಿಧ್ವನಿಸುತ್ತದೆ. . ನನಗೆ ನಿಮ್ಮಂತೆ ಬರೆಯಲು ಬರುತಿದ್ದರೆ ನಾನು ಇದನ್ನೇ ಬರೆಯುತ್ತಿದ್ದೆ .....

    ತುಂಬಾ ಸುಂದರ ಬರಹ... ಸರಳವಾಗಿ, ಸುಂದರವಾಗಿ ನಿರೂಪಿಸಿದ್ದೀರಿ ...ಸಂಗ್ರಹ ಯೋಗ್ಯ ಬರಹ ...

    ReplyDelete
  4. ಭಾವಗಳು ಕಾಡಿದಾಗ ಬರಹ ಅರಳುತ್ತದೆ. ಅರಳಿದ ಬರಹ ಸ್ಪಂದಿಸುವ ಮನಸ್ಸುಗಳಿಗೆ ತಲುಪಿ ಪದೇ ಪದೇ ಓದಿಸಿಕೊಂಡಾಗ ಸಾಹಿತ್ಯವಾಗುತ್ತದೆ. ಸಂಕಲ್ಪಗಳು ನಮ್ಮ ಮಿತಿ, ನಿಮಿತ್ತಗಳಾಚೆ ಏನೋ ಇರಲೂಬಹುದು.

    ಬರೆವುದು ನಮ್ಮೊಳಗಿನ ಬೆಳಕಿಗೆ ತೆರೆದುಕೊಳ್ಳುವುದಕ್ಕೆ, ಅದು ಇತರರಿಗೂ ಬೆಳಕು ತೋರಿದರೆ ಅವರ ತಿಳಿವಿನ ದೊಡ್ಡತನ ಅಷ್ಟೆ.

    ನಿಮ್ಮ ಶೈಲಿಯಲ್ಲಿನ ಆಪ್ತತೆ, ಬರಹದ ಹರಿವು ಇಷ್ಟವಾಯಿತು. ಆಗಾಗ್ಗೆ ನಿಮ್ಮ ಬರಹವನ್ನ ಓದಿಸುತ್ತಿರಿ, ಸಂಕಲ್ಪಗಳು ಕೆಲವಾದರೂ ನಮ್ಮದೇ ಆಗುಳಿಯಲಿ...

    ReplyDelete
  5. ಧನ್ಯವಾದಗಳು ಮಾನಸ ಸರೋವರಕ್ಕೆ ಬಂದು ವಿಹರಿಸಿದ ಎಲ್ಲರಿಗೂ ನಿಮ್ಮೆಲ್ಲರ ಅನಿಸಿಕೆಗಳು ನನ್ನ ಬರಹಗಳನ್ನು
    ಇನ್ನಷ್ಟು ಬೆಳೆಸಲಿ.. ಮತ್ತಷ್ಟು ಬರೆಯುವ ಓದುವ ಸಂಕಲ್ಪಗಳು ಹುಟ್ಟಿಕೊಳ್ಳಲಿ..

    ReplyDelete
  6. ತುಂಬಾ ಚೆನ್ನಾಗಿದೆ ಲೇಖನ..... ಇಷ್ಟವಾಯ್ತು...

    ReplyDelete
  7. ತುಂಬಾ ಧನ್ಯವಾದಗಳು ಪ್ರಕಾಶಣ್ಣ....

    ReplyDelete
  8. ಈಚೆಗೆ ಭಯಂಕರವೇ ಅನ್ನುವಷ್ಟು ಕಾರ್ಯದೊತ್ತಡ, ಸುಮಾರು ದಿನಗಳಿಂದ ಯಾರ ಬ್ಲಾಗಿನ ಮನೆಯ ಬಾಗಿಲ ಬಳಿಗೂ ಹೋಗಿಲ್ಲವೆಂಬುದು ದಿಟ. ಕ್ಷಮೆ ಇರಲಿ ಸಿರಿ ಅಕ್ಕ.


    ಅದ್ಯಾಕೋ ಈ ಬರಹವನ್ನ ಓದೋಕೆ ತುಂಬಾ ತಡ ಮಾಡಿ ಬಿಟ್ಟೆನೇನೋ ಅನ್ನುವ ಭಾವಕ್ಕೆ ಸಿಲುಕ್ತಾ ಇದ್ದೇನೆ. ಬರಹದಲ್ಲಿನ ವಸ್ತು ಅಂತಹುದ್ದು. ಬಹುಷಃ ಪ್ರವರ್ಧಮಾನದ ಹಾದಿಯಲ್ಲಿನ ಎಲ್ಲಾ ಯುವ ಬರಹಗಾರರೂ ಒಮ್ಮೆ ಓದಲೇ ಬೇಕಾದ್ದು ಅನ್ನಿಸಿದರೂ ಅಚ್ಚರಿ ಇಲ್ಲ. ನಮ್ಮ ಧಿಡೀರ್ ಕವಿತ್ವಕ್ಕೆ ಕಾರಣಗಳೇ ಬೇಕಿಲ್ಲ. ಹೆಚ್ಚಿನವರು ಮತ್ತೊಬ್ಬರು ಬರೆಯುತ್ತಾರೆನ್ನುವ ಕಾರಣಕ್ಕೆ ತಾವೂ ಪ್ರೇರಿತರಾಗಿ ಬರೆಯುವುದೇ ಹೆಚ್ಚು. ಹಾಡಿನಂತೆ, ನಾಟ್ಯದಂತೆ, ಚಿತ್ರಕಲೆಯಂತೆ, ಅದು ಕೂಡಾ ಹುಟ್ಟಿನಿಂದ ಬಂದಾಗ ಮಾತ್ರವೇ ಸಾಹಿತ್ಯದೊಳಗೆ ನಮ್ಮ ಜೀವ ಭಾವಗಳು ಬೆರೆಯುವುದು ಹೆಚ್ಚು. ಮತ್ತು ಅಂಥವರ ಸಾಹಿತ್ಯಗಳು ಖಂಡಿತ ಮನ್ನಣೆ ಗಿಟ್ಟಿಸಿ ಕೊಳ್ಳುವುದರಲ್ಲಿ ಸಂದೇಹವಿಲ್ಲ. ನಿಜ ನೃತ್ಯ.. ಹಾಡು.. ಚಿತ್ರ ಕಲೆಗೆಲ್ಲ ಪೂರ್ವ ತಯಾರಿ ಖಂಡಿತ ಬೇಕಿದೆ. ಆದರೆ ಸಾಹಿತ್ಯ ಇದಕ್ಕೊಂದು ತರಭೇತಿ ಕೇಂದ್ರಗಳ ಬಗ್ಗೆ ಕೇಳಿದ್ದೆ ಇಲ್ಲ.. ಇನ್ನು ಕಾಣೋದೆಲ್ಲಿ..?? ಬಹುಶ ಬಾಕಿ ಎಲ್ಲಾ ಕ್ಷೇತ್ರಗಳಲ್ಲೂ ಕಲಿತು ಕಲಿತು ಕೆಲಸಕ್ಕಿಳಿಯಬೇಕು.. ಆದ್ರೆ ಬರವಣಿಗೆ ಬರಿತಾ ಬರಿತಾನೆ ಕಲೀಬೇಕು.. ಆದ್ರಿಂದ ಒಂದು ಹವ್ಯಾಸಕ್ಕೆಂದು ಒಂದು ಹಠಕ್ಕೆಂದು ಗೀಚಲು ಶುರುವಿಟ್ಟವರಿಗೂ ಕಾಲಾಂತರದಲ್ಲಿ ಸಾಹಿತ್ಯ ಸಶಕ್ತವಾಗಿ ಒಲಿಯಬಹುದು.


    ಹಾಗಂತ ನಮ್ಮ ಆಸೆಗೆ.. ನಮ್ಮ ಚಪಲಕ್ಕೆ.. ತುಡಿತಕ್ಕೆ.. ತುಮುಲತೆಗೆ ಗೀಚಿದ ಸರಕುಗಳೆಲ್ಲ ಸಾಹಿತ್ಯದ ಸೋಗನ್ನೇ ಧರಿಸಬೇಕೆಂದಿಲ್ಲ. ಅವು ಕೇವಲ ನಮ್ಮ ನೆನಪಿನ ಅನಾವರಣದ ಡೈರಿಯ ಪುಟಗಳನ್ನ ತುಂಬಿದರಷ್ಟೇ ಸಮಾಧಾನ. ಅಕ್ಷರ ಕಲಿತವನು ಹೆಸರು ಬರಿಯುವುದ ಕಲಿಯೋದು ಸಾಮಾನ್ಯ ತಾನೇ.. ಅಂತೆಯೇ ಬರೆದು ಬರೆದು ಒಂದಿನ ನಾವೂ ಸಾಹಿತ್ಯ ಕ್ಷೇತ್ರಕ್ಕೊಂದಿಷ್ಟು ಅಳಿಲು ಸೇವೆಗೈಯುವ ಅವಕಾಶ ಸಿಕ್ಕರೆ ಅದೇ ಪುಣ್ಯ. ಬಹಳ ಒಳ್ಳೆಯ ಲೇಖನ ಸಿರಿ ಅಕ್ಕ. ಅತಿಯಾಗಿ ಇಷ್ಟ ಆಯ್ತು ಕೆಲವೊಂದು ಸಂದೇಹದ ಗೆರೆಗಳನ್ನ ಸುಲಭವಾಗಿ ದಾಟಿಸುತ್ತಾ... :) :)

    ReplyDelete
  9. ಧನ್ಯವಾದಗಳು ಸತೀಶ್... ನಿಮ್ಮ ಸಂದೇಹಗಳು ಸರಿಯಾದದ್ದೇ. ಬರೆದದ್ದೆಲ್ಲ ಸಾಹಿತ್ಯವಾಗುವುದಿಲ್ಲ ಎಚ್ಚರಿಕೆ
    ಪ್ರತಿಯೊಬ್ಬ ಬರಹಗಾರರಿಗೂ ಅತ್ಯಗತ್ಯ. ನಾವು ಓದುವ ಯಾವುದೋ ಕೆಟ್ಟ ಅರ್ಥವಿಲ್ಲದ ಪುಸ್ತಕಗಳನ್ನು ಬರಹಗಳನ್ನು ಓದಿಕೊಂಡು ನಾವು ಬೈದುಕೊಳ್ಳುವಂತೆ ನಮ್ಮ ಬರಹಗಳನ್ನೋದಿ ಇತರರು ಛೆ ಇದೆಂತ ಬರಹ ಅಂದುಕೊಳ್ಳಬಾರದಲ್ವ? ಅಷ್ಟೇ ಅಲ್ಲದೇ ಸಮಾಜದೆದುರಿಗೆ ಇಡುವ ಎಲ್ಲ ಬರಹಗಳಿಗು ಒಂದಲ್ಲ ಒಂದು ರೀತಿಯಿಂದ ಮೌಲಿಕವಾದುದು ಅನ್ನಿಸಿಕೊಳ್ಳುವಂತಿರಬೇಕು! ನೀವಂದಂತೆ ಸುಮ್ಮನೆ ಬರೆದುಕೊಳ್ಳುವ ಡೈರಿಗಳನ್ನೆಲ್ಲ
    ತೆರೆದು ಸಮಾಜದ ಎದುರಿಗಿಡುವುದು ಎಷ್ಟು ಸರಿ ಎಂಬ ಆಲೋಚನೆ ಬರಹಗಾರರಿಗೆ ಅತೀ ಅಗತ್ಯ.ನಿಮ್ಮ ಸಲಹೆ ಸೂಚನೆಗಳು, ಪ್ರೀತಿ ಸದಾ ಹೀಗೆ ಇರಲಿ. ತುಂಬಾ ಒತ್ತಡದಲ್ಲಿಯೂ ನನ್ನ ಬ್ಲಾಗ್ ಮನೆಗೆ ಭೇಟಿಯಿತ್ತು ನಿಮ್ಮ ಅನಿಸಿಕೆಗಳ ಹಂಚಿಕೊಂಡದ್ದಕ್ಕೆ ತುಂಬು ಧನ್ಯವಾದಗಳು..

    ReplyDelete
  10. ಮೊದಲಿಗೆ ಇಂತಹ ಒಳ್ಳೆಯ ಬ್ಲಾಗನ್ನು ಪರಿಚಯಿಸಿದ ಶ್ರೀ. ಅಶೋಕ್ ಶೆಟ್ಟಿಯವರಿಗೆ ನನ್ನ ಧನ್ಯವಾದಗಳು. ಇಲ್ಲಿಯ ಬ್ಲಾಗ್ ಮಾಲೀಕರ ಹೆಸರು ಏನೆಂದೂ ತಿಳಿಯದೆ ಹೋದರೂ, ಈ ಬರಹ ಓಡಿಸಿಕೊಂಡು ಹೋದ ಪರಿಗೆ ಸೋಜಿಗ ಪಟ್ಟೆ. ಹಲವು ಭಾವಗಳನ್ನು ಒಮ್ಮೆಲೇ ಮೂಡಿಸುವ ಶಕ್ತಿ ಈ ಬರಹಗಾರರಿಗಿದೆ.

    ಬ್ಲಾಗ್ :http://badari-poems.blogspot.in
    facebook : Badarinath Palavalli

    ReplyDelete
  11. "ಧನ್ಯೋಸ್ಮಿ" ಬದರಿ ಸರ್ ಹಾಗೂ ಶ್ರೀ ಅಶೋಕ್ ಸರ್ ಅವರಿಗೆ ಧನ್ಯವಾದಗಳು. ಬದರಿ ಸರ್ ಬ್ಲಾಗ್ ಲ್ಲಿ ನನ್ನ ಪರಿಚಯ ಹೇಳಿಕೊಂಡಿಲ್ಲದಿದ್ದರು ನಿಮ್ಮ ಬ್ಲಾಗ್ ಹಾಗೂ ಬರಹಗಳ ಅಭಿಮಾನಿ ನಾನು. ನನ್ನ ಜೋಗಿತಿ ಬ್ಲಾಗ್ 3ಕೆ, ಕನ್ನಡ ಬ್ಲಾಗ್ ಲ್ಲಿನ ಕವಿತೆಗಳಿಂದ ಪರಿಚಿತಳೇನೆ. ಸದಾ ನಿಮ್ಮ ಆಶೀರ್ವಾದ ಹೀಗೆ ಇರಲಿ. ನಿಮ್ಮ ಭೇಟಿ ಹಾಗೂ ಅನಿಸಿಕೆಗಳಿಗೆ ತುಂಬ ತುಂಬ ಧನ್ಯವಾದಗಳು.

    ನಿಮ್ಮ ಸಿರಿ.

    ReplyDelete